Monday 31 December 2018

ಮೊದಲಾಸಲ

ಏಕೆ ಮೊದಲ ಬಾರಿಯ ಎಲ್ಲಾ ಕೆಲಸಗಳು ಈ ಪುಟ್ಟ ಮನಸ್ಸಲ್ಲಿ ಅಷ್ಟೊಂದು ದೊಡ್ಡ ಜಾಗ ಪಡೆದು ಕೊಳ್ಳುತ್ತದೆ?
*****************

ನನ್ನವನೆಂಬ ಹಣೆಪಟ್ಟಿ ಅವನಿಗೀಗ ಕಟ್ಟಿಯಾಗಿದೆ.
ನನ್ನಾತ್ಮದಲಿ ಬೇರೇ ಯಾರಿಗೂ ನೀಡದ ಗೌರವದ ಸ್ಥಾನ ಅವನಿಗೀಗ ಕೊಟ್ಟಾಗಿದೆ.
ಗೀಚಿದಷ್ಟು ಮುಗಿಯದೀ ಪ್ರೇಮ ಸಲ್ಲಾಪ.
ಸಾಲದಷ್ಟು ಸಾಲದಾಗಿದೆ ಅವನೊಂದಿಗಿನ ಸಮಯ.
ಪದಗಳೆಲ್ಲ ನನ್ನವನ ಮುಂದೆ ಸೋತು ಬಾಲ ಮುದುರಿಕೊಂಡು ತೆಪ್ಪಗಾಗಿದೆ.
ಪ್ರಾಸವನಂತು ನಾ ಕಾಣೆ.
ಒಂದು ಮಾತಿಗಿಂದೊಂದು ಮಾತು ಕುಡುತ್ತಲೂ ಇಲ್ಲ.
ಅಬ್ಬಾ ನಾನೀಗ ನನ್ನಲ್ಲಿಲ್ಲ.
ಒಂದು ರೀತಿಯಲ್ಲಿ ತಬ್ಬಿಬ್ಬುಗೊಂಡ ಮಗುವಂತಾಗಿದೆ ಸ್ಥಿತಿ.
***********


Friday 21 December 2018

ಒಲವಾಗಿದೆ

ದಿನ ರಾತ್ರಿಯ ಪರಿವಿಲ್ಲದೆ ಸದಾ ಅವನದೇ ಧ್ಯಾನ.
ಮೂಡುವ ಹಲವು ಪ್ರಶೆನೆಗಳು.
ಅವನಿಗೇನು ಇಷ್ಟ? ಅವನಿಗೇನು ಕಷ್ಟ? ಅವನ ಏನೆಂದು ಕರೆಯಲಿ?
೧೦೦೦ ಹೆಸರುಗಳು ಸಾಲದಾಗಬಹುದೇನೋ ನನ್ನೊಲವಿಗೆ ನಾಮಕರಿಸಲು.
ಪ್ರೀತಿಯ ಅತಿವೃಷ್ಠಿಯಿಂದ ಮೆದುಳು ತನ್ನ ನಿಯಂತ್ರಣ ಕಳೆದುಕೊಂಡಂತಿದೆ.
ನನಗೆ ಒಲವಾಗಿದೆ.
ಮೊದಲ ಬಾರಿ ಇಷ್ಟೊಂದು ಹುಚ್ಚು ಹಿಡಿದಿದೆ. 

Wednesday 19 December 2018

ನವಿಲು ಗರಿ

ಹಲವು ಬಣ್ಣಗಳ ಹೊತ್ತ ನವಿಲು ಗರಿ ನಾನು.
ನಿನ್ನ ಮುಡಿ ಸೇರಿಯಾನೊ ಇಲ್ಲವೋ,
ಆದರೆ ನಿನ್ನ ಮನ ಸೇರವ ಬಯೆಕೆ.
ನಿನ್ನ ಕಣ್ತುಂಬುವ ಬಯಕೆ.
ತುಟಿಯಲ್ಲಿ ಕ್ಷಣಕಾಲ ನಗುವಾಗುವ ಬಯಕೆ.
ಕೃಷ್ಣ.

Tuesday 18 December 2018

Such an innocent sound of laughter.

Who doesn't love children's laughter?
Who doesn't like music? 
& That's how I have fallen for you.

Permanent boyfriend.

ಅವನೀಗ ನನ್ನವನು.
ಅಬ್ಬಾ, ಇದನ್ನು ಹೇಳುವುದೇ ಒಂದು ಖುಷಿ.
ಚಿಟ್ಟೆಯೊಂದು ಹೃದಯದ್ದಲ್ಲಿ ಕಚಗುಳಿ ಇಟ್ಟಂತೆ.
ತಣ್ಣನೆಯ ಗಾಳಿಗೆ ಮೈರೋಮಗಳು ನಿಂತಂತೆ.
ಮನದಿಂದ ಯಾವುದೊ ಪಿಸುಮಾತೊಂದು ಹೊರಟಂತೆ.
ತುಟಿ ತಲುಪುವಷ್ಟರಲ್ಲಿ ನಾಚಿ ಮರೆತಂತೆ.
ಪದಗಲ್ಲಿ ಹೇಳಲಸಾಧ್ಯ ಭಾವನೆ.
ಅವನೀಗ ನನ್ನವನು.
ನನ್ನ ಸ್ವಾರ್ಥವವನು. 

ವಾಸ್ತವತೆಯ ಕನಸು

ಬಟ್ಟೆಗೆ ಇಸ್ತ್ರಿ ಮಾಡುವಾಗ ಸುಟ್ಟಿತು, ಆ ಇಸ್ತ್ರಿ ಪೆಟ್ಟಿಗೆ.
ಸ್ನಾನ ಮಾಡುವಾಗ ಸುಟ್ಟಿತು, ಆ ಬಿಸಿ ನೀರು.
ನಡೆಯುವಾಗ ತಾಕೀತು, ಆ ಕುರ್ಚಿಯ ಕಾಲು.
ಜಾರಿ ಗುಂಡಿಗೆ ಬಿದ್ದಿತು ಕೈಯಲ್ಲಿದ್ದ ಕೀ ಚೈನು.
ಅರೇ ರಾಮ.
ಏನಾಗಿದೆ ನನಗೆ?
ಏನಾಗಿದೆ ನನಗೆ?
ನೀನಾಗಿರುವೆ ನನಗೆ.




Friday 14 December 2018

ನಿದಾನಿಸು. ನಿದಾನಿಸು?

ಸ್ವಲ್ಪ ನಿದಾನಿಸಲೇ? ಬೇಡವೇ?
ಮನಸ್ಸಿಗ್ಗೆ ತಾಳ್ಮೆಯೇ ಇಲ್ಲ.
ನಿದಾನ ನಿದಾನ ಎಂದು ಬುದ್ಧಿ ಎಷ್ಟೇ ಹೇಳಿದರು ದುಡು ದುಡುಯೆಂದು ಓಡುತ ಅವಸವಸರವಾಗಿ ಕನಸ ಕಟ್ಟುತ್ತಾ ಕುಣಿದಾಡಿದೆ.

ಅವಸರವೆ ಅಪಾಯಕ್ಕೆ ಕಾರಣವೆಂದು ಸಣ್ಣವಳಿದ್ದಾಗಲೇ ಕನ್ನಡ ಮೇಸ್ಟ್ರು ಹೇಳಿದಳ ನೆನಪು.
ಸಮಯ ಇದ್ದ ಹಾಗೆಯೇ ಇರದೆಂದು ಅಪ್ಪ ಹೇಳಿದ ನೆನಪು.

ಈಗ ಏನು ಅನಿಸುತ್ತಿದೆಯೋ ಅದು ಅನಿಸಲಿ ಬಿಡುಯೆಂದು ಮೊಂಡು ಮನಸ್ಸು ನಿಲ್ಲದೆ ದುಡು ದುಡುಯೆಂದು ಓಡುತ ಅವಸವಸರವಾಗಿ ಕನಸ ಕಟ್ಟುತ್ತಾ ಕುಣಿದಾಡಿದೆ.

Thursday 13 December 2018

ತಣ್ಣನೆಯ ತಳಮಳ

ತೊರೆದು ಹೋದಲ್ಲಿಗೆ ಮತ್ತೆ ಬಂದು ನಿಂತಿದ್ದೇನೆ.
ದೃಷ್ಟಿ ತೆಗೆಯದೆ ಅವನ ದಿಟ್ಟಿಸಿದ್ದೇನೆ.
ಏನು ಅರಿವಿಗೆ ಸಿಗುತ್ತಿಲ್ಲ.
ನನ್ನೋಳಗಿನ ದೊಡ್ಡದೊಂದು ಯುದ್ಧವ ಸ್ವಲ್ಪ ಸಮಯ ನಿಲ್ಲಿಸುವಾಸೆ, ಒಂದು ವಿರಾಮ ತೆಗೆದುಕೊಳ್ಳುವಾಸೆ.
ಅವನ ಕಣ್ಣೊಳಗೆ ಮುಳಿಗಿ, ಲೀನವಾಗುವಾಸೆ.
ಎಲ್ಲವ ತೊರೆದು ನನ್ನ ನಾ ಮರೆತು ಅವನಾಗುವಾಸೆ.
ಅಯ್ಯೋ ರಾಮಕೃಷ್ಣ ನನಗೆ ನೀನಾಗುವಾಸೆ.

ಈ ಕಾಲಿತನ ಹಗುರಯೇಕಿಲ್ಲ?

ದಿನ ಕಳೆದಂತೆ ಕಾಲಿತನ ನನ್ನನ್ನು ಹೆಚ್ಚೇ ಆವರಿಸುತ್ತಿದೆ......  ಎಂದೆನಿಸುತ್ತಿದೆ.
ನನ್ನ ಒಂದೊಂದು ಭಾವನೆಯು ನಂನಿನ್ನದ ಕಳಚಿ ಹೋಗುತ್ತಿದೆ.....  ಎಂದೆನಿಸುತ್ತಿದೆ.
ಖುಷಿ ಇಲ್ಲ, ದುಃಖ್ಖವೂ ಇಲ್ಲ. ನಗುವಿಲ್ಲ, ಅಳುವಿಲ್ಲ. ಯಾರು ಬೇಕಿಂದೆನಿಸುವುದಿಲ್ಲ. ಎಲ್ಲವೂ ಕಾಲಿ ಕಾಲಿ.....  ಎಂದೆನಿಸುತ್ತಿದೆ.
ದೂರ ಅದೆಲ್ಲೋ ತಿಳಿಯದ ದಾರಿಯಲ್ಲಿ ಸಾಗಿನೋಡಿದೆ,
ತಣ್ಣನೆಯ ಗಾಳಿಯಲ್ಲಿ ತಲೆ ಕೂದಲ ತೊಳೆದುನೋಡಿದೆ,
ಮಧ್ಯ ರಸ್ತೆಯಲ್ಲಿ ಮಧ್ಯ ರಾತ್ರಿಯಲ್ಲಿ ಆ ನಕ್ಷತ್ರ ಚುಕ್ಕಿಗಳ ಎಣಿಸಿನೋಡಿದೆ,
ಖುಷಿ ನೀಡುತ್ತಿದ್ದ ತಿಂಡಿತಿನಿಸು ತಿಂದುನೋಡಿದೆ,
ಹೀಗೆ ಹತ್ತುಹಲವು ಪ್ರಯೋಗಗಳು!
ತೀರದ ಮೌನ, ತೀರದ ಕಾಲಿತನ.. ಎಷ್ಟೇ ತುಂಬಿಸಲು ಪ್ರಯತ್ನಿಸಿದರೂ ವಿಫಲ.
ಆದರೆ ಎಷ್ಟೇ ಕಾಲಿಯಾದರು ಮನಸ್ಸಿನ್ನು ಹಗುರವಾಗಲೇ ಇಲ್ಲ.
ಈ ಕಾಲಿತನ ಹಗುರಯೇಕಿಲ್ಲ?


Friday 23 November 2018

ತು ಖೀಚ್ ಮೇರಿ ಫೋಟೋ

ವಾಸ್ತವತೆ ಹಾಗು ಭ್ರಮೆಯ ನಡುವೆ ಮನುಷ್ಯನು ಅನಾದಿಕಾಲದಿಂದಲೂ ಒಂದಲ್ಲ ಒಂದುರೀತಿಯಲ್ಲಿ ಬಂದಿಯೇ.
ಹದಿನೈದು-ಹದಿನಾರರ ಶತಮಾನದಲ್ಲಿ ನಮ್ಮ ಕನ್ನಡದ ಹೆಮ್ಮೆ ಕನಕ ದಾಸರು ಅದಕ್ಕೆ ಹೇಳಿರುವುದು," ನೀ ಮಾಯೆಯೊಳಗೋ, ನಿನ್ನೊಳು ಮಾಯೆಯೋ"....
ಹಾಗು
ಹದಿನೆಂಟು-ಹತ್ತೊಂಬತ್ತು ಶತಮಾನದಲ್ಲಿ ಆಲ್ಬರ್ಟ್ ಐನ್ಸ್ಟೀನ್ ಹೀಗೆ ಹೇಳಿದ್ದಾರೆ, " I fear the day that technology will surpass our human interaction. The world will have a generation of idiots."

ಹೆಚ್ಚು ವಿಸ್ತಾರಾವಾಗಿ ನಾನಿದನು ಬರೆಯಲಾರೆ. ಯಾಕೆಂದರೆ ಯಾರ ಮನನೋಯಿಸುವುದು ನನ್ನ ಉದ್ದೇಶವಲ್ಲ.

ನಾವೋಗುವ ಸ್ಥಳ ಮುಖ್ಯವೋ?
ಅಲ್ಲಿ ತೆಗೆಯು ನಮ್ಮ ಫೋಟೋ?
ತೋರಿಕೆಯಲ್ಲಿ ಖುಷಿಯೋ?
ಅನುಭವಿಸುವುದಲ್ಲಿ, ನಿಜವಾಗಿಯೂ ಆ ಕ್ಷಣವನ್ನು ಜೀವಿಸುವುದಲ್ಲಿ ಖುಷಿಯೋ?

ಡಿಜಿಟಲ್ ಕಾಲ. ಎಲ್ಲವೂ ಲೆಕ್ಕದಾಟ.
ಬೇಕಾಗಿರುವುದು, ಬೇಡದಿರುವುದು ಎಲ್ಲವನ್ನು ತುಂಬಿಕೊಂಡಿರುವ ಜಂಕ್ ಯಾರ್ಡ್ ಮೆಮೊರಿ ಡಿವೈಸೆಸ್.

ಮಧುವೆಗೂ ಮುನ್ನ, ಮದುವೆಯ ನಂತರ, ಮದುವೆಯ ದಿನ, ಮಕ್ಕಳ ನಾಮಕರಣ, ಮೊದಲ ಹೆಜ್ಜೆ, ಮೊದಲ ಮಾತು, ಹೀಗೆ ಸಾವಿರಾರು ಘಟನೆಗಳ ತುಣುಕುಗಳು ದಿನದಿನ ಪ್ರತಿದಿನ ಪ್ರತಿ ಘಳಿಗೆ ಯಾಂತ್ರಿಕ ನೆನಪಿನ ಪೆಟ್ಟಿಗೆಗೆ ತುಂಬುತ್ತಲೇ ಇರುತ್ತದೆ.

ಯಾವುದು ಖುಷಿ ಎಂಬುದೇ ನನಗೆ ಅರಿವೆಗೆ ಸಿಗುತ್ತಿಲ್ಲ.
ಎಲ್ಲವೂ ಒಂದು ರೀತಿಯ ಭ್ರಾಂತು. ಭ್ರಮೆ.

ತುಂಬಾ ತಲೆಕ್ಕೆಟಾಗ ಅಪ್ಪನ ಬಳಿ ಹೋಗಿ, ನನಗೆ ಏನು ಮಾಡಬೇಕು ತಿಳಿಯುತ್ತಿತ್ತ ಅಪ್ಪ ಎಂದರೆ, ಅಪ್ಪ ಹೀಗೆ ಹೇಳುತ್ತಾರೆ,
" ಬ್ರಹ್ಮನಿಗೆ ಮಾಡಲು ಕೆಲಸವಿರಲಿಲ್ಲ, ಮನುಷ್ಯನನ್ನು ಸೃಷ್ಟಿಸಿದ. ೧೦೦ ವರ್ಷ ಆಯಷ್ ಬೇರೆ ಕೊಟ್ಟ. ಸಾಯುವವರೆಗೂ ಬದುಕ ಬೇಕಲ್ಲ. ಕಾಲ ಕಳೆಯಲು ಏನಾದರು ಕೆಲಸಬೇಕಲ್ಲ. ಅದಕ್ಕೆ ಈ ಮನುಷ್ಯ ಬೇಕ್ಕಾದು ಬೇಡದ್ದು ಏನಾದ್ರು ಮಾಡುತ್ತು ಸಮಯ ಕಳೆಯುತ್ತಾನೆ.ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳ ಬಾರದು. ಜಸ್ಟ್ ಚಿಲ್."

ಗುನುಗುನುಗೋ ಮಧುರ ದನಿ

ಅವನೊಬ್ಬ ಹಾಡುಗಾರ.
ಕೆಲಸದ ವೊತ್ತಡದ ನಡುವೆ ಆಗೊಮ್ಮೆ ಈಗೊಮ್ಮೆ ನನ್ನ ಪ್ರಯೋಗಾಲಯಕ್ಕೆ ಬಂದು ಹಾಡುಗಳ ಗುನುಗುತ್ತಾನೆ.
ನನ್ನನ್ನು ಅವನ ರಾಗಕ್ಕೆ ರಾಗ ಸೇರಿಸುವಂತೆ ಮಾಡುತ್ತಾನೆ. ಗುನುಗುನುಗುಟ್ಟಿಸುತ್ತಾನೆ. ಕೆಲಸದ ಒತ್ತಡವ ಕೆಲಕಾಲ ಮರೆಸುತ್ತಾನೆ.
ಅವನೊಬ್ಬ ಜಾದೂಗಾರ.
ಅವನೊಬ್ಬ ಹಾಡುಗಾರ.
ಮಧುರ ದನಿಯ ಸಾಹುಕಾರ. 

ಅಮ್ಮ, ಮಂಕುತಿಮ್ಮ ಹಾಗು ಮೆಣಸಿನಕಾಯಿ ಬಜ್ಜಿ

ಮೊದಲೇ ಒಮ್ಮೆ ನಾನು ಹೇಳಿದಂತೆ ಈ ಚಹಾ ಸಮಯ ಬಹಳಾನೇ ಇಷ್ಟ ನನಗೆ. ವಿಶೇಷವಾಗಿ ಅದು ಅಪ್ಪ ಅಮ್ಮನ ಜೊತೆ ಇನ್ನು ಮಜವಾಗಿರುತ್ತದೆ. ಕಳೆದ ರವಿವಾರ ಸಂಜೆ ಚಹಾದ ಜೊತೆಗೆ ಅಮ್ಮ ಮೆಣಸಿನಕಾಯಿ ಬಜ್ಜಿ ಮಾಡುತ್ತಿದ್ದರು. ನಾನು ಮತ್ತು ಅಪ್ಪ ಅಡಿಗೆ ಮನೆಯಲ್ಲಿ ಅಮ್ಮನೊಂದಿಗೆ ಮಾತನಾಡುತ್ತ ಬಿಸಿ ಬಿಸಿ ಬಜ್ಜಿ ಮಡಿದ ಕೂಡಲೇ ತಿನ್ನಲ್ಲು ಕಾಯುತ್ತ ಕುಳಿತ್ತಿದ್ದೆವು.
ಮಾತನಾಡುತ್ತ ಮಾತನಾಡುತ್ತ ನಮ್ಮ ಮೂವರ ಮಾತು ಒಂದು ಚರ್ಚೆಯಾಗಿ ಬದಲಾಯಿತು.
ಅಮ್ಮ: ಈಗಿನ ಮಕ್ಕಳ್ಳಿಗೆ ಯಾವುದೇ ಆಚರೆಣೆಗಳಿಲ್ಲ. ದೇವರ ಪೂಜೆ ಮಾಡಬೇಕೆಂಬುದಿಲ್ಲ. ಹಿರಿಯರ ಮಾತಿಗೆ ಬೆಲೆ ಕೊಡುವುದಿಲ್ಲ. ನಮ್ಮ ಕಾಲದಲ್ಲಿ ಹಾಗಿರಲಿಲ್ಲ. ಹಿರಿಯರು ಹೇಳಿದರೆ ಅಲ್ಲಿಗೆ ಮುಗಿಯಿತು. ಒಂದು ಎದುರುಮಾತನಾಡದೆ ಅವರು ಹೇಳಿದಂತೆ ಮಾಡುತ್ತಿದ್ದೆವು. (ಇದು ಅಮ್ಮನ ಮಾಮೂಲಿ ಡೈಲಾಗ್).
ನಾನು: (ವೇದಾಂತಿಯಂತೆ) ವಯಸ್ಸಿನ್ನಲ್ಲಿ ಹಿರಿಯರಾದವರು ಏನೇ ಹೇಳಿದರು ಹೂ ಎನ್ನಬೇಕೇ? ಹಾಗಾದರೆ ಇಲ್ಲಿ ಬೆಲೆಯಿರುವುದು ವಯಸ್ಸಿಗೆ ವರತು ಬುದ್ಧಿವಂತಿಗೆಗಲ್ಲ.?
ಅಮ್ಮ: ಹಿರಿಯರ ಅನುಭವದ ಮಾತುಗಳು ಎಂದು ಸುಳ್ಳಾಗುವುದಿಲ್ಲ.
ನಾನು: ಅನುಭವದ ಮಾತುಗಳು ಸುಳ್ಳು ಎಂಬಹುದಲ್ಲ ನನ್ನ ವಾದ. ಯಾವುದೇ ಒಂದು ರೀತಿ ನೀತಿ ಆಚರಣೆಗಳ್ಳನ್ನು ಪಾಲಿಸಲು ಅಮ್ಮನಾದವರು ಮಕ್ಕಲ್ಲಿ ಹೇಳಿಕೊಡಬೇಕು. ಅದರೆ ಹಿಂದಿರುವ ಉದ್ದೇಶಗಳ್ಳ ಬಗ್ಗೆ ತೀಹೇಳಬೇಕು. ಅರ್ಥ ಮಾಡಿಸಬೇಕು. ಆಗ ಯಾಕೆ ನಾವುಗಳು ಪಾಲಿಸೋಲ್ಲ ಎಂದು ಹೇಳುತ್ತೇವೆ?.
ಅಮ್ಮ: ಕೆಲವೊಂದು ಆಚರಣೆಗಳ ಹಿಂದಿರುವ ವಿಚಾರಗಳು ನಮಗೆ ತಿಳಿದಿರುವುದಿಲ್ಲ. ಹಿರಿಯರು ನಡಿಸಿ ಬಂದ ಸಂಪ್ರದಾಯವನ್ನು ಪ್ರಶ್ನೆ ಮಾಡದೇ ನಾವುಗಳು ನಡಿಸಿಗೊಂಡು ಬಂದಿರುತ್ತೇವೆ. ಎಲ್ಲಾದಕ್ಕು ಉತ್ತರ ಬೇಕೆಂದರೆ ಹೇಗೆ?
ಅಪ್ಪ: ನನ್ನ ಪ್ರಕಾರ ಎಲ್ಲಾ ಆಚರಣೆಗಳ ಹಿಂದೆಯೂ ಗಾಢವಾದ ಉದ್ದೇಶವಿರಬೇಕೆಂಬುದೇನು ಇಲ್ಲ. ಕೆಲವೆಲ್ಲ ಕೇವಲ ಮನುಷ್ಯನನ್ನು ಒಂದು ಆರೋಗ್ಯಕರ ಸಮಾಜದ ಹಾದಿಯಲ್ಲಿ ಹಿಡಿದಿಡಲು ಮಾಡಿರುವು ನಿಯಮಗಳು ಆಗಿರುತ್ತವೆ. ಸೂಕ್ಷ್ಮವಾಗಿ ಗಮನಿಸಿದರೆ ಅಷ್ಟೊಂದು ಪ್ರಶ್ನೆ ಕೇಳುವ ಅವಶ್ಯಕತೆಯೇ ಬರುವುದಿಲ್ಲ. ನಿನಗೆ ಅರ್ಥವಾಗುತ್ತದೆ ಮಗಳೇ.
ಉದಾಹರಣೆಗೆ ನಮ್ಮ ಹವ್ಯಕ ಸಂಪ್ರದಾಯದ ಮದುವೆಯನ್ನೇ ತೆಗೆದುಕೋ. ಎಷ್ಟೊಂದು ವಿಧಿವಿಧಾನಗಳಿವೆ. ಹಳೆಯ ಕಾಲದಲ್ಲಿ ವಾರಗಟ್ಟಲ್ಲೇ ಮದುವೆ ನಡೆಯುತ್ತಿತ್ತು. ಅದರ ಉದ್ದೇಶ ಹುಡುಗ ಹುಡುಗಿ ಒಬ್ಬರನ್ನೊಬ್ಬರು ಅರಿತುಕೊಂಡು ಬೇರೆಯಲಿ ಎಂಬುದು ಒಂದಷ್ಟು ಕಾರಣಗಲ್ಲಿ ಒಂದು ಕಾರಣ.
ಇನ್ನು ಈಗಿನ ಕಾಲದಂತ್ತೆ ಸಂಪರ್ಕವಾಹಿನಿ ಯಾವುದು ಆಗಿನ ಕಾಲದಲ್ಲಿ ಇರಲ್ಲಿಲ್ಲ. ಎಲ್ಲರೊಂದಿಗೆ (ಬಂದು ಭಾಂದವರು) ಬೆರೆಯುವ ಅವಕಾಶಗಳು ಕಡಿಮೆ. ದುಡಿಮೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದರು. ಹಬ್ಬ, ಹರಿದಿನಗಳ ಹೆಸರಿನಲ್ಲಿ ಜೊತೆ ಸೇರಿ ಸಂತೋಷದಿ ಬೆರೆತು ನಲಿಯುತ್ತಿದ್ದರು.
ಹೀಗೆ ನಮಗೆ ಅರಿವಿಲ್ಲದ್ದ ಹತ್ತು ಹಲವು ವಿಷಯಗಳಿರುತ್ತವೆ.
ಮಂಕುತ್ತಿಮ್ಮ ಒಂದೆಡೆ ಹೀಗೆ ಹೇಳಿದ್ದಾನೆ,
"ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಗಸು.
ಹೊಸ ಯುಕ್ತಿ ಹಳೆತತ್ವದೊಡಗೂಡೆ ಧರ್ಮ.
ಋಷಿವಾಕ್ಯದೊಡನೆ ವಿಜ್ಞಾನಕಲೆ ಮೇಳವಿಸೆ,
ಜಸವು ಜನಜೀವನಕೆ."
ನೀವು ಈಗಿನ ಮಕ್ಕಳ್ಳು ಕೇಳುವ ಪ್ರಶ್ನೆಗಳು ತಪ್ಪೆಂದು ನಾನು ಹೇಳುವುದಲ್ಲ. ಸ್ವಲ್ಪ ತಾಳ್ಮೆ ಹಾಗು ಸಹನೆಯಿಂದ, ಹಿರಿಯರು ಏನು ಹೇಳುತ್ತಿದ್ದಾರೆ ಎಂಬುದನ್ನು ಕೆಲುವು ವ್ಯವಧಾನ ಬೆಳೆಸಿಕೊಳ್ಳಬೇಕು. ಅದನ್ನು ಆಚರಣೆಗೆ ತರುವುದು ಬಿಡುವುದು ಮುಂದಿನ ಪ್ರಶ್ನೆ.  ನಿಮಗೆ ನಿಮ್ಮದೆಯಾದ ಆಲೋಚನಾ ಶಕ್ತಿಯಿದೆ. ವಿವೇಚನೆ ಇದೆ. ಯಾವುದಕ್ಕೂ ದುಡುಕದೆ ಯೋಚಿಸಿ, ಯೋಜನೆಗಳ್ಳನ್ನು ಮಾಡಿ. ಜೀವನದಲ್ಲಿ ಸಂತೋಷದಿಂದಿರಿ. ಮಕ್ಕಳ್ಳು ಚೆನ್ನಾಗಿರಗಿರಬೇಕು ಎಂಬುದೊಂದೇ ನಮ್ಮ (ತಂದೆ ತಾಯಿಯ) ಆಸೆ ಅಲ್ಲವೇ.
ನಾನು: ಅಲ್ಲ. ನಿಮ್ಮ ಆಸೆ ಮಸಾಲೆದೋಸೆ ಎಂದೇ. (ಹಳೆಯ ಲೇಖನ "ದೋಸೆ" ಓದಿ ನೆನಪಿನಲ್ಲಿದ್ದರೆ ನೀವು ರಿಲೇಟ್ ಮಾಡಬಹುದು.)
ಅಪ್ಪ: ಅಲ್ಲ ಅಲ್ಲ. ಸದ್ಯಕೀಗ ಮೆಣಸಿನಕಾಯಿ ಬಜ್ಜಿ.
ಮೂವರು ನಕ್ಕೆವು.
ಅಣ್ಣ ಅತ್ತಿಗೆಯನ್ನು ಬಜ್ಜಿ ತಿನ್ನಲ್ಲು ಕರೆದೆವು. 

































Wednesday 7 November 2018

ಹೂವಿನ ಹಡಗಲಿ

ನಮ್ಮ ನಮ್ಮ ಭಾಷೆ, ನಮ್ಮ ನಮ್ಮ ದೇಶ, ನಾವುಟ್ಟಿದ ಸ್ಥಳ, ಹೀಗೆ ನಮ್ಮದ್ದು ಅಂತ ಯಾವುದೆಲ್ಲ ಇದೆ ಅದರ ಮೇಲೆ ಎಲ್ಲಿಲ್ಲದ ಹೆಮ್ಮೆ, ಎಲ್ಲಿಲ್ಲದ ಪ್ರೀತಿ, ಎಲ್ಲಿಲ್ಲದ ಗೌರವ. ಈ ಭಾವನೆಗಳು ಸರ್ವೇ ಸಾಮಾನ್ಯ. ನನಗು ಹಾಗೆ, ಅದೇನೋ ಕನ್ನಡ ಭಾಷೆಯೆಂದರೆ ಅತಿ ಪ್ರೀತಿ.

ನಮ್ಮ ಕರ್ನಾಟಕ ರಾಜ್ಯದಲ್ಲಿ ೩೦ ಜಿಲ್ಲೆಗಳಿವೆ. ೨೭೦ ಪಟ್ಟಣ. ಸರಿಸುಮಾರು ೨೯೪೦೬ ಹಳ್ಳಿಗಳು. ಒಂದೊಂದು ಸ್ಥಳಗಳ್ಳದ್ದು ಒಂದೊಂದು ವಿಬ್ಭಿನ್ನವಾದ ಹೆಸರುಗಳು. ಇವೆಲ್ಲದರ ನಡುವೆ ಮೊನ್ನೆ ಮೊನ್ನೆ ಪರಿಚಯವಾದ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ಎಂಬ ಪುಟ್ಟ ಪಟ್ಟಣದ ಹೆಸರು ಬಹಳವಾಗಿ ನನಗೆ ಹಿಡಿಸಿತು. ಎಷ್ಟು ಚೆಂದ ಈ ಹೆಸರು. ಸಂಗೀತ ಕೇಳಿದಂತೆ  ಮಧುರವಾಗಿದೆ. ಹೆಸರಿನಂತೆ ಊರು ಸಹ ಬಹಳ ಸುಂದರವಾಗಿದೆ.

ತನ್ನ ನಗುಮೊಗದಿ, ತನ್ನ ಸುಗಂಧದಿ ಮನಸಿಗೆ ಮುದ ನೀಡುವ ಹೂವು, ದೂರ ಅದೆಲ್ಲೋ ಕಾಣದ ದಿಗಂತದೆಡೆಗೆ ಕರೆದೊಯ್ಯುವ ಹಡಗು. ಮನಸಿಗೆ ಮುದ ನೀಡಿದ ಹೂವೆ ಹಡಗಾಗಿ ದೂರ ದಿಗಂತದೆಡೆಗೆ ಕರೆದೊಯ್ಯ್ದರೆ ಹೇಗಿರುತ್ತದೆ? ಅಬ್ಬಾ ಆ ಕಲ್ಪನೆಯೇ ಇಷ್ಟು ಸುಂದರವಾಗಿರುವಾಗ ಅದು ವಾಸ್ತವವಾದರೆ ಹೇಗಿರಬಹುದು?

ಹೂವಿನ ಹಡಗಲಿ, ಇರುಳ ಚೆಂದಿರನ ಬೆಳಕಳಿ, ದೂರ ಅದೆಲ್ಲೋ ಆಕಾಶ ಸಮುದ್ರವ ಚುಂಬಿಸುವ ಆ ಜಾಗಕ್ಕೆ ನಾನೊಮ್ಮೆ ಹೋಗಬೇಕಿದೆ.

(ಈ ಹೆಸರಿನ ಹಿಂದಿರುವ ಇತಿಹಾಸ ತಿಳಿಯುವ ಮನಸ್ಸಿದ್ದಲ್ಲಿ ವಿಕಿಪೀಡಿಯದಲ್ಲಿ ನೋಡಿ.)

ಬೆಳಕು

ಬೆಳಕಿನ ಹಬ್ಬ ದೀಪಾವಳಿ ದಿನದಂದು ನಿಮಗೋಂದು ಕತೆ ಹೇಳುವೆ. ಕೇಳಿ.
ಸಾಮಾನ್ಯವಾಗಿ ನಾವು ಭಾರತೀಯರು ನಮ್ಮ ನಮ್ಮ ಮಕ್ಕಳ್ಳನ್ನು ನಮ್ಮ ಮನೆಯ ಬೆಳಕು, ಇವನು/ಇವಳು ಹುಟ್ಟಿ ನಮ್ಮ ಮನೆಗೆ ಬೆಳಕು ತಂದ/ತಂದಳು ಎಂದೆಲ್ಲ ಹೇಳುತ್ತೇವೆ ಅಥವಾ ಹೇಳುವುದ್ದನ್ನು ಕೇಳಿರುತ್ತೇವೆ. ರೂಪಕಾಲಂಕಾರವಾಗಿ ಹೇಳುವ ಜನರ ಮದ್ಯೆ ನನ್ನದೊಂದು ಸತ್ಯ ಘಟನೆಯಿದೆ. 
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಒಂದು ಸುಂದರವಾದ ಪುಟ್ಟ ಸ್ಥಳ ಕಾವು. ನನ್ನ ಅಜ್ಜನ ಮನೆ. ಇದು ಸುಮಾರು ೧೯೮೭ ರ ಮಾತು. ಆಗ ನನ್ನ ಅಜ್ಜನ ಮನೆಯಲ್ಲಿ ವಿದ್ಯುತ್ ಸಂಪರ್ಕವಿನ್ನು ಆಗಿರಲಿಲ್ಲ. ಸೀಮೆ ಎಣ್ಣೆಯ ಚಿಮಣಿ ದೀಪದಲ್ಲೇ ಕತ್ತಲೆಯನ್ನು ದೂಡುತ್ತಿದ್ದರು. ೧೫-೧೨-೧೯೮೭ ರಲ್ಲಿ ನನ್ನಣ್ಣ ಹುಟ್ಟಿದೆ. ಅದೇ ಸಂದರ್ಭದಲ್ಲಿ ಅಜ್ಜನ ಮನೆಗೆ ವಿದ್ಯುತ್ ಸಂಪರ್ಕಸಿಕ್ಕಿತ್ತು. ನನ್ನ ಚಿಕ್ಕಪ್ಪನಿಗೆ ಕೆಲಸ ದೊರೆಯಿತು. ಆಗ ನನ್ನಜ್ಜ ಹೇಳಿದ ಮಾತು, "ನಮ್ಮಣ್ಣು ನಮ್ಮ ಮನೆಗೆ ಬೆಳಕು ತಂದ". ಅಕ್ಷರಶಃ ನನ್ನಣ್ಣ ನಮ್ಮ ಮನೆಯ ಬೆಳಕಾದ. ನನ್ನಜ್ಜನ ಮನೆಯ, ಮನವ ಬೆಳಗಿದ. ನಮ್ಮಮ್ಮನ ಮುಖದ ನಗುವಾದ.  

