Thursday 26 April 2018

3 A.M.

ದುಃಖ್ಖವೆಂದರೇನು?
ಸುಖವೆಂದರೇನು?
ಈ ಜೀವನದ ಉದ್ದೇಶ?
.... 
ಜನಸಾಮಾನ್ಯರಿಗೆ ಕಾಡುವ ಪ್ರೆಶ್ನೆಯಲ್ಲವೇ, 
ನಾನು ಒಬ್ಬಳು ಸಾಮಾನ್ಯ ಜನವೇ ಅಲ್ಲವೇ. 
***********************************************
ಇದ್ದಕ್ಕಿದಂತ್ತೆ ಮಧ್ಯರಾತ್ರಿಯಲ್ಲಿ ಇಲ್ಲದ ಸಲ್ಲದ ಪ್ರಶ್ನೆಗಳು ಕಾಡತೊಡಗಿದವು. 
ನಾನು ಮಾಡುತ್ತಿರುವುದು ತಪ್ಪೆನಿಸಿತ್ತು. ಮರುಕ್ಷಣವೇ ಇಲ್ಲಾ ಇದು ತಪ್ಪಲ್ಲ ಅನಿಸಿತ್ತು. ಹಾಗಂತ ಸರಿ ಮಾಡುತಿದ್ದೇನೆಂದಲ್ಲ. 
ಈ ಸರಿ ತಪ್ಪುಗಳು ಯೆಂದರೇನು? ಅದನ್ನು ಬಣ್ಣಿಸುವುದು ಹೇಗೆ? 
***********************************************
ನನ್ನಪ್ಪ ಯೇನಾದರೂ ನನಗೆ ಬುದ್ಧಿಮಾತು ಹೇಳುವಾಗ;
 
"ಹೋಗಪ್ಪ ಯಾಕೆ ಸುಮ್ಮನೆ  ಬೈಯುತ್ತೀರಿ" - ನಾನು  
"ನೀನು ಖುಷಿಯಾಗಿರಲಿ ಅನ್ನೋದೊಂದೇ ನನ್ನ ಉದ್ದೇಶ, ನಾನು ಕೇವಲ ನಿನಗೆ ಹಾಗೆ ಮಾಡು ಹೀಗೆ ಮಾಡು ಯೆಂದು ಹೇಳಿಕೊಡೋಬಹುದೇ ವಿನಃ, ಹಾಗೆ ಮಾಡುವುದು ಬಿಡುವುದು ನಿನಗೆ ಬಿಟ್ಟಿದ್ದು. ನನಗೊಳ್ಳೇದು ಅನಿಸಿದ ದಾರಿ ತೋರಿಸುವುದಷ್ಟೇ ನನ್ನ ಕೆಲಸ, ದಾರಿಯಲ್ಲಿ ಸಾಗಬೇಕಾಗಿರುವು ನೀನೆ, ಯಾವದಾರಿಯಲ್ಲಿ ಹೋಗಬೇಕೆಂದು ನಿರ್ದರಿಸಬೇಕಾಗಿರುವುದು ನೀನೆ. ನಿನ್ನ ದಾರಿಯನ್ನು ನೀನೆ ಕಂಡುಕೊಳ್ಳಬೇಕು." - ಅಪ್ಪ 
"ಹಾಗಾದರೆ ನಾನು ನನ್ನ ದಾರಿ ಕಂಡುಕೊಳ್ಳುತ್ತೆನೆಂದು ತಪ್ಪುದಾರಿಯನ್ನು ಆಯ್ದುಕೊಂಡರೆ ನಿಮಗೆ ಬೇಜಾರಾಗುವುದಿಲ್ಲವೇ? ನನ್ನನ್ನು ತಪ್ಪು ಮಾಡಲು ಬಿಟ್ಟುಬಿಡುತ್ತಿರೆ? ಇಷ್ಟು ಕಷ್ಟದ ಜವಾಬ್ದಾರಿಯನ್ನು ನನ್ನ ಮೇಲೆಯೇ ಏರಿಬಿಡುತ್ತೀರಾ?" - ನಾನು 
ಹೌದು ಬೇಜಾರಾಗುತ್ತೆ ನಿಜ, ಹಾಗಂತ ನಾನು ಸುಮ್ಮನೆ ಕೂರಲಾರೆ, ಕೈಲದಷ್ಟು ತಿಳಿಹೇಳ ಪ್ರಯತ್ನಿಸುತ್ತೇನೆ, ನಂತರವೂ ತಿಳಿಯದಿದ್ದರೆ, ಅದು ನಿನ್ನ ಅನಿವಾರ್ಯ ಕರ್ಮಾವೆಂದು ಸುಮ್ಮನಾಗುತ್ತೇನೆ. ಜೀವನದ ಕಾಟು ಸತ್ಯ ಇದುವೇ ಮಗಳೇ. ಅವರವರ ಬಾಯಿಗೆ, ಅವರವರ  ಕೈ. ಯಾರಿಗೆ ಯಾರು ಇಲ್ಲ. ಎಲ್ಲರೂ ತಮ್ಮ ನೆಲಗಟ್ಟಿ ಮಾಡಲು ಮೊದಲು ಪ್ರಯತ್ನಿಸುತ್ತಾರೆ." - ಅಪ್ಪ. 
*******************************************************

