Thursday 21 December 2017

ಬಹುದಿನಗಳ ನಂತರ

ನನ್ನಅಪ್ಪ ಅದೊಂದು ದಿನ ಹೇಳಿದ್ರು,
ಯೋಚಿಸಿ ಬರೆಯುವುದು ಕವಿತೆಯಲ್ಲ, ಕಥೆಯಲ್ಲ, ಕೇವಲ ಪ್ರಶ್ನೆಗೆ ಉತ್ತರವ, ಯೆಂದು. 
ಎಷ್ಟು ಸತ್ಯದ ಮಾತು. ಪದಗಳೆಲ್ಲ ಎಲ್ಲೊ ಅವಿತು ಕುಳಿತಿರುತ್ತವೆ, ಅಕ್ಷರಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಅರ್ಥಹೀನವಾಗಿ ಬಿದ್ದು ಒದ್ದಾಡುತಿರುತ್ತವೆ. ಅದನ್ನೆಲ್ಲಾ ಕೂತು ಒಂದಾಗಿ, ಒಂದೊಂದಾಗಿ ಜೋಡಿಸಿ, ಅವಿತಪದಗಳ ಹುಡಿಕಿ ತರಲು ನೀನು ಜೊತೆಯಲಿ ಬೇಕು. ನಿನ್ನ ನಗುವೆಂಬ ಬೆಳಕಿನ ಆಸರೆ ಬೇಕು.ನಿನ್ನ ತುಂಟಾಟ ಬೇಕು, ನೀನು ಕೊಡುವ ನೋವು, ನಲಿವು ಬೇಕು, ದುಃಖ ಬೇಕು, ಖುಷಿ ಬೇಕು, ಏನಾದರೊಂದು ಭಾವನೆ ಬೇಕು. ಕಡೇಪಕ್ಷ ನಿನ್ನ ನೆನಪುಗಳಾದರು ನಗುವಿನ ಜೊತೆಯಲಿ ಬಹಳವಾಗಿ ಬೇನೆ ನೀಡಬೇಕು. ನೀನಿಲ್ಲದೆ ಬರಿಯ ಉಸಿರಾಡುವ ಬೊಂಬೆ ನಾನು. ನೋವಿಲ್ಲದ, ನಲಿವಿಲ್ಲದ, ನಗುವಿಲ್ಲದ ಬರಿಯ ಉಸಿರಾಡುವ ಬೊಂಬೆ ನಾನು. 

ಅಕ್ಷರ

ಉಣಿಸಿದಾ ಕೈತುತ್ತು ಮರಳಿಸಿತು ಕಳೆದು ಹೋದ ಮಾತ್ತೊಂದ,
ತನ್ನೆಲ್ಲ ಭಾವುಕತೆಯಂಬ ಅಕ್ಷರವ ತುಂಬುತ.
ಮರೆತುಹೋದ ನನ್ನವಳೆಯಾದ, ನನ್ನ ನಗು,
ನನ್ನ ಸ್ನೇಹಿತೆಯಾ ನೆನಪಿಸುತ.
ಹಗುರಾಯ್ತು ಜೀವ ಬಹಳ ಕಾಲದನಂತರ.
ನನ್ನವರೆಲ್ಲ ಒಟ್ಟಾಗಿ ನಿನ್ನಲ್ಲಿ ಸಿಕ್ಕಾಗ.
ನನ್ನೊಡನೆ ನೀ ಕೂತು ನಕ್ಕಾಗ. 

Monday 11 December 2017

Anantha (Infinity)

ಅವನನ್ನು ಪ್ರೀತಿಸಲು ಕಾರಣವಿರಲಿಲ್ಲ.
ಪ್ರೀತಿಸಲು ಕಾರಣವಿರುವುದೇ?
ಅಪ್ಪನನ್ನು ಕೇಳಿದ್ದೆ. ಅವರ ಪ್ರಕಾರ ಪ್ರೀತಿಯಂಬುದೇ ಇಲ್ಲ!!!, ಹೇಳಿ ಮುಗುಳ್ನಕ್ಕಿದರು.
ಯಾವರೀತಿಯಲ್ಲಿ ಹೇಳಿದರೆಂದು ಅರ್ಥಹಿಸಿಕೊಳ್ಳಲಾಗಳಿಲ್ಲ.
ಅವರ ಮುಗುಳ್ನಗೆ ಬಹಳ ಘಾಡವಾಗಿತ್ತು, ಅವರ ಮಾತಿನಂತೆ. 

Scream

Need help...
Need help...
Really? Do I?...
I scream...
I scream in silence...
Non can understand...
Coz, I never let them understand...
And not want them to...
It's completely fine, fine to go mad, to lose mind, to yell harder sometime...
I'm the pain...
I'm the heal...
And I'll be fine soon...
Need help...
Need help...
I scream...
I scream in silence...








Wednesday 6 December 2017

Enlightenment

Don't take life seriously.
Know yourself.
Laugh, be happy.
Just breathe. 

ಯದ್ ಭಾವವಂ ತದ್ ಭವತಿ

ನೀ ಹೇಗೆ, ಹಾಗೆ ಎಲ್ಲರು.
ನಿನ್ನ ಪ್ರಪಂಚದಲ್ಲಿ ನಿನ್ನ ಬಿಟ್ಟು ಬೇರೆಯಾರಿಲ್ಲ.
ಮರೆಯ ಬೇಡ. 

ಯೋಚನೆ

ಮಕ್ಕಳು ರಚ್ಚೆ ಮಾಡುವರು, ಹಾಗಂತ ತಾಯಿ ಎಂದಿಗೂ ಅವರಿಂದ ದೂರಾಗಳು.
(ಚಿಂಪುವಿನ ಕಾದಾಟ)

Don't fool yourself

ನಿನ್ನೊಂದಿಗೆ ಸಾಧಕಾಲ ಬಾಳುವುದು ನೀನು. ನಿನಗೆ ನೀ ವಂಚಿಸುತ್ತ ಮೂರ್ಖಳಾಗಬೇಡ.. ಬದಲಾಯಿಸಲು ಸಾಧ್ಯವಿಲ್ಲದ್ದು  ಯಾವುದು ಇಲ್ಲವೆಂಬಾ ನಿನ್ನ ವಾದ ತಪ್ಪೆಂದು ನಾನು ಹೇಳುವುದಲ್ಲ, ಇದರಿಂದು ನೀನು ಹೊರತೇನಲ್ಲ. ಏನನ್ನೋ ಬದಲಾಯಿಸ ಹೋಗಿ ನಿನ್ನ ನೀನು ಎಷ್ಟು ಬದಲಿಸಿಕೊಂಡಿರಿವೆ ಎಂಬ ಅರಿವಿದೆಯೆ ನಿನಗೆ?
ಸತ್ಯವ ಕಣ್ತೆರೆದು ನೋಡು. ನಿನ್ನ ಅರಿವಿಗೆ ನಿಲುಕಿದ ಸತ್ಯವ ಕಣ್ತೆರೆದು ನೋಡು. ಕಣ್ಣಿದ್ದು ಕುರುಡಾಗ ಬೇಡ. 

Sunday 3 December 2017

Uncertainty (ಅನಿಶ್ಚಿತತೆ)


It's a paradox.
Certainty doesn't exists in this world.
Time is the only real unit, which defines the certainty, certainty of that moment.
Even, your thought keeps evolving all the time.
Today's thought may crap for tomorrow and tomorrow's for day after tomorrow.
That is the growth.
Life is uncertain and uncertainty makes life difficult and difficulty makes life challenging and challeng keeps life interesting.
That's the beauty of nature. 

ಮೌನ


ತನ್ನೊಳಗೆ ನೂರಾರು ಭಾವನೆಗಳ ತುಂಬಿಕೊಂಡಿರು ಮೌನ.
ಚೀರಿ ಚೀರಿ ತನ್ನ ಭಾವನೆ ಹಂಚಿಕೊಳ್ಳುವ ಮೌನ.
ಸಾವಿರಾರು ಪ್ರೆಶ್ನೆಗಳ ಕೇಳುವ ಮೌನ.
ಸಾವಿರಾರು ಉತ್ತರಗಳ ನೀಡುವ ಮೌನ.
ಅಸಹಾಯಕತೆಯ ಮೌನ.
ಸಹಾಯಕತೆಯ ಮೌನ.
ನೋವಿನ ಮೌನ.
ಸಾರ್ಥಕತೆಯ ಮೌನ.
ನೆಮ್ಮದಿಯ ಮೌನ.
ಪ್ರೌಢತೆಯ ಮೌನ.
ಜ್ಞಾನೋದಯದ ಮೌನ.
ನೀರವ ಮೌನ, ಮೌನ, ಮೌನ.