Tuesday 6 November 2018

ಹೆಸರಿಲ್ಲದಿರೋ ಬಂದುವೇ

 ಜೊತೆಯಲ್ಲಿ ಸೇರಿ ನೆನಪುಗಳ ಕಟ್ಟೋಣ. ಇದ್ದಷ್ಟು ದಿನ ಜೊತೆಯಲ್ಲಿ ಬಾಳೋಣ. ನೀನೆಂದಿಗೂ ನನಗೆ ಸ್ವಂತವಲ್ಲ. ನಿನಗೆ ನನ್ನ ಮೇಲೆ ಪ್ರೀತಿಯೂ ಇಲ್ಲ. ಹಾಗಂತ ನಾನು ನಿನಗೆ ಬೇಡಯೆಂದಲ್ಲ. ಮುಂದೊಂದುದಿನ ನಮ್ಮಿಬರ ದಾರಿ ಬದಲಲಿದೆ. ಇದರ ಅರಿವು ನನಗು ಇದೆ. ನಿನಗೂ ಇದೆ. ಹೇಳಿದಳು ಅವಳು. 

“Memories warm you up from the inside. But they also tear you apart.” 
― Haruki Murakami, Kafka on the Shore
ನಿನ್ನೊಂದಿಗೆ ಮತ್ತಷ್ಟು ನೆನಪುಗಳ ಕಟ್ಟಲು ನನಗೆ ಸಾಧ್ಯವಿಲ್ಲ. ನಿನ್ನೊಂದಿಗೆ ದಿನ ಕಳೆದಂತೆ ಈ ನೆನಪುಗಳು ಗಾಢವಾಗುತ್ತಾ ಹೋಗುತ್ತದೆ. ಇದರಿಂದ ಹೊರಬರಲು ತುಂಬಾ ಸಮಯಬೇಕು.
ಮಾಸಬೇಕು ನಿನ್ನ ನನ್ನ ನೆನಪುಗಳು. ಉತ್ತರಿಸಿದ ಅವನು.

ಅವನ ಮಾತಿನಲ್ಲಿದ್ದ ಸತ್ಯದ ಅರಿವು ಮೊದಲಿಂದಲೇ ತಿಳಿದ್ದಿತ್ತು. ಆದರೂ ಮುಕ್ತಾಯಕ್ಕೆ ಒಳ್ಳೆಯ ಪದ ಬಳಸ ಬಹುದಿತ್ತು.

ಅಳಿಸಲೇ ಬೇಕೆಂದಿದ್ದರೆ ನೆನಪುಗಳನ್ನು ಚಿತ್ರಿಸುವುದೇಕೇ? ನೆನಪುಗಳ ಮಾಸಿಸಲು ಮುಪ್ಪಿನ ಕಾಲವೊಂದಿರುವುದು. ಅಲ್ಲಿವರೆಗೂ ಮೆದುಳಿನ ಯಾವುದೊ ಮೂಲೆಯಲ್ಲಿ ಒಂದಿಷ್ಟು ಜಾಗಕೊಡಲೇನು ಕಷ್ಟ? ನಮ್ಮದೇ ಕೂಸದ ಅದನ್ನು ದಮ್ಮು ಕಟ್ಟಿ ಕೊಲ್ಲುವುದು ಅಪರಾದವಲ್ಲವೇ? ಆ ಮುದ್ದಾದ ಭಾವನೆಗಳಿಗೆ ಸಲ್ಲಬೇಕಾದ ಗೌರವಗಳನ್ನು ಕೊಡಲೇ ಬೇಕಲ್ಲವೆ. ಅವನಿಗಿದನು ಹೇಳಬೇಕೆಂದುಕೊಂಡಳು ಅವಳು, ಹೇಳಲಿಲ್ಲ.   

ಅವಳೇಳದೆಯೇ ಇದನರಿವಷ್ಟು ಸೂಕ್ಷ್ಮನವನು. ಹಾಗೆಂದು ನಂಬಿದ್ದಳು ಅವಳು.

ನಡೆದ ಘಟನೆಗಳಿಂದ (ಮೇಲಣ ಮಾತು ಕತೆಯಿಂದ) ಅವಳಿಗೆ ದುಃಖ್ಖ ಸ್ವಲ್ಪವೂ ಇಲ್ಲ. ಬರಿಯ ನೋವು ಅಷ್ಟೇ.
ಕಟ್ಟಿದ ನೆನಪುಗಳಿಂದ ಪಶ್ಚಾತಾಪವಿಲ್ಲ, ಬರಿಯ ಖುಷಿ ಅಷ್ಟೇ.



ಅರಿವೇ ಗುರು. (part-1)

ಅರಿವೇ ಗುರು. ಬಸವಣ್ಣನವರ ಈ ಮಾತು ಎಷ್ಟು ಸತ್ಯ. ಅಲ್ಲವೇ?
ನನಗೆ ಅಪ್ಪನೇಳಿದ ಮಲಯಾಳಂ ಭಾಷೆಯ ನುಡಿಮುತ್ತೊಂದು ಹೀಗಿದೆ "ತನ್ನತಾನರೀತಿಲೇ ಪಿನ್ನೆ ತಾನರಿವು" (ಪದಗಳು ತಪ್ಪಿದ್ದರು ಇರಬಹುದು, ಮಲಯಾಳಂ ಭಾಷೆ ನನಗೆ ಬರುವುದಿಲ್ಲ).  ಅಂದರೆ, "ನಿನ್ನ ನೀ ಅರಿತರೆ. ಬೇರೆಯದೆಲ್ಲ ನಂತರ ಅರಿವಾಗುತ್ತದೆ".




ಯವನಿಕಾ ಕ್ಯಾಂಟೀನ್

೨೦೧೫ರಲ್ಲಿ ಸಂಶೋಧನ ವಿಧ್ಯಾರ್ಥಿಯಾಗಿ ಬೆಂಗಳೂರು ವಿಶ್ವವಿದ್ಯಾಲಯದ ಭೌತಾಶಾಸ್ತ್ರ ವಿಭಾಗಕ್ಕೆ ಸೇರಿಕೊಂಡೆ. ನಂತರದ ದಿನಗಲ್ಲಿ ಗೆಸ್ಟ್ ಲೆಕ್ಚರರ್ ಆಗಿ  UVCE (University Visvesvaraya College of Engineering ಬೆಂಗಳೂರು ವಿಶ್ವವಿದ್ಯಾಲಯದ ಒಂದು ಅಂಗಸಂಸ್ಥೆ) ಯಲ್ಲಿ ಕೆಲಸ ಮಾಡಲು ಶುರು ಮಾಡಿದೆ. ಆ ದಿನಗಳ್ಲಲಿ ನನ್ನ ಸಹೋದ್ಯೋಗಿಯಾಗಿದ್ದ ರವಿ ಪಾಟೀಲ್ ಸರ್ ನನ್ನನ್ನೊಂದು ದಿನ ಊಟಕ್ಕೆಂದು UVCE ಬಳಿ ಲೋಕೋಪೋಯೋಗಿ ಇಲಾಖೆಯ (PWD) ಒಳಗಣ ಒಂದು ಕ್ಯಾಂಟೀನ್ಗೆ ಕರೆದೋಯ್ದರು, ಅದುವೆ ಯವನಿಕಾ ಕ್ಯಾಂಟೀನ್ . UVCE ಭೌತಾಶಾಸ್ತ್ರ ಪ್ರಯೋಗಾಲಯದಿಂದ ಸುಮಾರು ೧೦ ನಿಮಿಷ ನಡೆದೋಗುವ ದಾರಿ. ದಾರಿ ಉದ್ದಕ್ಕೂ ರವಿ ಸರ್ ಆ ಕ್ಯಾಂಟೀನ್ನಲ್ಲಿ ಸಿಗುವ "ರಸಂ" ಬಗ್ಗೆ ಮಾತನಾಡುತ್ತ, ಹೊಗಳುತ್ತಾ ಹೋದರು. ಮೊದಲೇ ಹೊಸ ರುಚಿಯ ರುಚಿಸಲು ಹುಡುಕಾಡುವ ನನ್ನ ನಾಲಿಗೆ, ಅವರ ವಿವರಗಳ ಕೇಳಿ ನೀರೂರಿಸಲು ಶುರು ಮಾಡಿತ್ತು. ಅವರು ನನ್ನಲ್ಲಿ ಮೂಡಿಸಿದ್ದ ನಿರೀಕ್ಷೆಗಳಾವುವು ಹುಸಿಯಾಗಲಿಲ್ಲ. ಜೀವನದಲ್ಲಿ ಸೇವಿಸಿದ ಅತ್ಯುತ್ತಮ್ಮ ರಸಂಗಳಲ್ಲಿ ಅದು ಕೂಡ ಒಂದಾಗಿತ್ತು. ನನಗಾಗುವಾಗ ಸ್ವಲ್ಪ ಹೆಚ್ಚೇ ಕಾರ ಎನಿಸಿತಾದರೂ ಮೂಗನ್ನು ಸುರ್ ಸುರ್ ಮಾಡುತ್ತಲ್ಲೇ ರಸಂ ಊಟ ಮಾಡಿದೆ. ಅದಾದ ನಂತರದ ದಿನಗಲ್ಲಿ ಅದೆಷ್ಟೋ  ಸಲ ಅಲ್ಲಿ ಊಟಕ್ಕೆ ಹೊಗ್ಗಿದ್ದೇನೆ. ಆದರೆ ಆ ರಸಂ ರುಚಿ ನನ್ನನ್ನು ತನ್ನೊಳಗೆ ಎಷ್ಟು ಭದ್ರವಾಗಿ ಬಂಧಿಸ್ಸಿತೆಂದರೆ ಇದುವರೆಗೂ ಆ ಕ್ಯಾಂಟೀನ್ನಲ್ಲಿ ಬೇರೆ ಯಾವುದೇ ಅಡಿಗೆಯ ರುಚಿ ನೋಡಲು ಬಿಡದಷ್ಟು.

ನೀವು ಒಮ್ಮೆ ಭೇಟಿ ಕೊಡಿ. ಒಮ್ಮೆ ನಿಮ್ಮ ನಿಮ್ಮ ಮೂಗನ್ನು ಸುರ್ ಸುರ್ ಯೆಂದು ಶಬ್ಧಮಾಡಿ. ಒಂದು ಪ್ಲೇಟ್ ರಸಂ ಊಟ ಮಾಡಿನೋಡಿ.
***********************************************
ನನ್ನಪ್ಪ ಹೇಳಿದ ಒಂದು ಸಣ್ಣ ಕತೆ ನಿಮಗೆ ಹೇಳಬೇಕೆನಿಸುತ್ತಿದೆ.
ಒಂದು ಊರಿನಲ್ಲಿ ಒಬ್ಬ ರಾಜನಿದ್ದನಂತೆ.
(ಯಾವ ಊರು? ರಾಜನ ಹೆಸರೇನೆಂದು? ನನ್ನ ಕೇಳಬೇಡಿ. ಅವನ ಹೆಸರೇನೆಂದು ಅಪ್ಪನಿಗೆ ನೆನಪಿಲ್ಲ. ಊರು ಯಾವುದೆಂದು ಗೊತ್ತಿಲ್ಲ.)
ಆ ರಾಜ ಮಹಾನ್ ತಿಂಡಿಪೋತ.
ಅವನ ರಾಜ್ಯವಲ್ಲದೆ, ಸುತ್ತ ಮುತ್ತ ಇದ್ದ ರಾಜ್ಯಗಲ್ಲಿಂದ ಒಳ್ಳೊಳ್ಳೆ ಅಡಿಗೆ ಭಟ್ಟರನ್ನು ಕರೆಸಿ ರುಚಿ ರುಚಿಯಾದ ತಿಂಡಿ ತಿನಿಸುಗಳ್ಳನ್ನು ಮಾಡಿಸಿ ತಿನ್ನುತಿದ್ದನಂತೆ.
ಪಾಪ.... ಅಡಿಗೆ ಮಾಡಿ ಬಡಿಸುವವರು ಎಷ್ಟೇ ಜನವಿದ್ದರು, ಹೊಟ್ಟೆಗೆ ಹಿಡಿಸುವಷ್ಟೇ ಅಲ್ಲವೇ ತಿನ್ನಲ್ಲು ಸಾಧ್ಯ. ಅದಕ್ಕೆ ಈ ಭೂಪ ಏನು ಮಾಡುತ್ತಿದ್ದನಂತೆ ಗೊತ್ತೇ? ಹೊಟ್ಟೆ ತುಂಬುವವರೆಗೂ ಘಡತ್ತಾಗಿ ತಿಂದು, ನಂತರ ವೈದ್ಯರ ಸಲಹೆಯಂತೆ ಮಾಡಿ, ತಿಂದದ್ದನ್ನೆಲ್ಲ ಹೊರ ಕಕ್ಕಿ ಹೊಟ್ಟೆ ಕಾಲಿ ಮಾಡಿ, ಮತ್ತೆ ತಿನ್ನುತ್ತಿದ್ದನಂತೆ.
************************************************
ಎಲ್ಲರೂ ದುಡಿಯುವುದು ಈ ಹೊಟ್ಟೆಗಾಗಿಯೇ ಅಲ್ಲವೇ. ದುಡಿಮೆಯ ಅಥವ ಊಟದ ವಿಷಯವೇನಾದರೂ ಬಂದಾಗ ಅಪ್ಪ ಮಾತಿನ ನಡುವೆ ಈ ಹಾಸ್ಯ ಮಾಡುತ್ತಿರುತ್ತಾರೆ, "ಹೇ ಕುದ, ಜೋ ಭೀ ಕೀಯ ಇಸ್ ಪಾಪಿ ಪೆಟ್ಕೆ ವಾಸ್ತೆ ಕೀಯ, ಇಸ್ ಪೆಟ್ ಕೋ ಮತ್ ಮಾರೋ, ಮಾರ್ನ ಹೇತೋ **ಡ್ ಫೆ ಮಾರೋ" ಯೆಂದು ಮುಸಲ್ಮಾನರು ನಮಾಜ್ ಮಾಡುವುದು.
(ಇಲ್ಲಿ ಯಾವುದೇ ಧರ್ಮ ಹಾಗು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು ಉದ್ದೇಶವಲ್ಲ. ಕೇವಲ ವಾಸ್ತವತೆಯನ್ನು ಹಾಸ್ಯದ ಮೂಲಕ ಪ್ರತಿಬಿಂಬಿಸುವುದಷ್ಟೇ. ಕ್ಷಮೆ ಇರಲಿ.)
*************************************************

Sunday 28 October 2018

ಪ್ರೀತಿ

ನನಗೆ ಹುಚ್ಚುಯೆಂದು ಅವನು ಸಾವಿರ ಸಲ ಹೇಳಿದುಂಟು.
ಇದು ಹುಚ್ಚುಯೆಂದು ಎನಿಸಿದರೆ ಹುಚ್ಚೇ ಸರಿ, ಹೌದು ನನಗೆ ಹುಚ್ಚು.

ನಿನ್ನದಲ್ಲದವರನ್ನು ಯಾಕಿಷ್ಟು ಪ್ರೀತಿಸುವೆ? ಎಂದು ಕೇಳುವವರಿಗೇನೆನ್ನ ಬೇಕು?
ಸ್ವಾಮಿ, ಇಲ್ಲಿ ಯಾರು ಯಾರಿಗೂ ಸ್ವಂತವಲ್ಲ. ನೀನು ಒಬ್ಬರನ್ನು ಪ್ರೀತಿಸಲು ಅವರು ನಿನ್ನವರು ಯೆಂಬ ಹಣೆ ಪಟ್ಟಿ ಹೊತ್ತು ಈ ಭೂಮಿಗೆ ಬಂದಿರಬೇಕಿಲ್ಲ. ಪ್ರೀತಿಯ ಉದ್ದೇಶ ಪ್ರೀತಿಸಿದವರನ್ನು ಪಡೆದು ಕೊಳ್ಳುವುದಲ್ಲ. ಪ್ರೀತಿಯನ್ನು ಕೊಡುವುದು.

ಇಲ್ಲಿ ಒಂದು ಸಮಸ್ಯೆ ಏನಪ್ಪಾ ಯೆಂದರೆ, ನೀನೇನೋ ಪ್ರೀತಿಯನ್ನು ಕೊಡುವೆ, ಆದರೆ ಆ ಪ್ರೀತಿಯನ್ನು ಅವರು ಸ್ವೀಕರಿಸದಿದ್ದರೆ? ಸ್ವೀಕರಿಸದಿದ್ದರೆ ನಿನ್ನ ಪ್ರೀತಿ ವ್ಯರ್ತವಾಗಿಬಿಡುವುದೇ? ಈ ಪ್ರೆಶ್ನೆಗೆ ಸರಿಯಾದ ಉತ್ತರ ಕಂಡುಕೊಳ್ಳಲ್ಲು ನನಗೆ ಸ್ವಲ್ಪ ಕಾಲಾವಕಾಶ ಬೇಕು.

ಕೆಲವೊಮ್ಮೆ ಅನಿಸುತ್ತದೆ, ಇಲ್ಲಿ ಯಾರು ಯಾರನ್ನು ಸಂಪೂರ್ಣವಾಗಿ ಪ್ರೀತಿಸಿಲ್ಲ, ಪ್ರೀತಿಸಲು ಸಾಧ್ಯವಿಲ್ಲವೆಂದು. ಪ್ರೀತಿಯಂಬುದು ಅಂದುಕೊಂಡಷ್ಟು ಕಷ್ಟದ ವಿಷಯವೇನಲ್ಲ. ಪ್ರೀತಿಯೊಂದಿಗೆ ಅಂಟಿಕೊಂಡಿರುವ ಆಸೆ, ಸ್ವಾರ್ಥವೆಂಬ ಪೆಡಂಭೂತಗಳೇ ಜೀವನವನ್ನು ಕಷ್ಟಮಯಗೊಳಿಸುವುದು.


Tuesday 9 October 2018

ಚಹಾ ವಿರಾಮ [ಭಾಗ-೧]

ಇಂದು ಸಂಜೆ ಚಹಾ ವಿರಾಮದಲ್ಲಿ ನನ್ನ ಮತ್ತು ನನ್ನ ಸ್ನೇಹಿತೆ ಅಶ್ವಿನಿಯ ನಡುವೆ ನಡೆದ ಹಾಳು ಹರಟೆಯ ಕುರಿತು ತಲೆಯಲ್ಲಿ ಒಂದಷ್ಟು ವಿಷಯಗಳು ಹರಿದಾಡುತ್ತಿರುವಾಗ ಮೊದಲಿಗೆ ಅನಿಸ್ಸಿದ್ದು ಈ ವಿಷಯಗಳ ಮೇಲೆ ಒಂದಷ್ಟು ನನ್ನನಿಸಿಕೆಯ ಬೆಳಕ ಚೆಲ್ಲಬೇಕೆಂದು. ಸರಿ, ಹಾಗಾದರೆ ಬರೆಯೋಣವೆಂದು ಲ್ಯಾಪ್ಟಾಪ್ ತೆಗೆದು ಕುಳಿತೆ.
ಅರೇ ಮ್ಹಾರಾಯ್ರೆ, ಏನಿದು ವಿಪರಿಯಾಸ.? ಬರಿಯಬೇಕೆಂದಿರುವ ವಿಷಯಕ್ಕೆ ಶೀರ್ಷಿಕೆಯಾಗಿ ತಟ್ ಎಂದು ಬಂದ ಪದ, ಕಾಪಿ ಕಟ್ಟೆ.! ಆದರೆ ಈಗಾಗಲೇ ಕಾಪಿ ಕಟ್ಟೆಎಂದು ಹೆಸರಿಟ್ಟು ಜನರಿಗೆ ಕಾಪಿ, ಚಹಾ, ತಿಂಡಿ ತಿನಿಸುತ್ತಿರುವ ಹೋಟೆಲ್ ಗಳಿವೆ. ಹಾಗಾಗಿ ಈ ಹೆಸರನ್ನು ಬಳಸುವುದು ಬೇಡ ಎನಿಸಿತು. ಹಾಗಾದರೆ ಮತ್ತೇನು? ಸರಿ ಕಾಫಿ ಬ್ರೇಕ್ ಅಂದ್ಕೊಂಡೆ. ಇದರದ್ದು ಅದೇ ಹಣೆಬರಹ. ಯಾವುದು ಬೇಡ, ಕಟ್ಟೆ ಪುರಾಣ? ಹುಂ ಹು .. ಈ ಹೆಸರಿನೊಂದಿಗೆ ಈಗಾಗಲೇ ಒಂದಷ್ಟು ಫ್ಲರ್ಟಿಂಗ್ ಆಗಿದೆ. ಲಂಕೇಶ ಪತ್ರಿಕೆಯಲ್ಲಿ, ಬಯಲು ರಂಗಮಂದಿರದಲ್ಲಿ, ಸಿನಿಮಾಗಲ್ಲಿ! ಈಗಿನ್ನು ನನ್ನ ಬಳಿ ಉಳಿದಿರುವುದು ಒಂದೇ. ಚಹಾ ವಿರಾಮ. ಇದನ್ನು ಸಹ ಬಳಸಿ ಬೇಕಾದಷ್ಟು ವಿಷಯ ವಿಮರ್ಶೆಗಳು ನಡೆದಿರಬಹುದು. ನನಗದು ಗೊತ್ತಿಲ್ಲ. ಒಂದು ರೀತಿಯಲ್ಲಿ ಈ ಎಲ್ಲಾ ಶೀರ್ಷಿಕೆ ಇಲ್ಲಿ ಹೊಂದಾಣಿಕೆಯಾಗುತ್ತದೆ. ಮರಗಳ ಕೆಳಗಾಗೆ ಕಲ್ಲು ಬೆಂಚ್ಗಳ ಹಾಕಿರುವ ನಮ್ಮ ಡಿಪಾರ್ಟ್ಮೆಂಟ್ ಕ್ಯಾಂಟೀನ್ ನಲ್ಲಿ ನಾವು ಆಗಾಗ ಚಹಾ ವಿರಾಮಕೆಂದು ಹೋಗಿ, ಚಹಾ, ಕಾಪಿ ಕುಡಿಯುತ್ತ ಜಗತ್ತಿಲಿನ ಆಗುಹೋಗುಗಳ್ಳನ್ನು ನಮ್ಮಿಂದ ಏನು ಮಾಡಲಾಗದಿದ್ದರೂ ಬಡಿಯಿ ಕೊಚ್ಚಿಕೊಳ್ಳುತ್ತ, ಒಂದಷ್ಟು ಅವರಿವರ ಮೇಲೆ ದೂರು ಹಾಕುತ್ತ, ನಗುತ್ತ ಮಾತನಾಡಿ ಬರುತ್ತೇವೆ. ಇದೊಂತರ ಕೆಲಸದ ಒತ್ತಡಗಳ ನಡುವೆ ಮರಳುಗಾಡಿನ ಮದ್ಯಾಹ್ನದ ಉರಿಬಿಸಿಲನ್ನಲ್ಲಿ ಬೀಸಿ ಹೋಗುವ ತಂಗಾಳಿಯಂತೆ. ಹೇಳಬೇಕೆಂದರೆ ಲ್ಯಾಬ್ನಲ್ಲಿ ಕುಳಿತು ಕಲಿಯುವುದಕ್ಕಿಂತ ಹೆಚ್ಚೇ ವಿಷಯಗಳ ವಿನಿಮಯ ಈ ಚಹಾ ವಿರಾಮದಲ್ಲಿ ಆ ಕಲ್ಲು ಬೆಂಚ್ಗಳಲ್ಲಿ ನಡೆಯುತ್ತದೆ.




Thursday 4 October 2018

ದಾವಣಗೆರೆ ಬೆಣ್ಣೆ ಮಸಾಲಾ ದೋಸೆ.

ಬೆಂಗಳೂರಿನಲ್ಲಿ ಸಿಗದ ತಿಂಡಿ ತಿನಿಸುಗಲ್ಲಿಲ್ಲ, ವಸ್ತುಗಳಿಲ್ಲ.
ಮಹಾನಗರಿ ಬೆಂಗಳೂರು ಸಂಚಾರ ದಟ್ಟಣೆಯ ಸಂದರ್ಭದಲ್ಲಿ ಮಹಾನರಕ ಹೊರತಾಗಿ ಮಿಕ್ಕೆಲ್ಲಾ ಸಂದರ್ಭದಲ್ಲೂ ಅದ್ಭುತ. ಎಲ್ಲಾ ರೀತಿಯ ಜನಕ್ಕೂ ಒಂದಲ್ಲಾ ಒಂದು ರೀತಿಯಲ್ಲಿ ಸ್ವರ್ಗ. ದೇಶ ವಿದೇಶದ ಯಾವುದೇ ಮೂಲೆಯಿಂದ ಬಂದರು ತನ್ನ ತೋಳ ತೆಕ್ಕೆಯಲ್ಲಿ ಜಾಗ ನೀಡುವ ಮಹಾ ತಾಯಿ.
ಹೇಳದೆ ಕೇಳದೆ ಆಗೊಮ್ಮೆ ಈಗೊಮ್ಮೆ ಧೋಯೆಂದು  ಸುರಿವ ಮಳೆ ಸಂಚಾರ ದಟ್ಟಣೆಯಲ್ಲೊಂದಷ್ಟು ಏರು ಪೇರು ಮಾಡಿದರು, ಬಹಳಾನೇ ಹಿತ ನೀಡುತ್ತತೆ. ನನ್ನ ಅದೃಷ್ಟ, ಈ ಮಹಾನಗರಿಯ ಮಾಡಿಲ್ಲಲ್ಲಿ ಅಲ್ಲಿ ಇಲ್ಲಿ ಉಳಿದುಕೊಂಡಿರು ಅರೆ ಬರೆ ಕುರ್ಚ್ಲು ಕಾಡನಲ್ಲಿ ವಾಸಿಸುದ್ದಿದ್ದೇನೆ (ಬೆಂಗಳೂರು ವಿಶ್ವವಿದ್ಯಾನಿಲಯ). ಇಲ್ಲಿ ಮಳೆ ಬಂದಾಗ ಸ್ವರ್ಗವೇ ಭೂಲೋಕಕ್ಕೆ ಇಳಿದಂತ ಅನುಭವವಾಗುತ್ತದೆ. ಕ್ಯಾಂಪಸ್ ಇಂದ ಸ್ವಲ್ಪ ಹೊರಗೆ ನಡೆದರೆ ಸಾಕು, ದೋಸೆ ಕಾರ್ನರ್ ಸಿಗುತ್ತದೆ. ಮಳೆಯಲ್ಲಿ ಕೊಡೆ ಹಿಡಿದುಕೊಂಡು ಅಲ್ಲಿಗೆ ಹೋಗಿ ಬಿಸಿ ಬಿಸಿ ದಾವಣಗೆರೆ ಬೆಣ್ಣೆ ಮಸಾಲಾ ದೋಸೆ ತಿಂದು, ಒಂದು ಸ್ಟ್ರಾಂಗ್ ಚಾ ಕುಡುಯುತ್ತಿದ್ದರೇ, ವ್ಹಾ, ಇನ್ನೇನ್ನು ಬೇಕು?
ಹಾನ್, ಇನ್ನೆನ್ನುಬೇಕೆಂದು ನನ್ನ ಕೇಳಿದರೆ, "ಈ ಮಳೆಯಲ್ಲಿ ಕೈ ಕೈ ಹಿಡಿದು ನಡೆಯುತ ಬಯಸದೆ ಇರುವಾಗ (ಅನಿರೀಕ್ಷಿತವಾಗಿ) ಗಲ್ಲದ ಮೇಲೊಂದು ಬಿಸಿ ಮುತ್ತ ನೀಡಲು ಗೆಳೆಯನೊಬ್ಬ ಬೇಕು/ ಅಥವಾ ನನ್ನ ಹಿಂದೆ ಹಿಂದೆ ಬರುವ ಒಂದು ಮುದ್ದಾದ ನಾಯಿ ಮರಿ ಬೇಕೆಂದು ಹೇಳಬಹುದೇನೋ!!"

ಒಂತರಾ ಲೈಫ್ ಸೂಪರ್ ಗುರು. 

Wednesday 3 October 2018

ಸುತ್ತೋಣ ಬಾರ.

ಅದೆಷ್ಟೇ ಬಾರಿ ಕಾಡ ನೋಡ ಹೋದರು ಬೇಜಾರೆಂದು ಅನಿಸುವುದೇ ಇಲ್ಲ. ಸಮಯ ಸಿಕ್ಕಾಗಲೆಲ್ಲ ಈ ಕಲ್ಲು ಮಣ್ಣಿನ ಹಾದಿಯಲಿ ನಡೆದು ಹೋಗುವಾಸೆ. ಕಾಡಿನ ಮೌನವ ಬಿಗಿದಪ್ಪುವಾಸೆ. ಕಚಪಚ ಕಚಪಚ ಎಂದು ದಿನವಿಡೀ ಮಾತನಾಡುವ ಮನುಷ್ಯ, ಶಬ್ಧ ಮಾಡುವ ವಾಹನಗಳು, ಧೂಳು, ಹೋಗೆ, ಬಿಸಿಲು, ರಾಮರಾಮ. ಇದೆಲ್ಲದರಿಂದ ಆಗೊಮ್ಮೆ ಈಗೊಮ್ಮೆ ತಪ್ಪಿಸಿಕೊಂಡು ದೂರ  ಓಡಿಹೋಗುವಾಸೆ. ದಿನನಿತ್ಯದ ಜಂಜಾಟಕ್ಕೆ ಒಗ್ಗಿಹೋದ ನನಗೆ ಸಂಪೂರ್ಣವಾಗಿ ಇದನ್ನು ತೊರೆದು ಹೋಗಲು ಸಾಧ್ಯವಿಲ್ಲ, ಈ ಮಲಿನ, ಈ ಶಬ್ಧಗಳು ನನ್ನಲ್ಲಿ ಬೆರೆತು ಹೋಗಿವೆ. ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಜೀವನದ ಮೇಲೆ ಎಷ್ಟೇ ಕೋಪವಿರಬಹುದು, ಆದರೆ ಪ್ರೀತಿಯು ಇದೆ. ಅಮ್ಮ ಅದೆಷ್ಟೋ ಬಾರಿ ನನಗೆ ಹೇಳುವುದಿದೆ, "ವಾರವಿಡೀ ಕೆಲಸ ಮಾಡಿ ಸುಸ್ತಾಗಿದೆ ಎಂದು ಹೇಳ್ತಿಯಲ್ಲ, ಶನಿವಾರ ಭಾನುವಾರ ಆರಾಮವಾಗಿ ಮಲಿಗಿ ವಿಶ್ರಮಿಸುವುದು ಬಿಟ್ಟು ಅಲ್ಲಿ ಇಲ್ಲಿ ಸುತ್ತುವುದಾದರೂ ಏಕೆ". ಅಮ್ಮನಿಗೆ ನಾನು ಅರ್ಥ ಮಾಡಿಸುವುದಾದರೂ ಹೇಗೆ? ನನಗೆ ಅದರ ಅವಶ್ಯಕತೆ ಎಷ್ಟಿದೆಯೆಂದು. 

ಹುಣ್ಣಿಮೆ

ಮುತ್ತು ೧.

ಮನದಲ್ಲಿಯೇ ಮುಚ್ಚಿಟ್ಟುಕೊಂಡ ಯಾವುದೋ ಹಾಡದು..
ಅದಕ್ಕೆ ಸಾಹಿತ್ಯದ ಗೋಜಿಲ್ಲ, ಸಂಗೀತದ ಅರಿವಿಲ್ಲ..
ಇದ್ದಕಿದ್ದಂತೆ ಅದಕ್ಕೆ ಹೊರಬರುವಾಸೆ..
ನಿಶಬ್ಧದದ ಹಾಡಾದ ಅವಳು ಒಂದು ವೇಳೆ ಹೊರಬಂದರು, ಯಾರಿಗಾದರೂ ಕೇಳಬಹುದೇ?
***************************
ಮುತ್ತು ೨.

ಅವನಿಗೆ ಮೊದಲಿನಿಂದಲೂ ಹಾಗೆಯೇ, ತಲುಪಬೇಕಾದ ಗುರಿಗಿಂತ ದಾರಿಯೇ ಇಷ್ಟ.
ಸ್ವರ್ಗದ ಹಾದಿಯಲ್ಲಷ್ಟೇ ಪಯಣ, ಅದುವೇ ಸ್ವರ್ಗ ಸುಖ.
***************************
ಮುತ್ತು ೩.

ಏನಾಗುತ್ತಿದೆ ಎಂಬ ಅರಿವಿಲ್ಲ.
ಒಬ್ಬರೊಳಗೊಬ್ಬರು ಕಳೆದುಹೋಗಿ, ಒಬ್ಬರನೊಬ್ಬರು ಹುಡುಕಿ ತರುವಾಸೆ.
ಆದರೆ ನಡುವಲ್ಲಿ ಅದ್ಯಾವುದ ತಿಳಿಯದ ಅಂತರ.
ಎಷ್ಟೇ ಸಮೀಪಕ್ಕೆ ಬಂದರು, ಒಬ್ಬರನೊಬ್ಬರು ಅಂಟಿಕೊಂಡಿದ್ದರು, ದೂರ ದೂರವಾಗಲೇ ಇಲ್ಲ.
ಭಹುಷಃ ಮನಸ್ಸು ಇದ್ಯಾವುದ್ದಕ್ಕಿನ್ನು ತಯಾರಾಗಿರಲ್ಲಿಲ್ಲ.
****************************
ಮುತ್ತು ೪.

ನನ್ನೊಳು ನಾನು ಬಂದಿ.
ರೆಕ್ಕೆ ಬಿಚ್ಚಿ ಹಾರಬೇಕಾದ ಮನಸ್ಸಿನ ಸುತ್ತ ಯೋಚನೆಗಳೆಂಬ ಬೇಲಿ ಹೆಣೆದು,
ನನ್ನೊಳು ನಾನು ಬಂದಿ.
ಯಾಕಿಷ್ಟು ಚಿಂತೆ? ಚಿಂತಿಸಿ ಗಳಿಸಿದ್ದಾದರೂ ಏನು?
ಈ ಪ್ರಶ್ನೆಗಳೇನು ತಾತ್ಕಾಲಿವಾಗಿ ಆಗೊಮ್ಮೆ ಈಗೊಮ್ಮೆ ಮೂಡಿದರು,
ಯೋಚನೆಗಳ ಬೇಲಿದಾಟಲು ಹಕ್ಕಿಯ ರೆಕ್ಕೆ ಇನ್ನು ಬಲಿತಿಲ್ಲ.
*************************
ಮುತ್ತು ೫.

ಎಲ್ಲಾ ಸುಂದರವಾದ ವಸ್ತುವಿನ್ನಲ್ಲೂ ಒಂದಲ್ಲ ಒಂದು ಕೊರತೆ ಇದ್ದೇ ಇರುತ್ತದೆಯಂತೆ,
ಸೌಂದರ್ಯಕ್ಕೆ ದೃಷ್ಟಿಯಾಗಬಾರದೆಂದಿರಬೇಕು !!
ಅದೊಂದು ಅದ್ಭುತ ಕ್ಷಣ,
ಅದ್ಭುತ ರಾತ್ರಿ,
ಹಾಲು ಬೆಳದಿಂಗಳು,
ದೈವೀಕ ಅನುಭವ,
ತೀರದ ಧಾಹ,
ಕಪ್ಪು ಮಚ್ಚೆ,
ವಾಸ್ತವತೆ ಹಾಗು ಕನಸಿನ ನಡುವಿನಲ್ಲೊಂದು ತೂಗುಯ್ಯಾಲೆ,
ಅರೆ ಕನಸು,
ಅರೆ ನನಸು,
ಪಯಣದ ಪೂರ್ಣವೆಲ್ಲ ಕಾಡಿದ ಒಂದೇ ಪ್ರಶ್ನೆ,
ಇದು ಕನಸೋ, ನನಸೋ?
ಪ್ರಶ್ನೆಗೆ ಉತ್ತರದ ಅವಶ್ಯಕತೆ ಬರಲೇ ಇಲ್ಲ.
ಅವನಿಗದು ಕನಸೆಂದೇ ನಂಬುವಾಸೆ.
ಅವನ ಆಸೆ ನನ್ನಾಸೆಗಿನ್ನ ಬಿನ್ನವಿದ್ದರೂ,
ಅವನಾಸೆಗೆ ಹುಂ ಗುಡುವುದು ನನಗೆ ಖುಷಿ,
ಕನಸುಗಳಿಲ್ಲದ ಜೀವನವೆಲ್ಲಿ?
ಕನುಸುಗಳ್ಳನ್ನೇ ಜೀವಿಸೋನನಗೆ,
ಜೀವಿಸಿದ ಕ್ಷಣವೆಲ್ಲವು ಒಂದು ರೀತಿಯಲ್ಲಿ ಕನಸೇ ಅಲ್ಲವೇ?
***********************
ಮುತ್ತು ೬.