3 A.M.
 ರಾತ್ರಿ ನೆಲದ ಮೇಲೆ ಕುಳಿತುಕೊಂಡಿರುವಾಗ , ಈ ಹಿಂದೆ ನನ್ನ ಜೀವನದಲ್ಲಿ ನಡೆದ ಕಹಿ ಘಟನೆಗಳೊಂದಷ್ಟು, ಸಿಹಿ ಘಟನಗಲೊಂದಷ್ಟು ನೆನಪಿನ ಬುತ್ತಿಯಿಂದ ಹೊರಬಂದು ಹಾಗೇ ಕಣ್ಣ ಮುಂದೆ ಹರಿದಾಡಿದವು.  
ಆಶ್ಚರ್ಯವೆಂದರೆ ಕಣ್ಣಂಚಲಿ ಸ್ವಲ್ಪವು ಪಸೆಯಿರಲಿಲ್ಲ, ತುಟಿಯಂಚಲಿ ನಗು!!
ಭಾವನೆಗಳೆಲ್ಲ ಬರದಡವೇ ಎಂದನಿಸ ತೊಡಗಿತು. 
ಆಗ ಮನಸ್ಸಿನಾಳದಿಂದ ಮಾತ್ತೊಂದು ಕೇಳಿಸಿತು, 
ಅಯ್ಯೋ ಮರುಳೆ, ಸಮಯ ೩ ಆಯ್ತು. ಅದಕ್ಕೆ ನಿನಗೆ ಅರಳು ಮರಳು ಶುರುವಾಯ್ತು. 
ಸುಮ್ಮನೆ ಹಾಸಿಗೆಯಲ್ಲಿ ಬಿದ್ದುಕೋ. ನಾಳೆ ಬೆಳಗ್ಗೆ ಎದ್ದಾಗ ಎಲ್ಲವೂ ಮತ್ತೆ ಬರುತ್ತದೆ (ಐ ಮೀನ್ ಭಾವನೆಗಳು). 
*********************************************
ಪ್ರತೀದಿನವು ಒಂದು ಹೊಸ ದಿನಾ. 
ಪ್ರತಿ ಅಂತ್ಯಕ್ಕಿಲ್ಲಿ ಒಂದು ಆದಿ. 
ಪ್ರತಿ ನೋವಿಗೊಂದು ನಲಿವು,
ಪ್ರತಿ ಕಾಯಿಲೆಗೊಂದು ಔಷದ. 
ಚಿಂತಿಸಿ ಫಲವಿಲ್ಲಾ ನಶ್ವರದ ಬಾಳಲ್ಲಿ. 
**********************************************

Thursday 19 April 2018

When he pleaded..

I don't want to pester you around always. I'm missing you. just let me know, you want me in your life or not? - he asked (after texting her continuously from almost a month) .

if you missing me, it's your mistake. Because I never made my people to miss me.
It's your mistake not to recognize the flavors, recognize the efforts to regulate everything, to hold the things which are falling apart. I tried the best to understand and to give the maximum. now? now I'm plain, I have no emotions. I am not feeling pain, not feeling happy, feeling nothing. it's plain. No guilts. No hard feelings. No regrets.
In our case, yes, you can't put blame on me and you know it well.
I'm here, just because I never wanna leave questions unanswered which can be answered.- she replayed.


That's how one of my favorite chapters of my favourite book ended. 

Sunday 15 April 2018

Smitten!