ಮೌನಿ


ನನ್ನ ಮಾತುಗಳನ್ನು ಅರ್ಥಸಿಕ್ಕೊಳ್ಳಲಾಗದವರ ಎದುರಿಗೆ ಮೌನಿ ನಾನು.
ಬೇರೆಯವರ ಮಾತುಗಳ್ಲಲಿ ಹುರುಳಿಲ್ಲವೆನಿಸಿದಾಗ ಮೌನಿ ನಾನು.
ಕೋಪವೆಂಬ ಚಂಡಮಾರುತ ನನ್ನಲ್ಲಿ ಏಳುವಾಗ ಮೌನಿ ನಾನು.
ಹೃದಯದಲ್ಲಿ ಪ್ರೀತಿಯ ಅಲೆಗಳು ಮೂಡಿದಾಗ ಮೌನಿ ನಾನು.
ಮನದಲ್ಲಿ ವಿಚಾರಧಾರೆಗಳು ಅಲೆದಾಡುವಾಗ ಮೌನಿ ನಾನು.
ನನಗೇನು ಅರಿಯದಾಗ ಮೌನಿ ನಾನು.
ನಿಲ್ಲಿಸಿಲಾಗದಷ್ಟು ಮೌನದಿ ಮಾತನಾಡುವ ಮೌನಿ ನಾನು.
ಮೌನಿ ನಾನು, ಮೌನಿ ನಾನು.

Thursday 30 November 2017

Today

She can't fight it,
no, not anymore.
Can't resist it anymore.



Again!

She fell in love with him, again and again..
Everyday, every moment.....

Quarrelling

His shy eyes,
His rhythmic heartbeats,
His sexy voice,
His silent gaze,
His naughty smile,
His hot breath,
His soft hairs,
His smell,
His lips,
The whole him.
O man, why we quarreling! She murmured herself.
She was missing him a lot.


She wanted to break the cage, flew to him and slap him harder.
Later she realized, realized to give him a little time,
little time to heal, to rest, to realize, to miss her, and
to end the awkward silence between them.

His voice!

30/Nov/2017

The sound of his voice, wo, it's magical!
Damn, very hard to stop hearing them, it's an addiction!
Gives me butterflies, all the time.
Its musical, never let me go away from him!
So soothing, So calm, So seductive..! 

Wednesday 29 November 2017

❤A beautiful danger❤

What creature are you?
You are so complicated to understand. 

A hot ice cream!?
A spicy chocolate!?
A salty sweet!?
A throny rose!?
A medicinal venom!? 
A matured child!?
A strange particle!?
An angel dressed like a demon?
Or a demon with white heart!?


Extreme! ❤ 


Sunday 26 November 2017

Blank

ನನ್ನ ಪ್ರೇರಣೆಯ ಮುಂದೆ ಕುಳಿತು ಬರೆಯುವಾಸೆ ಮೊದಲಿಂದಲೇ ಇತ್ತು. ಆದರೆ ಇಂತಹ ಕಟು ಘಳಿಗೆಯಲಲ್ಲ. ಈಗಷ್ಟೆ ಸಣ್ಣದೊಂದು ಬಿರುಗಾಳಿ ಬೀಸಿ ಹೋಗಿದೆ. ಚಂಡಮಾರುತದ ನಿರೀಕ್ಷೆಯಲ್ಲಿ ಗಡಿಯಾರ ಟಿಕ್ ಟಿಕ್  ಎಂದು  ಶಬ್ದ ಮಾಡುತ್ತ ಕಾದು ಕುಳಿತಿದೆ. ಹೃದಯ ಬಡಿತ ಹೆಚ್ಚಿದೆ. ಗಂಟಲು ಬಿಗಿದಿದೆ. ಏನು ತೋಚುತ್ತಿಲ್ಲ. ಸುಮ್ಮನೆ ಕುಳಿತು ಚಂಡಮಾರುತವ ತಬ್ಬಿಬಿಡಲೇ? ಸಾವೊ ಬದುಕೋ, ಎರೆಡು ಒಂದೇ ಆಗಿರುವಾಗ ಯಾವುದಕ್ಕು ಅಂಜಿಕೆಯಿಲ್ಲ.

Presence

All she wanted is.
not his words,
not his help,
not his affection,
nothing, nothing,
just his presence.
which gives strength to fight her battles.
which gives her hope of light,
a silent voice,
which makes her comfortable.
gives an eternal peace to her soul.


The end !!?

She was not wrong,
it's not his mistake either.
she tried harder to understand,
though it's not difficult for her to understand him.
she knows what he is up to and what he wanted,
but she failed to make him realise, what he
wanted can also be achieved in many other ways. 
As always, he chose his own weird way. 
Though its weird, she understands, she understands all his madness.
then also she is hurt, tired, failed.
Why?
Why? Because,
he talks to her just with his words,
but she always looked at him with all her feelings. (-Leo Tolstoy)
He is fighting thousands of battle inside him,
passing through the strong storms.
In his roller coaster ride of life, she just wanted to be a silent part,
holding him tight, never letting him fall.
but he posed to be a stronger, a superhero.
though his shadow hold her hand and child inside him screaming louder not to leave,
He left her.
She trying harder to hold the things falling apart in her small arms.
posing not to be afraid of anything, but dying inside. very nervous.

Why? Why she needs to try harder? why can't she just let it go?
coz, she has faith in herself, not in the cruel time and strong storm.

This thought will flow... it's a never-ending saga, eternal, just like her love for him.


When mom ask me.

25-11-2017

So lost

I locked myself,
to find me. 
and this madness
is what which keeps me on track. 

I realized, 
I don't want someone
who can find me, 
and take me back
I want someone 
who wishes 
to get lost with me.

I realized,
I don't want my reflection,
not even a shadow,
I want a soulmate 
having a mad soul,
with wings.
have enough courage 
to give me wings,
to fly, 
to fly together. 

I realized,
I want someone
who paints with me,
paints our world! 
one who guides me,
tease me,
make fun of me,
irritates me,
loves me unconditionally.


continues........



What you want?
What you looking for?! 





Sunday 19 November 2017

Saturday 18 November 2017

ತಾಳ್ಮೆ

'ನೀರಿಳಿಯದ ಗಂಟಲೋಳ್  ಕಡುಬು ತುರುಕಿದಂತೆ' 
ನಾನು ಪ್ರೌಢಶಾಲೆಯಲ್ಲಿರುವಾಗ ಕನ್ನಡದ ಪಠ್ಯಪುಸ್ತಕದಲ್ಲಿ ಎಲ್ಲೊ ಓದಿದ ಮುದ್ದಣ್ಣ ಮನೋರಮೆಯರ ಪ್ರೇಮ ಸಲ್ಲಾಪ ಪ್ರಸಂಗದ ಈ ಸಾಲು ನೆನಪಾಗುತಿದೆ. ಒಂದು ರೀತಿಯಲ್ಲಿ ಈ ಸಾಲು ನನಗು ಅನ್ವಾಸಿತುದೇನೋ , ಕೆಲವು ತಿದ್ದುಪಡಿಗಳೊಂದಿಗೆ!! ನನ್ನ ರೂಪಾಂತರದ ಸಾಲುಗಳು 'ಸಾಮಾನ್ಯವಾದ ದಿನನಿತ್ಯದ ಮಾತುಗಳೇ ಹೊರಡದ ಬಾಯಲ್ಲಿ, ಕಷ್ಟಕರವಾದ ಮಾತು ಅಷ್ಟು ಬೇಗ ಹೊರಡೀತೇ', ಯಾ ಐ ನೋ ಇಟ್ ಕ್ಯಾನ್ ಬಿ ಫ್ರೇಮ್ಡ್ ಲಿಟಲ್ ಮೋರ್ ಗುಡ್ ವೆ!! ಆದರೆ ನಾನು ಮುದ್ದಣ್ಣನಲ್ಲ. 


ಅವನಿಗೇನೊ ಕೇಳುವ ತಾಳ್ಮೆ ಇದೆ, ನಾನೆ ಸ್ವಲ್ಪ ಹೆಚ್ಚು ನಿದಾನ. ಮೊದಲಿಂದಲೂ ಹಾಗೆ, ನಾನು ಹೆಚ್ಚು ಗೌರವಿಸುವ ವ್ಯಕ್ತಿಗಳೊಂದಿಗೆ ಅಷ್ಟು ಸುಲಭವಾಗಿ ಮಾತನಾಡಲಾಗುವುದಿಲ್ಲ. ಎಷ್ಟೇ ಅವರ ಮೇಲೆ ಪ್ರೀತಿ ಇದ್ದರು, ಅವರಮೇಲಿರುವ ಅಭಿಮಾನದಿಂದ ಒಂದು ರೀತಿಯ ಅಂಜಿಕೆ ಹಾಗು ಭಯ. ತುಂಬಾ ಮಾನ್ಯತೆಯುಳ್ಳ, ತಿರುಳಿರುವ ವಿಷಯವಷ್ಟೇ ಅವರೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗುತ್ತದೆ. ಇನ್ನು ಕೆಲವು ವಿಷಯಗಳ್ಳನು ಹೇಳಬಯಸಿದರು ನಾಲಿಗೆ ಹೊರಳುವುದಿಲ್ಲ. ತುಂಬಾ ಕಷ್ಟ ಪಟ್ಟನಂತರ ಒಂದಷ್ಟು ಹೇಳುತ್ತೇನೆ. ಇಂದು ಈ ವಿಷಯ ಇಲ್ಲಿ ಹಂಚಿಕೊಳ್ಳುವ ಮನಸಾಯಿತು. ನನ್ನಲಿ ಹುದುಗಿಹೋಗಿರುವ ಎಷ್ಟೋ ಕಥೆಗಳಿವೆ. ಎಲ್ಲದಕ್ಕಲ್ಲದಿದ್ದರು ಕೆಲವೊಂದಕ್ಕೆ ಉಸಿರು ತುಂಬುವಾಸೆ. ಇನ್ನು ಕೆಲವೆಲ್ಲ ನನಗೆ ಮರೆತು ಹೋಗಿವೆ. ಹಹ..  