ಅದೇನೋ ಚಡಪಡಿಕೆ, ಆತುರ,
ಗಡಿಯಾರದ ಮುಳ್ಳುಗಳ ಬೆನ್ನನ್ನೇರಿ ಅವುಗಳ ಹಿಂದೆ ಹಿಂದೆ ಚಲಿಸುತ್ತ ಎಲ್ಲಾ ದಿಕ್ಕನ್ನು ನೋಡಿಬಂದೆವು.
ಒಮ್ಮೆ ಮೇಲೆ, ಒಮ್ಮೆ ಕೆಳಗೆ, ಒಮ್ಮೆ ಬಲಕ್ಕೆ, ಒಮ್ಮೆ ಎಡಕ್ಕೆ ....
ಹಗಲು ಕತ್ತಲಾಯಿತು, ಕತ್ತಲೋಗಿ ಹಗಲು.
***********************
ಮುತ್ತು ೭.

ನನ್ನ ಸ್ನೇಹಿತನೊಮ್ಮೆ ಹೇಳಿದ ಅಲ್ಲಮಪ್ರಭುರವರ ಪದ್ಯವಿಲ್ಲಿ ನೆನಪಿಗೆ ಬರುತ್ತಿದ್ದೆ.
"ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಶೆಯೇ ಮಾಯೆ ಕಾಣಾ ಗುಹೇಶ್ವರ."
**************************
ಮುತ್ತು ೮.

ಒಂದೊಂದು ಮುತ್ತನ್ನು ಜೊಪ್ಪನಾವಾಗಿ ಪೋಣಿಸಿ,
ಹಾರಾಒಂದರ ಹೆಣೆದು,
ಕೊರಳಿಗೆ ಮಾಲೆಮಾಡಿ ಹಾಕಿಕೊಲ್ಲಲ್ಲೇ?
***************************

ಜೀವನದ ಕಡೆಯ ಘಟ್ಟದೊರೆಗು ಈ ಸವಿ ಸಿಹಿ ನೋವ ನೆನಪ ಹೊತ್ತೊಯುವಾಸೆ.
ಮುತ್ತಿನ ಮಾಲೆ ಹಗುರಾಗಿದ್ದಷ್ಟು ಪಯಣಕ್ಕೆ ಒಳ್ಳೆಯದು.






Saturday 15 September 2018

ಹೊಸತು

I mean, I feel like a brand new person today, completely. 
And I'm waiting for its results. 
Whatever the results it may be, I'm happy to discover this version of me. 

***********
Note: If the results are good, you gonna hear my story sooner. 

Thursday 13 September 2018

ಸಾಲದ ಸಮಯ

ಸಮಯ ಸಾಲುತ್ತಿಲ್ಲ.
ಸ್ವಲ್ಪ ಸಾಲಕೊಡುವೆಯ?
ಸ್ವಲ್ಪೇ ಸ್ವಲ್ಪ.
ಓದಲೇ ಬೇಕೆಂಬ ಪುಸ್ತಕದ ಸಂಖ್ಯಾ ದಿನದಿಂದ ದಿನ್ನಕ್ಕೆ ಹೆಚ್ಚುತ್ತಿದೆ.
ಬರೆಯಬೇಕೆಂಬ ಆಸೆ ಗಾಢವಾಗುತ್ತಿದ್ದೆ.
ಧೂಳು ಹಿಡಿದು ಕುಳಿತಿರುವ ಕ್ಯಾನ್ವಾಸ್, ಕೈ ಬೀಸಿ ಕರೆಯುತ್ತಿರುವ ಕುಂಚ.
ಹೋಗಬೇಕೆಂದಿರುವ ಕಲ್ಲು ಮುಳ್ಳಿನ ದಾರಿ.
ಬೆಟ್ಟ, ಗುಡ್ಡ, ನದಿ, ನೀರು, ಆಕಾಶ, ಕಾಡು ಮೇಡು.
ರುಚಿನೋಡಿರದ ಹೊಸ ಮಸಾಲೆಗಳು.
ಅನುಭವಿಸ ಬೇಕೆಂದಿರುವ ಎಷ್ಟೋ ಭಾವನೆಗಳು.
ಈ ರೀತಿ ಅದೆಷ್ಟೋ ಲೆಕ್ಕಕ್ಕೆ ಸಿಕ್ಕದಷ್ಟು ಕನಸುಗಳು.
ಇವೆಲ್ಲದರ ಮಧ್ಯ ಎಷ್ಟೇ ಪ್ರಯತ್ನಿಸಿದರೂ ಬೇಗ ಮುಗಿಯದ PhD!!
ಸಮಯ ಸಾಲುತ್ತಿಲ್ಲ.
ಸ್ವಲ್ಪ ಸಾಲಕೊಡುವೆಯ?
ಸ್ವಲ್ಪೇ ಸ್ವಲ್ಪ.

Monday 10 September 2018

Hiding

ಮಂಚದ ಕೆಳಗೆ ಹೋಗಿ ಅವಿತೆ, 
ಅಟ್ಟದ ಕರಿ ಕತ್ತಲೆಯಲ್ಲಿ ಅವಿತೆ,  
ನನ್ನನೊಳು ನಾನವಿತು ಕುಳಿತೆ. 
ಎಲ್ಲೇ ಅವಿತು ಕುಳಿತರು,
ಎಷ್ಟೇ ಅವಿತು ಕುಳಿತರು, 
ನಾನು ಕಾಣಿಸಿತ್ತಿರುವೆ!!!
ಯಾರಿಗೆ? 
ಅದು ಹೇಗೆ?
ಹೀಗೆ ಹಲವು ಪ್ರಶ್ನೆಗಳು ಬೆಂಬಿಡದೆ ಕಾಡಿದಾಗ ಅರಿವಾದ ಸತ್ಯ, 
ನಾನು ನನ್ನಿಂದ ಅವಿತು ಕೊಳ್ಳುವ ಪ್ರಯತ್ನದಲ್ಲಿದೆ. 




Wednesday 5 September 2018

Respect

Respect humanity,
Respect humans,
Respect yourself,
Respect every living organisms.
That's the least thing you can do.

ಮುಖ್ಯ

Sometimes it's important to have your voice raised.
Sometimes it's important to ask what you deserve.
Sometimes it's important to be selfish.
Sometimes it's important to say people you love that you love them.
Coz, sometimes compromising doesn't have meaning.

Constantly compromising

When I was a child,
you loved her lot,
you used to play with her and
I compromised.

When I started schooling,
I wish you hold my hand and walked me to school,
you left me alone in the crowd and went to boarding school.
I compromised.

When I was in confusion,
I wanted you to suggest me the correct path for my higher studies,
you didn't spend 5 minutes of your time to talk to me.
I compromised.

When I got a prize and award in masters,
I wanted you to stand next to me and pose for photographs,
and kiss me by proud,
you never turned up,
I compromised.

Because deep down I always believed, you love me.
I always convinced myself by understanding your situations.

Saved a lot of greeting cards and rakhi's which I bought for you,
never gave it to you, Coz I know you don't like pieces of stuff like that.

I constantly compromised,
cried secretly 1000's of nights,
waited unlimitedly, missed you,
imagined you holding my hand,
heard your whispering wishes for me,
dreamed of roaming with you worldwide,
loved you unconditionally.

Quarreling was the only thing which bound us,
even if it hurts, I never give up quarreling with you.
It makes me feel loved.
It makes me feel I'm yours and you are mine.

I'm grown up now.
But still a younger one for you.
We don't quarrel like a child anymore.
We losing our innocence.

I wish, I ever say, how much important you are, to me.
I wish you hear it without my words.
I wish you understand me at least once.
No one can ever replace you, and I love you.
I always need you, always want you.

You always stood alone,
achieving heights of greatness.
You made us proud.
You grew up to be a gentleman,
and handsome.
I wish you never compromise anything in your life. 




Wish

ನನ್ನ ನೋಟದಿ ನೀನೆಂದು ನಿನಗೆ ಅರಿವು ಮೂಡಿಸುವಾಸೆ.
ನನ್ನ ಪ್ರೀತಿಯ ವ್ಯಕ್ತಪಡಿಸುವಾಸೆ.
ಆದರೆ ಆ ಸಾಮರ್ಥ್ಯ ನನ್ನಲ್ಲಿಲ್ಲ.
೨೫ ವರ್ಷದಿಂದ ಸೊತ್ತಿದ್ದೇನೆ, ಮುಂದೆಯೂ ಹೀಗೆ ಸೋಲುತ್ತೇನೆ.
ಸಾಯವರೆಗೂವರೆಗೂ ನಿನಗಿದು ತಿಳಿಯುವುದು ಇಲ್ಲ,
ನಾ ಬಯಸಿದ್ದು ನನಗೆ ಸಿಗುವುದು ಇಲ್ಲ. 

Friday 10 August 2018

ಹೋಗಿರದ ಹೊಸ ದಾರಿಯಲ್ಲೊಂದು ಸಂಜೆಯ ಪಯಣ

ಪದಗಲ್ಲಿ ಇಳಿಸುವುದಾದರೂ ಹೇಗೆ?
ಆ ನನ್ನ ಭಾವನೆಗಳ.
ನನ್ನೊಳು ಬಚ್ಚಿಡುವುದಾದರೂ ಹೇಗೆ?
ಉದಯಿಸುವ ಆ ಆಸೆಯ.
ಹಿಂಬಾಲಿಸಿದಷ್ಟು ದೂರವಾಗುವ ಆಕಾಶ.
ಸಾಗಿದಷ್ಟು ಮುಗಿಯದ ಹಾದಿ.
ಮುಸ್ಸಂಜೆಯ ಅರೆ ಕತ್ತಲಾ ಹಾದಿಯ ಚೀರಿಕೊಂಡು ಮುನ್ನುಗುವ ಬಂಡಿ.
ಗಾಳಿಯ ರಭಸಕ್ಕೆ ಕುಣಿಯುವ ಮರಗಿಡ.
ಅರೆ!, ಗಾಳಿ ಹಾಡುತಿಹ ಪದಗಳು ನನ್ನೊಬಳಿಗೆ ಮಾತ್ರ ಕೇಳಿಸುತ್ತಿರುವುದಲ್ಲ!
ಮರಗಿಡಕ್ಕೂ ಕೇಳಿಹುದೆ? ಅದೆಕ್ಕೆ ಇರಬಹುದೇ ಆ ಕುಣಿತ?
ಮುಳುಗುತಿಹ ಸೂರ್ಯನ ಮರೆಮಾಚುತ್ತಾ,ಮೋಡವೊಂದು ಆವರಿಸುತ್ತಿದೆ.
ಮಳೆಯೇನಾದರೂ ಬರಬಹುದೇ?
ಗೂಡು ಸೇರೆತಿಹ ಬೆಳ್ಳಕ್ಕಿಯ ಸಾಲೊಂದು ಕಣ್ಣಮುಂದೆ ಹಾದು ಹೋಯಿತು.
ಮಿಶ್ರ ಭಾವನೆಗಳ ಗೂಡಾದ ನನ್ನ ತಲೆ,
ತನ್ನೆಲ್ಲಾ ಭಾವನೆಗಳ ಗಾಳಿಯಲ್ಲಿ ತೇಲಿಬಿಟ್ಟು ಬಹಳ ಹಗುರಾಗಿ ನಲಿದಿತ್ತು.





Hope

ಮನದ ಯಾವುದೋ ಮೂಲೆಯಲ್ಲೊಂದು ಹಣತೆ ಸಣ್ಣದೊಂದು ಚುಕ್ಕಿಯಂತೆ ಬೆಳಗುತ್ತಲ್ಲೇ ಇದೆ.
ದೂರದಲ್ಲೆಲ್ಲೋ ಕತ್ತಲ್ಲಲ್ಲಿ ಕುಳಿತಿರುವನನಗೆ ಗೋಚರಿಸುತ್ತಲೇ ಇದೆ. 

Rhythm of life

I was traveling! 
The melancholic silence surrounded me!
What was that?
Why was that?
All I understood was, I don't understand me completely.
I don't understand what lies deep inside me.
Every time something new emerges. 
Which makes me wonder, wonder about myself. 

Sunday 29 July 2018

ನಾನು=ಯಕಶ್ಚಿತ್, ನಿನ್ನೆದುರು

ತಂಬಿಗೆಯಷ್ಟು ತುಂಭಿಕೊಳ್ಳಬಹುದಷ್ಟೆ ಈ ನಿನ್ನ ಮೌನವ.
ಅದಕ್ಕಿಂತ ಹೆಚ್ಚು ಭಾರವ ನಾ ಹೊರಲಾರೆ.
ಅದುಹೇಗಿಷ್ಟು ನಿರಾಳಲು ನೀನು?
ಕಲಿಸಿಕೊಡೆ ನನಗು ಸ್ವಲ್ಪ.

ಏನ ಹೇಳ ಬಯಸುತಿಹೆ?

ಚಿಲಿಪಿಲಿಗುಟ್ಟುವ ಮುದ್ದು ಪಕ್ಷಿಯೇ,
ಏನ ಹೇಳ ಬಯಸುತಿಹೆ ನೀ?
ಓ ನನ್ನೊಲೊಮೆಯ ಸುಯ್ಯಿಂಗುಟ್ಟುವ ತಂಗಾಳಿಯೇ,
ಏನ ಹೇಳ ಬಯಸುತಿಹೆ ನೀ?
ಕಾಡುವ ಆಳದ ಮೌನ ಹೊತ್ತು ನಿಂತಿರುವ ಬೋಳುಮರವೇ, 
ಏನ ಹೇಳ ಬಯಸುತಿಹೆ ನೀ?
ಓ ಹಸಿರುಟ್ಟು ಮೈದುಂಬಿ ಮೆರೆವ ಮರವೇ,
ಏನ ಹೇಳ ಬಯಸುತಿಹೆ ನೀ?
ಬಡ್ಡನಂತೆ ಕೂತು, ಕೆಣಕುವ ಕಣ್ಣೋಟದಿ ನನ್ನನ್ನೇ ನೋಡುತಿಹ ಬೆಟ್ಟವೇ,
ಏನ ಹೇಳ ಬಯಸುತಿಹೆ ನೀ?
ದುಃಖ್ಖಿಸುತ್ತ, ದೀರ್ಘಲೋಚನೆಯಲ್ಲಿ ಮುಳಿಗಿರು ನೀಲಿಯಾಕಾಶವೇ,
ಏನ ಹೇಳ ಬಯಸುತಿಹೆ ನೀ?
ಒಮ್ಮೆ ಮೌನ ಮುರಿದು ನನ್ನೊಂದಿಗೆ ಮಾತನಾಡೆಯ?
ಒಮ್ಮೆ ನನ್ನ ತಬ್ಬಿ ಮುತ್ತನಿಟ್ಟು ನಿನ್ನಲ್ಲಿ ಲೀನವಾಗಿಸಿಕೊಳ್ಳಲಾರೆಯ?

ಡೆಡ್ಲಿ

Handsome 
by heart,
by face,
by brain,
by pocket. 
Its deadly hot combo. 

ಸೌಂಧರ್ಯ

ಸತ್ಯ,
ಸ್ವಾತಂತ್ರ್ಯ,
ಪ್ರೀತಿ,
ಮಮತೆ,
ಜ್ಞಾನ,
ವಿಜ್ಞಾನ,
ಆಕಾಶ,
ಸೂರ್ಯೋದಯ,
ಸಂಗೀತ,
ಅವನ ನಗು. 

ನೀನು ನೀನೆ

ತೊಟ್ಟ ಅಂಗಿ,
ತಿಂದ ಊಟ,
ಹೋದ ಜಾಗ,
ಇರುವ ಸ್ಥಳ,
ನೀನಾರೆಂದು ಸಂಪೂರ್ಣವಾಗಿ ಬಿಂಬಿಸಲಾರದು.

ನೀನು ನೀನೆ. ಯಾರು ಏನೆಂದರೂ, ನೀನು ನೀನೆ. 

Brahmin

What makes you brahmin?
*ಬ್ರಹ್ಮ ಜ್ಞಾನವನ್ನುಳ್ಳವನು ಬ್ರಾಹ್ಮಣ.
*ಸರ್ವೇ ಭವಂತು ಸುಖಿನಃ ಎಂದು ಬಯಸುವವ ಬ್ರಾಹ್ಮಣ.
*ಮನದಲ್ಲಿ ಪ್ರೀತಿ, ಮಾತಿನಲ್ಲಿ ಮಾಧುರ್ಯವುಳ್ಳವ ಬ್ರಾಹ್ಮಣ.
*ಬೇರೆಯವರ ಕಷ್ಟ ಕಂಡು ಮರುಗುವವ ಬ್ರಾಹ್ಮಣ.
*ಆ ಕಷ್ಟವನ್ನು ಎದುರಿಸಲು ಸಹಾಯ ಮಾಡುವವ ಬ್ರಾಹ್ಮಣ.
*ಮನಸ್ಸಿಗ್ಗೆ ಶಾಂತಿ, ಚೈತನ್ಯ ತುಂಬುವವ ಬ್ರಾಹ್ಮಣ.
*ಕ್ರೂರ ಮೃಗದಲ್ಲೂ ಸಾಧುತ್ವ ಕಾಣುವವ ಬ್ರಾಹ್ಮಣ.
*ಎಲ್ಲಾ ಜೀವಕುಲವ ಸಮನಾಗಿ ಕಾಣುವವ ಬ್ರಾಹ್ಮಣ.
*ಬೇರೆಯವರ ಪ್ರಶ್ನಿಸುವ ಮೊದಲು ತನ್ನ ತಾ ಪ್ರಶ್ನಿಸಿಕೊಳ್ಳುವವ ಬ್ರಾಹ್ಮಣ.
*ಅಲ್ಪಐಶ್ವರ್ಯದಲ್ಲಿ ತೃಪ್ತ, ಪಡೆದಷ್ಟು ಸಾಲದೆಂಬ ಜ್ಞಾನಾತೃಪ್ತ (ಜ್ಞಾನ+ಅತೃಪ್ತ) ಬ್ರಾಹ್ಮಣ.
*ಕೇವಲನಲ್ಲಿ ಕೇವಲ ನಾನೆಂದು ನಂಬಿದವ ಬ್ರಾಹ್ಮಣ.


ಪ್ರಪಂಚಂದ ಯಾವುದೇ ಜನಾಂಗ, ಧರ್ಮ, ಜಾತಿಯವ ಬೇಕಾದರೂ ಬ್ರಾಹ್ಮಣನಾಗಬಹುದು.
ಏಕೆಂದರೆ ಬ್ರಾಹ್ಮಣವೆಂಬುದು ಕೇವಲ ಒಂದು ಜಾತಿಯಲ್ಲ. ಅದು ಆಚರಣೆ. ಅದು ಪ್ರೀತಿ. ನಿಜವಾದ ಬ್ರಾಹ್ಮಣನಾಗಗಳು ಎಲ್ಲರಿಂದ ಸಾಧ್ಯವಿಲ್ಲ. ಅದಷ್ಟು ಸುಲಭದ ಮಾತ್ತಲ್ಲ.

Think over it

An absence of evidence does not mean the evidence of absence.
Insufficient information always leads to a wrong conclusion.
Think before you judge.
Question yourself, how do I know what I know is the truth?
Sometimes the truth is not enough, either the belief.
The combination of these two can only bring the justification.
Analyse, think, understand, then act. 

Tuesday 24 July 2018

Do something. Yah I'm.

When people ask why you so quiet? what you up to? what you thinking? why you not doing anything and sit still?

Oh come on,
I'm hearing more when I'm quiet.
and I'm not always up to something.
I don't always think. I prefer to give some rest to part of my brain a few times.
Why is it always necessary to do something visible? My heart is pumping blood throughout my body every second, regulating everything and it's a hell of a lot of work. yeah, and I breathe.

ಕಥೆಯೊಂದ ಕೇಳಿದೆ.

ಬೆಚ್ಚನೆಯ ಗೂಡಲ್ಲಿ ಬಚ್ಚಿಟ್ಟಿದ ಹೃದಯವ ಅವಳ ನಗುವಿಗೆ ಉಡುಗರೆಯಾಗಿ ನೀಡಿದ್ದ ಮೂರ್ಖನೊಬ್ಬ.
ಅವಳನುಗುವಿನೊಂದಿಗೆ ಮಿಡಿಯುತ್ತಿದ್ದ ಆ ಹೃದಯ ತನ್ನಸ್ತಿತ್ವವ ಮರೆತ್ತಿತ್ತು. ಜೀವಿಸಲು ಬೆಚ್ಚನ್ನೆಯ ಗೂಡೊಂದ್ದು ಬೇಕೆಂಬುದರ ಕಲ್ಪನೆಯಿಲ್ಲದೆ ಅವಳ ನಗುವಿನೊಂದಿಗೆ ಚಲಿಸುತ್ತ ಚಲಿಸುತ್ತ ಹೊರಜಗ್ಗತ್ತಿನ ತಣ್ಣನೆಯ ಗಾಳಿ ಸೋಕಿ ಶೀತವಾಗುತ್ತಾ ಹೋಗಿತ್ತು. ಇಂದೀಗ ಅದು ಸಂಪೂರ್ಣವಾಗಿ ಶಿಥಿಲಗೊಂಡಿದೆ. 
ಮಂಜುಗಡ್ಡೆಯಾಗಿದೆ. ನಗುವಿನಿಂದೆ ಸುತ್ತುವ ಭರದಿ ಜಾರಿಬಿದ್ದು ಪುಡಿ ಪುಡಿಯಾಗಿ ಅವ ನಡೆವ ದಾರಿಯಲ್ಲಿ ಎಲ್ಲೆಡೆ ಹರಡಿದೆ.   ಅದರ ಚೂಪಾದ ತುಣುಕೊಂದು ಅವನ ಕಾಲಿಗೆ ತಾಕಿ ನೆತ್ತರು ಸುರಿದರು ಈಗವನಿಗೆ ನೋವಿನ ಅನುಭವವಾಗುತ್ತಿಲ್ಲ. ಮಿಡಿಯುವ ಹೃದಯವೇ ಜೊತೆಗಿಲ್ಲ.


ದಾರಿಹೋಕ

ಅದೇ ಹಳೆಯ ದಾರಿ,
ಅದೇ ಹಳೆಯ ಹುಲ್ಲಿನ ಅಂಗಡಿ, ಸೋಗೆಯ ಸೂರು.
ಸೂರಿನಡಿ ಅದೇ ಹಳೆಯ ಕಬ್ಬಿನ್ನಹಾಲು ಮಾರುವವ,
ಹಳೆಯದಾರಿಯಲ್ಲಿ, ಹಳೆಯ ಹುಲ್ಲಿನಂಗಡಿಯ ಮುಂದೆ ನಡೆದು ಹೋಗುತ್ತಿದ್ದ ಹೊಸ ದಾರಿಹೋಕ,
ಹೇಳದೆ ಕೇಳದೆ ದೊಯ್ಯ್ ಎಂದು ಸುರಿದ ಮಳೆ.
ಮಳೆಯಿಂದ ರಕ್ಷಿಸಿಕೊಳ್ಳುವಾತುರದಿ,
ಕಬ್ಬಿನಹಾಲ ಸಿಹಿಯಲ್ಲಿ ಮುಳುಗಿದ್ದ ನಮ್ಮೆಡೆಗೆ ನುಗ್ಗಿದ.
ಮಳೆ ಮೌನವಾಗುವವರೆಗೂ ದಾರಿಹೋಕನ ಮಾತು ನಿಂತಿರಲ್ಲಿಲ್ಲ.
ಆಗಲೇ ತಿಳಿದ್ದದ್ದು ಆ ಹಳೆಯ ದಾರಿ, ಹಳೆಯ ಹುಲ್ಲಿನಂಗಡಿ, ಅವನಿಗೆ ನನಗಿಂತಲೂ ಹಳೆಯದೆಂದು.
ನಮ್ಮಿಬ್ಬರ ಗುರಿಗಳು ಬೇರೆಯಾದರು ಹೋಗುವ ದಾರಿಯು ಒಂದೇ ಎಂದು.




Thursday 19 July 2018

Surprise

I went to surprise him.
Instead, I get surprised, by seeing him not surprised by my surprise.  

Tuesday 17 July 2018

ನಾನವನಲ್ಲ.

ಅವನ ಹೆಸರಿಡಿದು ಕರೆದ್ದಿದ್ದೆ ಅಂದು ನಾನು.
ಉಪೇಂದ್ರನಂತೆ ನಾನವನಲ್ಲ ಎಂದಿದ್ದ ಅವನು. 

Marketing, trading, trending.

There is a saying,
"never judge a book by its cover",
can't a good writer design a cover of his book properly?
I mean the author has all the time of this world to write a nice book and no time to execute it properly?!!!

wait a second.
That's not true.
I'm also like that stupid fellow.
I realized it last Sunday.

*********************************************************************************
ವಧೂವರರ ಮಾರುಕಟ್ಟೆ. ಅದೊಂದು ಜಾತ್ರೆ.
ತಮ್ಮ ತಮ್ಮ ಮಕ್ಕಳನ್ನು ಪ್ರದರ್ಶಿಸುತ್ತ, ಮಧುವೆಯ ವ್ಯಾಪಾರ ಮಾಡಿದಂತಿತ್ತು.
ಮಾರುಕಟ್ಟೆಯಲ್ಲಿ ತರಕಾರಿಯನ್ನು ಆಯ್ದುಕೊಳ್ಳುವಹಾಗೆ ವಧುವನ್ನು , ವರನನ್ನು ಆಯ್ದುಕೊಳ್ಳುವ ಮಾರುಕಟ್ಟೆ ಅದಾಗಿತ್ತು. ವಿಚಾರ ಮಾಡಿ ನೋಡಿದರೆ ಅದು ತಪ್ಪೆನ್ನಲ್ಲವೆನಿಸಿದರು, ಮನಸಿಗೇಕೊ ಇರುಸು ಮುರುಸು. ಒಳ್ಳೆಯ ವ್ಯಾಪಾರವಂತರಿಗದು ಸರಿಯಾದ ಸ್ಥಳವಾಗಿತ್ತು.
*********************************************************************************
ನಿನ್ನ ವಸ್ತು ಹೇಗೆಯೇ ಇರಲಿ, ಅದ ನೀನು ಎಷ್ಟರ ಮಟ್ಟಿಗೆ ಪ್ರದರ್ಶಿಸುವೆ ಎಂಬುದರ ಮೇಲೆ ನಿನ್ನ ವ್ಯಾಪಾರ ನಿಂತಿದೆ.
ವರಟಾಗಿ ಕೇಳಿಸಿದರು, ಇದುವೇ ಸತ್ಯ, ಮೂರ್ಖ ಜನಗಳೇ ನಮ್ಮಲ್ಲಿ ಹೆಚ್ಚು. ಪುಸ್ತಕದ ಒಳಗಿನ ವಿಚಾರಕ್ಕಿಂತ ಮೇಲ್ಹೊದಿಕೆಯೇ ಮುಖ್ಯ.
ಬುದ್ಧಿವಂತ ಅವನು, ಯಾರನ್ನು ಹೇಗೆ ನಂಬಿಸುವುದು, ಯಾವುದನ್ನೂ ಹೇಗೆ ವ್ಯಾಪಾರ ಮಾಡುವುದೆಂದು ಬಲ್ಲವನು. 
ಬುದ್ಧಿವಂತ ಮನುಷ್ಯ ಅವನು, ತನ್ನ ಒಳ್ಳೆಯ ವಾಸ್ತುವನ್ನು ಹೇಗೆ ಒಳ್ಳೆಯರೀತಿಯಲ್ಲಿ ವ್ಯಾಪಾರ ಮಾಡುವುದೆಂದು ಬಲ್ಲವನು.
ಜ್ಞಾನಿ ಅವನು, ವ್ಯಾಪಾರದ ಬಗ್ಗೆ ಎಂದು ಚಿಂತೆ ಮಾಡದವನು. ತನಗಾಗಿ ತಾನು ಬದುಕಿ ಹಣದಲ್ಲಿ ಬಡವನಾಗಿ ಸಾಯುವವನು.
*********************************************************************************

ಗೊತ್ತಿಲ್ಲ

ಇಂದು ಹುಣ್ಣೆಮೆಯ ಚಂದ್ರನ ಹೊಳಪು ಹೆಚ್ಚೋ,
ಅಥವಾ ಅವನ ಹಿಂದಿರುವ ಆಕಾಶ ಹೆಚ್ಚು ಮಬ್ಬೊ?
ಗೊತ್ತಿಲ್ಲ.
ಚೆಂದಿರನಿರುವಾಗ ಬೇರೆ ಯೋಚನೆಗಳೇಕೆ? 

Ashes of memories; ನೆನಪುಗಳ ಚಿತಾಭಸ್ಮ

I have forgotten the way you used to look at me,
I have forgotten how your eyes used to speak to me,
I have forgotten how rhythmically your heart is beating,
I have forgotten  how handsome you were when you smile,
I have forgotten the way you used to love me,
I have forgotten your smell, 
I have forgotten the how it feels to touch you,
how it feels to get touched. 
All I remember is I used to be happy when you were around. 
Except that I forgot everything about you. almost everything. 
Intense memories burn and burn and burn to leave the ashes. 
eventually, ashes flew away. 

Evanescence

ನನಗೆ ಸ್ವಲ್ಪ ಮರೆವು.
ನಿನ್ನ ನೆನಪು ಮಬ್ಬಾಗವು ಮುನ್ನ ಮರಳಿ ಬರುವುದಾದರೆ ಬಾ.
ನೀ ಮಾಡಿದ ಗಾಯದ ನೋವು ಮೊದಮೊದಲಿಗೆ ರುಚಿಸಿದರು,
ಗಾಯವೀಗ ಮಾಸುತ್ತಿದೆ. ಮತ್ತೆ ಮತ್ತೆ ನಾನದರ ಕೆದಕಲಾರೆ.
ಮಾಸಿದ ಗಾಯ ಸಾವಿರ ಕಥೆಯನ್ನೇಳುವ ಕಲೆಯವುಳಿಸಬಹುದೇನೋ,
ಕಾಲ ಕ್ರಮೇಣ ಕಲೆಯು ಮಾಸಬಹುದು.
ನನಗೆ ಸ್ವಲ್ಪ ಮರೆವು.

Secret Recipe

ಎಲ್ಲರಿಗೂ, ಎಲ್ಲಾದಕ್ಕೂ ತನ್ನದೇಯಾದ ಗುಟ್ಟೊಂದಿದೆ,
ನಾನು, ನನ್ನ ಪದಗಳು ಅದರಿಂದ ಹೊರತೇನಲ್ಲ.

Understanding


ನಿನಗೆ ಕಾಟ ಕೊಡುವಾಸೆ, ಕೋಪ ಭರಿಸುವಾಸೆ, ತೀಟಲೆ ಮಾಡುವಾಸೆ.
ಕೊಟ್ಟ ಕಾಟದಿಂದ ನಿನಗಾದ ಕಾಟ, ಬಂದ ಕೋಪ, ಆದ ಹಿಂಸೆ,
ಅದರಿಂದ ನನಗಾದ ನೋವು, ಸಂಕಟ,
ಸ್ವಲ್ಪ ಮಟ್ಟಿಗೆ ನನಗರಿವಾಯಿತು ನಾನು ಯಾರೆಂದು, ನಾನು ಏನೆಂದು.
ನಿನಗರ್ಥವಾಯಿತೇ ನಾನುಯಾರೆಂದು? ನಾನುಯೇನೆಂದು?

ನಿನ್ನೊಂದಿಗೆ ಮುನಿಸಿ ಕೊಳ್ಳುವಾಸೆ, ನಿಂನ್ನಿಂದ ದೂರ ಹೋಗಿ ನಿನ್ನ ಚಡಪಡಿಸುವಾಸೆ,
ನಾಲ್ಕು ಪೆಟ್ಟು ಕೊಡುವಾಸೆ, ಒಂದಷ್ಟು ಕಣ್ಣೀರು ಬಾರಿಸುವಾಸೆ,
ನನ್ನ ಈ ವರ್ತನೆಗೆ ನಿನ್ನಲ್ಲಿ ಏನು ಬದಲಾಗದ ಭಾವನೆಯಕಂಡು,
ಸ್ವಲ್ಪ ಮಟ್ಟಿಗೆ ನನಗರಿವಾಯಿತು ನಾನು ಯಾರೆಂದು, ನಾನು ಏನೆಂದು.
ನಿನಗರ್ಥವಾಯಿತೇ ನಾನುಯಾರೆಂದು? ನಾನುಯೇನೆಂದು?

ಮಮತೆಯಿಂದ ನಿನ್ನ ತಾಯಾಗುವಾಸೆ, ಶಿಸ್ತಿನ ತಂದೆಯಾಗುವಾಸೆ,
ಉಪದ್ರ ಕೊಡುವ, ನಕ್ಕು ನಗಿಸುವ ಗೆಳತಿಯಾಗುವಾಸೆ,
ಕಷ್ಟ ನಷ್ಟದಿ ಸಂಗಾತಿಯಾಗುವಾಸೆ, ಮತ್ತೆ ಕೆಲವುಮ್ಮೆ ನಿನ್ನ ಮಗಳಾಗುವಾಸೆ.
ಆದರೆ ನಾನು ನಿನಗಾಗಿ ಹಂಬಲಿಸಬಾರದೆಂಬ ನಿನ್ನ ಮಾತುಕೇಳಿ,
ಸ್ವಲ್ಪ ಮಟ್ಟಿಗೆ ನನಗರಿವಾಯಿತು ನಾನು ಯಾರೆಂದು, ನಾನು ಏನೆಂದು.
ನಿನಗರ್ಥವಾಯಿತೇ ನಾನುಯಾರೆಂದು? ನಾನುಯೇನೆಂದು?

ನನ್ನ ಮೇಲೆ ನಿನಗೆ ತಪ್ಪು ಕಲ್ಪನೆ ಮೂಡಿಸುವಾಸೆ,
ಮೂಡಿಸಿಯು ನಿನಗೆ ತಪ್ಪು ಕಲ್ಪನೆ ಮೂಡಬಾರದೆಂಬ ಆಸೆ,
ತಪ್ಪು ಕಲ್ಪನೆ ಮುಡಿದರು ಬಿಡದೆ ನೀನನ್ನ ಕೈ ಹಿಡಿದಿರಬೇನೆಂಬ ಆಸೆ,
ನೀ ನನ್ನನ್ನು ಕ್ಷಮಿಸಬೇಕೆಂಬ ಆಸೆ, ನಾನು ನಿನ್ನವಳಾಗಿಯೇ ಇದ್ದು ಹೋಗಬೇಕೆಂಬ ಆಸೆ.
ನನ್ನ ಈ ಎಲ್ಲಾ ಭಾವನೆಯು ನಿನಗೆ ನಾ ಹೇಳದೆಯೇ ತಿಳಿಯಬೇಕೆಂಬ ಆಸೆ.
ನಿನ್ನೊಂದಿಗಿದ್ದು ನನ್ನ ನಾ ಸಂಪೂರ್ಣ ಅರಿತುಕೊಳ್ಳುವಾಸೆ.