ಬೇಸಿಗೆಯ ಮಧ್ಯಾಹ್ನ, ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆ, ಪರಿಚಯವಿಲ್ಲದ ಸ್ಥಳ. ಆದರೂ ಸವಾರಿ ಹೊರಟಿತ್ತು.
ಒಮ್ಮೆ ಅವನ ಕಂಡು, ಮಾತನಾಡಿ ಬರಲೆಂದು.
೩ ಘಂಟೆಯ ಸುದೀರ್ಘ ಪಯಣದ ನಂತರ, ಕಡೆಗೂ ಸಿಕ್ಕನಾ ಭೂಪ. ದಾರಿಯ ಧಣಿವೆಲ್ಲಾ ಒಮ್ಮೆಯೇ ಮರೆತು ಹೋಗಿತ್ತು, ಆ ಕರಿ ಮುಸುಡಿಯ ಬಿಳಿ ಹಲ್ಲುಗಳ ಹೊಳಪಿಗೆ.
ಮದ್ಯಾಹ್ನದಿಂದ ಸಂಜೆಯಾಯಿತು, ಸಂಜೆಯೆಂದ ರಾತ್ರಿ.
ಬೇಸಿಗೆಯ ಸೆಖೆಯೆಲ್ಲಾ ಕರಗಿ ತಂಪಾದಂತೆ .

Understand the difference.

There is a difference between " I love you " and " I like you".
Just like the difference between "I need you" and "I want you". 

The problem is, whatever you liked is a brain work and difficult to overcome! and whatever
you want makes you more human, when both of other two, "I love you" and "I need you" remains trivial. 


Thursday 12 April 2018

Certainly

ಅಸಮಧಾನದಲ್ಲಿ ಸ್ನೇಹಿತೆ ಹೀಗೆಂದಳು,
"I lost faith in talking something not natural like so-called intellectual thought as because people will talk intellectual but when it comes to practice they are not different from others."
ಹೌದೇ? ಗೊತ್ತಿಲ್ಲ. ಆದರೆ ಅಪ್ಪ ಹೇಳಿದ ಮಾತ್ತೊಂದು ನೆನಪಿಗೆ ಬಂತು.
"ಶಾಸ್ತ್ರ ಓದೋದಕ್ಕೆ, ಬದನೇಕಾಯಿ ತಿನ್ನೋದಕ್ಕೆ."

Wednesday 4 April 2018

ಈಗ (Now)

೮.೩೦ ಪಿ.ಎಂ. ನ ಆಸು ಪಾಸು.
೦೪.೦೪. ೨೦೧೮
ಸುಮಾರು ದಿನಗಳ ನಂತರ ನನ್ನ ತಲೆ ಕೂದಲಿನ ಮೇಲೆ ಕರುಣೆ ಬಂದು ಎಣ್ಣೆಯ ದರ್ಶನ ಮಾಡಿಸಿದ ಅಮ್ಮ ,
"ಏನು ಮಗಳೇ, ಕೂದಲಿಗೆ ವಾರಕ್ಕೊಮ್ಮೆಯಾದರೂ ಎಣ್ಣೆ ಹಾಕಬಾರದೇ?" ಎಂದರು.

ಕೆಲಕಾಲ ಮೌನ..

"ಇದೇನು ಕೂದಲಲ್ಲಿ ಇಷ್ಟು ಸಿಕ್ಕಿದೆಯಲ್ಲಾ?" ಮೌನಮುರಿಯುತ್ತ ಹೇಳಿದರು ಅಮ್ಮ.
"ಅಯ್ಯೋ ತಲೆಬಾಚಲು ಬೇಜಾರಮ್ಮ, ೩ ದಿನ ಅಯ್ತು ತಲೆ ಬಾಚದೆಯೇ" ಅಂದೇ.
ಆಗ ಅಪ್ಪನೇಳಿದ ಮಾತು:
ಬೇಜಾರು ಮಾಡ್ಕೊಂಡು ಪ್ರಯೋಜನ ಇಲ್ಲ. 
ಸಾಯೋಅಷ್ಟು ದಿನ ಬದುಕಲೇ ಬೇಕಲ್ಲ. 
ನಮ್ಮ ನಮ್ಮ ಕೇಸಗಳನ್ನು ಮಾಡುತ್ತಾ ಹೋಗಬೇಕು. 
ಬೇಜಾರು ಎಂದು ಕೂತರೆ ಎಲ್ಲವೂ ಬೇಜಾರೇ.
ನಾಳೆ ದಿನ  ****** ಬೇಜಾರು ಅಂತಿಯೇನಪ್ಪಾ ?! ಹಾಹಾ . 