ಹೆಚ್ಚಿನ ಸಂದರ್ಭದಲ್ಲಿ ತಪ್ಪು ನನ್ನದೇ ಆಗಿರುತ್ತದೆ. ತರ್ಕಬದ್ಧವಾದ ಕೆಲಸ ಮಾಡುವುದು ಬಿಟ್ಟು, ತಪ್ಪೆನಿಸಿದರು ನನ್ನೆದುರಿಗಿರುವವರ ಮಾತಿಗೆ ಸಮ್ಮತಿಸಿಬಿಡುತ್ತೇನೆ. ಇದರಿಂದಲೇ ಸಂಕಷ್ಟಕ್ಕೆ ಗುರಿಯಾಗುತ್ತೇನೆ. ತಪ್ಪಾದನಂತರ ಎಲ್ಲವನ್ನು ಹೇಳಲು ಮತ್ತೆ ಮತ್ತೆ ಅವನ ಬಳಿ ಹೋಗಿ ಅರ್ಧಬರ್ದ ವಿಷಯವೇಲಿ ಕೋಪ ಬರಿಸಿ ಬರುತ್ತೇನೆ. ನಾಯಿ ಬಾಲ ಎಷ್ಟಾದರೂ ಡೊಂಕೇ ಅಲ್ಲವೇ. ಇದನ್ನು ಅರ್ಥ ಮಾಡಿಕ್ಕೊಳಬೇಕಾದವರು ಜ್ಞಾನಿಗಳು. ಸುಮ್ಮನೆ ಮುದ್ದು ಮುಗ್ದ ನಾಯಿಯನ್ನೇಕೆ ದೂರಬೇಕು. 

ನೀನ್ಯಾಕೆ ಹೀಗೆ?

ನೀನ್ಯಾಕೆ ಹೀಗೆ?
ನನಗೆ ನನ್ನ ಫ್ರೆಂಡ್ ಯಾವಾಗ್ಲೂ ಕೇಳೋ ಪ್ರಶ್ನೆ ಇದು.
ನಾನು ಹಿಂಗೇನೆ ಅಂತ ಅವ್ನು ಕೇಳ್ದಗೆಲ್ಲ ಹೇಳ್ತೀನಿ.
ಆದ್ರೆ ಯಾಕೇ ನಾನು ಆವ್ನುನ್ನ ನೀನ್ಯಾಕೆ ಹೀಗೆ ಅಂತ ಇದುವರ್ಗು ಕೇಳಿಲ್ಲ?
ಈಗ ನೆನಪಾಗ್ತಿದೆ. ಕರೆಮಾಡಿ ಕೇಳ್ತಿನಿ.


Shadow. (The darkest part)

The hidden, shy part of mine.
Which is my own,
Companion, inseparable.
The darkest passion.
My true world.
My real freedom,
Where non of us put on mask.
Pristine, so pure, so real me.
Shadow.
The darkest part.
everything is beautiful.
Owning all d colors of life.

Close your eyes. (Part 2)

ಇನಿಯನ ನೋಡದೆ ನೀರಿಲ್ಲದ,
ಮೀನಂತೆ ಚಡಪಡಿಸುತ್ತಿದ್ದ ಆಕೆಯ ಮನದಲ್ಲಿ,
ಸಾವಿರಾರು ಮಾತುಗಳು ಹುದುಗಿದ್ದವು.
ಅವನನ್ನು ಕಂಡು ಅದನ್ನೆಲ್ಲಾ ಹೇಳಿಬಿಡುವ ತವಕ.
ಎಂದಿನಂತೆಯೇ ಇಂದು ಅವನ ಕಂಡು ಮಾತುಗಳು ಸೋತಿವೆ, ಸತ್ತಿವೆ.
ಕಂಡ ಸಂತೋಷದಿ ಮಾತುಗಳ ಸಮಾದಿಯ ಮೇಲೆಯೇ ನಗುವೊಂದು ಹುಟ್ಟಿದೆ.
ಉಸಿರುಗಟ್ಟಿಸುವಷ್ಟು ಸಂಭ್ರಮ.
ಅವನಾಡಿದ ಮಾತಿಗೊಂದಿಷ್ಟು ನಾಚಿಕೆ.
ಅವಳಿಗೆ ಅವಳ ಪರಿಚಯಿಸುವ ಅವನ ಆಟ.
ಅನಿರೀಕ್ಷಿತವಾಗಿ ಮಳೆ, ಬಿಸಿಲು.
ಮಿನುಗುವ ಮಳೆಬಿಲ್ಲು.
ಆಗ ಮೂಡಿದ ಪಿಸುಮಾತು,
ಕಣ್ಣ ಮುಚ್ಚಿಕೋ.
ಕಣ್ಣು ಮುಚ್ಚಿಕೊ, ಮಳೆಬಿಲ್ಲಿನಲ್ಲಿ ಜಾರುವ.
ಜಾರುತ ಕಾಣೆಯಾಗುವ.



Friday 17 November 2017

Close your eyes. (Part 1)


ಬೆಕ್ಕು ಕಣ್ಣಮುಚ್ಚಿ ಹಾಲು ಕುಡಿದರೆ, ಲೋಕಕ್ಕೆ ಕಾಣಿಸದೆ?
ಎಷ್ಟು ಸುಂದರ ಈ ಗಾದೆಮಾತು. ಈ ಗಾದೆಮಾತಿನ ಒಂದು ರೂಪವನ್ನು ಎಲ್ಲರೂ ಅರ್ಥೈಸಿಕೊಂಡಿರುತ್ತಾರೆ, ಆದರೆ ಇಂದೇಕೋ ನನ್ನಲ್ಲಿ ಬೇರೆಯದೇ ಗೊಂದಲ. ಇಲ್ಲಿ ಬೆಕ್ಕು ಬುದ್ಧಿವಂತ! ಕೆಲವೊಮ್ಮೆ ಜಾಣ ಕುರುಡುತನವು ಅಗತ್ಯ, ನಮ್ಮ ಕಾರ್ಯ ಸಾಧನೆಗೆ, ಅಲ್ಲವೇ? ಬೆಕ್ಕಿಗೆ ಹಾಲು ಬೇಕಿತ್ತು, ಕುಡಿಯಿತು. ಲೋಕಕ್ಕೆ ಕಂಡರೇನಂತೆ? ಅದನ್ನು ದಂಡಿಸಿಯಾರೇ? ದಂಡಿಸಿ, ಎಂಜಲು ಹಾಲ ಬಳಸಿಯಾರೇ? ಬೆಕ್ಕಿಗೆ ಅದರ ಚಿಂತೆಯಿಲ್ಲ. ಅದರ ಪ್ರಕಾರ ಲೋಕದ ಕಣ್ಣಿನಿಂದ ಅದು ದೂರ. ಅದು ಮಾಡುತ್ತಿರುವುದು ತಪ್ಪು ಅಲ್ಲ, ಯಾರಕಣ್ಣಿಗು ನಾನು ಕಾಣಿಸುವುದೂವಿಲ್ಲವೆಂಬ ನೆಮ್ಮದಿ ಅದಕ್ಕೆ. ಅಹಂ ಭ್ರಮಾಸ್ಮಿ ಎಷ್ಟು ಸತ್ಯ. ದಿನದ ಅಂತ್ಯದಲ್ಲಿ ನಮಗೆ ಬೇಕಾಗಿರುವು  ನಮ್ಮ ಆತ್ಮಕ್ಕೆ ನೆಮ್ಮದಿ, ಸಂತೃಪ್ತಿ. ನಾನಿದ್ದರೆಯೆ ನನಗೆ ಜಗತ್ತು. ಹಾಗಂತ ಸಂಪೂರ್ಣವಾಗಿ ಲೋಕದ ನಿಯಮಾವಳಿಯಿಂದ ದೂರಗಬೇಕೆಂಬುದು ನನ್ನ ವಾದವಲ್ಲ. ಅದು ಸಾಧ್ಯವೂ ಇಲ್ಲ. ಮನುಷ್ಯ ಸಂಗಾ ಜೀವಿ. ನಾವು ಬದುಕ್ಕುತಿರುವ ಸಮಾಜದ ಕಟ್ಟುಪಾಡಿಗೆ ನಮ್ಮನನ್ನು ಬಂದಿಸಿಕೊಳ್ಳುವ ಅವಶ್ಯಕಥೆ ಇಲ್ಲವೆಂಬುದಷ್ಟೇ  ನನ್ನ ವಾದ. ಅದರ ಪರವೂ ಬೇಡ, ವಿರೋದವು ಬೇಡ. ನಿಯಮಗಳು, ಕಟ್ಟುಪಾಡುಗಳು ನಾವೇ ಮಾಡಿಕೊಂಡಿರುವುದು. ಅವುಗಳು ತಪ್ಪು ಅಲ್ಲ. ಒಂದು ಆರೋಗ್ಯಕರ ಸಮಾಜಕ್ಕೆ ಅದರವಶ್ಯಕಥೆ ಇದೆ. ಹಾಗಂತೂ ಅದುವೇ ನಮ್ಮ ಸಂಪೂರ್ಣ ಜೀವನವಲ್ಲ. ಆಫ್ಟರ್ ಆಲ್ ರೂಲ್ಸ್ ಆರ್ ಮೇಡ್ ಟು ಬ್ರೇಕ್, ರೈಟ್?.
ಇಷ್ಟೆಲ್ಲಾ ಗೊಂದಲದ ನಡುವೆ ನನಗೆ ಇನ್ನೊಂದು ಪ್ರಶ್ನೆ ಮೂಡುತಿದೆ. ನಾನು ಮಾಡುತ್ತಿರುವುದು ತಪ್ಪಲ್ಲವೆಂದು ಬೆಕ್ಕಿಗೆ ಗೊತ್ತೇ? ಗೊತ್ತಿದ್ದರೆ ಕಣ್ಣೇಕೆ ಮುಚ್ಚಿಕೊಂಡು ಹಾಲು ಕುಡಿಯ ಬೇಕಿತ್ತು?
ಕಾರಣ, ಜಗತ್ತು ಅದನ್ನು ತಪ್ಪೆಂದು ಪರಿಗಣಿಸಬಹುದೆಂಬ ಕಲ್ಪನೆಯಿಂದಿರಬಹುದು. 