ನೀನೆಂಬುದು ನನ್ನ ಕಲ್ಪನೆಯಷ್ಟೇಯಾದರೂ, ನನ್ನ ಭಾವನೆಗಳ ಅಸ್ಥಿತ್ವ ನಿಜವಾದವು.
ಸ್ವಲ್ಪ ಮಟ್ಟಿಗೆ ನಾನೇನೆಂಬ ಅರಿವಿನ ಜೊತೆಗೆ, ನೀನು ನನಗೇನೆಂಬ ಅರಿವಾಗಿದೆ.


ಕುಪ್ಪಿ ಲೋಟ ಪಾರ್ಟ್ ೨

Just like more is less,
less is more sometimes!
ಮೊನ್ನೆ ಮೊನ್ನೆಯವರೆಗೂ ಇದ್ದ ಒಂದು ಕುಪ್ಪಿ ಲೋಟಕ್ಕಾಗಿ ಜಗಳವಾಡಿದುಂಟು.
ಹೊಸ ಲೋಟ ಬಂದಾಗಿನಿಂದ, ಹಳೆಯ ಲೋಟದೊಂದಿಗೆ ನಮ್ಮ ಮುದ್ದಾದ ಜಗಳವು ಮೂಲೆಗುಂಪಾಗಿದೆ.

Saturday 14 July 2018

ತೂಕ

ನನ್ನ ತೂಕ ನನಗಿಂತ ಹೆಚ್ಚು ನನ್ನವರಿಗೆ ತೂಕವಾಗಿದೆ. 😞

Wednesday 11 July 2018

MaD, ArroGant .

Be ignorant. 
For your pride.
For the respect that your true feeling deserves. 
sometimes respect is more important than love. 
In fact, respect is the true name for love. 

Story

Be a story.
Don't be so busy being a chapter for someone else story.  
Be a story.  

ಯೋಚನೆ ಹಾಗು ಭಾವನೆಗಳ ನಡುವೆ ಸಿಲುಕಿದಾಗ.

I found it strange. 
Very strange. 
I always end up doing what I don't want to do!  

Addiction

Haruki Murakami's somewhere once told that he hates to get addicted.
And I can see that this man always does what he hated the most!
Now!, I'm doing the same.
Meanwhile rather than to think about that consequences,
I wish I become an addiction for my addiction.
Thinking much doesn't always end up giving the solution.
It may lead us to pointless conclusions.
***************
I mean what the use of wasting ones beautiful 1000 moment by thinking about the consequences which may not be lost long! or may never occur! or whatsoever.
Few risks are worth taking.
Pain is an emotion too, which taste good sometimes.
Life is a fucking short bro, just live it before it leaves you.
***************
  

Monday 9 July 2018

Again

ಮತ್ತದೇ ಸಂಜೆ,
ಮತ್ತದೇ ಬಿಸಿ ಚಹಾದ ಲೋಟ ಕೈಯ್ಯಲ್ಲಿ,
ಮತ್ತದೇ ಮಳೆಯ ಮೋಡ,
ಮಬ್ಬು ಬೆಳಕು,
ಎಲ್ಲವೂ ನೆನ್ನೆ ಇದಂತೆಯೇ ಇದೆ.
ಗೋಡೆಯಲ್ಲಿ ತಗುಲು ಹಾಕಿದ್ದ ಕ್ಯಾಲೆಂಡರ್ ಬದಲಾಗಿದೆಯಷ್ಟೇ.
ಸಮಯವೂ ಸರಿಸುಮಾರು ೬ ಗಂಟೆ.
ಏನೋ ನೆನಪುಗಳು.
ಮತ್ತದೇ ಹಳೆಯ ಯೋಚನೆಗಳು.
ಹಳೆಯವಾದರೂ ನವನವೀನ.

Sunday 8 July 2018

Hormones

A confusion,
How to retain the innocence of love? 
getting too much into it is suffocating and 
not involved in it is ignorance and arrogance. 
Balancing the emotions is the most difficult task. 
Hormone sucks. 

Shadow ; the grief.

Don't let her soul cast a shadow. 

Taste her soul

Her spirit is more alcoholic than her body,
make love to her thoughts,
touch her mind,
hold her veins,
taste her soul.  

Monday 2 July 2018

ಹೌದು

ಅವನನ್ನು ಪ್ರೀತಿಸುವುದೆಂದರೆ ಕೇವಲ ಅವನನ್ನಲ್ಲ,
ಅವನ ಪ್ರಪಂಚವನ್ನು, ಆ ಪ್ರಪಂಚದಲ್ಲಿರುವ ಎಲ್ಲವನ್ನು ಪ್ರೀತಿಸುವುದು. 

He; my madness. (ಅವನೆಂಬ ಹುಚ್ಚು)

ಅವನಿಗೆ ಜನ್ಮವಿತ್ತ ಆ ತಾಯಿ, ಕಾರಣಕರ್ತ ತಂದೆ,
ಅವನ ಕಾಡಿಸಿ ಸತಾಯಿಸುವ ಪುಟ್ಟ ತಂಗಿ,
ಅವನು ವಾಸಿಸಿದ ಆ ಮನೆ, ಅವನ ಕೋಣೆ , ಅವನು ಅವಿತು ಕುಳಿತಿದ್ದ ಮಂಚದಾ ಸಂದಿ,
ಅವನ ಪುಸ್ತಕ, ಅವನ ಲೇಖನಿ, ಅವನ ಸ್ನೇಹಿತರು, ಅವನಾಟಪಾಠದ ಸಹಪಾಠಿಗಳು, ವಸ್ತುಗಳು,
ಅವನ ಕೊಂಡೊಯ್ಯುವ ಬಂಡಿ, ಅವನೊಡಾಡಿದ ಸ್ಥಳ, ಅವನು ಹೆಚ್ಚು ಸಮಯಕಳೆವ ಆಫೀಸ್ನ ಆ ಮೂಲೆ ಟೇಬಲ್,
ಅವನ ನಿತ್ಯವೂ ಸ್ಪರ್ಶಿಸುವ ಅವ ತೊಟ್ಟ ಅಂಗಿ, ತಿಂದ ಊಟ, ಕುಡಿದ ನೀರು, ಅವನ ಎಲ್ಲ ಭಾವನೆಗಳು, ಖುಷಿ, ದುಃಖ್ಖ, ನೋವು, ನಲಿವು, ಉದಾಸೀನ, ಬೇಜಾರು, ಮೌನ, ಮಾತು, ಅವನಿಗಿಷ್ಟವಾದ ಹಾಡು, ಉಪದ್ರವನಿಸುವ ವಿಷಯ, ಒಟ್ಟಿನಲ್ಲಿ ಅವನುಸಿರು ತಾಕಿದ ಎಲ್ಲವಕ್ಕೂ ಚೇತನ ತುಂಬುವ ಅವನೆಂಬ ನನ್ನ ಹುಚ್ಚು. ಹುಚ್ಚು ಪ್ರೀತಿ. ಹುಚ್ಚು ಕಲ್ಪನೆ. ಹುಚ್ಚಯೆಂಬ ಖುಷಿ. 

Rhapsody

ನೊರೆ ನೊರೆಯ ಬಿಳಿ ಅಲೆಯ ಪದಗಳು ಅವನ ಕಣ್ಣಿನಿಂದ ಧಾಳಿಯಾಮಾಡಿರಲು,
ಬಿಸಿಯುಸಿರ ಏರಿಳಿತದ ಸಹಿಸಲಾಗದ ಹಾವಳಿಗೆ ನಾ ಸಿಲುಕಿ ನಾಗಲುಗಿರಲು, 
ಅವನ ಲಯಬದ್ದ ಹೃದಯದಾ ಬಡಿತಕ್ಕೆ ತಾಳಸೇರಿಸಿ, ಸ್ವರತಂತಿಯಾಗಿ ಮಿಡಿದು
ನಮ್ಮದೇಯಾದ ಲೋಕಾದಿ ನಮ್ಮದೇ ಸಂಗೀತವ ಹಾಡಿದ್ದೆವು. ಹಾಡಿ ನಲಿದ್ದಿದ್ದೆವು.

Saturday 30 June 2018

What was that?

ಅದೇನು? ಏನಾಯಿತಂದು?
ನಿಜವೇ? ಕನಸೇ? ಕಲ್ಪನೆಯೇ? 
ತಿಳಿಯುತ್ತಿಲ್ಲ. ತಿಳಿವಾಸಕ್ತಿ ನನಗಿಲ್ಲ.
ಅದು ನಿಜವಾಗಿದ್ದಲ್ಲಿ, ತ್ರುಪ್ತಿ.
ಕನಸಾಗಿದಲ್ಲಿ, ಸಂತೋಷ.
ಕಲ್ಪನೆಯಾಗಿದ್ದಲ್ಲಿ, ಸಣ್ಣದೊಂದು ನಗು.

Tuesday 26 June 2018

ಉಸಿರೇ; ಎಲ್ಲವು ನಿನಗಾಗಿ

ಜೀವನದ ಒಂದೇ ಸತ್ಯ. ಅದು ನಿನ್ನ ಉಸಿರು. ನೀನು ಆಮ್ಲಜನಕ. ನೀನು ಹೃದಯದ ಬಡಿತ, ನೀನು ಮೆದುಳಿನ ಯೋಚನೆ, ನಿನಗಾಗಿ ನೀನು ಮಾಡುವ ಯೋಜನೆ. ಅದುವೆ ಜೀವನ.
" ಅಹಂ ಬ್ರಹ್ಮಾಸ್ಮಿ "
ನಿನಗೆ ನೀನೆ ಎಲ್ಲಾ, ನಿನಗೆ ನಿಂನ್ನಿದಲೆ ಎಲ್ಲಾ. ನೀನಿದ್ದರೆ ನಿನಗೆಲ್ಲ.
ಸಾಯುವವರೆಗೂ ಬದುಕಬೇಕುಯೆಂದು ನನ್ನಪ್ಪ ಯಾವಾಗಲು ಹೇಳುತ್ತಾರೆ.
ನನಗನಿಸಿದ ಹಾಗೆ, ನಮ್ಮ ಜೀವದಲ್ಲಿ ಎಲ್ಲದಕ್ಕೂ ಆಯ್ಕೆಗಳಿರುತ್ತದೆ. ನನ್ನಪ್ಪ ಹೇಳಿದ ಹಾಗೆ ನೋಡಿದರೆ, ನೀನು ಎಂಬುದು ಒಂದೇ ಸತ್ಯ! ನೀನು ಉಸಿರಾಡುತ್ತಿರುವೆ ಎಂಬುದೊಂದೇ ಸತ್ಯ. ನಿನಗೆ ಬದುಕಲು ಏನೇನು ಬೇಕು, ನೀನು ಹೀಗೇಗಿರಬೇಕು, ನೀನು ಏನೇನು ಮಾಡಬೇಕು ಎಲ್ಲವನ್ನು ನೀನು ಬಣ್ಣಿಸುತ್ತಾ ಹೋಗುತ್ತೀಯ. ಎಲ್ಲವೂ ನಿನ್ನಆಯ್ಕೆಗಳು. ಆ ಆಯ್ಕೆಗಳೆಲ್ಲ ಕೇವಲ ನೀನು ಸಾಯುವವರೆಗೂ ಬದುಕಲ್ಲಿಕೋಸ್ಕರ. ಅದು ಏನೇ ಇರಬಹುದು.
ಸಂಭಂದಗಳು, ಭಾವನೆಗಳು, ಜೀವನ ಶೈಲಿ, ಓದುವುದು, ಬರೆಯುವುದು, ಊರೂರು ಸುತ್ತುವುದು, ದೇಹ ಸೌಂಧರ್ಯಭಿವೃದಿ ಮಾಡಿಕೊಳ್ಳುವುದು, ಆರೋಗ್ಯ ಕಾಯ್ದುಕೊಳ್ಳುವುದು, ಹಣ ಗಳಿಸುವುದು, ಹೆಸರುಗಳಿಸುವುದು, ಮದುವೆ, ಸಂಸಾರ, ಇನ್ನು ಏನೇ ಇರಬಹುದು ಎಲ್ಲವೂ ನೀನು ಸಾಯುವವರೆಗೂ ಬದುಕಲು ಮಾಡಿಕೊಳ್ಳುವು ನಿನ್ನ ಆಯ್ಕೆಗಳು. ಕುವೆಂಪುರವರು ಹೇಳಿದ ಹಾಗೆ, ಇಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ. ಎಲ್ಲಾ ನಮ್ಮಲ್ಲಿಯೇ ಇದೆ. ಸ್ವಲ್ಪ ಯೋಚಿಸಬೇಕಷ್ಟೆ.
ಸಮಾಜದ ಮುಂದೆ ಹೀಗಿರಬೇಕು, ಹಾಗಿರಬೇಕು ಎಂಬ ನಮ್ಮ ಕಲ್ಪನೆಗಳನ್ನೇ ಜೀವನವೆಂದು ಬದುಕುತ್ತೇವೆ, ನಮಗಾಗಿ ನಾವು ಆಯ್ಕೆಗಳನ್ನು ಮಾಡುವುದಕ್ಕಿಂತ ಬೇರೆಯವರ ಮುಂದೆ ಪ್ರದರ್ಶಿಸಲು ಆಯ್ಕೆಯನ್ನು ಮಾಡುತ್ತೇವೆ, ಅದು ಕೂಡ ತಪ್ಪೇನಲ್ಲ, ಅದು ನಿನ್ನ ಆಯ್ಕೆ, ನಿನ್ನ ಜೀವನ, ನಿನ್ನ ಇಷ್ಟ. ಆದರೆ ನಾ ಹೇಳಭಯಸುವುದು ಇಷ್ಟೇ , ನಿನ್ನ ಜೀವನ ನಿನ್ನದು, ಅವರ ಜೀವನ ಅವರದ್ದು. ಜೀವಿಸು, ಜೀವಿಸಲು ಬಿಡು. 

Until then

ನೆನ್ನೆ ಕಳೆದು ಇಂದಾಗುವವರೆಗೂ ನನಗಿದು ತಿಳಿದಿರಲ್ಲಿಲ್ಲ.
ನೆನ್ನೆ ಕಳೆದು ಇಂದಾಗುವವರೆಗೂ ನನಗಿದು ತಿಳಿದಿರಲ್ಲಿಲ್ಲ.
ಅದೊಂದು ಸುಂದರ ಕ್ಷಣವಾಗಿತ್ತೆಂದು.
ನಾನಿಂದು ನೆನೆಯಲಿರುವೆ ಆ ಕ್ಷಣವನ್ನೆಂದು.  

He made it better.

It was one beautiful countryside summer night!
green grass spread out to the horizon
producing cool countryside summer's musical breeze,
white painted crescent summer moon, glittering stars
glistening water.
It was one simple beautiful countryside summer night.
Until I turned my face and saw his eyes!!

Sunday 24 June 2018

ಕೆಲವೊಮ್ಮೆ

ಕೆಲವೊಮ್ಮೆ ಪ್ರಶ್ನೆ ಸುಲಭವಾಗಿರುತ್ತದೆ.
ಉತ್ತರವೂ ಸುಲಭವೇ.
ಪ್ರಶ್ನೆಯನ್ನು ಸುಲಭವಾಗಿ ಸ್ವೀಕರಿಸುವ ಕ್ಷಮತೆ ಬೇಕಷ್ಟೆ. 

ಅಸ್ತಿತ್ವ

ಯಾವುದರ ಅಸ್ತಿತ್ವ ಯಾವುದು?
ಇಲ್ಲಿ ಯಾವುದಕ್ಕೂ, ಯಾರಿಗೂ, ಏನಕ್ಕೂ ಅಸ್ತಿತ್ವದ ಅರಿವಿಲ್ಲ.
ಎಲ್ಲವೂ ಕೇವಲ ನಂಬಿಕೆ.
ಆದರೆ ಈ ನಂಬಿಕೆ ಕೇವಲವಲ್ಲ. 

A virgin thought!

ಎಲ್ಲವೂ ಇಲ್ಲಿ ಒಂದಕೊಂದು ಮಿಳಿತಗೊಂಡಿವೆ.
ಯಾವುದರ ಹುಟ್ಟು ಎಲ್ಲಿ?
ಯಾವುದರ ಸಾವು ಹೇಗೆ?
ಯಾವುದು ನನ್ನದು?
ನನ್ನದು ಎಂಬುದೇ ಇಲ್ಲವೇ?
ಎಲ್ಲವು ಇಲ್ಲಿ ಒಂದರಿಂದೊಂದು ಪ್ರಭಾವಿತಗೊಂಡವುಗಳೇ.
ಹೊಸತೇನಿದೆ? ಹಳತ್ತುಯಾವುದು?
ಎಲ್ಲಾರ ಹುಂ ಗೆ ನನ್ನ ಹುಂ.
ಹುಂ ಗೆ ಹುಂ ಸಾಂಗತ್ಯ.
ಪ್ರಕೃತಿಯ ನಿಯಮವೇ ಹಾಗೆ; ಕ್ರಮಬದ್ಧತ್ತೆ, ಏಕರೂಪತೆ.
ಎಲ್ಲವೂ ಇಲ್ಲಿ ಒಂದೇ, ಆದರೂ ಯಾವುದು ಒಂದರಂತೆಯೇ ಇಲ್ಲ.
ಒಮ್ಮೊಮ್ಮೆ ಬಲವಾದ ನಂಬಿಕೆ ನೀಡುವ ಗಟ್ಟಿ ನೆಲವೇ ಕೆಲವೊಮ್ಮೆ
ಕಿತ್ತು ಹಗುರಾಗಿ ಗಾಳಿಯಲ್ಲಿ ತೇಲಿಯೋಗಿ ನಮ್ಮನು ಪಾತಾಳಕ್ಕೆ ಬೀಳಿಸುವುದುಂಟು.
ಏನಿದು?
ಇದೊಂದು ಜಾಲ.
ಬಿಡಿಸುತ್ತ ಹೋದಷ್ಟು ಜಟಿಲಗೊಳ್ಳುವ ಜಾಲ.
ಎಲ್ಲವೂ ಕಲುಷಿತ.
ಸ್ವಂತತೆಎಂಬುದೇ ಕಲುಷಿತ.
ಆದಿ ಅರಿಯಲು ಬಿಡದ ಎಲ್ಲಾ ಯೋಚನೆಗಳು ವ್ಯರ್ಥ.
ಕೆಲವೊಮ್ಮೆ ಅನಿಸುತ್ತದ್ದೆ ನಮ್ಮ ಯೋಚನೆಗಳಿಗೆ ಆದಿ ಅಂತ್ಯಗಳಿಲ್ಲ.
ಶುದ್ಧವಾಗಿ ಒಮ್ಮೆ ಹರಿದಿರಬಹುದೇನೊ ಗಂಗೆ.
ಈಗಲೂ ಅವಳು ಶುದ್ಧಳೆಂದು ನಂಬಿಸಿಹರು ಎಲ್ಲರೂ ಇಲ್ಲಿ.
ನಾವು ನಂಬಿದ್ದೇವೆ.
ಮುಂದೆ ಇನ್ನೊಬರನ್ನು ನಂಬಿಸುತ್ತೇವೆ.
ಇದು ನಿರಂತರ.
ಕೆಲವೊಮ್ಮೆ ಹರಿವ ನೀರು ಪತ ಬದಲಿಸಿ ನಾನು ಶುದ್ಧಳೆಂದು ಹೇಳಬಹುದು.
ನಾನು ಪವಿತ್ರಳೆನ್ನಬಹುದು. ನಾವು ನಂಬಲು ಬಹುದು, ಅದು ಸತ್ಯವು ಆಗಿರಬಹುದು, ಹಾಗೆ ಸುಳ್ಳು ಕೂಡ.
ಎಲ್ಲವೂ ಇಲ್ಲಿ ಒಂದಕೊಂದು ಮಿಳಿತಗೊಂಡಿವೆ. 


Saturday 23 June 2018

More is less

ಹೆಚ್ಚು ಭಾವುಕರು ಕ್ರಮೇಣವಾಗಿ ಭಾವುಕತೆಯನ್ನು ಕಳೆದುಕೊಳ್ಳುತ್ತಾರೆ. 
ಹೆಚ್ಚೆಚ್ಚು ಜೀವನವನ್ನು ಅರಿಯುತ್ತಾ ಹೋದಷ್ಟು ಜೀವನದಿಂದ ಎಲ್ಲವನ್ನು ಕಮ್ಮಿ ಕಮ್ಮಿ ಬಯಸುತ್ತ, ಹೆಚ್ಚೆಚ್ಚು ನಶ್ವರದೆಡೆಗೆ ಸಾಗತ್ತ ಹೋಗುತ್ತಾರೆ.  
ಹೆಚ್ಚು ಓದಿದಷ್ಟು, ಜಗತ್ತು ಚಿಕ್ಕದಾಗುತ್ತಾ ಹೋಗುತ್ತದೆ. 
ಹೆಚ್ಚು ಕೆಲವೊಮ್ಮೆ ಕಮ್ಮಿ. 

Sometimes

Sometimes,
sometimes I just want to stay quiet,
sometimes I want to talk a lot,
sometimes I want to be alone,
sometimes I want to be with you,
sometimes I want to hold you tight,
sometimes I want to get held.
sometimes I run away,
sometimes I stay back,
sometimes I afraid of dark,
sometimes I love being in dark,
sometimes I cry,
& sometime's list continues!
the best of my sometimes are the sometimes which you are part of. 



Thursday 21 June 2018

ಎಲ್ಲಿ ಹೋಗಿದ್ದೆ? where you went?

ಬಹಳ ಸಮಯವಾಗಿತ್ತು ಅವನು ದೂರ ಅದೆಲ್ಲೋ ಹೋಗಿ.
ಇಲ್ಲಿ ಬಹಳ ಸೆಖೆ ಸೆಖೆಯೆಂದು ಅವನಂದು ಹೇಳಿದ್ದ.
ಕಡೆಗೂ ಇಂದು ಹಿಂತುರಿಗಿ ಬಂದ.
ಭಾವನೆಗಳೆಲ್ಲ ಹಿಡಿತ ತಪ್ಪಿ ಪದಗಳಾಗಿ ನಾಮುಂದೆ ತಾಮುಂದೆ ಎಂದು ಗುದ್ದಾಡುತ್ತ ಹೊರಬರಲು,
ಏನು ಮಾತನಾಡುತ್ತಿರುವೆ ಎಂಬಾ ಅರಿವೇ ಅವಳಿಗಿರಲ್ಲಿಲ್ಲ.
ಪದಗಳ ಕೈಯಲ್ಲಿ ಭಾವನೆಗಳನ್ನಿತ್ತು ಪ್ರಯೋಜನವಿಲ್ಲವೆಂಬ ಅರಿವು ಅವಳಿಗೆ ಮೂಡುವಷ್ಟರಲ್ಲಿ,
ಭಿಗಿಯಾದ ಅಪ್ಪುಗೆಯ ಬಂದಿಯಾಗಿದ್ದಳು.
ಕೊಟ್ಟ ನಾಲ್ಕು ಪೆಟ್ಟು ಅವನ ಎದೆಯ ಮೇಲಾದರೂ, ಒದ್ದೆಯಾದದ್ದು ಅವಳ ಕಂಗಳು.
ಖುಷಿಯಿಂದ, ದುಃಖ್ಖದಿಂದ, ಮನಸ್ಸಮಾಧಾನದಿಂದ, ಅಸಮಾಧಾನದಿಂದ, ಕೋಪದಿಂದ, ಪ್ರೀತಿಂದ,
ಅನುಭವಸಿದ ನೋವಿನಿಂದ, ವಿರಹದಿಂದ, ಅವನಿಂದ, ಅವನ ನಗುವಿನಿಂದ, ಏನೋ ತಲೆಯೆಲ್ಲ ಸುತ್ತಿದಂತೆ. 
ಬಿಟ್ಟು ಬಿಡದಾಟ ಮುಂದುವರಿದಿರಲು ಬೆಳಕು ಜಾರಿ ಕತ್ತಲಾಗಿತ್ತು, 
ಅಮಾವಾಸೆಯ ರಾತ್ರಿಯಾದರೂ ಚಂದ್ರನಿಂದು ಅವಳ ಕಂಗಳಲ್ಲಿ ಉದಯಿಸಿದ್ದ,
ಸೂರ್ಯನಲ್ಲದ ಅವಳ ಸೂರ್ಯನ ರಶ್ಮಿಗೆ ತಾವರೆಯಾಗಿ ಅರಳಿದಳು.
ಕತ್ತಲು ಬೆಳಕಾಟ ಸಾಗುತ್ತಲ್ಲೇಯಿತ್ತು,
ಕತ್ತಲು ಕರಗಿ ಮತ್ತೆ ಬೆಳಕರಿದಿತ್ತು,
ಬೆಳಕು ಜಾರಿ ಕತ್ತಲು.
ಸುಡುತ್ತಿದ್ದ ಭಾವೆನೆಗಳಿಗೆಲ್ಲ ಅಲ್ಪವಿರಾಮ ನೀಡುತ ತಣ್ಣೀರು ಎರಚಿತ್ತು.


Saturday 16 June 2018

ಪಾತ್ರ

ಎಲ್ಲಾರು ಇಲ್ಲಿ ಪಾತ್ರದಾರಿಗಳು. ತಮ್ಮತಮ್ಮ ಪಾತ್ರವ ನಿರ್ವಹಿಸುವವರು.

ದಿನಕೊಂದು ಪಾತ್ರ ನಿಮಿಷಕೊಂದು ಪಾತ್ರ, ಹೌದೇ? ಅಲ್ಲ.
ದಿನಕೊಂದು, ನಿಮಿಷಕೊಂದು ಪಾತ್ರವಾಗಿ ಬದಲಾಗುವುದೇ ಈ ಪಾತ್ರಗಳ ವಿಶೇಷ.

ಒಳಗಿಂದ ಒಂದು ಪಾತ್ರ, ಹೊರಗಿನಿಂದ ಒಂದು. ಹೌದೇ? ಅಲ್ಲ.
ಒಳಗಿಂದ ಒಂದು, ಹೊರಗಿನಿಂದ ಒಂದರಂತೆ ವರ್ತಿಸುವುದೇ ಈ ಪಾತ್ರದ ಕೆಲಸ.

ಒಬ್ಬರಿಗೊಂದು, ಮತ್ತೊಬ್ಬರಿಗೆ ಇನ್ನೊಂದು. ಹೌದೇ? ಅಲ್ಲ.
ಒಬ್ಬರಿಗೊಂದು, ಮತ್ತೊಬ್ಬರಿಗೆ ಇನ್ನೊಂದಾಗಿ ಕಾಣಿಸಿಕೊಳ್ಳುವುದೇ ಪಾತ್ರಗಳ ಪಾತ್ರ.

ಎಲ್ಲರೂ ಪಾತ್ರದಾರಿಗಳೇ, ಎಲ್ಲವೂ ಒಂದು ಪಾತ್ರವೇ.
ನಮ್ಮ ನಮ್ಮ ಪಾತ್ರಗ ನಿರ್ವಸಿವುದು ನಮ್ಮ ಪಾತ್ರ.
ಹೌದು,
ನಾನು ಕೆಲವೊಮ್ಮೆ ಸುಳ್ಳಿ.
ಹೌದು,
ನಾನು ಕೆಲವರಿಗೆ ಮೋಸಗಾತಿ,
ಹೌದು,
ನಾನು ಕೊಬ್ಬಿನಾ ಹುಡುಗಿ.
ಹೌದು,
ನಾನು  ತಿಂಡಿ ಪೋತಿ,
ನಾನು ಕೋತಿ,
ನನಗೆ ಮನಸೇಂಬುದೇ ಇಲ್ಲಾ,
ನಾನು ಸೋಂಭೇರಿ,
ನಾನು ಕೊಳಕು,
ನಾನು ಕೆಟ್ಟವಳು,
ಭೂತ.
ಹೌದು,
ನಾನು ನನ್ನಪ್ಪನಿಗ ಮಗಳು,
ನಾನೊಬ್ಬಳು ನನ್ನಮ್ಮನ ಮುದ್ದುಮರಿ,
ಇನ್ನು ಕೆಲವರಿಗೆ ನಾನು,
ತಂಗಿ,
ಸೊಸೆ,
ಅತ್ತಿಗೆ,
ವಿದ್ಯಾರ್ಥಿ,
ಶಿಕ್ಷಕಿ,
ಸ್ನೇಹಿತೆ,
ಸುಂದರಿ,
ಒಳ್ಳೆಯವಳು,
ದೇವತೆ.
ಸಾವಿರಾರು ಬಣ್ಣಗಳೊಳಗೊಂಡ ಪಾತ್ರ ನನ್ನದು, ನಮ್ಮೆಲ್ಲರದು.
ಹೌದು,
ನಾನು ನಾನೇ.
ಏನೇಯಾದರು, ಹೇಗೆಯಿದ್ದರೂ ಅದು ನಾನು.
ಅದು ನನ್ನ ಪಾತ್ರ.
ಬೇರೆ ಪಾತ್ರ ಹಾಗಿದೆ ಹೀಗಿದೆ ಎಂದು ಕೆಲವೊಮ್ಮೆ ಹೇಳುವುದು ನನ್ನ ಪಾತ್ರ.
ಇನ್ನು ಕೆಲವೊಮ್ಮೆ ಯಾವುದೇ ಪಾತ್ರವನ್ನಾಗಲಿ ಅಳೆಯುವುದು ತಪ್ಪೆಂದು ಹೇಳುವುದು ನನ್ನ ಪಾತ್ರವೇ.
ನಾನೊಂದು ಪಾತ್ರ.

Friday 15 June 2018

& a rainy season.

ಮಳೆಗಾಲ ಬಂತಯ್ಯ, ಮಳೆಗಾಲ.
ಹಳೆಯ ಶಾಲಾದಿನಗಳು ನೆನಪಾಗುತ್ತಿದೆ. ರಜೆಯ ದಿನಗಳು ಮುಗಿದು ಶಾಲೆ ಶುರುವಾಗುವ ಸಮಯವದು. ರೈನಕೋಟ್ ಧರಿಸಿ, ಪುಟ್ಟ ಪುಟ್ಟ ಕೈಗಳಲ್ಲಿ ದೊಡ್ಡ ಕೊಡೆಹಿಡಿದು, ತೂಕದ ಚೀಲವ ಹೆಗಲಿಗೇರಿಸಿ ಕೆಸರು ನೀರಿನಲ್ಲಿ ಪಚಪಚ ಮಾಡುತ್ತ ಶಾಲೆಗೋಗುವುದು, ಮನೆಗೆ ವಾಪಾಸ್ ಬರುವುದು ಇದುವೇ ದಿನಚರಿ!! ಮಳೆಗಾಲವೆಂದರೆ ಆಗಿನಿಂದಲೇ ಪ್ರೀತಿ. ಮಳೆಯಲ್ಲಿ ನೆನೆಯುವುದು, ಅಮ್ಮನ ಬಳಿ ಬೈಸಿಕೊಳ್ಳುವುದು. ಒದ್ದೆಯಾದ ಪುಸ್ತಕಗಳು, ಕಿತ್ತು ಹೋಗುತಿದ್ದೆ ಹೊಸ ಶೂಗಳು, ಮಳೆ ನೀರಿನಿಂದ ವಾಸನೆ ಬರುತ್ತಿದ್ದ ಸಾಕ್ಸ್ಗಳು ಎಲ್ಲವೂ ಖುಷಿಯೇ. ಈ ಖುಷಿಯ ನಡುವೆ ಮಳೆಗಾಲವೆಂದರೇನೋ ಭಯ! ಈಗಲೂ ಈ ಭಯ ಹಾಗೆಯೇ ಇದೆ. ಸೂರ್ಯನ ಸುಳಿವಿವೆ ಇಲ್ಲ, ಆದರೂ ನೆರಳೊಂದು ಹಿಂಬಾಲಿಸಿದಂತೆ. ಸಣ್ಣ ವಾಸಿನಿಂದಲೇ ಈ ಭಯ ಹಾಗೆಯೇ ಮನಸಿನ್ನಲ್ಲಿ ಬೇರೂರಿಬಿಟ್ಟಿದೆ. ಈ ಭಯಕ್ಕೆ ಕರಣವೇನಿರಬಹುದೆಂದು ಈಗಲೂ ಕೆಲವೊಮ್ಮೆ ಯೋಚಿಸುವುದುಂಟು.

ನನಗನಿಸಿದ ಪ್ರಕಾರ:
ಸಣ್ಣವಲ್ಲಿದಾಗ ಬದಲಾವಣೆಯೆಂದರೆ ನನಗಷ್ಟು ಇಷ್ಟವಿರಲ್ಲಿಲ್ಲ. ಮಳೆಗಾಲದಲ್ಲಿ ಶಾಲೆ ಶುರುವಾಗುತ್ತಿದ್ದದ್ದು. ಮಳೆಗಾಲವೆಂದರೆ ಬದಲಾವಣೆಯ ಸಮಯವೆಂದೇ ಆ ಪುಟ್ಟ ವಯಸ್ಸಿನ್ನ ಮುಗ್ದಮಗುವಿನ ಅನಿಸಿಕೆಯಾಗಿತ್ತು. ವರ್ಷಕೊಮ್ಮೆ ಬದಲಾಗುತಿಯಿದ್ದ ಶಾಲಾ ಶಿಕ್ಷಕರು, ಹೊಸ ಪಠ್ಯ ಪುಸ್ತಕ, ಹೊಸ ಹೊಸ ಪಾಠಗಳು,  ಬರಬರುತ್ತ ಹೆಸರುಗಳು ನೆನಪಿನ್ನಲ್ಲಿಡಲು ಕಷ್ಟವಾಗಿ ಸೋಶಿಯಲ್ ಸ್ಟಡೀಸ್ ಪಾಠಗಳು ಕಠಿಣವಾಗುತ್ತಿದ್ದದ್ದು, ಶಾಲೆಯಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಳ್ಳಲ್ಲಿಲ್ಲವೆಂದರೆ ಅಮ್ಮನಿಗೆ ಬೇಜಾರಾಗುವುದೆಂಬ ಯೋಚನೆಗಳು, ಹೀಗೆ ಸುಮಾರು ಸಣ್ಣ ಸಣ್ಣ ವಿಷಯಗಳು ಸೇರಿ ದೊಡ್ಡದಾಗಿ ನನ್ನನ್ನು ಹೆದರಿಸುತ್ತಿದ್ದವು. ಪ್ರೈಮರಿ ಕ್ಲಾಸ್ ಮುಗಿದು ಸೆಕೆಂಡರಿ ಕ್ಲಾಸ್ ಸೇರುವಾಗ ಶಾಲೆ ಬದಲಾಯಿತು, ಗೆಳೆಯರು ಬದಲಾದರು. ನಾನು ದೊಡ್ಡವಳಾದರು ನನ್ನ ಸಣ್ಣವಸಿನ್ನ ಭಯವನ್ನು ಹಾಗೆ ನನ್ನೊಂದಿಗೆ ಬಚ್ಚಿಟ್ಟುಕೊಂಡು ಮುಂದೆ ಸಾಗಿದ್ದೇ. ಹೊರಪ್ರಪಂಚಕ್ಕೆ ಹೆಚ್ಚು ಪರಿಚಯವಾಗುತ್ತಾ ಹೋದಂತೆ ಸಣ್ಣದಾಗಿದ್ದ ಭಯಗಳು ಬರಬರುತ್ತ  ದೊಡ್ಡಗುತ್ತಿತೇನೋ ಒಳಗೊಳಗೇ, ಅಪ್ಪ ಅಮ್ಮನಿದ್ದ ಕಾರಣ ಅಷ್ಟಾಗಿ ಗೊತ್ತಾಗುತ್ತಿರಲ್ಲಿಲ್ಲ. ಈರೀತಿಯ ಭಯ ಈಗಲೂ ನನ್ನಲ್ಲಿಯೇ ಕೊಂಚ ಉಳಿದು ಹೋಗಿದೆ. ಹೆದರುವ ಅವಶ್ಯಕತೆಯಿಲ್ಲವೆಂಬ ಅರಿವಿದ್ದರೂ, ಅರಿವಿಗೆ ನಿಲುಕದ ಭಾವವೊಂದು ನನ್ನೊಳಗೆಯೇ ಶಾಶ್ವತವಾಗಿ ಗೂಡುಕಟ್ಟಿ ಮಲಗಿದೆ. ಹಾಗಾಗಿ ಮಳೆಗಾಲವೆಂದರೆ ಖುಷಿಯ ಜೊತೆಗೆ ಕೊಂಚ ಭಯವನ್ನು ಹೊತ್ತುತರುತ್ತದೆ.
ಕತ್ತಲ್ಲು ಗಟ್ಟಿದ ಸಂಜೆಯ ಮೋಡವೊಂದು ಅತ್ತಾಗ, ಇಹಲೋಕ ತೊರೆದ ಅಜ್ಜನ ನೆನಪು ಕಾಡುತ್ತದೆ. ಕಿಟಕಿಯ ಬಳಿ ಕಾಲುಮಡಚಿ ಕೂತಿರಲು ತಂಪಾದ ಗಾಳಿ  ಮೈಸೋಕಿ ನನ್ನಜ್ಜಿಯೇ ತೊಟ್ಟಿಲ್ಲ ತೂಗುತ್ತ ಪದವಾಡಿಹಳು ಎನ್ನಿಸುತ್ತದೆ.
 ಕಿರುಗುಟ್ಟುವ ಬಾಗಿಲುಗಳು ಹಳ್ಳಿ ಮನೆಯ ಕತ್ತಲೆ ಕೋಣೆಯ ನೆನಪು ತರಿಸುತ್ತದ್ದೆ. ಹೀಗೆ ಏನೇನೋ ಮಿಶ್ರಿತ ಭಾವನೆಗಳು ತಲೆತುಂಬೆಲ್ಲ ಸುಳಿದಾಡುವಾಗ, ಒಂದೊಳ್ಳೆ ಸಣ್ಣ ನಿದ್ದೆ ಕೂತಲ್ಲಿಯೇ ಮುಗಿದಿರುತ್ತದೆ.