ನಾಳೆಯೇಕೆ ಹೇಳಲಿ, ನಂಗೆ ಅದು ಮೊದಲಿಂದನೇ ಬೇಜಾರಿನ ಕೆಲಸವೆ ಅಪ್ಪ.  - ಅಂದೇ.

ಮೂವರು ನಕ್ಕೆವು. 


Monday 2 April 2018

ಉಗುರು ಬೆರಳಿನ ಸಂಬಂಧ

ಕಾಲಿನ ಹೆಬ್ಬೆರಳ ಉಗುರು ಮನೆಯ ಗೋಡೆಗೆ ತಾಕಿ ಒಂದು ಕ್ಷಣ ಪ್ರಾಣವೇ ಹೋದಂತಾಯ್ತು.
'ಅಮ್ಮಾ....'  ಕಿರುಚಿದೆ.
'ನಾನು ಎಷ್ಟು ಸಾರಿ ಹೇಳಿದ್ದೇನೆ ಉಗುರು ಬೆಳದ ಕುಡ್ಲೆ ಕಟ್ ಮಾಡು ಅಂತ..,' ಅಪ್ಪ ನೊಂದುಕೊಂಡು ಗದರಿಸಿದರು.

ಹೌದಲ್ಲವ್ವೆ ಚರ್ಮದೊಂದಿಗೆ ಇದ್ದ ಉಗುರಿಂದ ಎಂದಿಗೂ ನೋವಾಗುವುದಿಲ್ಲ. ಚರ್ಮದಿಂದ ಉಗುರು ಮುಂದೋದರೆ ನೋವು.

ಯು ನೋ ವಾಟ್ ಐ ಮೀನ್ ರೈಟ್?   

Gel well

ನೀರಿನಂತಾಗು ನೀರೆ.
ಅಪ್ಪ ಹೇಳುತ್ತಿದ್ರು ನೀರಿನಂತಾಗು ಮಗಳೇ ಎಂದು.
ಅಂದು ಅಪ್ಪ ಹಾಗೆ ಹೇಳಲು ಕಾರಣವೆ ಬೇರೇ ಇತ್ತು. (ಅಥವಾ ನನಗದು ಸಂಪೂರ್ಣವಾಗಿ ಅರ್ಥವಾಗಿರಲ್ಲಿಲ್ಲವೇನೋ)
ಎಲ್ಲಾದಕ್ಕೂ ಹೊಂದಿಕೊಂಡು ಹೋಗು ಮಗಳೇ ಎನ್ನುವ ಅರ್ಥ ಅವರದಾಗಿತ್ತು. (ಅಥವಾ ಯಾವುದಕ್ಕೂ ಅಂಜದೆ ಮುನ್ನುಗ್ಗು ಎಂಬುವಂತೆಯೇ?)

ಮೊದಲ ಬಾರಿಗೆ ನನ್ನನು ಒಬ್ಬಂಟಿಯಾಗಿ ಹಾಸ್ಟೆಲ್ ನಲ್ಲಿ ಬಿಟ್ಟುಹೋಗುತ್ತಿದ್ದ ಸಂದರ್ಭವದು.
ಬಹಳಾನೇ ಅತ್ತಿದ್ದೆ ಅಂದು ರಾತ್ರಿ. ತಿಳಿಯದ ಊರು, ತಿಳಿಯದ ಒಂಟಿತನ. ಅರ್ಥವಾಗದ ಭಾವನೆಗಳು.
*****
ನನಗೆ ತಿಳಿದ ಮಟ್ಟಿಗೆ ಇಂದಿಗೂ ಅಪ್ಪ ಹೇಳಿಕೊಟ್ಟಂತೆ, ನನಗರ್ಥವದಂತೆಯೇ ನಡೆದು ಕೊಳ್ಳುತ್ತಾ ಬಂದಿದ್ದೇನೆ.
ಆದರೆ ಇತ್ತೀಚಿಗೆ ಯಾವುದು ಮೊದಲಿನಂತಿಲ್ಲ. (ಅಥವಾ ಅಪ್ಪನ ಮಾತಿನ ಗಾಢತೆಯ ಆಳಕ್ಕೆ ಸ್ವಲ್ಪ ಸ್ವಲ್ಪವೇ ಇಳೆಯುತ್ತಿರುವೆನೇ?)
ಶಾಂತತೆಯಿಂದ ನೀರಿನಂತಿದ್ದರು, ನೀರು ಎಣ್ಣೆಯೊಂದಿಗೆ ಬೆರೆಯುವುದಿಲ್ಲವಲ್ಲವೇ?