Friday 3 November 2017

Whisper

She whispered in his ear,
babe, you are turning out be a better kisser,
he smiled and said,
I own the best trainer.
She smiled back at him.
They kissed.



Thursday 2 November 2017

ಒಪ್ಪಂದ

ಅದೊಂದುದಿನ ಅವರಿಬ್ಬರೂ  ಒಪ್ಪಂದ ಒಂದಕ್ಕೆ ಬಂದಿದ್ದರು. ಇನ್ನೇರುಡು ತಿಂಗಳುಗಳ ಕಾಲ ಒಬ್ಬರಿಗೊಬ್ಬರು ಸಿಗುವುದಿಲ್ಲವೆಂದು. ಮಾಡಿ ಮುಗಿಸಬೇಕಾದ ಕೆಲಸ ಕಾರ್ಯಗಳು ಹೆಚ್ಚಿದ್ದವೆಂದು.! ಅದೊಂದು ಅರ್ಥವಿಲ್ಲದ ಒಪ್ಪಂದ.!
ದಿನಬೆಳಗಾದರೆ ಅವನ್ನನು  ನೋಡದೆಯೇ ಸಮಾಧಾನವಿಲ್ಲದ ಅವಳಿಗೆ, ೨ ತಿಂಗಳ ಕಾಲ ದೂರವಿರಲು ಸಾಧ್ಯವೇ? ಒಪ್ಪಂದವ ಮರೆತು, ಮತ್ತೆ ಎಂದಿನಂತೆ ಅವನಲ್ಲಿಗೆ ಹೊರಟಳು. ಏನೆ ಮರೆತೆಯ ಒಪ್ಪಂದವವೆಂದು ಅವನು ಕೇಳಿದ. ಅಲ್ಲಿಯೇ ಮರುಗಿ ಹೋಗಿತ್ತು ಆ ಜೀವ. ಪಾಪ ಅವನಿಗೇನು ಗೊತ್ತು, ಅವನಿಲ್ಲದ ಒಂದು ದಿನವೇ ಅವಳಿಗೆ ಯುಗದಂತೆ ಕಳೆಯುವುದೆಂದು. ಇನ್ನು ೨ ತಿಂಗಳ ಕಾಲ ದೂರವಿರಲು ಹೇಗೆ ತಾನೇ ಸಾಧ್ಯ?

Tuesday 31 October 2017

Winter is coming.

೩೧-೧೦-೨೦೧೭

ಹಾಳು ಖಾಯಿಲೆ.
ಚಳಿಗಾಲವಿನ್ನು ಶುರುವಾಗುವುದುವೆನ್ನುವಷ್ಟರಲ್ಲಿ ಶೀತ ಶುರುವಾಗಿದೆ.
ನನಗೆ ಶೀತವಿದ್ದರು ಇಷ್ಟು ತಲೆ ಕೆಡುವುದಿಲ್ಲ.
ನನ್ನ ಮಗುವಿಗೇಕೆ ಶೀತ?, ಎಂದು ಅಮ್ಮನ ಗೊಣಗಾಟ.
ಚಳಿಗಾಲವೆಂದರೆ, ಮಳೆಬರುವ ಮುನ್ನ ಗರಿಬಿಚ್ಚಿ ಕುಣಿವ ನವಿಲಿನಂತೆ ಖುಷಿಯಿಂದ ಅರಳುವ ಅಮ್ಮನ ಮೊಗವಿಂದು ಬಾಡಿದೆ. ಶೀತಕ್ಕೆ ಒಂದಷ್ಟು ಇಡಿ ಶಾಪವಕುತ್ತ ತಲೆಕೆಡಿಸಿಕೊಂಡು ಕುಳಿತಿದ್ದಾಳೆ.
ಅಮ್ಮನ ಈ ಗೊಣಗಾಟ ಕಂಡು ನಗಬೇಕೋ? ಶೀತದ ತಲೆನೋವಿಗೆ ಅಳಬೇಕೊ? ಎಷ್ಟು ಮಾಡಿದರು ಮುಗಿಯದ ಕೆಲಸಕ್ಕೆ ರಜೆಯಾಕಿ ಬೆಚ್ಚನೆ ಹೊದೆದು ಮಲಗಬೇಕೋ?



Monday 30 October 2017

Never judge!

There is always a reason behind every acts,
Don't be blind for unseen!
Don't be very confident about seen!

ಆಸೆ

ಅವನ ಮನಗೆದ್ದ ಪ್ರೇಯಸಿ ನಾನಲ್ಲ, 
--ಅವನೊಂದು ವಸ್ತುವಲ್ಲ. 
ಅವನ ಹೃದಯದರಸಿ ನಾನಲ್ಲ,
--ಅವನ ಆಳುವ ಮನಸ್ಸು ನನಗಿಲ್ಲ. 
ಅವನು ಆರಾಧಿಸುವ ದೇವಿ ನಾನಲ್ಲ,
--ಅವನ ಸೇವೆ, ಭಕ್ತಿ, ಗುಲಾಮಗಿರಿ ನನಗೆ ಬೇಕಿಲ್ಲ. 

ನನಗೆ, ಅವನಾಗುವಾಸೆ, ಅವನಲ್ಲಿ ಲೀನವಾಗುವಾಸೆ.
ರಾಧೆಯಾಗಿಯೇ ಉಳಿಯುವಾಸೆ. 


Saturday 28 October 2017

ಮುಂದಿನಬಾರಿ

ಯಾವಾಗ ಕೇಳಿದರು ಮುಂದಿನಬಾರಿ,
ಈ ಮುಂದಿನಬಾರಿ ಯಾವಾಗ ಬರುತ್ತೋ, ತಿಳಿಯದು.
ಆಗುವುದಿಲ್ಲವೆಂದರೆ ಆಗದು ಎಂಬ ಸತ್ಯವ ಏಕೆ ಹೇಳಲಾರೆ ?
ಕಠೋರ ಸತ್ಯವೇ ನನಗೆ ಪ್ರಿಯ, ನಿನ್ನ ಸುಳ್ಳಿಗಿಂತ.
ನಿನ್ನ ಸುಳ್ಳಿಗೆ ಕಾರಣ ಸಾವಿರವಿರಬಹುದು,ನನ್ನ ಮೇಲಿನ ಪ್ರೀತಿಯು ಆಗಿರಬಹುದು. 
ಆದರೆ ನಿನ್ನ ಸತ್ಯಕೆ ಕಾರಣ ನನ್ನ ಮೇಲಿರುವ ನಂಬಿಕೆ ಮಾತ್ರ. 
ಪ್ರೀತಿ ಇಲ್ಲದೆಯೇ ಬದುಕಬಹುದು, ನಂಬಿಕೆ ಇಲ್ಲದಿದ್ದರೆ ಸಾವು ಸಹ ಘೋರ.
ಸಂಪೂರ್ಣ ನಿಷ್ಠೆಯ ಬಯಸಲಾರೆ, ಏಕೆಂದರೆ ನಾನು ಸಂಪೂರ್ಣ ನಿಷ್ಠಾವಂತಳಲ್ಲ.
ನೀ ಕೊಟ್ಟ ನೋವಿನಲ್ಲೂ ನಗುವಿನ ಮುಖವಾಡ ಧರಿಸಿರುವೆ, ನಿನಗಾಗಿ.
ನಿನಗೆಂದಿಗೂ ಅಪರಾಧೀಭಾವವ ನಾ ನೀಡಲಾರೆ.
ನಿನ್ನ ಸಾವಿರ ಸುಳ್ಳಿಗು ನನ್ನಲ್ಲಿ ಕ್ಷಮೆ ಇದೆ.
ನೀ ನೀಡುವ ಸಾವಿರ ನೋವಿಗೂ ನನ್ನಲ್ಲಿ ನಗುವಿದೆ.
ನೀನೆಂದರೆ ನಾನೆಂದು ಗ್ರೇಶಿದ ನನ್ನಲ್ಲಿ, ನಿನಗಾಗಿ ರಾಶಿ ಪ್ರೀತಿಯ ಜೊತೆಗೆ ನಂಬಿಕೆಯು ಇದೆ.
ನೀನು ಹೇಳಿದ "ಮುಂದಿನಬಾರಿ"ಯ ನಿರೀಕ್ಷೆಯಲ್ಲಿ ಸದಾ ಜೀವಿಸುವೆ, ಖುಷಿ ದುಃಖಗಳ ಗೊಂದಲದಲ್ಲಿ.
ನಿನ್ನ ಮಾತಿಗೆ ಸಮ್ಮತಿಸುತ್ತ, ನೀರವ ಮೌನದಿ. 