"Gud-bud"

ಎಲ್ಲವೂ ಬೇಗ ಬೇಗಾಗಬೇಕು,
ನಮ್ಮ ಪೀಳಿಗೆಯವರಲ್ಲಿ ತಾಳ್ಮೆಯ ಅಭಾವ,
ಯಾವುದಕ್ಕೂ ಕಾಯುವುದಿಲ್ಲ, ಯಾರಿಗಾಗಿಯೂ ಕಾಯುವುದಿಲ್ಲ.
************
ತಂತ್ರಜ್ಞಾನ ಅಭಿವೃದ್ಧಿ ಆದಂತೆಯೇ ಎಲ್ಲವೂ ಸುಲಭವಾಗಿ ಬಿಟ್ಟಿದೆ.
************
ಸ್ಲ್ಯಾಂಗ್ ಇಸ್ ನ್ಯೂ ಟ್ರೆಂಡ್.
************
ಎಲ್ಲಾ ಕೆಲಸಗಳ್ಳಲ್ಲಿಳು ಶಾರ್ಟ್ಕಟ್ ಕಂಡುಕೊಳ್ಳುವುದು ನಮಗಭ್ಯಾಸವಾಗಿಬಿಟ್ಟಿದೆ.
************
ನನ್ನಜ್ಜ ಪಿಜ್ಜರ ಕಾಲದಲ್ಲಿ ತಂತಿಸುದ್ದಿ ಕಳುಹಿಸುತ್ತಿದ್ದದ್ದರ ಬಗ್ಗೆ ಅಪ್ಪ ಹೇಳಿದ್ದು ಕೇಳಿದ್ದೆ.
ಆದಷ್ಟು ಸಣ್ಣದಾಗಿ, ಕೇವಲ ಹೇಳಬೇಕಾದ ಮುಖ್ಯ ವಿಷಯವನ್ನು ಮಾತ್ರ ಸಂಕ್ಷಿಪ್ತವಾಗಿ ಹೇಳುವುದು ಅದರುದ್ದೇಶ.
************
ನಮ್ಮ ಈ ಪೀಳಿಗೆ ಅವರು ಹಾಗಲ್ಲ, ಬೇಕಾದ್ದು, ಬೇಡದ್ದು (ಅದುವೂ ನಮಗೆ ಬೇಕಾದದ್ದೆ) ಎಲ್ಲವನ್ನು ಶಾರ್ಟ್ ಕಟ್ ನಲ್ಲೆ ಬರೆದು ಕಳಿಸುವುದು ಅಭ್ಯಾಸವಾಗಿಬಿಟ್ಟಿದ್ದೆ.
**************
ಮೆಸ್ಸೆಂಜರ್ ಆಪ್ ಗಳು ಸಾವಿರಾರು.
ಇಂಗ್ಲಿಷ್ ಪದಗಳೆಲ್ಲ ಶಾರ್ಟ್ ಶಾರ್ಟ್ ಆಗಿ, ನಿಜವಾದ ಸ್ಪೆಲ್ಲಿಂಗ್ಸ್ ಅಂಡ್ ಶಾರ್ಟ್ ಕಟ್ ಸ್ಪೆಲ್ಲಿಂಗ್ಸ್ನ ನಡುವೆ ವ್ಯತ್ಯಾಸದ ಅರಿವೇ ಕಮ್ಮಿಯಾಗುತ್ತಾ ಬಂದಿದೆ.
What ಈಗ wat/wt
ಹೀಗೆ ಹತ್ತು ಹಲವು.
**************
ಇಷ್ಟೆಲ್ಲಾ ಪೀಠಿಕೆಯ ಹಿಂದೆ ಒಂದು ಸಣ್ಣ ಕಾರವಿದೆ, ಅದುವೇ "Gud-Bud" ಕಹಾನಿ.

ನನ್ನಿಬ್ಬ ಸ್ನೇಹಿತೆಯರು ಹಾಗು ನಾನು, 
ಮೊನ್ನೆ ಹಾಗೆ ಸುಮ್ಮನೆ ಚಹಾ ಕುಡಿಯುತ್ತ ಹರಡಲೆಂದು ವಿಜಯನಗರದಲ್ಲಿ ಸೇರಿದ್ದವು. 
ಸೆಲ್ಫಸರ್ವಿಸ್ ಇದ್ದ ಹೋಟೆಲ್ ಅದು.
ಕೌಂಟರ್ ಬಳಿಯಲ್ಲಿ ದಿನದ ಸ್ಪೆಷಲ್ ಏನೆಂದು ಬರೆದ ಒಂದು ಬೋರ್ಡ್ ತಗೆಲು ಹಾಕಿತ್ತು.
ಮೊನ್ನೆದಿನದ ಸ್ಪೆಷಲ್
"Gud-bud" (Ice-cream)
ಅದನ್ನು ಒಬ್ಬ ಸ್ನೇಹಿತೆ "ಗುಡ್-ಬುಡ್" ಯೆಂದು ಹಾಗು ಇನ್ನೊಬ್ಬ ಸ್ನೇಹಿತೆ "ಗುಡ್-ಬ್ಯಾಡ" ಯೆಂದು ಓದಿದರೂ.
ಚಹಾದೊಂದಿಗೆ ಒಂದಷ್ಟು ನಗು ಉಚಿತವಾಗಿ ಸಿಕ್ಕಿತ್ತು.
***************
Note: ನನ್ನದು ಶಾರ್ಟ್ಕಟ್ ಪೀಳಿಗೆ, ಹಾಗಾಗಿ ನನ್ನ ಬರವಣಿಗೆಯು ತುಣುಕು ತುಣುಕಾಗಿದೆ. 😉😉😉😅
***************

ಎಲ್ಲವೂ ತಾರುಮಾರು. !!!!
ಎಲ್ಲರೂ ತಾರುಮಾರು. !!!!

Thursday 14 June 2018

ಅಳುವು

ಉಪ್ಪಿನಾ ನೀರು, ಉಕ್ಕುಕ್ಕಿ ಬಂದಿತ್ತು.
ಅವನಂದು ಮುತ್ತಿಟ್ಟ ಗಲ್ಲದಾ ಮೇಲೆ ಉರುಳುರುಳಿ ಹೋಗಿತ್ತು.
ತಪ್ಪುಯಾರದ್ದು? ಅವನದ್ದೇ? ಇವಳದ್ದೇl?
ಹೊಂ ಹೂ .. ಪದಗಳದ್ದು, ಸಮಯದ್ದು.
ಅವನ ಪದಗಳಾರ್ಥ ಬೇರೆಯೇಯಿತ್ತು,
ಅದರ ಅರಿವು ಅವಳಿಗೂ ಇತ್ತು.
ಆದರೂ ಹೇಳದೆ ಕೇಳದೆ ಅಳುವೊಂದು ಜಿನುಗಿತ್ತು.
ಏತಕ್ಕಾಗಿ ಮನ ನೊಂದಿತ್ತು?
ಉತ್ತರದ ಅರಿವಿಲ್ಲ.
ಅನಿಸುತ್ತಿದೆ!!
ಈ ಪ್ರೆಶ್ನೆಯೇ ಸರಿಯಿಲ್ಲ.
ಕೆಲವೊಮ್ಮೆ ಮನಿಸ್ಸಿನ ಕೈಗೊಂಬೆಯಾಗಿಬಿಡಬೇಕು.
ಮಗುವಂತೆ ಅತ್ತುಬಿಡಬೇಕು.


Wednesday 6 June 2018

Sweet and bitter truth

I don't own me completely.
I don't know whether to be happy about it or sad.
But I know, I don't want someone else to take my life's decision.
Even if my decisions lead me to the worst, it'll be my own and I'll never regret it.
But the sad news is my decisions will never be mine. 

Singing my own song

ಅವನಿಗಿಷ್ಠವಾದ ಹಾಡದು,
ಅದು ನನ್ನ ಹಾಡು.
ಬರೆದವುರು ಯಾರಾದರೇನು,
ಹಾಡಿದವರು ಯಾರಾದರೇನು,
ಅವನದೇ ಪದವೆನಿಸಿಹುದು,
ಅವನದೇ ರಾಗ.
ಅವನಿಗಿಷ್ಠವಾದ ಹಾಡದು
ಅದು ನನ್ನ ಹಾಡು.

ನನ್ನದೊಂದು ಸಣ್ಣ ಕ್ಷಮೆ,
ದೊಡ್ಡದೊಂದು ನಮನ ಆ ಪದ್ಯ ಬರೆದವರಿಗೆ.
ಕೃತಿ ಚೌರ್ಯವಲ್ಲವಿದು.
ಮೆಚ್ಚುಗೆಯ ಅಭಿನಂದನೆಗಳಿದು.
ಅವನಿಗಿಷ್ಠವಾದ ಹಾಡದು
ಅದು ನನ್ನ ಹಾಡು.

ಗುನುಗುತಿರಲು ಆ ನನ್ನ ಹಾಡನು,
ಕೇಳುತಿಹುದು ಅವನದೇ ದನಿ.
ನನ್ನೊಳು, ನನ್ನ ಸ್ವರದೊಳು,
ಅವನಿಗಿಷ್ಠವಾದ ಹಾಡದು
ಅದು ನನ್ನ ಹಾಡು.

Monday 4 June 2018

Orphan; emotionally

Subconsciously she was wishing that someone unconsciously start loving her for what she was!!; not anymore.

Sunday 3 June 2018

Hostage

I'm a hostage of my own life. 

Living a lie

What can I talk about others when I'm living a lie.
When I'm living a lie. 
Breathing behind the mask.
Looking the world behind the shades.
Hiding the words behind the silence.
Smiling materialistically.
Crying hard with no tears.
Standing behind the bars.
Having thinking barriers.
====================================
Filters everywhere.
Everywhere.
====================================
Why people judge?
Why can't people trust people?
Where am I?
What am I doing?
====================================
Standing all alone in the dark, waiting,
waiting for my spiritual guide,
who ties me to the humankind and 
lead me to the light. ++++++++++++++++++++++++++++++++++++

Family and friends

In particular, (not in general)
Family members can never be friends
and friends are the family.  


Monday 28 May 2018

Incomplete


coz it's incomplete, It's interesting and fascinating !! that's how I convince myself! but the truth is ......

Pointless (ಅರ್ಥಹೀನ)

In the end, everything seems to be pointless!
a pointless conversation,
a pointless degree certificates,
a pointless relationship,
everything.
just everything. 
******************
It's hard, very hard to make ourselves free.
free, free from everything and everyone
like a free soul.
again it's pointless.
to think like this,
to think nonsense, 
and to think what I'm thinking is nonsense.
********************
It's a loop.
a trap.
a maze, where we try to find a route and get lost,
even if we find a route and reach the goal, in the end, it's pointless. (maybe, may not be)
********************
ಸಾರ್ಥಕತೆಯ ಬದುಕೆಂದರೇನು?
ಎಲ್ಲವನ್ನು ಪ್ರೀತಿಸು, ಎಲ್ಲರನ್ನು ಪ್ರೀತಿಸು. !!???
********************
The more I try to understand, the more I get confused.
Few things are not meant to understand, they are meant to feel, to enjoy.
Feel the silence,
feel the music,
enjoy the darkness,
enjoy the light,
watch the sunset at the seashore. 
Hold the hand of your beloved one.
Say them what they meant to you.
walk in the woods. 
feel the happiness. 
look around its light everywhere and that light is deep darker. 
*************************


Monday 21 May 2018

Learn

Learn
Learn to think
Learn to smile
Learn to forgive
Learn to appreciate
Learn to embrace
Learn to love
Learn to be beautiful inside out
Learn to be YOU
Being more human. 

Saturday 19 May 2018

A perfect day; ನೆನಪಿನ ಬುತ್ತಿಗೊಂದು ಸುಂದರ ಹೂವಿನಾರ

೧೭/೦೫/೨೦೧೮ 
ಕತ್ತಲು,
ಮಂಜು,
ಚಳಿ,
ನಿದ್ದೆ,
ಸೂರ್ಯೋದಯ,
ಪಯಣ,
ಬಿಸಿಲು,
ಸೆಖೆ,
ನೆರಳು,
ಗಾಳಿ,
ಹಿಮ,
ಕೃಷ್ಣನ ದರ್ಶನ,
ಮೋಡ,
ಬರಡಾದ ಮರ,
ಹಸಿರ ಹಾಸು,
ಜೀವಜಂತು,
ಮುದ್ದು ಪ್ರಾಣಿ ಪಕ್ಷಿಗಳು,
ಹಿಂಪದ ಹಾಡು,
ತಂಪಾದ ಗಾಳಿ,
ಸೂರ್ಯಾಸ್ತ,
ಮಳೆ, 
ಕುಡಿದ ಚಹಾ,
ಚಂದ್ರೋದಯ, 
ನಮ್ಮೊಡನೆ ಚಲಿಸುವ ರಸ್ತೆ,
ಅತ್ಮೀಯನ ಸಂಗ.
ಒಂದಷ್ಟು ನಗು, ಒಂದಷ್ಟು ಕೋಪ, ಒಂದಷ್ಟು ನೋವು(ತಲೆ ನೋವು, ಕಾಲು ನೋವು), ಸಾಕಷ್ಟು ಪ್ರೀತಿ,
ಭೂತಾಯಿಯ ನಾನಾ ರೂಪಗಳ ದರ್ಶನ,
ಜೀವನದ ನಾನಾ ರೀತಿಯ ಭಾವನೆಗಳ ನರ್ತನ.
ಮರೆಯಲಾಗದ ದಿನ,
A perfect day. ಜೋಲಿಗೆಯ ತೂಕ ಹೆಚ್ಚಿದೆ.  

What if?

What if it didn't go as planned?
Oh come on dude, That's completely ok.
Make another plan.
Nothing in this life to be worried about.
Trust and love, everything is fine if not, everything gonna be fine. 

ಮಮತೆ

 ತಾಯಂತೆ ಪ್ರೀತಿಸಲು ನೀನು ತಾಯಿಯೇ ಆಗಿರಬೇಕಿಲ್ಲ, ಮಗುವಿದ್ದಾರರೆ ಸಾಕು.
ಆ ಮಗುವು ಮಗುವೇ ಆಗಿರಬೇಕಿಲ್ಲ, ನಿನಗಿಂತ ವಯಸ್ಸಿನಲ್ಲಿ ಹಿರಿಯನಾದರೇನು , ಕಿರಿಯನಾದರೇನು, ಜೀವವಿರುವ ವಸ್ತುವಾದರ, ನಿರ್ಜೀವಿಯಾದರೇನು, ಪ್ರಾಣಿ, ಪಕ್ಷಿಯಾದರೇನು, ಗಿಡ, ಮರ, ಬಳ್ಳಿಯಾದರೇನು? ಕರುಳಬಳ್ಳಿಯ ಸಂಬಂಧವೇ ಬೇಕೇ ನೀನು ತಾಯಂದೆಂಸಿಕೊಳ್ಳಲು? 

Tuesday 8 May 2018

A proper ending.

Why you still hooked to him, even when you know its the end. Her uncle asked. His voice was filled with anger and care for her.
Nither I believe in miracles nor I want to try until the end. It's just, not a proper ending. She replied. There was a deep calmness in her tone. 

A Machine.

How it feels, to feel nothing?

Wednesday 2 May 2018

Why can't?

Why can't we take a mobile phone inside our dream?
I just wanna video record all those different shades of colors, beautiful places, weird super humans, cute animals and watch it in a repeated mode when I woke up.

A summer night sky.

I wish, 
I wish I could put all my feeling into words. 
I wish those words be translated into musical notes. 
I wish those musical notes be painted.
Painted on this beautiful summer night sky. 
To praise her.
To make her blush a little.
To make her happy.
To thank her for making me happy.
More than just happy.  

Tuesday 1 May 2018

A boring story; Untold.

ಚಿಕ್ಕದಾಗಿ,ಚೊಕ್ಕವಾಗಿ ಹೇಳಲು ಪ್ರಯತ್ನಿಸುತ್ತೇನೆ.

೦೬-೦೨-೧೯೯೨; ೧.೪೪ P.M.
"ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ" ಅಂತಾರಲ್ಲ ಹಾಗೆ, ಇವತ್ತು ನಾನು ಹುಟ್ಟಿದೆ. ನನ್ಗೆ ಮನಸಿತ್ತೋ ಇಲ್ವೋ ಹುಟ್ಟಕ್ಕೆ ಗೊತ್ತಿಲ್ಲ, ಆದ್ರೆ ನನ್ನಮ್ಮನಿಗೆ ಒಂದೇ ಮಗು ಸಾಕಿತ್ತಂತೆ (ಅಣ್ಣನೊಬ್ಬ), ಅಪ್ಪನಿಗೆ ಇನ್ನೊಂದು ಮಗು ಬೇಕಂತ ಇದ್ದ ಕಾರಣ ನನ್ನ ಜನನ. ಹೆಣ್ಣು ಮಕ್ಕಳೆಂದರೆ ಅಮ್ಮನಿಗೆ ಏನು ದ್ವೇಷವಿಲ್ಲ, ಆದರೆ ನಾನು ಹೆಣ್ಣು ಮಗುವೆಂದು ತಿಳಿದು ಅಮ್ಮನಿಗೆ ಸ್ವಲ್ಪ ಬೇಜಾರಾಗಿತ್ತಂತೆ. ಕಾರಣ; ಇವಳು ಮುಂದೊಂದುದಿನ ನನ್ನ ಹಾಗೇ ಸಮಾಜದಲ್ಲಿ ಕಷ್ಟ ಪಡಬೇಕಲ್ಲವೆಂಬುದೇ ಹೊರತು ಬೇರೇನಲ್ಲ. ಎಷ್ಟೇ ಆದರೂ ಹೆಣ್ಣುಮಕ್ಕಳ್ಳಿಗೆ ಗಂಡು ಮಕ್ಕಳಷ್ಟು ಸ್ವಾತಂತ್ರ್ಯವಿಲ್ಲವಲ್ಲ ಅಂತ ಯಾಕಾದರೂ ನಾನು ಹೆಣ್ಣು ಮಗುವಾಗಿ ಹುಟ್ಟಿದೆ ಯೆಂದು ಅತ್ತಿದ್ದರಂತೆ. ಜಗದ ವಾಡಿಕೆ; ಗಂಡು ಮಕ್ಕಳೆಂದರೆ ತಾಯಿಗೆ ಪ್ರೀತಿ ಹೆಚ್ಚು, ತಂದೆಗೆ ಮುದ್ದು ಮಗಳೆಂದರೆ.. ಆದರೆ ನಮ್ಮ ಮನೆಯಲ್ಲಿ ಸ್ವಲ್ಪ ಉಲ್ಟ. ಅಪ್ಪನಿಗೆ ನನ್ನ ಮೇಲೆ ಪ್ರೀತಿಯಿಲ್ಲವೆಂದಲ್ಲ. ಆದರೆ ಅಮ್ಮನಷ್ಟು ನನ್ನ ಬೇರೆಯಾರು ಪ್ರೀತಿಸಲು ಸಾಧ್ಯವಿಲ್ಲ. ಇದರ ಹಿಂದೆಯೂ ಅಮ್ಮನದೊಂದು ಲಾಜಿಕ್ ಇದೆ, "ಹೆಣ್ಣು ಮಕ್ಕಳು ಮದ್ವೆಯಾಗಿ ನಮ್ಮನ್ನು ಒಂದಲ್ಲ ಒಂದು ದಿನ ಬಿಟ್ಟು ಹೋಗುತ್ತಾರೆ, ಅಲ್ಲಿ ನಂತರ ಅವರ ಜೀವನ ಹೇಗಿರುತ್ತೋ ಏನೋ, ನಮ್ಮೊಂದಿ ಇದ್ದಷ್ಟು ದಿನ ತುಂಬಾನೇ ಖುಷಿಯಾಗಿರಬೇಕು ಅಂತ". ಇಷ್ಟಲ್ಲದೆ ಹೇಳ್ತರೆಯೇ? "ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಾಸಿ ಯೆಂದು". ನನ್ನಮ್ಮ ಅಧ್ಭುತ. ಅವರು ನನ್ಪ್ರೀತಿ. ಆದ್ರೂ ಅವರಜೊತೆ ಆಡೋಅಷ್ಟು ಜಗಳ, ಬೇರೆ ಯಾರೊಂದಿಗೂ ಆಡಿಲ್ಲ.

****************************************************
Age 3 - Age 12

ನಾನಿನ್ನು ಪುಟ್ಟಿ. ಶ್ರುತಿ ನನ್ನ ಬಾಲ್ಯದ ಗೆಳತಿ, ಪಕ್ಕದ ಮನೆಯವಳು. ನನಗಿಂತ ಒಂದೊರ್ಷ ದೊಡ್ಡವಳು. ಅವಳು ಶಾಲೆಗೆ ಸೇರಿದಳೆಂದು ಹಠಮಾಡಿ ನಾನು ಶಾಲೆಗೆ ಸೇರಿದೆ. ೩, ೪ ನೆ ತರಗತಿಯೊರೆಗಿನ ಸುದ್ದಿ ಅಷ್ಟಾಗಿ ನೆನಪಿಲ್ಲ. ತಲೆಯ ಕೂದಲಲೊಂದು ಕೃಷ್ಣನ ಜುಟ್ಟು, ಅದಕ್ಕೊಂದು ಪಿಪಿ (ಮಕ್ಕಳ ಭಾಷೆ; ಹೂವು), ಸೋರುವ ಮೂಗು ವರೆಸಲೆಂದು ಅಂಗಿಯಲ್ಲಿ ಪಿನ್ನಿನ ಸಹಾಯದಿಂದ ಸಿಕ್ಕಿಸಿದ್ದ ಕೈ(ಕರ)ವಸ್ತ್ರ. ನೋಡು ನೋಡುತ್ತಲ್ಲೇ ದೊಡ್ಡವರಾಗಿ ಬೆಳೆದುಬಿಟ್ಟೆವು. ದೊಡ್ಡವರಾಗುತ್ತಾ ಆಗುತ್ತಾ ಸಣ್ಣವರಾದೆವು. ಆಗದು ಮಕ್ಕಳಾಟಿಕೆ ಅಷ್ಟೇಯಾದರು, ಮುಂದೊಂದು ದಿನದ ದೊಡ್ಡ ದೊಡ್ಡ ದಡ್ಡ ತನಕ್ಕದುವೆ ನಾಂದಿ. ಯೆಲ್ಲೆಡೆ ಸ್ಪರ್ಧೆ ಸ್ಫರ್ಧೆ. ಶಾಲೆಯಲ್ಲಿ ಮೊದಲನೇ ಸ್ಥಾನ ಪಡೆಯುವುದರಿಂದ ಹಿಡಿದು ಹೋಮ್ ವರ್ಕ್ ಪುಸ್ತಕದಲ್ಲಿ ಎಷ್ಟು ಗುಡ್ ಪಡೆದಿದ್ದೇವೆ ಅನ್ನುವವರೆಗು. ಬೆಂಚ್ ಲೀಡರ್ ಅಲ್ಲದೆ, ಸ್ಕೂಲ್ ಲೀಡರ್ ಆಗಲು ಪೈಪೋಟಿ. ಗುಂಪುಗಾರಿಕೆ, ಜಗಳ, ಮನಸ್ಥಾಪ, ಸೋಲು, ಗೆಲುವು, ಪಾರ್ಷಿಯಾಲಿಟಿ ಮಾಡುತ್ತಿದ್ದ ಶಿಕ್ಷಕರು(ಮನಸಿಲ್ಲದ ಮನಸಿನ್ನಲ್ಲಿ ಹೇಳುತ್ತಿರುವ ಕಟು ಸತ್ಯ).  ನನಗು ನನ್ನ ಗೆಳತಿ ಶ್ರುತಿಗು ಪಾಠ ಓದಿಸಿ, ಹೋಮ್ವರ್ಕ್ ಮಾಡಿಸುತ್ತಿದ್ದದ್ದು ನನ್ನಮ್ಮ. ನನಗೆ ಶ್ರುತಿಅಂದರೆ ತುಂಭಾ ಇಷ್ಟ. ಅದೇನು ಕಾರಣವೆಂದು ಗೊತ್ತಿಲ್ಲ, ಅವಳಿಗೆ ನನ್ನಕಂಡರೆ ಅಸೂಯೆ, ಕೋಪ (ಸಣ್ಣ ವಯಸ್ಸಿನಲ್ಲಿ, ಈಗಲ್ಲ) ಆದರೂ ಅಗಾಧ ಪ್ರೀತಿ. ನನಗಿಂತ ಕಮ್ಮಿ ಅಂಕ ಬಂತೆಂದು ಯಾವಾಗಲು ಅವರಮ್ಮ ಅಪ್ಪನನಿಂದ ಪೆಟ್ಟು ತಿನ್ನುತಿದ್ದಲ್ಲು. ಇದೇ ಕಾರಣವಿರಬೇಕು, ಅವಳು ನನ್ನ ಕಂಡರೆ ಸಿಡಿಯುತ್ತಿದ್ದಲ್ಲು. ಕೆಲವೊಮ್ಮೆ ಶಾಲೆಗೆ ಬಿಟ್ಟು ಹೋಗುತ್ತಿದ್ದಳು. ಅವಳ್ಳಿಲ್ಲವೆಂದರೆ ಶಾಲೆಗೆ ಹೋಗಲ್ಲ ಅಂತ ನಾನು ಮನೆಯಲ್ಲಿ ರಾಂಪಮಾಡುತ್ತಿದ್ದದ್ದು ಇನ್ನು ಕಣ್ಮುಂದೆ ಹಾಗೆಯೇ ಕಾಣುತ್ತದ್ದೆ.
ನಾವು ವಾಸವಿದ್ದ ಸ್ಥಳ ಒಂದು ವಠಾರದ ಬೀದಿಯಂತ್ತಿತ್ತು. ಸಂಜೆಯಾಯಿತೆಂದರೆ ವಠಾರದ ಹೆಂಗಳೆಯರೆಲ್ಲ ಹೊರಬಂದು ಬಾಗಿಲ್ಲಲ್ಲಿ ಕುಳಿತು ಮಾತನಾಡುತ್ತಿದ್ದರು. ಕತ್ತಲಾದ ನಂತರವಷ್ಟೇ  ಅವರ ಮಾತುಕತೆಗೆ ಬೀಗ ಜಡೆಯುತ್ತಿತ್ತು. ಕೆಲವೊಮ್ಮೆ ಪವರ್ ಕಟ್ ಇದ್ದರೆ ಮೀಟಿಂಗ್ ಪವರ್ ಬರುವವರೆಗೂ ಮುಂದುವರೆಯುತ್ತಿತ್ತು. ಹೀಗೆ ವಠಾರದ ಹೆಂಗಸರೆಲ್ಲ ಹರಡುವಾಗ, ನಮ್ಮ ಬಚ್ಚಾ ಪಾರ್ಟಿ ಆಟವಾಡುವುದರಲ್ಲಿ ಕಳೆದು ಹೋಗುತ್ತಿದ್ದೆವು. ನಮ್ಮದೊಂದು ೯ ೧೦ ಜನರ ಗುಂಪು. ಅದರಲ್ಲಿಯೂ ನನ್ನ ಮೇಲೆ ಹಠಸಾದಿಸುವವರೇ ಹೆಚ್ಚಿದರೂ. ನನ್ನನು ಆಟಕ್ಕೆ ಸೇರಿಕೊಳ್ಳದೆ ಇರುವುದು. ಅವರವರೇ ಗುಂಪು ಮಾಡಿಕೊಳ್ಳುವುದು, ಚಾಡಿ ಹೇಳುವುದು, ಆಟಕ್ಕೆ ಸೇರಿಸಿಕೊಂಡರು ಆಟಕುಂಟು ಲೆಕ್ಕಕಿಲ್ಲವೆಂಬತೆ ವರ್ತನೆ. ಇದಕ್ಕೂ ಕಾರಣ ಇದುವರೆಗೂ ಅರ್ಥವಾಗಿಲ್ಲ ನನಗೆ. ನಾನು ಆಡ್ ಮ್ಯಾನ್ ಔಟ್ ಯಾವಾಗಲು. ಇದ್ದ ಒಬ್ಬ ಅಣ್ಣನು ದೂರವೆಲ್ಲೋ ರೆಸಿಡೆನ್ಸಿ ಶಾಲೆಯಲ್ಲಿ ಓದುತ್ತಿದ್ದ. ರಜಾದಿನಗಲ್ಲಿ ಮನೆಗೆ ಬಂದರೆ ನನಗದು ಸಂಭ್ರಮ. ಆದರೆ ಆ ಸಂಭ್ರಮವು ಕ್ಷಣಿಕ. ನಾನು ಅಣ್ಣ ಹಾಗು ಶ್ರುತಿ ಹೆಚ್ಚಾಗಿ ಕ್ರಿಕೆಟ್ ಆಡುತ್ತಿದೆವು. ಯಾವಾಗಲು ಬೌಲಿಂಗ್ ಅಥವಾ ಫೀಲ್ಡಿಂಗ್ ನನಗೆ, ಬ್ಯಾಟಿಂಗ್ ಅಣ್ಣ ಅಥವಾ ಶ್ರುತಿಗೆ.
ಇನ್ನು ಅಜ್ಜಿಯ ಮನೆ ವಿಷಯ ಬಂದರೆ ಚಿನ್ಮಯ (ನನ್ನ ಸೋದರಮಾವನ ಮಗ) ನನ್ನ ಗೆಳೆಯ. ಬೇರೆ ಕಜಿನ್ಸ್ ಗಳೆಲ್ಲ ವಾಸಿನಲ್ಲಿ ನಮಗಿಂತ ದೊಡ್ಡವರು. ಇವನೊಬ್ಬ ನನ್ನ ವಯಸ್ಸಿನವ. ಯಾವಾಗಲು ಆಟದಲ್ಲಿ ಅವನೇ ಗೆಲ್ಲುಬೇಕಿತ್ತು. ನನ್ನನ್ನು ಅದೆಷ್ಟು ಭಾರಿ ಅಳಿಸಿದ್ದರೋ ನನ್ನಣ್ಣ ಹಾಗು ಇವನು, ಲೆಕ್ಕವೇ ಇಲ್ಲಾ. ಪದಗಳಲ್ಲಿ ಹೇಳಲಾಗದ ಎಷ್ಟು ಸಿಹಿಕಹಿ ನೆನಪುಗಳು ಮನದಲ್ಲೇ ಹುದುಗಿಹೋಗಿವೆ. ನನ್ನ ಪ್ರೈಮರಿ ಸ್ಕೂಲಿಂಗ್ ಅಲ್ಲಿ ಸಿಹಿಘಟನೆ ೪೦% ಆದರೆ ೬೦% ಇರ್ರಿಟೇಟಿಂಗ್/ನೋವಿನಿಂದ ಕಳೆಯಿತು. ಸಣ್ಣವಸಿನಲ್ಲಿ ಅಟೆನ್ಷನ್ ಬಯಸುವುದೇ ಸರ್ವೇ ಸಾಮಾನ್ಯವಲ್ಲವೇ, ಅದು ದೊರಕದೆ ಇದ್ದಲ್ಲಿ ಆಗುವ ಬೇನೆ ಅಷ್ಟಿಷ್ಟಲ್ಲ. ರಾಮಾಯಣದಲ್ಲಿ ಪೀಟಿಕಾಯಣವೆಂಬಂತೆ ಬಹಳಷ್ಟು ಸಣ್ಣ ಸಣ್ಣ ಮಜವಾದ ಘಟನೆಗಳಿವೆ. ಸದ್ಯಕದು ಬೇಡ.

****************************************************
Age 12 - Age 15

ತುಂಬಾ ಖುಷಿಯಾಗಿದ್ದ ದಿನಗಳು. ಎಲ್ಲಾ ಗುರುಗಳ ಅಚ್ಚುಮೆಚ್ಚು ಶಿಸ್ಯೆ. ಒಳ್ಳೊಳ್ಳೆ ಸ್ನೇಹಿತರು. ಸಿಗಬೇಕಾದ ಎಲ್ಲಾ ಗೌರವವು ಸಿಕ್ಕಿತ್ತು. ಜ್ಯೂನಿಯರ್ಸ್ನ ಫೆವರೇಟ್ ಸೀನಿಯರ್. ಸಿನಿಯರ್ಸ್ನ ಮುದ್ದು ಜೂನಿಯರ್. ಒಂದಷ್ಟು ಮನಸ್ತಾಪ. ಬೇಕಾದಷ್ಟು ಮನಸ್ತ್ರುಪ್ತಿ. ಜೀವನದ ಅದ್ಭುತ ದಿನಗಳು.