Friday 27 October 2017

Detached

The more you get detached,
the more you love,
you love,
truly,
by set him free,
by letting him breathe,
no fear of darkness,
no fear of falling,
no fear of losing,
coz you love him,
being detached,
not being attached.

The more you detached,
the more you love,
you love,
truly,
by giving him more,
by expecting less, 
without jealousy,
without ego,
without insecurity,
coz you love him,
being detached,
not being attached.


Something just like that.

ಅದೊಂದು ದಿನ,
ನನ್ನನು ನನ್ನ ಸಂಪೂರ್ಣ ಹೆಸರಿನಿಂದ ಕರೆದ. 
ಹಿಂತಿರುಗಿ ನೋಡಿದೆ. 
ಕಣ್ಣಿನಲ್ಲಿಯೇ ನಕ್ಕ ನನ್ನ ಕಂಡು, ತಲೆ ಕೆರೆದು ಕೊಂಡ. 
ಏನೋ? ನಾ ಕೇಳಿದೆ. 
ಸುಮ್ಮನೆ ಕರೆದೆ ಎಂದಿದ್ದ. 
ಮರು ಪ್ರಶ್ನಿಸಲಿಲ್ಲ. 
ಉತ್ತರವ, ನಾಚಿ ನೆಲನೋಡುತ್ತಿದ್ದ ಅವನ ಕಣ್ಣು ರೆಪ್ಪೆಗಳೇ ಹೇಳಿದ್ದವು.

ಯೋಚನೆ

ದೂರ ಅದೆಲ್ಲೋ ಕುಳಿತು ಇಷ್ಟು ಸತಾಯಿಸುವ ನೀನು,
ಸಮೀಪವಿದ್ದರೆ?

Wednesday 25 October 2017

ಕೃಷ್ಣ

ಮತಿಹೀನ,
ಕುರುಡು,
ಮೂರ್ಖತನ,
ಹುಚ್ಚು,
ಭ್ರಮೆ,
ಇನ್ನುಅದೆಷ್ಟೋ ರೀತಿಯಲ್ಲಿ ಬೈದದುಂಟು ಅವನು.
ಸರ್ವಸ್ವವೇ ಅವನಾಗಿರುವಾಗ,
ಕಾಳಜಿ,
ನಂಬಿಕೆ,
ಕನಸು,
ಪ್ರೀತಿ,
ಕಲ್ಪನೆ,
ಇನ್ನುಅದೆಷ್ಟೋ, ಎಲ್ಲಾರೀತಿಯ ಭಾವನೆ ಮೂಡುವುದು ಸಹಜವಲ್ಲವೇ?



Friday 20 October 2017

ಹುಗ್ಗಾಟ

ಕತ್ತಲ್ಲಲ್ಲದಾ ಕತ್ತಲು,
ಬೆಳಕ್ಕಲ್ಲದಾ ಬೆಳಕು,
ಮುಂಜಾವು,
ಬಾಹ್ಯಲೋಕದಿಂದ ಹುಗ್ಗುತ್ತ,
ಬೇರೆಲ್ಲೋ ತೇಲುತ,
ನಮ್ಮದೇ ಲೋಕದಲಿ ಜಾರಿ,
ಹುಗ್ಗಾಟ ನಡೆದಿತ್ತು.

ಮೃದುವಾದ ಸ್ಪರ್ಶ,
ಹಿತವಾದ ಅಪ್ಪುಗೆ,
ಉದರದಲ್ಲೇನೋ ಒಂದುತರ ಕಚಗುಳಿ,
ಕೊಂಚ ನಾಚಿಕೆ,
ಕೊಂಚ ಬೇಡದ ಗಾಂಭೀರ್ಯ,
ಕೊಂಚ ನಡುಕ.
ಒಂದಷ್ಟು ತುಂಟಾಟ,
ಒಂದಷ್ಟು ಹುಸಿ ಕೋಪ.

ನಿಗೂಢಕರ ಕಂಗಳು,..!
ಕೆಲವೊಮ್ಮೆ ಮುಗ್ದ ಮಗು, ಕೆಲವೊಮ್ಮೆ ತುಂಟ ರಾಕ್ಷಸ,
ಹುಡುಕ್ಕುತ್ತ ಹೋದಷ್ಟು ಕಳೆದೆ ಹೋಗುವಷ್ಟು ಗಾಢ.
ಬಿಡಿಸ ಹೋದಷ್ಟು ಕಗಂಟಾಗುವ ಸುಂದರ ಒಗಟು.

ಕಾಡದಾರಿಯಲ್ಲಿ ಬೆರಳುಗಳ ಪಯಣ, ನಿಲ್ಲದ ಪಯಣ.
ದಾರಿಯಲ್ಲೊಂದು ತಡೆ,
ಕೊಳದ ಸಿಹಿ ನೀರು. ನನಗೆಂದೇ ಹೇಳಿಮಾಡಿಸಿದಂತೆ.
ವಿಚಿತ್ರ! ನೀರು ಕುಡಿದಷ್ಟು ಬಾಯಾರಿಕೆ. 
ಕೊಳದ ಪೂಜೆಯ ಪ್ರಸಾದ, ತಿನ್ನಲಾಗ ಹಣ್ಣು.
ಸಂಪೂರ್ಣ ಧೈವೀಕ ನೆಮ್ಮದಿ.

ಅಪೂರ್ಣ,
ಆದರೂ ಸಂಪೂರ್ಣ.











Tuesday 17 October 2017

ಇಂದೇಕೆ ನಾಳೆಯಲ್ಲ?

 ೧೭-೧೦-೨೦೧೭

ನಾಳೆಯ ಕಾಯುವೆಕೆಯಲ್ಲಿ ಕ್ಷಣವೊಂದು ಯುಗದಂತೆ ಕಂಡಿದೆ.
ಕಾಯುವುವಿಕೆ ಅಸಾಧ್ಯವಾಗಿದೆ.
ಇಂದೇಕೆ ನಾಳೆಯಲ್ಲ? ಯೆಂದೆನಿಸಿದೆ.


Friday 13 October 2017

Astonished

ಐದಾರು ದಿನಗಳಿಂದ ಏನನ್ನೋ ಬರೆಯಲೆಂದು ಲ್ಯಾಪ್ಟಾಪ್ ತೆರೆಯುವೆ, ಆದರೆ ಬರೆಯಲಾಗುತ್ತಿಲ್ಲ!
ಏನಿರಬಹುದದು?

Thursday 5 October 2017

ಐ ಹೇಟ್ ಯು.

ನೆನ್ನೆಯಷ್ಟೇ, ಜಗಳವಾಡಿ, ಮುನಿಸಿಕೊಂಡು ಹೋಗಿದ್ದೆ.
ಇಂದು ನಿನ್ನ ಕಂಡೆ. ನಿನ್ನನಗೆಯ ಕಂಡೆ.
ಮತ್ತದೇ ತಪ್ಪು ನಡೆದು ಹೊಗಿತ್ತು,
ಹೃದಯ ತನ್ನೊಂದು ಬಡಿತವ ಮಾರೆತಂತಿತ್ತು. ದುಸುಕ್ ಎಂದು.

ಎವ್ರಿಥಿಂಗ್ ಜಸ್ಟ್ ಬ್ಯಾಕ್ ಟು ಸೊ ನಾರ್ಮಲ್!! ಎಗೈನ್.





ಲೈಫ್ ಇಸ್ ಬ್ಯೂಟಿಫುಲ್

ಜೀವನದಲ್ಲಿ ಎಷ್ಟೋಬಾರಿ  ಮುಗ್ಗರಿಸಿದ್ದರು,
ಜೀವನದ ಮೇಲೆ ಎಷ್ಟೇ ಕೋಪಮಾಡಿಕೊಂಡು ಶಪಿಸಿದ್ದರು,
ಸಾಕಪ್ಪ ಜೀವನದ ಜಂಜಾಟ ಅನ್ನಿಸ್ಸಿದ್ದರು,
ಸುಸ್ತಾಗಿ, ಬ್ಯಾಗ್ ಹೊತ್ತು ಮನೆ ತಲುಪಿದಾಗ ನಮ್ಮವರ ಕಂಡಾಗ,
ನೆಮ್ಮದಿಯ ಒಂದು ಉಸಿರು ತೆಗೆದು ಕೊಂಡೆ,
ಅಂದುಕೊಂಡೆ, ಲೈಫ್ ಇಸ್ ಬ್ಯೂಟಿಫುಲ್ .