****************************************************
Age 15 -Age 17

ನಾನು ಬಹಳವಾಗಿ ಇಷ್ಟ ಪಟ್ಟಿದ್ದ ನನ್ನಣ್ಣ, ಶ್ರುತಿ, ಚಿನ್ಮಯ ತಮ್ಮದೇಯಾದ ಲೋಕದಲ್ಲಿ ಕಳೆದು ಹೋಗಿದ್ದರು. ನಾನು ನನ್ನ ಲೋಕದಲ್ಲಿ ಕಳೆದು ಹೋಗಿದ್ದೆ. ಆಗ ಜೊತೆ ಸಿಕ್ಕವನೇ ಮಧು. ನನ್ನ ಟೀನ್ ಏಜ್ ಪುಟಗಳ ಬಹುಮುಖ್ಯಭಾಗ. ನನ್ನ ಸ್ನೇಹಿತ. ನನ್ನೊಂದಷ್ಟು ಸ್ನೇಹಿತೆಯರಿಗೆ ಅವನ ಮೇಲೆ ಕ್ರ್ಶ್ ಇದ್ದಿತು. ಅವನು ನನ್ನ ಸ್ನೇಹಿತನೆಂದು ನನ್ನ ಮೇಲೆ ಅವರಿಗೆಲ್ಲ ಕೋಪ. ತಡೆಯಲಾರದ ಮಾನಸಿಕ ಹಿಂಸೆ ಅನುಭವಿಸಿದ ಕಾಲವದು. ಹುಡುಗಿರೆಂದರೆ ಕೋಪ ಬಂದ ಕಾಲವದು. ಹೆಸರೇಳುವ ಮನಸಿಲ್ಲ, ಕಾರಣ ಅವರೆಲ್ಲ ಈಗ ನನ್ನ ಒಳ್ಳೆಯ ಸ್ನೇಹಿತೆಯರೇ, ಆ ವಯಸ್ಸು ಅಂತಹದು. ಹಾಗಾಗಿ ನನ್ನೊಂದಿಗೆ ಅಷ್ಟು ಕಟುವಾಗಿನಡೆದು ಕೊಡರೇನೋ. ಜೀವನವೇ ಸಾಕು ಅನಿಸಿದ್ದು ಉಂಟು. ಇದೆಲ್ಲದರ ನಡುವೆ ಒಂದಷ್ಟು ಕಮ್ಮಿಯಂಕ (ತುಂಬಾ ಕಮ್ಮಿಯೇನಲ್ಲ, ೮೦% ಬಂದಿತ್ತು.) ಬೇರೆ ತೆಗೆದು ಕೊಂಡೆ. ಅಮ್ಮನಿಗೆ ನನ್ನನ್ನು ಡಾಕ್ಟಾರ್ ಮಾಡಬೇಕೆಂಬ ಆಸೆ ಇತ್ತು. ಆದರೆ ಅಪ್ಪನಿಗೆ ಹೆಣ್ಣುಮಗಳನ್ನು ದೂರ ಕಳುಹಿಸಲು ಮನಸಿರಲಿಲ್ಲ. ಹಾಗು ನನ್ನ ವಯಸ್ಸಿನ್ನ ಮೇಲೆ ನಂಬಿಕೆ ಇರಲ್ಲಿಲ್ಲ. ಹಾಗಾಗಿ ಬಿ.ಎಸ್ ಸಿ. ಗೆ ಸೇರಿಸಿದರು.(ನಾನು ಸಹ ಅಪ್ಪನೇಳಿದ ಮಾತಿಗೆ ಇದುವರೆಗೂ ಇಲ್ಲಾ ಅನ್ನದೆ ನಡೆದಿದ್ದೆನ್ನೆ. ಕೆಲವೊಮ್ಮೆ ಕೆಲವು ವಿಷಯದಲ್ಲಿ ಪಶ್ಚಾತಾಪವು ಪಡುತ್ತಿದ್ದೇನೆ.) ಮನೆಯಿಂದಲೇ ಕಾಲೇಜ್ಗೆ ಹೋಗಿಬಂದು ಮಾಡುತ್ತಿದ್ದೆ.

****************************************************
Adulting

ಯುವರಾಜ; ನಾವು ಯಶು ಎಂದು ಕರೆಯುತ್ತಿದ್ದೆವು; ಅವನು ನನ್ನ ೮-೧೦ ತರಗತಿಯ ಬೆಸ್ಟ್ ಫ್ರೆಂಡ್, ಹಾಗು ನನ್ನ ನೈಬರ್; ಪಿಯುಸಿ ಯನ್ನು ಮೂಡಬಿದಿರೆಯಲ್ಲಿ ಮಾಡುತಿದ್ದ. ಚಾಚು ತಪ್ಪದ್ದೆ ಕಾಯಿನ್ ಫೋನ್ ಬಳಸಿ ನನಗೆ ವಾರಕ್ಕೊಮ್ಮೆ ಯಾದರು ಕರೆ ಮಾಡುತ್ತಿದ್ದ. ಪಿಯುಸಿ ಯಲ್ಲಿ ಮ್ಯಾತ್ (math) ಫೈಲ್ ಆದ ಕಾರಣ, ನನ್ನ ಬಳಿ ಮ್ಯಾತ್ ಹೇಳಿಸಿಕೊಳ್ಳಲು ಬರುತ್ತಿದ್ದ. ನಾನಾಗ ಪ್ರಥಮ ಬಿ.ಎಸ್ ಸಿ. ಅವನೆಂದರೆ ತಿಳಿಯದ ಆಕರ್ಷಣೆ. ಕಪ್ಪು ಮೈಬಣ್ಣ. ೬ ಅಡಿ ಉದ್ದ. ಸಪೂರ ಮೈ. ದಪ್ಪ ದ್ವನಿ. ಅವನೊಮ್ಮೆ ನನ್ನ ಪಕ್ಕದ ಮನೆ ಆಂಟಿಯೊಂದಿಗೆ ಮಾತನಾಡುತ್ತ; "ಮಧು ನನ್ನ ಬೆಸ್ಟ್ ಫ್ರಂಡ್ ಆಂಟಿ, ಯಾರನ್ನ ಬಿಟ್ಟರು ಇವಳಿಂದ ದೂರ ಹೋಗಲ್ಲ, ಇವ್ಳಳನ್ನು ಬಿಡಲಾರೆ" ಅಂದ್ದಿದ್ದ. ಇಂದು ಕಿವಿಯಲ್ಲಿ ಗುಯ್ನ್ಗುಟ್ಟುತ್ತದೆ ಆ ಮಾತುಗಳು. ಈಗ ಅದೆಲ್ಲಿ ಮರೆಯಾಗಿ ಮೂಕನಾದನೋ ಅರಿಯದು. ನಮ್ಮಣ್ಣ ಈಗಲೂ ಕೆಲವೊಮ್ಮೆ ಅವನ್ನನ್ನು ನಿಮ್ಮ ಹುಡುಗ ಅಂತ ರೇಗಿಸುವುದುಂಟು. ನಾನು ನಗುವುದುಂಟು.

ಗ್ರಾಜುಯೇಷನ್ ಮಾಡುತ್ತಿದ್ದ ಸಮಯವನ್ನು ಮರೆಯುವಹಾಗೆ ಇಲ್ಲಾ. ನನ್ನದೇ ರಾಜ್ಯಭಾರ. ನನ್ನದೇ ಒಂದು ಗುಂಪು. ಮಾಡದ ತರಲೆಗಳಿಲ್ಲ. ಒಂದಷ್ಟು ತೊಂದರೆಗಳ್ಳನ್ನು ಮಯ್ಯಾಮೇಲೆ ಎಳೆದುಕೊಂಡ್ಡದ್ದು ಉಂಟು. ಕಾಲೇಜು ಟಾಪರ್. ಎಲ್ಲಾ ಗುರುಗಳ ಪೆಟ್ ಸ್ಟೂಡೆಂಟ್. ಒಂದಷ್ಟು ಫಾಲೋಯರ್ಸ್ . ಒಂದಷ್ಟು ಸನ್ಮಾನ, ಪ್ರಶಸ್ತಿಗಳು, ಕೆಲವೊಮ್ಮೆ ಕಾಡಿಸಿ ನೋಯಿಸಿ ಹೋಗುತ್ತಿದ್ದ ಅಣ್ಣನ ಹಾಗು ಯಶುವಿನ ನೆನಪುಗಳು(ಅವಾಗವಾಗ ಊರಿಗೆ ಬಂದು ಮುಖ ತೋರಿಸಿ ನೆನಪುಗಳನ್ನು ಕೆದಕಿ ಹೋಗುತ್ತಿದ್ದದೇ ಇದಕ್ಕೆಲ್ಲ ಕಾರಣ). ಒಟ್ಟಿನ್ನಲ್ಲಿ ಜಮ್ಮ್ ಅಂತ ಜೀವನ ಸಾಗಿತ್ತು. ಕಾಲೇಜು ಜೀವನದ ೭೦% ಎಲ್ಲಾ ಬಣ್ಣವನ್ನು ಕಂಡಾಗಿತ್ತು. 
ರಾಣಿಯಂತೆ ನೋಡಿಕೊಳ್ಳುತ್ತಿದ್ದ ಅಪ್ಪ. ಕೇಳಿದೆಲ್ಲ ಕೊಡಿಸುತ್ತಿದ್ದ ಅಮ್ಮ. (ಹಾಗಂತ ಎಂದಿಗೂ ನನ್ನ ಇತಿಮಿತಿಗಳ ಮೀರಿಲ್ಲ.)

****************************************************
Adult (ಎಂ. ಎಸ್ ಸಿ. ಸಮಯ)

ಅಪ್ಪ ನನ್ನನ್ನು ಹೊರ ಕಳಿಸಲು ಯೋಗ್ಯಳೆಂದು ಒಪ್ಪಿದ ಕಾಲವದು. ಏನು ತಿಳಿಯದ ನಾನು. ಗೊತ್ತಿಲ್ಲದ ಊರು. ಜೀವನದ ಅತಿ ಅಮೂಲ್ಯವಾದ ಸಮಯವದು. ೨ ವರ್ಷ ಹೇಗೆ ಕಳೆಯಿತೆಂದೇ ತಿಳಿಯಲ್ಲಿ. ಗಳಿಸಿದ ಜ್ಞಾನಕಿಂತ ಕಳೆದುಕೊಂಡದ್ದೇ ಹೆಚ್ಚೇನೋ ಎಂದು ಇಂದಿಗೂ ಕೆಲವೊಮ್ಮೆ ಅನಿಸುತ್ತದ್ದೆ. ಏನು ಕಲಿಯಲ್ಲಿ. ಕೇವಲ ಮಾರ್ಕ್ ಶೀಟ್ ನಲ್ಲಿ ದೊಡ್ಡ ದೊಡ್ಡ ಅಂಕ. ನೆಂಟರ ಬಳಿ ಹೇಳಿಕೆಕೊಳ್ಳಲ್ಲು ಪ್ರಶಸ್ತಿಗಳು. ಬಹುಮಾನಗಳು. ಮುಂದೇನು ಎಂಬ ಸರಿಯಾದ ನಿರ್ಧಾರಗಳಿಲ್ಲ. ತಿಳಿಹೇಳ ಬೇಕಿದ್ದ ಅಣ್ಣ ಏನು ಸಲಹೆ ನೀಡಲಿಲ್ಲ. ಅಪ್ಪನು ಸುಮ್ಮನಾಗಿದ್ದರು. ಏನು ತೋಚದ ಕಾಲವದು. ತುಂಬಾ ಕೇರ್ಲೆಸ್ ಆಗಿ ಜೀವನದ ೨ ವರ್ಷವ ಹಾಳು ಮಾಡಿಕೊಂಡಿದ್ದೆ ಎಂಬ ಭಾಸ. ಕಣ್ಣ ಮುಂದೆ ಕತ್ತಲಾವರಿಸಿ ದಾರಿಯೇ ಇಲ್ಲವೇ ಎಂಬಂತೆ ಗೋಚರಿಸುತ್ತಿತ್ತು. ಫಿಕಲ್ ಮೈಂಡೆಡ್ ಆಗಿದ್ದೆ. (ಈಗಲೂ ಸಹ ಕೆಲವೊಮ್ಮೆ). ಕೆಲಸ ಮಾಡುವೆನೆಂದರೆ ಕೆಲಸ ಕೊಡುವವರು ೧೦೦ ಮಂದಿ ಇದ್ದರು. ಆದರೆ ನಾನು ಜೀವನದಿಂದ ಬಯಸುತ್ತಿರುವುದು ಏನೆಂದು ತಿಳಿಯುತ್ತಿರಲಿಲ್ಲ. ನನ್ನ ಗುರುಗಳ (NKL) ಸಲಹೆಯ ಮೇರೆಗೆ ರಿಸರ್ಚ್ ಗೆ ಸೇರಿಕೊಂಡೆ. ೩ ವರ್ಷಗಳು ಕಳೆಯಿತು. ಇಷ್ಟೆಲ್ಲ (೨+೩) ವರ್ಷಗಳು ಕಳೆದ ನಂತರ ಒಂದು ಚೂರು ಚೂರು ಬುದ್ದಿ ಬರುತ್ತಿದೆ, ಎಂದೆನಿಸುತ್ತಿದೆ.

ಅಣ್ಣನಿಗೆ ಮದುವೆ ಆಯ್ತು. ಅತ್ತಿಗೆ ಬಂದಳು. ಫೈನಲಿ ಅಣ್ಣನೊಂದಿಗೆ ಒಂದಷ್ಟು ಸಮಯ ಕಳೆಯುವಂತಾಯಿತು.
ಕಳೆದುಕೊಂಡದ್ದು ಏನು ಇಲ್ಲ. ಸುಮ್ಮನೆ ಏನನ್ನೋ ಹುಡುಕುತ್ತಿದ್ದೆ ಯೆಂದು ಅರಿವು ಮೂಡುತಿದ್ದೆ. ಇರುವುದ್ದೇಲ್ಲ ಇಂದಿಗೂ ನನ್ನೊಂದಿಗೆಯೇ ಇದೆ. ಕಾಣುವ ಕೊರತೆಯಾವುದು ಇಲ್ಲಾ. ಆದರೂ ನಾನು ಸಂಪೂರ್ಣವೆಂದು ಅನಿಸುತ್ತಿಲ್ಲ. ನನಗಿಷ್ಟವಿರುವ ಕೆಲಸಕ್ಕೆ ಸೇರುವವರೆಗೂ ಈ ಭಾವನೆಯಿಂದ ಮುಕ್ತಳಾಗಲು ಸಾಧ್ಯವಿಲ್ಲ. ಇನ್ನು ೧ ರಿಂದ ೨ ವರ್ಷಗಳ ತಪ್ಪಸ್ಸು ಬಾಕಿಯಿದೆ.

****************************************************
Matured?!!

ಸಧ್ಯಕಿದು ಕಾಲಿ ಜಾಗ. ಮುಂದೊಂದು ಸುದಿನ ಬರಲಿದೆ, ಜಾಗ ಭರ್ತಿಮಾಡಲು.


****************************************************


Thursday 26 April 2018

3 A.M.

ದುಃಖ್ಖವೆಂದರೇನು?
ಸುಖವೆಂದರೇನು?
ಈ ಜೀವನದ ಉದ್ದೇಶ?
.... 
ಜನಸಾಮಾನ್ಯರಿಗೆ ಕಾಡುವ ಪ್ರೆಶ್ನೆಯಲ್ಲವೇ, 
ನಾನು ಒಬ್ಬಳು ಸಾಮಾನ್ಯ ಜನವೇ ಅಲ್ಲವೇ. 
***********************************************
ಇದ್ದಕ್ಕಿದಂತ್ತೆ ಮಧ್ಯರಾತ್ರಿಯಲ್ಲಿ ಇಲ್ಲದ ಸಲ್ಲದ ಪ್ರಶ್ನೆಗಳು ಕಾಡತೊಡಗಿದವು. 
ನಾನು ಮಾಡುತ್ತಿರುವುದು ತಪ್ಪೆನಿಸಿತ್ತು. ಮರುಕ್ಷಣವೇ ಇಲ್ಲಾ ಇದು ತಪ್ಪಲ್ಲ ಅನಿಸಿತ್ತು. ಹಾಗಂತ ಸರಿ ಮಾಡುತಿದ್ದೇನೆಂದಲ್ಲ. 
ಈ ಸರಿ ತಪ್ಪುಗಳು ಯೆಂದರೇನು? ಅದನ್ನು ಬಣ್ಣಿಸುವುದು ಹೇಗೆ? 
***********************************************
ನನ್ನಪ್ಪ ಯೇನಾದರೂ ನನಗೆ ಬುದ್ಧಿಮಾತು ಹೇಳುವಾಗ;
 
"ಹೋಗಪ್ಪ ಯಾಕೆ ಸುಮ್ಮನೆ  ಬೈಯುತ್ತೀರಿ" - ನಾನು  
"ನೀನು ಖುಷಿಯಾಗಿರಲಿ ಅನ್ನೋದೊಂದೇ ನನ್ನ ಉದ್ದೇಶ, ನಾನು ಕೇವಲ ನಿನಗೆ ಹಾಗೆ ಮಾಡು ಹೀಗೆ ಮಾಡು ಯೆಂದು ಹೇಳಿಕೊಡೋಬಹುದೇ ವಿನಃ, ಹಾಗೆ ಮಾಡುವುದು ಬಿಡುವುದು ನಿನಗೆ ಬಿಟ್ಟಿದ್ದು. ನನಗೊಳ್ಳೇದು ಅನಿಸಿದ ದಾರಿ ತೋರಿಸುವುದಷ್ಟೇ ನನ್ನ ಕೆಲಸ, ದಾರಿಯಲ್ಲಿ ಸಾಗಬೇಕಾಗಿರುವು ನೀನೆ, ಯಾವದಾರಿಯಲ್ಲಿ ಹೋಗಬೇಕೆಂದು ನಿರ್ದರಿಸಬೇಕಾಗಿರುವುದು ನೀನೆ. ನಿನ್ನ ದಾರಿಯನ್ನು ನೀನೆ ಕಂಡುಕೊಳ್ಳಬೇಕು." - ಅಪ್ಪ 
"ಹಾಗಾದರೆ ನಾನು ನನ್ನ ದಾರಿ ಕಂಡುಕೊಳ್ಳುತ್ತೆನೆಂದು ತಪ್ಪುದಾರಿಯನ್ನು ಆಯ್ದುಕೊಂಡರೆ ನಿಮಗೆ ಬೇಜಾರಾಗುವುದಿಲ್ಲವೇ? ನನ್ನನ್ನು ತಪ್ಪು ಮಾಡಲು ಬಿಟ್ಟುಬಿಡುತ್ತಿರೆ? ಇಷ್ಟು ಕಷ್ಟದ ಜವಾಬ್ದಾರಿಯನ್ನು ನನ್ನ ಮೇಲೆಯೇ ಏರಿಬಿಡುತ್ತೀರಾ?" - ನಾನು 
ಹೌದು ಬೇಜಾರಾಗುತ್ತೆ ನಿಜ, ಹಾಗಂತ ನಾನು ಸುಮ್ಮನೆ ಕೂರಲಾರೆ, ಕೈಲದಷ್ಟು ತಿಳಿಹೇಳ ಪ್ರಯತ್ನಿಸುತ್ತೇನೆ, ನಂತರವೂ ತಿಳಿಯದಿದ್ದರೆ, ಅದು ನಿನ್ನ ಅನಿವಾರ್ಯ ಕರ್ಮಾವೆಂದು ಸುಮ್ಮನಾಗುತ್ತೇನೆ. ಜೀವನದ ಕಾಟು ಸತ್ಯ ಇದುವೇ ಮಗಳೇ. ಅವರವರ ಬಾಯಿಗೆ, ಅವರವರ  ಕೈ. ಯಾರಿಗೆ ಯಾರು ಇಲ್ಲ. ಎಲ್ಲರೂ ತಮ್ಮ ನೆಲಗಟ್ಟಿ ಮಾಡಲು ಮೊದಲು ಪ್ರಯತ್ನಿಸುತ್ತಾರೆ." - ಅಪ್ಪ. 
*******************************************************

3 A.M.
 ರಾತ್ರಿ ನೆಲದ ಮೇಲೆ ಕುಳಿತುಕೊಂಡಿರುವಾಗ , ಈ ಹಿಂದೆ ನನ್ನ ಜೀವನದಲ್ಲಿ ನಡೆದ ಕಹಿ ಘಟನೆಗಳೊಂದಷ್ಟು, ಸಿಹಿ ಘಟನಗಲೊಂದಷ್ಟು ನೆನಪಿನ ಬುತ್ತಿಯಿಂದ ಹೊರಬಂದು ಹಾಗೇ ಕಣ್ಣ ಮುಂದೆ ಹರಿದಾಡಿದವು.  
ಆಶ್ಚರ್ಯವೆಂದರೆ ಕಣ್ಣಂಚಲಿ ಸ್ವಲ್ಪವು ಪಸೆಯಿರಲಿಲ್ಲ, ತುಟಿಯಂಚಲಿ ನಗು!!
ಭಾವನೆಗಳೆಲ್ಲ ಬರದಡವೇ ಎಂದನಿಸ ತೊಡಗಿತು. 
ಆಗ ಮನಸ್ಸಿನಾಳದಿಂದ ಮಾತ್ತೊಂದು ಕೇಳಿಸಿತು, 
ಅಯ್ಯೋ ಮರುಳೆ, ಸಮಯ ೩ ಆಯ್ತು. ಅದಕ್ಕೆ ನಿನಗೆ ಅರಳು ಮರಳು ಶುರುವಾಯ್ತು. 
ಸುಮ್ಮನೆ ಹಾಸಿಗೆಯಲ್ಲಿ ಬಿದ್ದುಕೋ. ನಾಳೆ ಬೆಳಗ್ಗೆ ಎದ್ದಾಗ ಎಲ್ಲವೂ ಮತ್ತೆ ಬರುತ್ತದೆ (ಐ ಮೀನ್ ಭಾವನೆಗಳು). 
*********************************************
ಪ್ರತೀದಿನವು ಒಂದು ಹೊಸ ದಿನಾ. 
ಪ್ರತಿ ಅಂತ್ಯಕ್ಕಿಲ್ಲಿ ಒಂದು ಆದಿ. 
ಪ್ರತಿ ನೋವಿಗೊಂದು ನಲಿವು,
ಪ್ರತಿ ಕಾಯಿಲೆಗೊಂದು ಔಷದ. 
ಚಿಂತಿಸಿ ಫಲವಿಲ್ಲಾ ನಶ್ವರದ ಬಾಳಲ್ಲಿ. 
**********************************************

Thursday 19 April 2018

When he pleaded..

I don't want to pester you around always. I'm missing you. just let me know, you want me in your life or not? - he asked (after texting her continuously from almost a month) .

if you missing me, it's your mistake. Because I never made my people to miss me.
It's your mistake not to recognize the flavors, recognize the efforts to regulate everything, to hold the things which are falling apart. I tried the best to understand and to give the maximum. now? now I'm plain, I have no emotions. I am not feeling pain, not feeling happy, feeling nothing. it's plain. No guilts. No hard feelings. No regrets.
In our case, yes, you can't put blame on me and you know it well.
I'm here, just because I never wanna leave questions unanswered which can be answered.- she replayed.


That's how one of my favorite chapters of my favourite book ended. 

Sunday 15 April 2018

Smitten!

ಬೇಸಿಗೆಯ ಮಧ್ಯಾಹ್ನ, ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆ, ಪರಿಚಯವಿಲ್ಲದ ಸ್ಥಳ. ಆದರೂ ಸವಾರಿ ಹೊರಟಿತ್ತು.
ಒಮ್ಮೆ ಅವನ ಕಂಡು, ಮಾತನಾಡಿ ಬರಲೆಂದು.
೩ ಘಂಟೆಯ ಸುದೀರ್ಘ ಪಯಣದ ನಂತರ, ಕಡೆಗೂ ಸಿಕ್ಕನಾ ಭೂಪ. ದಾರಿಯ ಧಣಿವೆಲ್ಲಾ ಒಮ್ಮೆಯೇ ಮರೆತು ಹೋಗಿತ್ತು, ಆ ಕರಿ ಮುಸುಡಿಯ ಬಿಳಿ ಹಲ್ಲುಗಳ ಹೊಳಪಿಗೆ.
ಮದ್ಯಾಹ್ನದಿಂದ ಸಂಜೆಯಾಯಿತು, ಸಂಜೆಯೆಂದ ರಾತ್ರಿ.
ಬೇಸಿಗೆಯ ಸೆಖೆಯೆಲ್ಲಾ ಕರಗಿ ತಂಪಾದಂತೆ .

Understand the difference.

There is a difference between " I love you " and " I like you".
Just like the difference between "I need you" and "I want you". 

The problem is, whatever you liked is a brain work and difficult to overcome! and whatever
you want makes you more human, when both of other two, "I love you" and "I need you" remains trivial. 


Thursday 12 April 2018

Certainly

ಅಸಮಧಾನದಲ್ಲಿ ಸ್ನೇಹಿತೆ ಹೀಗೆಂದಳು,
"I lost faith in talking something not natural like so-called intellectual thought as because people will talk intellectual but when it comes to practice they are not different from others."
ಹೌದೇ? ಗೊತ್ತಿಲ್ಲ. ಆದರೆ ಅಪ್ಪ ಹೇಳಿದ ಮಾತ್ತೊಂದು ನೆನಪಿಗೆ ಬಂತು.
"ಶಾಸ್ತ್ರ ಓದೋದಕ್ಕೆ, ಬದನೇಕಾಯಿ ತಿನ್ನೋದಕ್ಕೆ."

Wednesday 4 April 2018

ಈಗ (Now)

೮.೩೦ ಪಿ.ಎಂ. ನ ಆಸು ಪಾಸು.
೦೪.೦೪. ೨೦೧೮
ಸುಮಾರು ದಿನಗಳ ನಂತರ ನನ್ನ ತಲೆ ಕೂದಲಿನ ಮೇಲೆ ಕರುಣೆ ಬಂದು ಎಣ್ಣೆಯ ದರ್ಶನ ಮಾಡಿಸಿದ ಅಮ್ಮ ,
"ಏನು ಮಗಳೇ, ಕೂದಲಿಗೆ ವಾರಕ್ಕೊಮ್ಮೆಯಾದರೂ ಎಣ್ಣೆ ಹಾಕಬಾರದೇ?" ಎಂದರು.

ಕೆಲಕಾಲ ಮೌನ..

"ಇದೇನು ಕೂದಲಲ್ಲಿ ಇಷ್ಟು ಸಿಕ್ಕಿದೆಯಲ್ಲಾ?" ಮೌನಮುರಿಯುತ್ತ ಹೇಳಿದರು ಅಮ್ಮ.
"ಅಯ್ಯೋ ತಲೆಬಾಚಲು ಬೇಜಾರಮ್ಮ, ೩ ದಿನ ಅಯ್ತು ತಲೆ ಬಾಚದೆಯೇ" ಅಂದೇ.
ಆಗ ಅಪ್ಪನೇಳಿದ ಮಾತು:
ಬೇಜಾರು ಮಾಡ್ಕೊಂಡು ಪ್ರಯೋಜನ ಇಲ್ಲ. 
ಸಾಯೋಅಷ್ಟು ದಿನ ಬದುಕಲೇ ಬೇಕಲ್ಲ. 
ನಮ್ಮ ನಮ್ಮ ಕೇಸಗಳನ್ನು ಮಾಡುತ್ತಾ ಹೋಗಬೇಕು. 
ಬೇಜಾರು ಎಂದು ಕೂತರೆ ಎಲ್ಲವೂ ಬೇಜಾರೇ.
ನಾಳೆ ದಿನ  ****** ಬೇಜಾರು ಅಂತಿಯೇನಪ್ಪಾ ?! ಹಾಹಾ . 

ನಾಳೆಯೇಕೆ ಹೇಳಲಿ, ನಂಗೆ ಅದು ಮೊದಲಿಂದನೇ ಬೇಜಾರಿನ ಕೆಲಸವೆ ಅಪ್ಪ.  - ಅಂದೇ.

ಮೂವರು ನಕ್ಕೆವು. 


Monday 2 April 2018

ಉಗುರು ಬೆರಳಿನ ಸಂಬಂಧ

ಕಾಲಿನ ಹೆಬ್ಬೆರಳ ಉಗುರು ಮನೆಯ ಗೋಡೆಗೆ ತಾಕಿ ಒಂದು ಕ್ಷಣ ಪ್ರಾಣವೇ ಹೋದಂತಾಯ್ತು.
'ಅಮ್ಮಾ....'  ಕಿರುಚಿದೆ.
'ನಾನು ಎಷ್ಟು ಸಾರಿ ಹೇಳಿದ್ದೇನೆ ಉಗುರು ಬೆಳದ ಕುಡ್ಲೆ ಕಟ್ ಮಾಡು ಅಂತ..,' ಅಪ್ಪ ನೊಂದುಕೊಂಡು ಗದರಿಸಿದರು.

ಹೌದಲ್ಲವ್ವೆ ಚರ್ಮದೊಂದಿಗೆ ಇದ್ದ ಉಗುರಿಂದ ಎಂದಿಗೂ ನೋವಾಗುವುದಿಲ್ಲ. ಚರ್ಮದಿಂದ ಉಗುರು ಮುಂದೋದರೆ ನೋವು.

ಯು ನೋ ವಾಟ್ ಐ ಮೀನ್ ರೈಟ್?   

Gel well

ನೀರಿನಂತಾಗು ನೀರೆ.
ಅಪ್ಪ ಹೇಳುತ್ತಿದ್ರು ನೀರಿನಂತಾಗು ಮಗಳೇ ಎಂದು.
ಅಂದು ಅಪ್ಪ ಹಾಗೆ ಹೇಳಲು ಕಾರಣವೆ ಬೇರೇ ಇತ್ತು. (ಅಥವಾ ನನಗದು ಸಂಪೂರ್ಣವಾಗಿ ಅರ್ಥವಾಗಿರಲ್ಲಿಲ್ಲವೇನೋ)
ಎಲ್ಲಾದಕ್ಕೂ ಹೊಂದಿಕೊಂಡು ಹೋಗು ಮಗಳೇ ಎನ್ನುವ ಅರ್ಥ ಅವರದಾಗಿತ್ತು. (ಅಥವಾ ಯಾವುದಕ್ಕೂ ಅಂಜದೆ ಮುನ್ನುಗ್ಗು ಎಂಬುವಂತೆಯೇ?)

ಮೊದಲ ಬಾರಿಗೆ ನನ್ನನು ಒಬ್ಬಂಟಿಯಾಗಿ ಹಾಸ್ಟೆಲ್ ನಲ್ಲಿ ಬಿಟ್ಟುಹೋಗುತ್ತಿದ್ದ ಸಂದರ್ಭವದು.
ಬಹಳಾನೇ ಅತ್ತಿದ್ದೆ ಅಂದು ರಾತ್ರಿ. ತಿಳಿಯದ ಊರು, ತಿಳಿಯದ ಒಂಟಿತನ. ಅರ್ಥವಾಗದ ಭಾವನೆಗಳು.
*****
ನನಗೆ ತಿಳಿದ ಮಟ್ಟಿಗೆ ಇಂದಿಗೂ ಅಪ್ಪ ಹೇಳಿಕೊಟ್ಟಂತೆ, ನನಗರ್ಥವದಂತೆಯೇ ನಡೆದು ಕೊಳ್ಳುತ್ತಾ ಬಂದಿದ್ದೇನೆ.
ಆದರೆ ಇತ್ತೀಚಿಗೆ ಯಾವುದು ಮೊದಲಿನಂತಿಲ್ಲ. (ಅಥವಾ ಅಪ್ಪನ ಮಾತಿನ ಗಾಢತೆಯ ಆಳಕ್ಕೆ ಸ್ವಲ್ಪ ಸ್ವಲ್ಪವೇ ಇಳೆಯುತ್ತಿರುವೆನೇ?)
ಶಾಂತತೆಯಿಂದ ನೀರಿನಂತಿದ್ದರು, ನೀರು ಎಣ್ಣೆಯೊಂದಿಗೆ ಬೆರೆಯುವುದಿಲ್ಲವಲ್ಲವೇ?



Saturday 24 March 2018

ಓ ನವಿಲೇ.....

ನೀಲಿಯಾಕಾಶವ ಮರೆಮಾಚಿದ ಬೂದು ಬಣ್ಣದ ಮೋಡ.
ಮಬ್ಬು ಬೆಳಕು. ಈ ಮಬ್ಬಿನ ನಡುವೆ  ಬಣ್ಣ ಬಣ್ಣಗ ಮಿಂಚು. 
ಗಾಢ ನೀಲಿ, ಪಚ್ಚೆ ಹಸಿರು, ತಿಳಿ ಹಸಿರು, ನೇರಳೆ ನೀಲಿ, 
ಚಿನ್ನದ ಹಳದಿ, ಬೆಳ್ಳಿಯ ಬಿಳಿ, ರಾಮಾ ಇನ್ನು ಅದೆಷ್ಟೋ ಬಣ್ಣಗಳು. 
ಬಣ್ಣವೋ ಬಣ್ಣ. ಬಣ್ಣದೋಕುಳಿ. 
ಗರಿಬಿಚ್ಚಿ ಕುಣಿದ ನಾಟ್ಯ ಶಂಕರ, 
ಸೌಂದರ್ಯದ ಘಣಿ. ಮುದ್ದಾದ ಗಂಡು ನವಿಲು.  
********************************************** 
ಬಡ್ಡ ನೊಬ್ಬ ದೂಳು ಮೆತ್ತಿಕೊಂಡು ಕುಳಿತ್ತಲ್ಲಿಯೇ ಕುಳಿತಂತ್ತೆ  ತೋರುತ್ತಿದ್ದ ಬಾನೆತ್ತರದ ಬೆಟ್ಟಗಳು. 
ದಟ್ಟ ಕಾಡು, ಎಲ್ಲೆಡೆ ಹಸಿರು, ಆಗಲೇ ಬಂದೋದ ಮಿಂಚೊ೦ದು, 
ನೂರಾರು ಕೀಟಗಳ ನಿನಾದ, ಪ್ರಾಣಿಗಳ ವಿಚಿತ್ರ ಶಬ್ದ, 
ಗುಟರ್ಗು ಮಾಡುತ್ತಿರುವೆ ಗೂಬೆ. ವಟರುಗುಟ್ಟುವ ಕಪ್ಪೆ. 
ಇಷ್ಟೆಲ್ಲ ಶಬ್ದಗಳನಡುವೆಯೂ ಅದೇನೋ ಅರಿವಿಗೆ ನಿಲುಕದ ಸುಂದರವಾದ ನಿಶಬ್ದ.  
ಇನ್ನೇನು ಮಳೆಬರುವ ಮುನ್ಸೂಚನೆಗಳು.
ಈ ಮಾಯಾಜಾಲದಲ್ಲಿ ಕಳೆದುಹೋದ ನನ್ನನ್ನು ಎಬ್ಬಿಸಲೆಂದ ಗುಡುಗಿದ ಮೋಡ,
ಅರೇ! ಶುರುವಾಗಿಯೇ ಹೋಯ್ತು. ಮೋಡಗಳ ಚೀರಿಕೊಂಡು, 
ಪಟ ಪಟವೆಂದು ನೀರ ಹನಿಗಳು ಮರದ ಎಲೆಗಳ ಮೇಲೆ ಬಿದ್ದು, 
ಜುಐ ಯೆಂದು ಜಾರಿ ನೆಲಕುರುಳಿದೆ. 
ಜೋರಾಯ್ತು ಮಳೆ ಈಗ.
ಹನಿ ಹನಿ ಸೇರಿ ಝರಿಯಾಗಿ ಎಲ್ಲೆಡೆಯೂ ಹರಿಯುತ್ತಿದೆ.   
ಬಡ್ಡನ ಮೈ ತೊಳೆಯುತ್ತಿದೆ. 
************************************************
ಜೀವನವೆಷ್ಟು ವಿಚಿತ್ರ. 
ನಮ್ಮ ಜೀವಸೊಂಕುಲನದ ವಿಕಾಸನವಾಗಿರುವುದೇ ಹೀಗೆ. ನಾವೇನು ಮಾಡುವುದು. 
ಭಾಹ್ಯ ಸೌಂದರ್ಯಕ್ಕಿಲ್ಲಿ ಹೆಚ್ಚು ಬೆಲೆ. 
ತಪ್ಪೇನಿಲ್ಲ. ದೇಹ ಸೌಂದರ್ಯ ಆರೋಗ್ಯದ ಲಕ್ಷಣ. 
ಪುಕ್ಕ ಬಿಚ್ಚಿ ಗಂಡು ನವಿಲು (ಬಹುತೇಕ ಎಲ್ಲಾ ಪಕ್ಷಿ ಪ್ರಭೇದಗಳನ್ನು ಪ್ರತಿನಿದಿಸುತ್ತ/ ಕೆಲವೊಮ್ಮೆ ಎಲ್ಲಾ ಉನ್ನತ ಜೀವ ಪ್ರಭೇದಗಳೆನ್ನಬಹುದು) ಕುಣಿಯಲೇ ಬೇಕು,
ತಾನೆಷ್ಟು ಚೆಂದವೆಂದು ಹೆಣ್ಣುನವಿಲಿಗೆ ತೋರಿಸಲೇ ಬೇಕು. 
***********************************************
ಅಷ್ಟೊಂದು ಉದ್ದಉದ್ದವಾದ ಸುಂದರವಾದ ಗರಿಗಳನ್ನೊರಲು, ನವಿಲಿಗೆ ಭಾರವೆನಿಸುವುದಿಲ್ಲವೇ?
ಸೌಂದರ್ಯವೆಂಬುದು ಕಷ್ಟವೇ/ಭಾರವೇ? ಅಷ್ಟು ಕಷ್ಟದವಶ್ಯಕತೆ ಇದೆಯೇ?
ಅಥವ ಸೌಂದರ್ಯದಿಂದ ಸೌಂದರ್ಯಕ್ಕೆ ಕಷ್ಟವೇ?
ಬಿಡಿಸಿಕೊಂಡಷ್ಟು ಕಗ್ಗಂಟಾಗುವ ಪ್ರೆಶ್ನೆಗಳು. ಉತ್ತರಗಳು.
ಸುಂದವಾಗಿರುವುದನ್ನು ಯಾರಿಗೂ ಬಿಟ್ಟುಕೊಡಲು ಮನಸ್ಸಿರುವುದಿಲ್ಲ. 
ಸೌಂದರ್ಯದೊಂದಿಗೆ ಸ್ವಾರ್ಥದ ಜನನ. 
***********************************************
ಮಳೆಯೀಗ ನಿಂತಿದೆ. ಬಾನೀಗ ನಿರಾಳ. 
ಮತ್ತದೇ ನೀಲಿ ನೀಲೀ,
ಆದರೆ ಅಲ್ಲಲ್ಲಿ ಛಿದ್ರ ಛಿದ್ರವಾಗಿ ಹರಡಿರುವ ಬೆಳ್ಳಿಯ ಮೋಡಗಳು. 
ಚೆದುರಿದ ನಮ್ಮ ಕಲ್ಪನೆಗಳಂತೆ. 
***********************************************


     

Friday 23 March 2018

Just because she doesn't say anything!