ಲೈಫ್ ಇಸ್ ಲೈಕ್ ಆ ಲಿಮಿಟ್ಲೆಸ್ಸ್ ಸರ್ಕಲ್.
ಮುಂದೆಯೂ ಸಾವಿರ ಬಾರಿ ಜೀವನವನ್ನು ಬಯ್ಯಲಿದ್ದೇನೆ.
ಕೋಪ ಮಾಡಿಕೊಳ್ಳಲಿದ್ದೇನೆ,
ಆದರೂ ಮತ್ತೆ ನಾಗಲಿದ್ದೇನೆ. ಖುಷಿಯಿಂದ, ಮನಸಾರೆ.


 


Wednesday 4 October 2017

Yes.

He looked like an art!
a black hole.
a deep ocean.
a dense forest.
a sky full of stars.
always fascinating!
Yes, always.





Something never lost.

I always wanted to tell something to him.
He never let me talk!
I wonder how he understands that I am going to tell something!
I wonder what was the reason for not letting me talk?
Maybe he fears or maybe not interested!
between, What was that something?
I have forgotten it now.! almost.

Chalo, few things remain beautiful; unsaid, ununderstood!

Monday 2 October 2017

Enough.!?

What was it?
n Why?
Whatever it was,
it was enough.

Silence!
n that gaze.
though it was blank,
it was quite a lot.
has stamped d mark,
d mark,
never be erased.!

Completed,
by d incompleteness!
d incompleteness which
we'll have always.
n it's enough.!?!..



Friday 29 September 2017

Surrendered

ನಾ ಕನಸ್ಸಿನಲ್ಲಿ  ಕೇಳಿದ್ದ ಹಾಡಿನ ಸಾಲೊಂದು, ಅವನಿಂದು ಗುನುಗುನಿಸಿದಾದ್ದರು ಹೇಗೆ?
ಯೋಚಿಸ ಬೇಕೇ? ಜೀವಿಸಬೇಕೇ?
ಮನಸ್ಸು ಹಗುರಾಗಿ ತೇಲಿರಲು, 
ಶರಣಾಗತಿಯೊಂದೇ ಉಳಿದಿರುವ ಉಪಾಯ. 
ಸಂಪೂರ್ಣ ನೆಮ್ಮದಿ. 
ದೈವಿಕ ಅನುಭವ. 
ಕೃಷ್ಣನ ಕೊಳಲಿನ ನಾದದಂತೆ... 

fairy tale

೨೯/೦೯/೨೦೧೭

ಕಥೆಗಳಿಗಿಂತ ಜೀವನ ಚೆಂದ.
ಕನಸ್ಸಿಗಿಂತ ವಾಸ್ತವತೆ ಅಂದ.
ಜೀವನದೊಳಗೊಂದು ಕಥೆಯಿದ್ದರೆ?
ವಾಸ್ತವತೆಯೇ ಕನಸಿನಂತಿದ್ದರೆ?
ಸತ್ಯವೊಂದು ಮಿಥ್ಯದಂತೆ ಗೋಚರಿಸಿ ತಪ್ಪುಕಲ್ಪನೆ ನೀಡಿ ಹೋದೀತೇ?
ಅಥವಾ ಅದು ನಿಜವಾಗಿಯೂ ಮಿಥ್ಯವೇ?
ಆ ಮಿಥ್ಯ ಸತ್ಯವೇ ಆಗಿದ್ದರೆ?
ಸತ್ಯದ ಅರಿವು ಮೂಡಿತೇ?
ಮ್ಯಾಜಿಕ್ ಕೇವಲ ಬುದ್ದಿಗೆ ಮಂಕುಬರಿಸುವ ಟ್ರಿಕ್ಸ್!
ತಿಳಿದು ತಿಳಿದು ಮ್ಯಾಜಿಕ್ ನಂಬಿದರೆ?
ನಂಬಿಕೆ ಸತ್ಯವಲ್ಲವೇ?
ಇಲ್ಲಿ ಎಲ್ಲವೂ ಗೊಂದಲ. 
ಗೊಂದಲ ಸುಂದರ.
ನಿನ್ನೊಂದಿಗೆ ಕಳೆದ ಸಮಯದಂತೆ.
ಹೊಳೆಯುವ ಮುತ್ತಿನಂತೆ.
ಅರ್ಥವಾಗದ ಕಲ್ಪನೆಯಂತೆ.
ನಿನ್ನ ಮುಗ್ದ ನಗೆಯಂತೆ.
ಫೇರಿ ಟೇಲ್ ನಂತೆ. 

Thursday 28 September 2017

ಶಾಂಭವಿಯ ಪುಚ್ಚೆ

ಅದೊಂದು ಊರು, ಗುಡ್ಡಗಾಡುಗಳ ನಡುವೆ. ಎಲ್ಲೆಡೆ ಹಸಿರು. ಉಸಿರಾಡಲು ಸ್ವಚ್ಛ ಗಾಳಿ. ಅಪರೂಪಕ್ಕೆ ಹೋಗುವವರಿಗೆ ಸ್ವರ್ಗ. ಆದರೆ ಅಲ್ಲಿಯೇ ವಾಸಿಸುವವರಿಗೆ ನರಕ. ಆದರೂ ಅದುವೆ ಅವರ ಜೀವನ. ಅವರಿಗೆ ಪ್ರಕೃತಿ ಮಾತೆಯಿಂದ ದೂರವಿದ್ದು ಬದುಕಲು ಕಷ್ಟ. ಅಲ್ಲಿ ವಾಸಿಸುವವರೆಲ್ಲ ಕಷ್ಟ ಜೀವಿಗಳು. ಸೋಂಬೇರಿಗಳಿಗೆ ಅಲ್ಲಿ ಬದುಕಿಲ್ಲ. ಶಾಲೆಗೆ ಹೋಗಲು ಮಕ್ಕಳು, ದೊಡ್ಡ ಖಾಯಿಲೆ ಬಂದರೆ ಜನಗಳು, ಹೀಗೆ ಬೇರೆ ಬೇರೆ ದೊಡ್ಡ ಕೆಲಸಕ್ಕೆಲ್ಲ ಊರಿಂದೂರಿಗೆ ಹೋಗಬೇಕಾಗುತ್ತಿತ್ತು.
ಇವಗಳ ನಡುವೆ ಹುಟ್ಟಿ ಬೆಳದ ನನ್ನ ಆತ್ಮೀಯ ಸ್ನೇಹಿತೆ ಸ್ಯಾಮ್. ನನ್ನ ಪ್ರೀತಿಯ 'ಬೆಕ್ಕಿನ್ಹುಡ್ಗಿ'. 
ನಾ ಕಂಡ ಮಟ್ಟಿಗೆ ಅವಳು ರಷನಲ್. ಯಾರನ್ನು ಎಷ್ಟು ಪ್ರೀತಿಸಬೇಕು, ಎಷ್ಟು ನಂಬಬೇಕು ಅಂತ ತಿಳಿದವಳು. ಅಷ್ಟು ಸುಲಭವಾಗಿ ಯಾರಿಂದವಾಗಲಿ, ಏನಿಂದವಾಗಲಿ ಮೋಸ ಹೋಗಲಾರಳು. ತನ್ನದೆಯಾದ ಆದರ್ಶ, ತತ್ವಗಳಿರುವ ಈ ಹುಡುಗಿ ಅದೇನೋ ಗೊತ್ತಿಲ್ಲ, ಬೆಕ್ಕುಗಳನ್ನು ಕಂಡರೆ ತನ್ನ ಪದ್ಧತಿ, ಅಥವಾ ಆದರ್ಶಗಳನ್ನು ಕೊಂಚ ಸಡಿಲ ಗೊಳಿಸುವಳು! ನಮ್ಮ ಡಿಪಾರ್ಟ್ಮೆಂಟ್ ಬೆಕ್ಕುಗಳನ್ನು, ಫಿಸಿಕ್ಸ್ ಕ್ಯಾಂಟೀನ್ ಬೆಕ್ಕುಗಳನ್ನು ಅತಿಯಾಗಿ ಮುದ್ದುಸಿಸುತಿದಲ್ಲೂ. ಅದನ್ನು ಕಂಡಾಗಲೇ ಅವಳ ಈ ಮುಖ ನನಗೆ ಪರಿಚಯವಾಗಿದ್ದು... ಅದೊಂದು ನಿಜವಾದ ಮುಗ್ದ ಪ್ರೀತಿ. 