ಅವಳೊಂದು ಬೆಳಕು.
ತನ್ನೊಳಗೆ ಸಾವಿರ ನೋವನ್ನು ತುಂಭಿಕೊಂಡಿಹಳು,
ಹಾಗಂತ ನಲಿವೇಗೇನು ಕಮ್ಮಿ ಇಲ್ಲ.
ತನ್ನೊಳಗೆ ಬೆಳಕಿದ್ದರು, ತಾನೇ ಒಂದು ಬೆಳಕಾದರು,
ಯಾವೋದು ಕಾಣದ ಕತ್ತಲೊಂದು ಬೆನ್ನ ಹಿಂದೆ ನಿಂತಂತೆ.
ಹೇಳಲಾಗದೊಂದು ಸಂಕಟ. ಏನೋ ಕೊರತೆ!! ಆದರೆ ಕೊರಗಿಲ್ಲ.
ಇದನರಿಯದ ಜನಕೆ ಕಾಣುವುದೆಲ್ಲ ಬರಿ ಬೆಳಕು.
ಕತ್ತಲೆಯ ಕಾಣಲವಕಾಶವೇ ನೀಡದ ಬೆಳಕು.
ಸದ್ದಿಲ್ಲದೇ ತನ್ನ ಕೆಲಸವೂ ಮಾಡುವ ಬೆಳಕು.
ಕೆಲಸದ ಹೊಗಳಿಕೆ ಅವಳಿಗೆ ಬೇಡ, ಬೇಕಿರುವುದೊಂದು ಮುದ್ದಾದ ನಗು,
ಅವಳ ಚೆಂದವ ನೋಡಿ ತುಟಿಗಳರಳಿದರೆ ಸಾಕಷ್ಟೆ.
ಕಷ್ಟಗಳ ಕಂಡು, ನೀಡುವ ಮರುಕ ಅವಳಿಗೆ ಬೇಡ, ಬೇಕಿರುವುದೊಂದು ಅರಿವು,
ಅವಳಿಗಿರುವ ಕಷ್ಟಗಳ ಅರಿವು, ತಾ ಮೂಡಿಸಿದ ಬೆಳಕಿನಾ ಅರಿವು.

Thursday 22 March 2018

Accident happens accidentally; not necessarily!

ನನ್ನ ಮನದ ಯಾವುದೋ ಮೂಲೆಗಿದು ಮೊದಲೆಯೇ ತಿಳಿದಿತ್ತೇ?
ಇದು ಹೀಗೆ ಆಗಲಿದೆ, ಇಲ್ಲಿಯೇ ಬಂದು ನಿಲ್ಲಲಿದೆಯೆಂದು?
ಸಂಶಯ. 
ಸೋಜಿಗದ ವಿಷಯವೆಂದರೆ ಇಂದು ನಡೆದ  ಘಟನೆಗಳ್ಳೆಲ್ಲ ಹಿಂದೆಂದೋ ನಡೆದ ಹಾಗನಿಸುತ್ತಿದೆ!!
ನಾ ಇದು ಮೊದಲೇ ಇದನ್ನೆಲ್ಲ ಮಾತನಾಡಿದಂತೆ. ಈ ಸ್ಥಳದಲ್ಲಿ ಇದ್ದಂತೆ, ಅವಳು ಅಂದು ಹಸಿರು ಸೀರೆಯನ್ನೆ ಉಟ್ಟಿದ್ದಳು ಅನಿಸುತಿದ್ದೆ?!!!
ಏನಿದು?
ಹೇಗಿದು?
ಸುಂದರವಾದ ಮೊದೆಲೇ ನಿರ್ಧರಿತ/ ಅಥವ ಆಕಸ್ಮಿಕ ಅಫಘಾತವಿರಬಹುದೇ?




Tuesday 20 March 2018

ಅತಿಶಯೋಕ್ತಿಯೇ?

ಅಂದೆಂದೋ ನಾನೋದಿದ ಪುಸ್ತಕ, ಇಂದು ಅವನ ಬಳಿಯಲ್ಲಿ; ನಾ ಸೋಕಿದ ಪುಟಗಳ್ಳೆವ ತನ್ನ ಬೇರುಳುಗಳಲ್ಲಿ ಸ್ಪರ್ಶಿಸುತ್ತ .
ನನ್ನ ಕಂಗಳು ಮುದ್ದಿಸಿದ್ದ ಅವಳ ಅದೇ ಅಕ್ಷರಗಳು, ಇಂದು ಅವನ್ನನ್ನು ಮುದ್ದಿಸುತ್ತಿರುವವೇ?
ಕುತೂಹಲ ತಡೆಯಲಾರದೆ ಧಡಬಡ ಎಂದು ಒಂದೇ ಉಸಿರನಲ್ಲಿ ಓದಿ ಪಟಪಟನೆ ತಿರುವಿ ಹಾಕಿದ ನನ್ನ ಪುಟ್ಟಕ್ಕನ ಪುಟಗಳು, ಇಂದು ಅದೇ ಗದ್ದಲ್ಲವಾ ಮಾಡಿರುವುದೇ?
ಕೆಲವೊಮ್ಮೆ ಓದುವುದ ನಿಲ್ಲಿಸಿ ಘಾಡ ಯೋಚನೆಗೆ ನನ್ನನ್ನು ಕರೆದೊಯ್ದ ಕಥೆಯ ಸನ್ನಿವೇಶಗಳಿಂದೂಕೂಡಾ ನಿಶಬ್ದದಿ ಅವನ್ನನು ದಿಟ್ಟಿಸಿಹುದೇ?
ಹುಚ್ಚಿಯಂತೆ ಕಿಲಕಿಲನೆ ನನ್ನ ನಗಿಸಿದ ಆ ಮೋಹಕ ಮಾಯೆ, ಅವನ ಕೆನ್ನೆಯಲ್ಲಿ ಸಣ್ಣದೊಂದು ಗುಳಿಯನ್ನಾರು ಬೀಳಿಸಿರಬಹುದೇ?
ತನ್ನ ಕಥೆಯ ಹೇಳುತಿಹ ಅವಳು, ಜೊತೆಯಲ್ಲಿ ನನ್ನ ಕಥೆಯನ್ನ ಅವನಿಗೆ ಹೇಳಿರುವಳೇ? ನನ್ನ ನೆನಪ ತರಿಸಿರುವಳೇ?  ಕಡೇಪಕ್ಷ ನನ್ನ ಉಸಿರ ಗಾಳಿಯ ಬಚ್ಚಿಟ್ಟುಕೊಂಡು ನನ್ನದೆಯ ಮೇಲೆಯೇ ಮಗುವಂತೆ ಬೆಚ್ಚನೆ ಮಲಗಿದ್ದ ಅವಳು ನನ್ನ ಪರಿಮಳ ಪಸರಿಸಿರುವಳೇ?
.......
.......
.......
.......



Friday 9 March 2018

Stars in the sky

ಆಕಾಶದಲ್ಲಿ ಮಿಂಚಿ ಹೊಳೆವ ನಕ್ಷತ್ರ,
ಸುತ್ತುತ್ತಿರುವ ಭೂಮಿಯಮೇಲಿರು ನಾವುಗಳು,
ಯಾವುದು ಇದ್ದಂತೆ ಇರಲಾರದು.
ಎಷ್ಟೇ ಬದಲಾದರು, ಆ ಬದಲಾವಣೆಯೇ ಚೆಂದ.
ನಕ್ಷತ್ರದ ಹೊಳಪು ಬದಲಾಗಬಹುದು,
ನಾವು ನೋಡುವ ಕೋನಕೂಡ!
ಬದಲಾವಣೆ ಅನಿವಾರ್ಯ.
ಹೊಸತನವನ್ನು ಒಪ್ಪಿಕೊಂಡು ಅಪ್ಪಿಕೊಂಡರೆ ಎಲ್ಲವೂ ಚೆಂದವೆ.

Thursday 8 March 2018

ಕೆಂಪು ಬಿಳಿ

The way his eyes undressed me,
I left with no other options than hugging his lips.

ಕನಸು

ಹೇಳುವುದಾದದರು ಹೇಗೆ ,
ಬೆಳಗಿನಜಾವದ ಆ ಕನಸ,
ನಾ, ಹೇಳುವುದಾದದರು ಹೇಗೆ?
ಆದರೂ ಹೇಳುವಾಸೆ; ಅವನಿಗೆ.
ಪದಗಲ್ಲಿ ತುಂಬುವುದಾದರೂ ಹೇಗೆ, 
ಮುಂಜಾವು ಮಬ್ಬಿನಲ್ಲಿ ಕಂಡ ಆ ಕತ್ತಲೆಯ ಬೆಳಕ ಬಣ್ಣವ?
ನಾಚಿಕೆಯ ಆ ಕೂಸು ಹೇಳುವುದೆಲ್ಲ ತೊದಲ ಮಾತು, ಅರೆಸತ್ಯ.
ತನ್ನಲ್ಲೇ ಬಚ್ಚಿಟ್ಟಕೊಳ್ಳುತ್ತಾ ಒಂದಷ್ಟು ಬಣ್ಣ.  
ಇಷ್ಟೆಲ್ಲ ಕಷ್ಟವೇಕೆ?
ಕೊಂಡೊಯ್ಯಲೇ ಅವನನ್ನೇ ನನ್ನ ಕನಸಿನೊಳಗೆ? ಅನಿಸ್ಸಿತ್ತು!!
ಅರೇ, ಆದರೆ ಅವನ ವಾಸವೇ ನನ್ನ ಕನಸಿನ್ನಲ್ಲಾಲವೇ??

Magician

ಅವನಂದು ಕಲ್ಪನೆ,
ಅವನೊಂದು ಜಾದು,
ಈವನ್ ದಿ ನಾನ್ಸೆನ್ಸ್ ಮೇಕ್ಸ್ ಸೆನ್ಸ್ ವೆನ್ ಹೀ ಟಾಕ್ಸ್,
ಅವ ಜಾದೂಗಾರ. 

Wednesday 7 March 2018

Walk

Walk, walk
until you get tired.
Tired? take rest and
start walking again.
This is the best way to live.

Tuesday 6 March 2018

ಅಚ್ಛರಿ


ಆಕೆಯ ಕಣ್ಣು,
ಆ ಮೂಗು,
ಆಕೆಯ ಮೈ ಬಣ್ಣ,
ಆ ನಗೆ,
ತುಟಿಯ ಮೇಲಿನ ಸಣ್ಣದೊಂದು ಮಚ್ಚೆ,
ಕೆನ್ನೆಯ ಗುಳಿ,
ಕಾಣದ ಯಾವೊದೋ ಲೋಕದಲ್ಲಿ ಜಾರಿಹೋದಂತೆ,
ಸಂಗೀತದ ಸ್ವರತರಂಗಗಳಂತೆ,
ಐಸ್ಕ್ರೀಂ ಮೇಲಣ ನುಣುಪಾದ ಚಾಕೊಲೇಟ್ ಪದರದಂತೆ,
ಪದಗಳಿಗೆ ನಿಲುಕದ ಅದ್ಭುತ,
ತನ್ನೊಳಗೆ ತಾನೊಂದು ಅದ್ಭುತ.


Tuesday 27 February 2018

Try again

ಇದು ನೀನು,
ನಿನ್ನ ನಾ ಬಿಟ್ಟುಕೊಡಲಾರೆ.
ಬಿಟ್ಟುಕೊಡಲಾರೆ, ಹಾಗಂತ ಕಟ್ಟಿಡಲಾರೆ, ಬಚ್ಚಿಡಲಾರೆ.
ನಿನ್ನೊಂದಿಗಿರ ಬಯಸಿ ಪಡುವ
ಪ್ರತಿಭಾರಿಯಾ ಪ್ರಯತ್ನವೆಲ್ಲಾ ವ್ಯರ್ಥವಾಗುವುದು. ನೋವ ನೀಡುವುದು.
ನನ್ನಂತೆಯೇ ನೀನು ಚಡಪಡಿಸುವೆಯ? ಗೊತ್ತಿಲ್ಲ.
ಅಥವಾ ನಾನು, ನೀನು ಚಡಪಡಿಸಲು ಅವಕಾಶವೇ ನೀಡಿಲ್ಲವೇ? ಗೊತ್ತಿಲ್ಲ.
ನೀನೇಕೆ ಪ್ರತಿಬಾರಿಯೂ ಸೋಲಬೇಕು? ಸ್ವಾಭಿಮಾನವಿಲ್ಲವೇ ನಿನಗೆ?
ಕೇಳಿದಳು ನನ್ನ, ನನ್ನ ಗೆಳತಿ.
ಏನ್ನೆನುವುದು ಅವಳಿಗೆ? ಏನ್ನೆನುವುದು? 
ಅರಿಯದೆ ಸಣ್ಣದಾಗಿ ಅತ್ತಿದೆ.
ಮತ್ತದೇ ಪ್ರಶ್ನೆ, ನೀನೇಕೆ ಅಳಬೇಕು? ನಿನಗೇಕೆ ಈ ಬೇನೆ?
ನನ್ನ ಬಳಿ ಇದಕ್ಕೂ ಉತ್ತರವಿಲ್ಲ. ಕೇವಲ ನಾ ಬಲ್ಲೆ,
ನನ್ನ ಅಳುವೆಲ್ಲ ನನ್ನ ನಗುವಿಗಾಗಿಯೆ.
ಮನಸಾರೆ ಎಷ್ಟು ಅತ್ತಿರುವೆನು ಅಷ್ಟೇ ನಕ್ಕಿರು.
ನಿನಗಾಗಿ ಸಾವಿರ ಸೋಲು ಸರಿಯೇ,
ಸಾವಿರ ನೋವು ಸರಿಯೇ,
ಸಾವಿರ ಅವಮಾನವೂ ಸರಿಯೇ.
ಇದು ನೀನು,
ನಿನ್ನ ನಾ ಬಿಟ್ಟುಕೊಡಲಾರೆ.

Wednesday 21 February 2018

Courage

It takes courage to hold it or to let it go.
Both of them requires a huge strength
and high willpower.

Tuesday 20 February 2018

ತುಂತುರು

ಪಿರಿ ಪಿರಿ ಮಳೆ,
ಒಮ್ಮೊಮೆ ಮೋಡದ ಮರೆಯಿಂದ ನಿಲ್ಕಿ ನೋಡುವ ಸೂರ್ಯ,
ಕಾಮನಬಿಲ್ಲು,
ದಿನ ಪೂರ್ತಿ ಮಳೆ,
ರಾತ್ರಿ ಪೂರ್ತಿ ಮಳೆ,
ಮಳೆ, ಮಳೆ, ತುಂತುರು ಮಳೆ,
ಜಡಿ ಮಳೆ,
ಜಿಗಣೆ, ಕಂಬಳಿ ಹುಳುಗಳು,
ಮಹಿಂದ್ರಾ ಜೀಪು,
ಮಣ್ಣು ಮೆತ್ತಿಕೊಂಡ ಕಾಲುಗಳು,
ಮೈಗಂಟಿದ ಕೆಸರು,
ಒದ್ದೆಯಾದ ಕೂದಲು; ಬಟ್ಟೆ!, ಮೈಗಂಟಿ ಕಿರಿಕಿರಿ.
ಒಂದೊಳ್ಳೆ ಬಿಸಿ ಬಿಸಿ ಕೆ.ಟಿ.
ಬಿಸಿ ಬಿಸಿ ಓಲೆ ಹಂಡೆ ನೀರಿನ ಮೀಯಾಣ.
ಕೆಂಪಕ್ಕಿ ಗಂಜಿ, ಜೊತೆಯಲ್ಲಿ ಕೆಂಪು ಕಾಯಿ ಚಟ್ನಿ, ತುಪ್ಪ, ಉಪ್ಪು!
ಆ ಚಳಿ ಚಳಿ ರಾತ್ರಿ, ಬೆಚ್ಚನೆಯೆ ಕಂಬಳಿ!
ಟೂಯ್ಯ್ ಯೆಂದು ಪದವಾಡುವ ನುಸಿ,
ಅದ ಓಡಿಸಲು ಅಡಿಕೆ ಸಿಪ್ಪೆಯ ಅಗುಷ್ಟೇ
ಕತ್ತಲೆ ಕೊಣೆ.
ಅಜ್ಜಿಯ ಕಥೆಗಳು. 
ಒಳ್ಳೆಯ ನಿದ್ದೆ.
ಶಾಂತಿ, ನೆಮ್ಮದಿ, ಖುಷಿ.




ಏಕಿಷ್ಟು ಚೆಂದ?

ಪ್ರತಿದಿನ ನಾ ನಡೆದು ಬರುವ ಹಾದಿಯ ಅಂಚಿನಲ್ಲಿರು, ಅಷ್ಟುದ್ದ ಬೆಳೆದುನಿಂತು ಬಾನ ಚುಂಬಿಸುತ್ತಿರುವ ಈ ಮರಗಳೇಕೆ, ಇಷ್ಟು ಚೆಂದ? ಈ ನೀಲಿ ನೀಲಿ ಬಾನೇಕೆ, ಇಷ್ಟು ಚೆಂದ? ನೀಲಿ ಬಾನಲಿ ಹತ್ತಿಯಂತೆ ಮೆದ್ದುಕೊಂಡಿರುವ ಈ ಮೋಡಗಳೇಕೆ,
ಇಷ್ಟು ಚೆಂದ? ಈ ಮೋಡಗಳ ಅಂಚಿನಿಂದ ಕದ್ದು ಮುಚ್ಚಿ ಆಟವಾಡುವ ಈ ಸೂರ್ಯನೇಕೆ, ಇಷ್ಟು ಚೆಂದ? ಸೂರ್ಯನ ಕಂಡು ಮುದ್ದಾಗಿ ಅರಳುವ ಈ ತಾವರೆ ಹೂವೇಕೆ, ಇಷ್ಟು ಚೆಂದ? ಬಣ್ಣ ಬಣ್ಣದಾ ಹೂಗಳು, ಮುದ್ದು ಮುದ್ದು ಮಗುವಂತೆ ನಗುತ್ತಾ,
ಆಕರ್ಶಿ ಮನಕೆ ಮುದ ನೀಡುವುದು.  ಎಲ್ಲಿಂದಲೋ ಕಡೆ ಇಲ್ಲದ ಕೊಡಿ ಇಲ್ಲದ ತಂಗಾಳಿ ಕೆನ್ನೆ ಸೋಕಿ, ಕಿವಿಯಲ್ಲೊಂದು ಗುಟ್ಟನೇಳಿ ಹೂಗುವುದೇಕೆ? ಅಬ್ಬಾ!!! ನಾನಿರುವ ಈ ಭೂಮಿ ಏಕಿಷ್ಟು ಚೆಂದ? ಚಿಗುರಿದ ಎಳೆಗಳು, ಬಾಡಿ ಮುದುಡಿ ವಣಗಿ ಬಿದ್ದ ಎಳೆಗಳು,  ಹೂಗಳು, ಹಣ್ಣುಗಳು, ಹಾರಾಡುತ ಹಾಡುವ ಹಕ್ಕಿಗಳು, ತಣ್ಣಗೆ ಬೀಸುವ ಗಾಳಿ,  ಹರಿವ ನದಿ, ನಿಂತ ನೀರು, ಸಾಗರದ ಅಲೆಗಳು, ಬೆಟ್ಟ ಗುಡ್ಡಗಳು, ಜಡಿಗಟ್ಟಿ ಸುರಿವ ಮಳೆನೀರು, ಸೋರುವ ಸೂರು, ಅಜ್ಜಿ ಇದ್ದ ಹಳೆಯ ಮಣ್ಣಿನ ಮನೆಯ ನೆನಪು, ನನ್ನಜ್ಜ, ನನ್ನಪ್ಪ, ಅಬ್ಬಾ! ಎಲ್ಲವೂ ಏಕಿಷ್ಟು ಚೆಂದ?  ಗರಿಬಿಚ್ಚಿ ನಲಿವ ನವಿಲು, ಆ ಗರಿಗಳಾ ಬಣ್ಣ, ಕೋಗಿಲೆಯ ಕುಹು ಕುಹೂ ಗಾನಾ, ಸಪ್ತ ಸ್ವರ, ಆ ಹಂಸ, ಅಯ್ಯೋ ಅಜ್ಜನ ಮನೆಯ ಆ ಕುರುಗಳು, ಕಯ್ಯೊಡ್ಡಿದರೆ ದೊರಗು ನಾಲಿಗೆಯಿಂದ ಮುದ್ದಿಸುವ ಚೆಂದ! ಅದು ಕೊಡುವ ಹಾಲು. ಸಕ್ಕರೆಯ ಪಾಕ. ಜೇನಿನ ಜಲ್ಲೆ. ಅಜ್ಜಿಯ ಕೋಣೆ ಕಿಟಕಿಯಿಂದ ಬರುವ ಬೆಳಕು, ನನ್ನ ಕೈಯ್ಯಿ ನೇವರಿಸುತ್ತಾ ಅವಳಾಡುತ್ತಿದ್ದ ಆ ಹಾಡುಗಳು, ಅವಳ ಪ್ರೀತಿಭರಿತ ನೋಟ, ಹಾನ್ !! ಕಾಡಮಧ್ಯವಿರುವ ಮನೆ, ಜೀರಿಂಬೆಯ ಶಬ್ಧ. ಕಾಡುವ ನಕ್ಷತ್ರ ಲೋಕ, ಅವಗಳ ಮಧ್ಯದಿ ನಗುವ ಚೆಂದಿರ.  ದೇವರೇ, ಎಲ್ಲವೂ ಏಕಿಷ್ಟು ಚೆಂದ?..... ಏಕಿಷ್ಟು ಚೆಂದ?


Monday 19 February 2018

Thursday 15 February 2018

I crave

೧೪-೦೨-೨೦೧೮

ಭಾಗ-೧:

ಕೈಯ್ಯಲ್ಲಿ ಮೊಬೈಲ್ ಫೋನ್ ಹಿಡಿದು, ಹಾಗೆ ಕುಳಿತುಕೊಂಡು ಸುಮ್ಮನೆ ಫೇಸ್ಬುಕ್, ವಾಟ್ಸಪ್ಪ್ ಅನ್ನು ನೋಡುತಿದ್ದೆ. ಎಲ್ಲೆಡೆ   ಪ್ರೇಮಿಗಳ ದಿನಾಚರಣೆಯ ಪೋಸ್ಟ್ಗಳೆ. ತಮ್ಮ ತಮ್ಮ ಹಿಂಡತಿ, ಗಂಡ, ಮಕ್ಕಳು, ಗರ್ಲ್ ಫ್ರೆಂಡ್, ಬಾಯ್ ಫ್ರೆಂಡ್, ಅಪ್ಪ, ಅಮ್ಮ ಹೀಗೆ.
******

ಪದೇ ಪದೇ ಇಂತಹುದನ್ನೇ ನೋಡುತಿದ್ದರೆ ನಮ್ಮ ಮೆದುಳು ಅದಕ್ಕನುಗುಣವಾಗಿ ವರ್ತಿಸಲಾರಂಭಿಸುತ್ತದೆ. ಸೈಸ್ಕೋಲೊಜಿಕಲಿ ಇದನ್ನು "ಮೇರೆ ಇಕ್ಸ್ಪೋಜರ್" ಎಂದು ಕರೆಯುತ್ತಾರೆ.

ಉದಾಹರಣೆಗೆ,ಟಿವಿಯಲ್ಲಿ ಬರುವ ಜಾಹಿರಾತುಗಳು, ರಸ್ತೆ ಬದಿಯಲ್ಲಿ ಕಂಡುಬರುವ ಜಾಹಿರಾತುಗಳ ಬ್ಯಾನೆರ್ಗಳನ್ನೂ ಪದೇ ಪದೇ ನೋಡುವುದರಿಂದ ನಮ್ಮಲ್ಲಿ ಅದರ ಮೇಲಿನ ಕುತೂಹಲ ಹೆಚ್ಚುತ್ತದೆ, ಅಥವಾ ಅವುಗಳ್ಳನ್ನು ಕೊಂಡು ಬಳಸುವ ಮನಸಾಗುತ್ತದೆ, ಇದನ್ನೇ "ಮೇರೆ ಇಕ್ಸ್ಪೋಜರ್" ಎಂದು ಕರೆಯುವುದು. ೧೦೦ರಲ್ಲಿ ೯೦ರಷ್ಟು ಪ್ರೀತಿ ಪ್ರೇಮದ ಕಥೆಗಳಿಗೂ ಇದುವೇ ಕಾರಣ. ಒಬ್ಬ ವ್ಯಕ್ತಿಯನ್ನು ಪದೇ ಪದೇ ಭೇಟಿಯಾಗುವುದು, ಮಾತನಾಡುವುದರಿಂದ ಅವರಲ್ಲಿ ಆಸಕ್ತಿ ಮೂಡುತ್ತದೆ, ಕರ್ಮೇಣವಾಗಿ ಪ್ರೀತಿಯಾಗಿ ಬದಲಾಗುತ್ತದೆ. ಇಂತಹ ಭಾವನೆಗಳು ಹೆಚ್ಚು ಕಾಲ ಹಾಗೆಯೇ ಹಳಸದಂತೆ  ಉಳಿಯಬೇಕಾದರೆ, ಪ್ರೀತಿಯಂಬ ಸಂಭಂದದಲ್ಲಿ ಇಬ್ಬರ ನಡುವೆಯೂ ಭಾವೋದ್ರೇಕಥೆ ಇರಬೇಕು. ಇದಕ್ಕಾಗಿ ಹೊಸ ಹೊಸ ದಾರಿಯನ್ನು ಕಂಡುಕೊಳ್ಳ ಬೇಕು. ಒಬ್ಬರನೊಬ್ಬರು ಖುಷಿಯಾಗಿಡವ ಪ್ರಯತ್ನ ಎಂದಿಗೂ ನಿಲ್ಲಬಾರದು.ಈ ಪ್ರಯತ್ನದ ಹಾದಿ ನಮಗೂ ಸಂತೋಷಮಯವಾಗಿರುವಂತಹದಾಗಿರಬೇಕು.  ಪ್ರೀತಿಯಂಬ ಎರೆಡಕ್ಷರದ ಈ ಸೌಮ್ಯ ಸಸಿಯನ್ನು ಓಮ್ಮೆ ಗಟ್ಟಿಬೇರೂರುವರೆಗಷ್ಟೇ ಸರ್ಕಸ್. ನಂತರ ಒಬ್ಬರಮೇಲೊಬ್ಬರಿಗೆ ಪ್ರೀತಿ ಎಷ್ಟು ಗಾಢವಾಗುವುದೆಂದರೆ, ಅದು ಮಾಸಿ ಹೋಗುವಷ್ಟರಲ್ಲಿ ನಾವೇ ಮಾಸಿಹೋಗಿರುತ್ತೇವೋ ಏನೋ.
******

ಇದೆಲ್ಲವೂ ನನ್ನ ಕಲ್ಪನೆಗಳಿಗಷ್ಟೇ ಸೀಮಿತವಾಗಿದೆ.
******

ಭಾಗ-೨:

ನನಗೊಂದು ಕನಸು,
ನನಗೆ, ನಾನು ಹೇಗೆ ನನ್ನವರನ್ನು ಪ್ರೀತಿಸುತ್ತೇನೋ,ಹಾಗೆಯೇ ನನ್ನನು ಪ್ರೀತಿಸುವವರು ಬೇಕು.
ಡಿಟ್ಟೋ ಡಿಟ್ಟೋ.
ಆ ಪ್ರೀತಿ (ನಾನು ಪ್ರೀತಿಸುವಬಗೆಯ ಪ್ರೀತಿ) ಹೇಗಿರುವುದೆಂದು ನಾನೊಮ್ಮೆ ಅನುಭವಿಸಿ ನೋಡಬೇಕು. I wanna get loved by the way I love!! & wanna explore it.
******

ಹೀಗೆಲ್ಲ ಏನ್ ಏನೋ ಅನಿಸುವುದುಂಟು ಕೆಲವೊಮ್ಮೆ.
ಒಬ್ಬಳೆ ನಗುವುದುಂಟು ಕೆಲವೊಮ್ಮೆ.
ನಕ್ಕು ನಂತರ ಬೇಜಾರು ಮಾಡಿಕೊಳ್ಳುವುದುಂಟು ಕೆಲವೊಮ್ಮೆ.
******

I crave, I crave for my part of love.
******

ತಿಗಣೆ

ಅಪ್ಪ ಯಾವಾಗ್ಲೂ ಹೇಳ್ತಾರೆ. ಒಳ್ಳೆಯ ಊಟ, ಒಳ್ಳೆಯ ಜೀವನ ಸಂಗಾತಿ, ಒಳ್ಳೆಯ ಸ್ನೇಹಿತರು, ಒಳ್ಳೆಯ ಗುರುಗಳು, ಒಳ್ಳೆಯ ಜೊತೆಗಾರರು (ಕೆಲಸ ಮಾಡುವ ಸ್ಥಳದಲ್ಲಾಗಲಿ, ಅಕ್ಕಪಕ್ಕದ ಮನೆಯವರಾಗಲಿ, ಹೀಗೆ .. ), ........  ಸಿಗಲು ಪುಣ್ಯ ಮಾಡಿರಬೇಕು ಅಂತ. ಹೌದು ಅಂತ ಅನಿಸುತ್ತಿದೆ, ನಿಮಗೆ ತೊಂದರೆ ಕೊಡುವುದೇ ನನಗೆ ಸುಖ ಅನ್ನುವಹಾಗೆ ನಡೆದುಕೊಳ್ಳುವ, ಒಂದೇ ರೂಮ್ನಲ್ಲಿರುವ ರೂಮಿಯನ್ನು ಸಹಿಸಿಕೊಂಡು ಸಹಿಸಿಕೊಂಡು, ಸಹನಶಕ್ತಿಯ ಕಟ್ಟೆಯೊಡೆದು ಅತಿಯಾದ ಕೋಪವೊಂದು ಬರುತಿದೆ, ಕೋಪಕ್ಕಿಂತಲೂ ಹೆಚ್ಚು ನೋವಾಗುತ್ತಿದೆ. ಹಾಗಂತ ಚೆಂಡಿಯಂತೆ ಅವಳ ಮೇಲೆ ಎಗರಾಡಿ ಕಿರುಚಾಡಿ ರಚ್ಚೆ ಮಾಡಲು ನನಗೆ ಸಾಧ್ಯವಿಲ್ಲ. ಬೇಕಿದ್ರೆ ನಾಲ್ಕು ಪೆಟ್ಟೇ ಕೊಡೋದು. ದಂಡಂ ದಶಗುಣಮ. ಹಾಹಾ.

ನನಗನಿಸುತ್ತದೆ,
ನನ್ನ ಪಾಲಿನ ಪುಣ್ಯವೆಲ್ಲಾ ಒಳ್ಳೆಯ ಅಪ್ಪ ಅಮ್ಮನ ಪಡೆಯುವುದರಲ್ಲಿಯೇ ಖರ್ಚಾಗಿ ಹೋಗಿರಬೇಕು. ಒಳ್ಳೆಯ ರೂಮಿ ಪಡೆಯಲು ಏನು ಉಳಿದಿಲ್ಲವೆಂದೆನಿಸುತ್ತದೆ. ಆಫ್ಟರ್ ಆಲ್ ಅತ್ಯಮೂಲ್ಯವಾದದ್ದು ನನ್ನ ಬಳಿಇರುವಾಗ ಎಲ್ಲಾ ಪುಣ್ಯವು ಅದರಲ್ಲಿಯೇ ಖರ್ಚಾಗಳೇ ಬೇಕಿತ್ತು. 

Sunday 11 February 2018

Pervert

ಸಂಗಾತಿಯೊಡನೆ ಲೈಂಗಿಕ ಆಕರ್ಷಣೆ ಬಲುಮುಖ್ಯ. ಇದು ಜೀವಸಂಕುಲನಾಭಿವೃದ್ದಿಗೆ ಎಲ್ಲಾ ಜೀವಿಗಳಲ್ಲಿಯೂ ಕಂಡು ಬರುವ ಸಾಮಾನ್ಯ ಪ್ರಕ್ರಿಯೆ. ಮನುಷ್ಯ ಬುದ್ದಿಜೀವಿ. ತನ್ನದೆಯಾದ ಸುಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದಾನೆ. ಆಚಾರವಂತ ವಿಚಾರವಂತ. ಮನುಷ್ಯನು ಈ ಕಾರಣದಿಂದಲೇ ಬೇರೆಲ್ಲಾ ಜೀವಿಗಳಿಂತ ಉತ್ಕ್ರಷ್ಟ ಮಟ್ಟದಲ್ಲಿರುವುದು. ಮಾನವನನ್ನು ಮಾನವನಾಗಿಸುವುದು ಅವನ ಈ  ಮಾನವೀಯತೆ ಹಾಗು ಅವನ ವಿಚಾರವಂತಿಕೆಯೇ. ಹೀಗಿರುವಾಗ ಕೆಲವರೇಕೆ ಮನುಷ್ಯರಾಗಿ ಮನುಷ್ಯರನ್ನು ಇಷ್ಟುಕಟುವಾಗಿ,ಕೆಟ್ಟದಾಗಿ ನಡಿಸಿಕೊಳ್ಳುತ್ತಾರೆ? ಈ ದುಷ್ಟ ಮನಃಸ್ಥಿತಿ ಇರುವ ಮನುಷ್ಯರನ್ನು ಏನೆಂದು ಕರೆಯಬೇಕು? ಅವರನ್ನು ಹೇಗೆ ನಡಿಸಿಕೊಳ್ಳಬೇಕು? ಅವರೊಂದಿಗೆ ಹೇಗೆ ನಡೆದುಕೊಳ್ಳಬೇಕು?

:( :( :( 

Saturday 10 February 2018

He

The best part,
I never get bored when he is around.
Whether he is talking to me, 
or just staring at me,
or busy doing his office works,
or sleep off. 
Whatever he does,
He is the best for me,
Coz I never get bored when he is around.

Friday 9 February 2018

ನಾನೇಕೆ ಹೀಗೆ?... ಎಲ್ಲರಂತೆಯೇ.

ನಾನೇಕೆ ಹೀಗೆ?
ಬಹಳವಾಗಿ ಕಾಡುತಿದೆ ಈ ಪ್ರೆಶ್ನೆ.
ಯಾವಾಗಲು ಕಾಡುವ ಹಳೆಯ ಪ್ರಶ್ನೆಯಾದರು ನಿನ್ನೆಯಿಂದ ಬೆಂಬಿಡದ ಬೇತಾಳನಂತೆ ಹೆಗಲೇರಿದೆ.....
ಕಾರಣ:
ಹಂಪಿ ಸುತ್ತಲು ಹೋದ ತಿರ್ಗಾಡಿ ಸ್ನೇಹಿತನೊಬ್ಬ ವಿಜಯನಗರ ಮಹಾಸಂಭ್ರಾಜ್ಯದ ವೈಭವವನ್ನು ತನಗೆ ಸಾಧ್ಯವಾದಷ್ಟರಮಟ್ಟಿಗೆ, ತನ್ನ ಉದ್ದ ಉದ್ದ ಬೆರೆಳುಗಳಿರುವ ಪುಟ್ಟ ಕೈಯಲ್ಲಿ ಹೊತ್ತುತಂದು, ಜಂಭದಿಂದ ಪ್ರದರ್ಶಿಸುತ್ತ ನಮಗೆಲ್ಲ ಖುಷಿ ನೀಡುತಿದ್ದ, ಜೊತೆಯಲೊಂದಿಷ್ಟು ಸುಂದರ ಅಸೂಯೆ. ಅವನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡುತ್ತಿದ್ದ ಒಂದೊಂದು ಚಿತ್ರಪಟಗಳು ಮುತ್ತಿನಂತಹುಗಳು. ಅಬ್ಬಾ! ಆ ಸ್ಮಶಾನ ಮೌನದಿ ನಿಂತಿರುವ ಒಂದೊಂದು ಕಲ್ಲುಗಳು ಇಂದಿಗೂ ಜೀವಂತ. ಅದಾವುದೋ ಅಗಾಧ ಶಕ್ತಿಯೊಂದು ತನ್ನ ಬಳಿ ಬರುವಂತೆ ಕೂಗಿ ಸೆಳೆದಂತೆ. ಈ ಸೆಳೆತದ ಹಿಡಿತ ಬಲು ಗಟ್ಟಿ. ಮಾತನಾಡುತ್ತ ಹೋದರೆ ತಡೆದು ನಿಲ್ಲಿಸಲು ಕಷ್ಟ. ಸಧ್ಯಕ್ಕೀಗ ನನ್ನ ಗೊಂದಲದ ಬಗ್ಗೆ ಹೇಳಬೇಕಿರುವುದರಿಂದ ಇದನ್ನು ಇಲ್ಲಿಯೇ ನಿಲ್ಲಿಸೋಣ.
ಹಾನ್, ನನ್ನ ಪ್ರೆಶ್ನೆ, ನಾನೇಕೆ ಹೀಗೆ?
ಹೀಗೆ? ಹೀಗೆ ಹೇಳಿದರೆ ಹೇಗೆ?
ಎ ನಾರ್ಮಲ್ ಹ್ಯೂಮನ್?
....
ನಿನ್ನೆ ಅವನು ಇನ್ಸ್ಟಾಗ್ರಾಮ್ ಅಲ್ಲಿ ಕಮಲ ಮಹಲ್ ಫೋಟೋವನ್ನು ಅಪ್ಲೋಡ್ ಮಾಡಿದ್ದ. ಆ ಬೆರಗುಗೊಳಿಸುವ ಸೌಂಧರ್ಯವನ್ನು ಕಂಡಕೂಡಲೆ ನಾ ಉದ್ಗರಿಸಿದ ಪದವೊಂದೇ "ಮ್ಯಾಗ್ನಿಫಿಸೆಂಟ್".. ಸ್ವಲ್ಪ ಸಮಯ ಕಳೆದು ಅದೇ ಫೋಟೋವನ್ನು ಫೇಸ್ಬುಕ್ ನಲ್ಲಿ ನೋಡಿದೆ, ಅಲ್ಲಿ ಮೊದಲೇ ಯಾರೋ ಒಬ್ಬರು "ಮ್ಯಾಗ್ನಿಫಿಸೆಂಟ್" ಎಂದು ಕಾಮೆಂಟ್ ಮಾಡಿದ್ದರು.
ಒಂತರಾ ಸಂಕಟವಾಯಿತು.
ಕೆಲವು ದಿನಗಳ ಹಿಂದೆಯಷ್ಟೇ ಯಾವುದೊ ವಿಷಯದಲ್ಲಿ, ನಾನು ಹಾಗು ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಒಂದೆ ರೀತಿಯ ವಾಕ್ಯ ಬಳಕೆ ಮಾಡಿದ್ದೆವು.!!!
ಅರೇ!!! ಯಾಕೀಗೆ?
ಒಂದು ವಿಷಯದ ಬಗ್ಗೆ ಸಾದಾರಣವಾಗಿ ಎಲ್ಲರೂ ಅಪ್ರೋಚ್ ಮಾಡುವ ವಿಧಾನ ಆಲ್ಮೋಸ್ಟ್ ಒಂದೇ ರೀತಿಯದಾಗಿರುತ್ತದೆ. ಯಾಕೀಗೆ?
ಮೊದಲಿನಿಂದ ನಮ್ಮ DNAಯಲ್ಲಿ ಇದು ಹರಿದು ಬಂದಿದೆಯೇ? ಈ ಈ ವಿಷಯವನ್ನು ಹೀಗೀಗೆ ನೋಡಬೇಕು, ಹೀಗೆ ಅರ್ಥಯಿಸಿಕೊಳ್ಳಬೇಕು, ಹೀಗೆ ಪ್ರತಿಕ್ರಿಯಸಬೇಕೆಂದು??
ನೋ. ನನಗದು ಸ್ವಲ್ಪವೂ ಇಷ್ಟವಾಗುತ್ತಿಲ್ಲ.
ನನಗೆ ಬರಿದಾಗುವಾಸೆ.
ಎಲ್ಲಾ ಸಾಮಾನ್ಯ ಯೋಚನೆಗಳಿಂದ ಮುಕ್ತವಾಗುವಾಸೆ.
ಖಾಲಿಯಾಗುವಾಸೆ.
ಪೂರ್ಣವಾಗಿ ಖಾಲಿಯಾಗಿ ಎಲ್ಲವನ್ನು ಹೊಸತಾಗಿ ನೋಡುವಾಸೆ.!!
ನೋಡಿ ಕಲಿಯುವಾಸೆ. ಮಾಡಿ ತಿಳಿಯುವಾಸೆ.!
ನನಗೆ ನಾನಾಗುವಾಸೆ.
ಹುಚ್ಚುತನದ ಪರಮಾವಧಿಯ ತಲುಪುವಾಸೆ.
ಸಾಮಾನ್ಯರಲ್ಲಿ ಸಾಮಾನ್ಯವಾಗುವಾಸೆ.
(ಎಕ್ಸ್ಟ್ರಾ ನಾರ್ಮಲ್ ಇನ್ ಬಿಟ್ವೀನ್ ದಿ ನಾರ್ಮಲ್ ಹ್ಯೂಮನ್ಸ್ )
ಆದರೆ ನಾನೇಕೆ ಹೀಗೆ?
ಎಲ್ಲರಂತೆಯೇ.

Monday 5 February 2018

She

Soft,
yet
very Strong. 

Bus Yunhi

ಬರಿದಾಗಿರುವೆ ಬರಡಲ್ಲ. 

Ecuadorian hairless dog

ಏಕ್ವಡೋರ್ ಅಲ್ಲಿ ಕಂಡು ಬರುವ ಹೇರ್ಲೆಸ್ಸ್ಸ್ ಡಾಗ್ ಬಗ್ಗೆ ಓದ್ತಾಇದ್ದೆ. ಅಚಾನಕ್ ಆಗಿ ಇಂಗ್ಲಿಷ್ ಫ್ಯಾಂಟಸಿ ಮೂವೀಸ್, ಫಿಕ್ಷನ್ಸ್ ಹಾಗು ಧಾರವಾಹಿಗಳಲ್ಲಿ ಬರುವ ವಿಚಿತ್ರ ವೈಲ್ಡ್ ಪ್ರಾಣಿಗಳೆಲ್ಲಾ ನೆನಪಿಗೆ ಬಂತು. (Ecuadorian hairless is cute. ಅದಕ್ಕೂ ನಾನಿಲ್ಲಿ ಹೇಳುತ್ತಿರುವುದಕ್ಕೂ ಸಂಭಂದವಿಲ್ಲ) ನಮ್ಮ ಹಿಂದೂ ಮೈಥಾಲಜಿ ಒಳಗು ಅಂತ ದುಷ್ಟ ಪ್ರಾಣಿಗಳ ಉಲ್ಲೇಖವಿರಬಹುದೇನೋ ಅನ್ನಿಸಿ ಅಪ್ಪನ ಹತ್ತಿರ ಕೇಳಿದೆ,
"ಅಪ್ಪಾ, ನಮ್ಮ ಮೈಥಾಲಜಿಯಲ್ಲಿ ಯಾವುದಾದರು ದುಷ್ಟ ಪ್ರಾಣಿಗಳ ಉಲ್ಲೇಖವಿದೆಯೇ? ಓದಿದ್ದಿರೆ"
ಒಂದು ಕ್ಷಣವೂ ಯೋಚಿಸದೆ ಪಟ್ಟ್ ಎಂದು ಉತ್ತರಿಸಿದರು.
"ಮನುಷ್ಯನಷ್ಟು ಉಘ್ರ, ದುಷ್ಟ, ಕ್ರೂರ ಪ್ರಾಣಿ ಮತ್ತೊಂದಿಲ್ಲ ಮಗಳೇ". 

ಅವಳು (ಅಭ್ಬಾ, ಪ್ರತಿ ತಿಂಗಳ ಆ ಮೂರು ದಿನಗಳು)

ಋತುಚಕ್ರ ನೈಸರ್ಗಿಕ ಪ್ರಕ್ರಿಯೆ. ಇದರಲ್ಲಿ ನಾಚಿಕ್ಕೊಳ್ಳುವಂತಹ ಯಾವುದೇ ಪ್ರಸಂಗವಿಲ್ಲ.
ಈ ಸಂದರ್ಭದಲ್ಲಿ ದೇಹದಲ್ಲಿಯಾಗುವ ಅತೀವವಾದ ಹಾರ್ಮೋನಲ್ ಏರಿಳಿತಗಳು, ಆಕೆಯ ಮಾನಸಿನ ಸ್ಥಿತಿಯನ್ನು ಸ್ವಲ್ಪ ಹೆಚ್ಚೇ ಸೂಕ್ಷ್ಮವನ್ನಾಗಿಸುತ್ತದೆ.  ಋತುಚಕ್ರದ ಸಂದರ್ಭದಲ್ಲಿ ೧೦೦ ರಲ್ಲಿ ಶೇಕಡಾವಾರು ೨೦ ರಷ್ಟು ಮಹಿಳೆಯರಿಗೆ ದೇಹದ ನಾನಾ ಭಾಗಗಲ್ಲಿ ಸೆಳೆತಗಳು ಹಾಗು ಅಸಾಧ್ಯ ನೋವುಗಳು ಕಂಡು ಬರುತ್ತದೆ. ಉಳಿದ ಕೆಲವರಿಗೆ ಸಾಮಾನ್ಯ ದಿನದಂತೆಯೆ ಇರುತ್ತದೆ. ಆಹಾರ ಶೈಲಿ, ಧೈನಂದಿನ ಚಟುವಟಿಗೆಗಳ್ಲಲಿ ವ್ಯತ್ಯಾಸ ಅಥವಾ ಭಾವನಾತ್ಮಕ ಒತ್ತಡಗಳು, ಹೀಗೆ ಹತ್ತು ಹಲವು ವಿಷಯಗಳು ಋತುಚಕ್ರ ಸೆಳೆತೆಗಳಿಗೆ ಬಹಳವಾಗಿಯೇ ಪರಿಣಾಮಗಳು ಬೀರುತ್ತವೆ. ಈ ನೋವುಗಳು ಅಷ್ಟಿಷ್ಟು ಸಾಮಾನ್ಯವಾದವಲ್ಲ ಸೀಳು ನಾಯಿ ಮಾಂಸಕಾಂಡಗಳ ಕಚ್ಚಿ ಎಳೆದಂತೆ ಕೆಳ ಹೊಟ್ಟೆಯ ಮಾಂಸವನ್ನು ಯಾರೋ ಜೋರಾಗಿ ಎಳೆದು ಕಿತ್ತು ತಿಂದಂತಾಗುತ್ತದೆ. 
ಒಂದಲ್ಲ ಒಂದು ಸಲವಾದರೂ ಹೆಣ್ಣಾಗಿ ಹುಟ್ಟಿದ ಜೀವವೊಂದು ಈ ರೀತಿಯಾದ ಬೇನೆಯನ್ನು ಅನುಭವಿಸಿಯೇ ಅನುಭವಿಸಿರುತ್ತಾಳೆ. ಇಂತಹ ಸಂದರ್ಭಗಳ್ಲಲಿ ಆಕೆಗೆ ಬೇಕಿರುವುದು ನೆಮ್ಮದಿ ಹಾಗು ಅವಳನ್ನು, ಅವಳ ಚಿತ್ತವನ್ನು (ಮೂಡ್) ಅರ್ಥಮಾಡಿಕೊಂಡು ಅನುಸರಿಸಿ ಕೊಂಡೋಗುವ ಸಂಗಾತಿ. 
ಅವಳಿಗಾಗಿ ಕರುಣೆ ಬೇಡ, ಪ್ರೀತಿಸಿ, ಸಹಜವಾಗಿ ನಡಿಸಿಕೊಳ್ಳಿ. ಆಫ್ಟರ್ ಆಲ್, ಇಟ್ಸ್ ನ್ಯಾಚುರಲ್. ನಥಿಂಗ್ ಇಸ್  ದೇರ್ ಟು ಬಿ ಅಷೇಮ್ಡ್ ಅಬೌಟ್.

Sunday 28 January 2018

ಸ್ವಲ್ಪ ದೊಡ್ಡ ಥ್ಯಾಂಕ್ಯು

ಮನುಷ್ಯನ ಬುದ್ಧಿಯೇ ಹಾಗೆ. ಎಷ್ಟೇ ತಿಳುವಳಿಕೆಯಿದ್ದರೂ, ತೋರಿಕೆಯ, ಹೊಗಳಿಕೆಯ ಗೊಡವೆಯಿಲ್ಲದಿದ್ದರು ಕೆಲವೊಮ್ಮೆ ಒಂದು ಸಣ್ಣ ಆಸೆ. (ನೋಟ್: ಇಲ್ಲಿ "ಎಷ್ಟೇ" ಎಂಬ ಪದವು ವೇರಿಯೇಬಲ್, ಹಾಗಾಗಿ ನಾನಿಲ್ಲಿ ನನ್ನ ತಿಳುವಳಿಕೆಯ ಬಗ್ಗೆ ಮಾತನಾಡುತ್ತಿಲ್ಲ) ತನ್ನ ಆಲೋಚನೆಯನ್ನು ಇನ್ನೊಬರಿಗೆ ತಿಳಿಸುವುದು, ತಿಳಿಸಿದನಂತರ ಚೆನ್ನಾಗಿದೆಯೆಂದು ಅವರಬಾಯಲ್ಲಿ ಕೇಳುವ ಬಯಕೆ. ಇದು ಕೇವಲ ಆಲೋಚನೆಗಳಿಗೆ ಸೀಮಿತವಲ್ಲ. ಖರೀದಿಸಿದ ಬಟ್ಟೆಯಾಗಲಿ, ಒಡವೆಯಾಗಲಿ, ನೋಡಿದ ಧಾರಾವಾಹಿಯಾಗಲಿ, ಹೀಗೆ ಹತ್ತು ಹಲವು ವಿಷಯಗಳಿಗನ್ವಯವಾಗುತ್ತದೆ.

ಹಾಗೆಯೆ ಮೊನ್ನೆಯೊಂದು ದಿನ ನನ್ನ ಬರವಣಿಗೆಯ ಬಗ್ಗೆ ವಯಸ್ಸಿನಲ್ಲಿ ಸ್ವಲ್ಪ ಹಿರಿಯರಾದ ನನ್ನ ಸ್ನೇಹಿತೆಯ ಬಳಿ ಮಾತನಾಡಿದ್ದೆ. ಅದನ್ನು ಮೆಚ್ಚಿ, ಚೆನ್ನಾಗಿದೆಯೆಂದು ಹೇಳಿ, ಸ್ವಲ್ಪ ದೊಡ್ಡ ಥ್ಯಾಂಕ್ಯೂ ಯೆಂದು ಹೇಳಿದರು. ಈ ಹೊಗಳಿಕೆಗೆ ನಾನು ಅರ್ಹಳೆ ಅಲ್ಲವೇ ಎಂದೆಲ್ಲಾ ಓವರ್ ಡವ್ ಮಾಡುವ ಮನಸಿಲ್ಲನನಗೆ, ಅವರ ಪ್ರತಿಕ್ರಿಯೆಯಿಂದ  ನನಗೆ ಸ್ವಲ್ಪ ಹೆಚ್ಚೇ ಖುಷಿಯಾಯ್ತು. ಹಾಗಾಗಿ ನನ್ನ ಕಡೆಯಿಂದಲೂ ಅವರಿಗೆ ಸ್ವಲ್ಪ ಹೆಚ್ಚೇ ದೊಡ್ಡ ಥ್ಯಾಂಕ್ಯು.

ನೀವು ನೀಡಿದ ಖುಷಿಗಾಗಿ. ಈ ಲೇಖನ ನಿಮಗಾಗಿ.

ಮಧು'ವ್ಯಾ'

ಮನೆಕಟ್ಟಿ ನೋಡು, ಒಂದು ಮದುವೆ ಮಾಡಿ ನೋಡು.
ಈ ಗಾಧೆಯ ಅರ್ಥ ಇತ್ತೀಚೆ ಅರ್ಥವಾಗಲು ಶುರುವಾಗಿದೆ. 
ನನಗೆ ಕನ್ವೆಂಷನಲಿ/ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗಬೇಕೇ ಎಂಬ ಪ್ರಶ್ನೆ? 

ದಿನ ಬೆಳೆಗಾದರೆ ಒಂದೇ ಮಾತು, ಹುಡುಗರ ಫೋಟೋ ತೋರಿಸುವ ಅಣ್ಣ ಅತ್ತಿಗೆ, ಮಗಳೇ ಇವನು ಇಷ್ಟ ಅದನೆ ಎಂದು ಕೇಳುವ ಅಪ್ಪ ಅಮ್ಮ. ಹೂ ಅಪ್ಪ ಇಷ್ಟ ಅಂತ ಅಥವಾ ಇಲ್ಲ ಅಪ್ಪ ಇಷ್ಟವಾಗಲಿಲ್ಲ ಎಂದು ಹೇಳುವುದಾದರೂ ಹೇಗೆ. ನೋಡದೆ ಮಾತಾಡದೆ, ತಿಳಿಯದೆ ಕೇವಲ ರೂಪ, ಕೆಲಸ ಹಾಗು ಮನೆತನ ನೋಡಿ ಏನಾದರು ಹೇಳಲು ಸಾಧ್ಯವೇ? ಎಂದು ನಾನು ಕೇಳಿದಾಗಲೆಲ್ಲ, ಅವರದ್ದು ಒಂದೇ ಪ್ರಶ್ನೆ, ಫೋಟೋ ನೋಡಿ ಮುಂದುವರಿಸಬಹುದೇ ಇಲ್ಲವೇ ಎಂದು ನೀನು ಹೇಳಿದರೆ ಸಾಕು ಅಂತ. ಅವರು ಸಾಮಾನ್ಯವಾಗಿ ತೋರಿಸುವ ಯಾರನ್ನು ಬೇಡ ಅನ್ನುವ ಹಾಗಂತೂ ಇರುವುದಿಲ್ಲ, ಆದರೂ ನನಗೆ ಉತ್ತರಿಸಲು ಹಿಂಸೆಯಾಗುವಂತಹ ಪ್ರಶ್ನೆಗಲ್ಲನು ಏಕೆ ಕೇಳುತ್ತಾರೆಂದು ಅರ್ಥವಾಗುವುದಿಲ್ಲ. ಅವರು ಮಾಡುತ್ತಿರುವುದು ತಪ್ಪೆಂದಲ್ಲ, ಆದರೆ ಅದು ನನಗೆ ಸರಿಬರುತ್ತಿಲ್ಲ.
ಹೂ ಸರಿ ಚೆನ್ನಾಗಿರುವ. ಮಾತು ಮುಂದುವರಿಸಬಹುದು ಎಂದು ಹೇಳಲು ಬಹಳ ಹಿಂಸೆ. ಅಳುವೇ ಬರುತ್ತದೆ. ಇಷ್ಟು ಸರಳ ವಾಕ್ಯವೇಳಲು ಯಾಕಿಷ್ಟು ಕಷ್ಟವೆಂದು ನನಗರಿಯದು. ನನ್ನಿಂದ ಮನೆಯವರಿಗೆಲ್ಲ ಕಷ್ಟವೆಂಬ ಅಪರಾಧಿ ಭಾವ ಬೇರೆ. ಇದೆಲ್ಲ ಒಂದು ಕಡೆಯಾದರೆ, ಮತ್ತೊಂದೆಡೆ ಯಾರನ್ನು ಭೇಟಿ ಮಾಡಿದರು, ಸೇಮ್ ರೊಟೀನ್ ಪ್ರಶ್ನೆಗಳು. ನಿಮಗೆ ಏನು ಇಷ್ಟ, ಯಾವ ಬಣ್ಣವಿಷ್ಟ, ನಿಮ್ಮ ಹುಡುಗನಲ್ಲಿ ಏನನ್ನು ಬಯಸುತ್ತೀರಿ, ಮದುವೆಗೆ ಸಿದ್ಧವಿರುವಿರಾ ಅಥವಾ ಮನೆಯವರ ಒತ್ತಡವೇ? ಪಿಹೆಚ್ಡಿ ಯಾವಾಗ ಮುಗಿಯುವುದು? ಮುಂದಿನ ಪ್ಲಾನ್ಸ್ ಏನು? ಅದೇ ರಾಗ, ಅದೇ ತಾಳ.

ದೇವರೇ, ಸಾಕಾಗಿದೆ ಬಹಳ ಸಾಕಾಗಿದೆ, ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಕೊಟ್ಟು, ಆ ಉತ್ತರದ ಮೇಲೆ ನನಗೆ ಸಂಶಯ ಶುರುವಾಗಿದೆ. ಹೌದೇ? ನನಗೆ ಹಸಿರು ಬಣ್ಣವಿಷ್ಟವೇ? ಹೌದ ನನಗದು ಬೇಕಾ, ಇದು ಬಯಸಿರುವೆನೇ? ಹೌದ ಅದು ಸರಿಯೇ, ಇದು ತಪ್ಪೇ? ಒಂದು ಅರಿವಿಗೆ ಸಿಗುತ್ತಿಲ್ಲ. ಈ ಪ್ರಶ್ನೆಗಲ್ಲನೆಲ್ಲ ಕೇಳದೆಯೇ, ಹಾಗೆಯೇ ನನ್ನನು ಅರ್ಥ ಮಾಡಿಕೊಳ್ಳುವವರು ಯಾರು ಇಲ್ಲವೇ? ಅಥವಾ ಅದು ಸಾಧ್ಯವೇ? ನನಗರಿಯದು. ಒಬ್ಬ ವ್ಯಕ್ತಿ ಏನೆಂದು ಸಂಪೂರ್ಣವಾಗಿ ಯಾರಿಗೂ ಅರಿಯಲು ಸಾಧ್ಯವಿಲ್ಲ. ನಾನೇನೆಂಬ ಸಂಪೂರ್ಣ ಅರಿವು ನನಗಿಲ್ಲದೆಯೆ, ಬೇರೆಯವರಿಗದು ಹೇಗೆತಾನೆ ಅರಿವಿಗೆ ಬರಲು ಸಾಧ್ಯ? ಹೀಗಿರುವಾಗ ಒಮ್ಮೆ ಭೇಟಿಯಾದ ವ್ಯಕ್ತಿಯನ್ನು ಮದುವೆಯಾಗಲು ಓಕೆ ಮಾಡುವುದಾದರೂ ಹೇಗೆ? ಹಾಗಂತ ಪದೇ ಪದೇ ಅವರನ್ನು ಭೇಟಿಯಾದರು ಅದರ ಔಟ್ಪುಟ್ ಏನು ಬದಲಾಗದು ಎಂಬುವುದು ಒಂದು ವಾದ. ಆದರೆ, ಪದೇ ಪದೇ ಭೇಟಿಯಾದರೆ, ಅವರ ಮೇಲೆ ಭಾವನೆಗಳು ಮೂಡಭಹುದಲ್ಲವೇ? ಅವರ ಯಾವುದೊ ಸಣ್ಣ ಸಣ್ಣ ವಿಷಯದ ಮೇಲೆ ನಮಗೆ ಪ್ರೀತಿ ಮೂಡಭಹುದಲ್ಲವೇ? ಅಥವಾ ಅಸಮಾಧಾನ, ಕೋಪ? ಆದರೆ ಇದ್ಯಾವುದಕ್ಕ್ಕೂ ನಮ್ಮ ಸಮಾಜ ಅವಕಾಶ ಮಾಡಿಕೊಡುವುದಿಲ್ಲ.
೨೦೦ ರೂಪಾಯಿ ಬೆಲೆ ಬಾಳುವ ಹರಿದು ಹೋಗುವ ಅಂಗಿಯನ್ನು ಖರೀದಿಸುವಾಗ ೨ ಬಾರಿ ಯೋಚಿಸುವ ಜನಗಳು, ಜೀವನ ಪೂರ್ತಿ ಜೊತೆಗಿರಬೇಕಾದ ವ್ಯಕ್ತಿಯ ಆಯ್ಕೆ ಅಷ್ಟು ಕಮ್ಮಿ ಸಮಯದಲ್ಲಿ ಹೇಗೆ ತಾನೇ ಮಾಡಿಯಾರು? ಗಟ್ಸ್ ಫೆಲ್ಲಿಂಗ್ಸ್ ಮುಖಾಂತರ ಹೋಗುವಂತಹ ವಿಷಯವೇ ಇದು? ಲಾಜಿಕಲ್ ರಷನಲೆ ಎಂಬುದು ಸ್ವಲ್ಪವಾದರೂ ಇರಬೇಕಲ್ಲವೇ?

 ಜೀವನದ ಎಲ್ಲವಿಷಯವನ್ನು ವಿಜ್ಞಾನದ/ ತರ್ಕಬದ್ಧವಾಗಿ ಮಾಡುವೆ ಎಂಬುದು ಸುಳ್ಳು. ನಮ್ಮಿಂದ ವಿಜ್ಞಾನವೇ ಹೊರತು ವಿಜ್ಞಾನದಿಂದ ನಾವಲ್ಲ.  ಫಾರ್ ದಿ ಮೊಮೆಂಟ್ ಲೆಟ್ಸ್ ಫರ್ಗೆಟ್ ಅಬೌಟ್ ಸೈನ್ಸ್ ಆಫ್ ಲವ್, ಲಸ್ಟ್, ಸೈಕಾಲಜಿ ಆಪ್ ಲವ್ ಅಂಡ್ ಅಟ್ರಾಕ್ಶ್ನ್ / ಸಧ್ಯದ ಮಟ್ಟಿಗೆ ಪ್ರೀತಿ, ಪ್ರೇಮ, ಮೋಹ, ಆಕರ್ಷಣೆ, ಕಾಮಗಳ ಹಿಂದಿರುವ ವಿಜ್ಞಾನವನ್ನು ಮರೆಯೋಣ/ಪರಿಗಣಿಸುವುದು ಬೇಡ. ನಮ್ಮ ಕವಿಮಹಾಶಯರ ಪ್ರಕಾರವೇ ಹೋಗೋಣ. ಪ್ರೀತಿ ಮೂಡಲು ಕೆಲವೇ ಕ್ಷಣ ಸಾಕು, ನಿನ್ನ ಕಣ್ನೋಟವೆ ಸಾಕು, ಮುದ್ದಾದ ಆ ನಗುವು ನನಗೆ ಬೇಕು ಎನ್ನುವುದು ನಿಜವೇ ಇರಬಹುದು, ಆದರೆ ಈ ಪ್ರೀತಿಯನ್ನು ಉಳಿಸಿ, ಬೆಳೆಸಿ, ನಿಭಾಯಿಸುವ ಬಗ್ಗೆ ಕ್ಷಣಾದ್ರದಲ್ಲಿ ನಿರ್ಧರಿಸುವುದಾದರೂ ಹೇಗೆ? ನಾನೇನೋ ಎಲ್ಲದಕ್ಕೂ ಹೊಂದಿಕೊಂಡು ಹೋಗುವೆ ಎಂಬ ಭರವಸೆ ನಿಮಗೆ ನಿಮ್ಮಮೇಲೆ ಇರಬಹುದು. ಆದರೆ ಅವರು ಹಾಗೆಯೆ ಇರಬೇಕಿಂದಲ್ಲ. ಅದು ಅವರವರಿಷ್ಟ. ಬೆಳೆದುಬಂದ ರೀತಿ ನೀತಿ.
ಮದುವೆ ಎಂಬ ಮೂರಕ್ಷರದ ಪದ ಅಷ್ಟು ಸುಲಭವಲ್ಲ. ಇಬ್ಬರು ಒಬ್ಬರಾಗಿರಬೇಕು. ಎತ್ತು ಏರಿಗೆಳಿಯಿತು, ಕೋಣ ನೀರಿಗೆಳೆಯಿತು ಯೆಂದಾಗಬಾರದಲ್ಲವೇ. ನಿನ್ನ ನಿರ್ಧಾರಗಳು ಕೇವಲ ನಿನ್ನದಾಗಿರದು, ಅದು ನಿಮ್ಮದಾಗಿರಬೇಕು. ಕೆಲಸದಿಂದ ದಣಿದು ಮನೆಗೆ ಬಂದಾಗ ಅವರ ಮುದ್ದಾದ ಮೊಗದಲೊಂದು ದಣಿವಾರಿಸುವ ನಗೆಯೊಂದು ಇರಬೇಕು. ಅದು ಬಿಟ್ಟು ಅವನ ಮುಖ ಒಂದು ಕಡೆ, ಇವಳ ಮುಖ ಇನ್ನೊಂದು ಕಡೆ ಎಂಬಂತಿದ್ದರೆ ದಣಿವು ಕೋಪವಾಗಿ ಬದಲಲು ಹೆಚ್ಚು ಸಮಯ ಬೇಡ. ಕೋಪ ನೋವಾಗಲು. ನೋವು ದ್ವೇಷವಾಗಲು. ಜೀವನದಮೇಲೆ ಜಿಗುಪ್ಸೆ ಮೂಡಲು.
ಜೀವನದ ಕಟ್ಟಕಡೆಯ ಉದ್ದೇಶ ನೆಮ್ಮದಿ, ಪ್ರೀತಿ. ಕೋಟಿ ಸಂಪಾದಿಸಿದರೇನು ನೆಮ್ಮದಿಯಿಲ್ಲದ ಜೀವನ, ಜೀವನವೇಯಲ್ಲ. (ನೆಮ್ಮದಿಯ ಜೊತೆ ಕೋಟಿಯಿದ್ದರೆ "ಸೋನೇ ಫೆ ಸುಹಾಗ" ಅದು ಬೇರೆಯ ವಿಷಯ. ಸದ್ಯಕ್ಕೆ ಬೇಡ.) ಹಾಗಾಗಿ ಕೇವಲ ಮುಖ ನೋಡಿ, ಹಣ ನೋಡಿ, ಗುಣವ ಅರಿಯುವುದು ಸ್ವಲ್ಪ ಹೆಚ್ಚೇ ಕಷ್ಟ.

ದಿಕ್ಕೇ ತೋಚದಿರುವಾಗ ಅಪ್ಪನ ಮಾತುಗಳ ಆಶ್ರಯಬೇಕು ನನಗೆ. ಆದರೆ ಇದರಬಗ್ಗೆಯೆಲ್ಲ ಚರ್ಚಿಸಲು ಮನೆಯೇ ವಾತಾವರಣ ಸರಿ ಮೂಡದು. ಒಬ್ಬರು ಕೋಪ ಮಾಡಿಕೊಂಡರೆ, ಮತ್ತೊಬರು ನೋವು ಮಾಡಿಕೊಂಡು ಮೌನದಿ ಕಣ್ಣೀರು ಸುರಿಸುವರು. ಮನೆಯವರಿಗೆಲ್ಲ ಇದರ ಬಗ್ಗೆ ಕೂತು ಮಾತನಾಡುವ, ಒಂದು ಆರೋಗ್ಯಕರವಾದ ಚರ್ಚೆ ಮಾಡುವ ವ್ಯವಧಾನ, ಸಮಾಧಾನವಾಗಲಿ ಇಲ್ಲಾ. ನನಗೆ ತಿಳಿಯದ ವಿಷಯದಬಗ್ಗೆ ತಿಳಿಹೇಳುವ ಮನಸ್ಸಿಲ್ಲ. ಇದೆಲ್ಲದರ ನಡುವೆ ಸಿಲುಕಿ ತಲೆ ಕೆಡುವ ಮುನ್ನ ನನಗೆ ನಾ ಸಾಂತ್ವನವೇಲಿದೆ. ಎಲ್ಲಾರ ಮನೆ ದೋಸೆ ತೂತು. ನಮ್ಮಮನೆಯ ದೋಸೆ ಇದರಿಂದ ಹೊರತೇನಲ್ಲ. ಎಲ್ಲಾರ ಜೀವನದಲ್ಲೂ ಈ ಸಮಯ ಬಂದಿರುತ್ತದೆ. ಎಲ್ಲರಿಗೂ ಒಂದು ಸಣ್ಣ ನಡುಕ ಬಂದಿರುತ್ತದೆಯೆಂದು.

ಅಪ್ಪ ಯಾವಾಗಲು ಹೇಳುತ್ತಾರೆ. ಖುಷಿಯಾಗಿರು. ನಿನ್ನ ಖುಷಿ ನನಗೆ ಬಹಳ ಮುಖ್ಯವೆಂದು.
ಜೀವನದ ಎಲ್ಲಾ ನೋವಿನ ಘಟ್ಟದಲ್ಲೂ, ಹಿಂಸೆಯ ಸಮಯದಲ್ಲೂ, ಉಸಿರುಗಟ್ಟಿಸುವ ವಾತಾವರಣದಲ್ಲೂ ತಮಾಷೆ ಮಾಡಿ ನಗಿಸುವ ನಮ್ಮಪ್ಪ ನನ್ನ ನಿಜ ಸ್ನೇಹಿತ.
ಅವರು ಮದುವೆಯ ಬಗ್ಗೆ ಹೇಳಿದ ಒಂದೇ ಮಾತೆಂದರೆ, "ಮಗಳೇ, ಮದುವೆಯೆಂದರೆ ಮಧು'ವ್ಯ' ". ಮೊದಲಿಗೆ ಮಧು (ಮಧು ಚಂದ್ರಮ). ನಂತರ ವ್ಯಾ(ಉಲ್ಟಿ/ವೊಮಿಟ್/ಕಾರುವುದು). ಎಂದು ಹೇಳಿ ನಕ್ಕಿದ್ದರು. ಇದು ಇಷ್ಟು ಸರಳ ವಾಕ್ಯವಲ್ಲ. ಇದರ ಹಿಂದೆಯೂ ಬಹಳ ಘಡತೆಯಿದೆ ಅವರ ಬೇರೆ ಮಾತುಗಳಂತೆ. ಆದರೆ ಅರ್ಥೈಸಿಕೊಳ್ಳುವಷ್ಟು ದೊಡ್ಡವಳಾಗಿಲ್ಲ ನಾನು.

ಜೀವನ ಚಕ್ರ ಚಲಿಸುತ್ತಲ್ಲೇ ಇರುತ್ತದೆ. ಜೀವನ ಬಂದಂತೆ ಸ್ವೀಕರಿಸಬೇಕು.
ಮುಂದೇನು ಅನ್ನುವುದಕ್ಕಿಂದ, ಇಂದು ಆರಾಮವಾಗಿ ನನಗಿಷ್ಟ ಬಂದಂತೆ ಇರೋಣ. ಬೆಚ್ಚಗೆ ಹೊದೆದು ಮಲಗೋಣ.