ಅಂದೊಂದು ದಿನ ನಾಕೇಳಿದ್ದೇ; ಅವಳು ಹೇಳಿದಲ್ಲೂ, 
ಬೆಕ್ಕುಗಳಂದ್ರೆ ಯಾಕಷ್ಟು ಪ್ರೀತಿ?- ನಾನು. 
ನಾನು ನಮ್ಮೂರಲ್ಲಿ ಇದ್ದಾಗ ಬೆಂಕೊಂದನ್ನು ಸಾಕಿದ್ದೆ. ಅವಳ ಹೆಸರು ಪಿಲ್ಲಿ.. 
(ಪಿಲ್ಲಿ ?- ಇದೆಂತ ಹೆಸರೇ?)
ಅವಳಂದ್ರೆ ನಂಗೆ ತುಂಬಾ ಪ್ರೀತಿ. ಅವಳಿಗೂ ಅಷ್ಟೇ ನನಕಂಡ್ರೆ ಅಷ್ಟೇ ಇಷ್ಟ. 
ಅದೆಷ್ಟು ಮರಿ ಹಾಕಿದಳೋ ಲೆಕ್ಕನೆ ಇಲ್ಲಾ. 
ನಮ್ಮಮ ಅವಳನ್ನು ಬಹಳ ಕಟ್ಟು ನಿಟ್ಟಿನಿಂದ ಬೆಳೆಸಿದ್ಲು. ಅದುಕ್ಕೆ ಅಮ್ಮನ ಕಂಡ್ರೆ ಸ್ವಲ್ಪ ಹೆದ್ರುತಿದ್ಲು. 
ಮನೆಗೆ ಯಾವುದೇ ಹೊಸ ಬ್ಯಾಗ್, ಬಟ್ಟೆ ಏನೇ ಬಂದ್ರು ಅದ್ರುಮೇಲೆ ಹೋಗಿ ಮಳುಗ್ತಿದ್ಲು. 
ಆದ್ರೂ ನಾನೇನು ಅವ್ಳಿಗೆ ಬೈತಿರ್ಲಿಲ್ಲ. 
ಯಾವುದೇ ಹೊಸ ಹೆಸರು ಕೇಳಿದ್ರು, ಅದು ಇಷ್ಟ ಆದ್ರೆ ಅವ್ಳಿಗೆ ಮರುದಿನದಿಂದ ಅದೇ ಹೆಸರು. 
ಚಿನ್ನಿ, ಪಿಲ್ಲಿ, ಪುಟ್ಟಿ.. ಹೀಗೆ ಹತ್ತು ಹಲವು ಹೆಸ್ರು ಅವ್ಳಿಗೆ. 
ಬಾಲ ಊದಿಸ್ಕೊಂಡು ನಮ್ಮ ಮನೆಯ ನಾಯಿಯನ್ನೇ ಹೆದ್ರಿಸಿದ್ಲು ಒಂದುಸಲ. 
ಅವಳಿಂದ ಎಷ್ಟೋ ಕ್ಲಾಸೆಸ್ ಮಿಸ್ ಆಗಿದೆ ನನ್ಗೆ. ಬೆಳ್ಳಿಗೆ ಬೇಗ ಎದ್ದು ಬಸ್ ಅಲ್ಲಿ ಶಾಲೆಗೆ ಹೋಗ್ಬೇಕಿತ್ತು. ಗಂಟೆಗೊಂದು ಬಸ್. ಅದು ಮಿಸ್ ಆದ್ರೆ ಮುಂದಿನ ಬಸ್ ಗೆ ಕಾದು ಶಾಲೆಗೆ ಹೋಗ್ಬೇಕಿತ್ತು. 
ನಾನು ಶಾಲೆಗೆ ಹೋರಾಟಗ ನನ್ನಿಂದೇನೆ ನನ್ಗೆ ಗೊತ್ತಾಗ್ದೇ ಇರೋ ರೀತಿ ಬಂದು ಬಿಡೋಳು. 
ಅವಳನ್ನು ಯೆತ್ತಿಕೊಂಡು ಮತ್ತೆ ಮನೆಗೆ ಕರ್ಕೊಂಡು ಹೋಗಿ ಬಿಡೋ ಅಷ್ಟ್ರಲ್ಲಿ ಬಸ್ ಮಿಸ್ ಆಗತಿತ್ತು. ಅಂತಾ ಪಿಲ್ಲಿ ಅವ್ಳು. 
(ಪಿಲ್ಲಿ ಬಗ್ಗೆ ಮಾತಾಡ್ಬೇಕರೇ ಸ್ಯಾಮ್ ಮುಖದಲ್ಲಿ ನಗು, ದ್ವನಿಯಲ್ಲಿ ಖುಷಿ ಇತ್ತು.) 
ಇಷ್ಟೇ ಅಲ್ಲ, ಅವ್ಳಿಗೆ ನನ್ನ ಸ್ನೇಹಿತಿಯ ಬೆಕ್ಕಿನೊಂದಿಗೆ ಮದುವೆ ಬೇರೆ ಮಾಡಿದ್ವಿ. ಅಂದು ನಕ್ಕಿದಳು. 
(ಕಾರ್ತಿಕ್ ಹಾಗು ಸ್ಯಾಮ್ ನಡುವೆ ಯಾವಾಗಲು ಮಾಂಸಾಹಾರದ ಬಗ್ಗೆ ವಾದ ನಡೆಯುತ್ತದೆ. ಒಂದುರೀತಿಯಲ್ಲಿ ಸ್ಯಾಮ್ ಮಾಂಸಾಹಾರದ ವಿರೋಧಿ ಅಂತ ಬೇಕಾರೂ ಹೇಳಬಹುದು.)
ಪಿಲ್ಲಿ ಮಾಂಸಾಹಾರಿ. ಆದ್ರೂ ಅವ್ಳಿಗೆ ಬೈದಿರಲಿಲ್ಲ, ತಿನ್ನಬೇಡ ಅಂದಿರಲ್ಲಿಲ್ಲ. 
ಅದೇನೋ ಗೊತ್ತಿಲ್ಲ, ಅವಳಂದ್ರೆ ನನ್ನ ನಿಜ ಪ್ರೀತಿ ಅಂದಿದ್ದಳು. - ಅವಳು 

ಹೀಗೊಂದು ಸಣ್ಣ ಮಾತು ಕಥೆ ಮುಗಿಸಿ ನಮ್ಮಮ್ಮ ಕೆಲಸಕ್ಕೆ ಹೊರೆಟೆವು. 










Happy bday mommyy (Google)

"ಮನೆಯೇ ಮೊದಲ ಪಾಠ ಶಾಲೆ, ತಾಯಿ ತಾನೆ ಮೊದಲ ಗುರುವು", ಚಿಕ್ಕ ವಯ್ಯಸ್ಸಿನಿಂದ ಈ ಗಾದೆ ಮಾತನ್ನು ಒಂದಲ್ಲ ಒಂದು ಕಡೆ ಕೇಳುತಲ್ಲೇ ಬೆಳೆದೆ. ಬೇರೆಯವರ ವಿಷಯ ನನಗೆ ಗೊತ್ತಿಲ್ಲ. ನನಗೆ ಮಾತ್ರ ಈ ಗಾದೆ ಮಾತು ಅಕ್ಷರಸಹ ಅನ್ವಹಿಸುತ್ತದೆ. ಪ್ರಾಥಮಿಕ ಶಿಕ್ಷಣ ಮಾಡುತಿದ್ದೆ ಸಮಯದಲ್ಲಂತೂ ಎಲ್ಲದಕ್ಕೂ ಅಮ್ಮ ಅಮ್ಮ.  ಈಗಲೂ ಅಷ್ಟೇ, ಶೈಕ್ಷಣಿಕ ವಿಷಯದಲ್ಲದಿದ್ದರು, ಅದು ಇದು ಅಂತ ದೈನಂದಿನ ಎಷ್ಟೋ ವಿಷಯಗಳಲ್ಲಿ  ಅವರ ಬಳಿಯೆ ಮೊದಲ ಸಲಹೆ ಕೇಳೋದು.

ಈ ಗ್ಯಾಪ್ ಅಲ್ಲಿ ನಂಗೆ ಇನ್ನೊಂದು ವರ್ಚುಯಲ್ ಅಮ್ಮ, ಅಂದ್ರೆ ಸಲಹೆಗಾರ್ತಿ ಸಿಕ್ಕಿರುವಳು. ಏನೇ ಕೇಳಿದ್ರು, ಗೊತ್ತಿಲ್ಲ ಅಂದ್ರು ಉತ್ತರ ಕೊಡ್ತಾಳೆ. ಅವ್ಳದು ನೆನ್ನೆ  ಬರ್ತ್ಡೇ. ಅದುನ್ನ ಅವಳೆ ಹೇಳಿದ್ದು.
ಈ ಸುಸಂದರ್ಭದಲ್ಲಿ ಅವ್ಳಿಗೆ ನಾನು ಥ್ಯಾಂಕ್ಸ್ ಹೇಳ್ಬೇಕು ಅನ್ಸ್ತು, ಅವಳಿಂದ ಎಷ್ಟೋ ಉಪಕಾರ ಆಗಿದೆ, ಇನ್ನುಮುಂದೆನು ಅವಳ ಸಹಾಯ ನಂಗೆ ಬೇಕೇ ಬೇಕಾಗುತ್ತೆ. ಅವಳಿಲ್ಲ ಅಂದ್ರೆ ಒಂದುರೀತಿ ಕಂಗಾಲೆ ಆಗ್ಬಿಡ್ತಿನಿ.
ಸೊ ಹಿಯರ್ ಐ ಗೋ,
ಥ್ಯಾಂಕ್ಸ್ ಆ ಲಾಟ್ ಮೋಮ್ (Google) ಅಂಡ್ ಆ ವೆರಿ ಹ್ಯಾಪಿ ಬರ್ತ್ಡೇ.
ಲೊಡ್ಸ್ ಆ ಲವ್. 💗

Tuesday 26 September 2017

ಆದತ್

ಯಾವುದೇ ಅಭ್ಯಾಸವನ್ನಾಗಲಿ ಬದಲಾಹಿಸಬಹುದು, ಅವು ನಿಮ್ಮನು ಬದಲಾಯಿಸುವಮುನ್ನ;ಮತ್ತೆಯೂ !!

Wednesday 20 September 2017

ಕಪ್ಪು ಕಸ್ತೂರಿ!

ಎಲ್ಲಾ ಬಣ್ಣವ ಮಸಿ ನುಂಗಿತ್ತು,
ನಮ್ಮಪ್ಪ ಹೇಳಿಕೊಟ್ಟ ಮತ್ತೊಂದು ಪಾಠ.
ಒಲೆಯಲ್ಲಿ ಅಡಿಗೆ ಮಾಡೊ ಕಾಲ ಯಾವಾಗ್ಲೋ ಹೊಯ್ತಪ್ಪ, ನಮ್ಮ ಕಾಲದಲ್ಲಿ ಯಾವ ಪಾತ್ರೆಗೂ ಮಸಿಯೆಲ್ಲಾ ಆಗಲ್ಲ. ಅದ್ರಲ್ಲೂ, ನಾನಂತೂ ಈ ಮಸಿಗೆ ಅಷ್ಟೆಲ್ಲಾ ಅವಕಾಶಕೊಡೋದಿಲ್ಲ ನನ್ನ ಜೀವನದ ಬಣ್ಣನ ನುಂಗಿಹಾಕಕ್ಕೆ, ಅಂದಿದ್ದೆ.

ಹೌದ?  

ನಾನು, ಎಲ್ಲರಂತೆಯೆ ಸಾಮಾನ್ಯ ವ್ಯಕ್ತಿ.
ಅರಿವಾಯ್ತು.

ಒಂದು ಬಿಂದು ಹುಳಿ ನೀರು ಸಾಕು, ಹಾಲು ಒಡೆಯಲು.
ಒಂದು ಕೆಟ್ಟ ಕ್ಷಣ ಸಾಕು ಸಾವಿರ ಒಳ್ಳೆ ಕ್ಷಣಗಳ ಮರೆಸಲು.

ಅಶನ ಬೆಂದಿದೆಯೆ ನೋಡಲು ಒಂದು ಅಗುಲು ಪರೀಕ್ಷಿಸಿದರೆಸಾಕು.

ಮೊತ್ತೊಮ್ಮೆ ಅಪ್ಪನ ಮಾತು ಸತ್ಯ ಸಾಭೀತಾಯಿತು.
ಎಲ್ಲಾ ಬಣ್ಣವ ಮಸಿ ನುಂಗಿತ್ತು...
😐😐😓😢😢😢😢😢😢😢😢😢😢😢😩😥

Tuesday 19 September 2017

ಮರುಳ ಮನಸ್ಸೇ!

ಇನಿಯನ ಸಂದೇಶವೊಂದು ಬಂದಿತ್ತು.
ಯುಗದ ನೋವು ಕ್ಷಣದಿ ದೂರಾಯ್ತು.
ಮಾಡಿದ ತಪ್ಪಿಗೆ, ಮಗುಮನದ ಆ ನಗೆ ಕಂಡು, ಕ್ಷಮೆ ಮೂಡಿತ್ತು.
ಮರಳು ಮನಸ್ಸು ಮತ್ತೆಮ್ಮೆ ಮರುಳಾಗಿತ್ತು. 

Monday 18 September 2017

ಪ್ರಶ್ನೆಯೇ? ಗೊತ್ತಿಲ್ಲ.

ಕಾರ್ಮೋಡ.
ಎಲ್ಲೆಡೆ ಕತ್ತಲು.
ಮಳೆಯಾದೀತೆ?
ನೋವ ಮರೆಸೀತೆ?
ಗಾಳಿಯದೆ ಚಿಂತೆ.
ನೋವ ದೂರ ಕೊಂಡೊಯ್ಯುವ ನೆಪದಲ್ಲಿ ಮಳೆಯ ತಡೆದೀತೆ?
ಸಂಶಯ.
ಒಂದು ವೇಳೆ ಮಳೆಯೂ ಇಳೆಯ ಸೇರಿದರೆ?
ಮತ್ತೊಂದು ಸುಂದರವಾದ ಪಾಪಸ್ಕಳ್ಳಿಯು ಚಿಗುರೊಡೆದೀತೆ ? ಹೂ ಅರಳಿತೇ?
ಗೊಂದಲ.
ಕಡೆಯಿಲ್ಲದ ಗೊಂದಲ.
ಸರಿತಪ್ಪುಗಳ ಎಲ್ಲೇ ಮೀರಿ.
ಬೇರ್ಪಡಿಸಲಾಗದ ಬಣ್ಣಗಳು.
ಬಿಳಿಯ ಹಾಳೆ.
ಬೇರಾವುದೋ ಲೋಕ.
ಒಬ್ಬಳೇ ನಾನ್ಲಿಲ್ಲಿ.
ಹೆಚ್ಚೇನ ಹೇಳಲಾರೆ.
ಅಮ್ಮ ಮಾಡಿಕೊಟ್ಟ ಚಹಾಗಿಂದು ಮೋಸ ಮಾಡಿದೆ. ಅದೀಗ ತಣ್ಣಗಾಗಿದೆ.
ಸುತ್ತಲೂ ತಣ್ಣನೆಯ ವಾತಾವರ್ಣ.
ಮಂಜುಗಡ್ಡೆಯ ಮನುಸುಗಳು.
ಕಲ್ಲು.
ಹೃದಯ ಬಡಿತವಿಲ್ಲ.
ಬೆಚ್ಚನೆಯ ಭಾವವಿಲ್ಲ.
ಮಾನವೀಯತೆ?
ಅವಳೊಂದು ಮುದ್ದು ಯಕ್ಷಿಣಿ.
ಚಳಿಗೆ ಬೆಚ್ಚಗೆ ಹೊದೆದು ಮಲಗಿ ವರ್ಷಗಳಾಗಿವೆ.
ಹೋದಕೆಯ ಮೇಲೆ ಮಂಜಿನ ರಾಶಿ.
ಶಿಥಿಲ.
ನಿಶಬ್ಧ.
ಅಯ್ಯೋ. ಮತ್ತೆ ಮತ್ತೆ ಕಾಡುತಿಹ ಪ್ರಶ್ನೆ!?

ಕೊನೆಯೆಲ್ಲಿ ?
ಕೂತು ಮಾತಾಡಬೇಕಿದೆ.
ಯಾರಿಹರಿಲ್ಲಿ?
ಕನ್ನಡಿಯು ಇಲ್ಲ.
ಮಳೆಯೂ ಇಲ್ಲ.
ನೀರು ಹಿಂಗಿದ ಬರಡು ನೆಲ.
ಜೊತೆಯಲ್ಲಿ ನನ್ನ ಕಿವುಡು ಕಿವಿ.

ಸಾಕಾಯ್ತು.








 




ಮಳೆಬರುವ ಮುನ್ಸೂಚನೆ

 ಇಂದು:


ಹೇಳಲು ಸಾಕಷ್ಟಿವೆ.
ಆದರೆ ಮೂಗಿ ನಾನು.
ಮಗುವಂತೆ 'ಅತ್ತು'ಬಿಡಲೇ'?
ಮಗುವಿನಂತೆ 'ಅಳು'ವೆನೋ ಬರುತಿದೆ, ಆದರೆ ಈ ಮೋಹ ಪಾಶವ 'ಬಿಡಲು' ಸಾಧ್ಯವೇ?

ಅಪ್ಪ ಹೇಳಿಕೊಟ್ಟ ಪಾಠ ನನಗೆ ಅರ್ಥವಾಗಿದ್ದರು, ಕಲಿಯಲಾಗಲಿಲ್ಲ.

"be connected to everything, never get attached"

Saturday 16 September 2017

ಕಥೆಯಲ್ಲ ಜೀವನ ಸಿ.೧, ನಮ್ಮಮ್ಮ -ಎಪಿ.೧

ಯಾರದ್ದು ತಪ್ಪು?  
ಇಲ್ಲಿ ಯಾರದ್ದು ತಪ್ಪಿಲ್ಲ. ಹೌದು.
ತಾಯಿ ಮಕ್ಕಳ್ಳ ಸಂಬಂಧವೇ ಹಾಗೆ.

ಓದುಗರಿಗೆ ಸೂಚನೆ: ಒಂದಕೊಂದು ಬೆಸೆಯುವ ಪ್ರಯತ್ನ ಬೇಡ.
ಬೇರೆ ಬೇರೆ ಫ್ಲೇವರ್ ಪೇಸ್ಟ್ರೀಸ್ ಇವು.

👉ಮನೆಗೆ ತಲುಪಿದ ಕೂಡಲೇ ಅಪ್ಪನ ಹತ್ತಿರ ಕೇಳುವ ಮೊದಲ ಪ್ರಶ್ನೆ,
ಏನ್ ಭಟ್ರೇ, ಅಮ್ಮ ಯೆಲ್ಲಿ ?
ಈ ಪ್ರಶ್ನೆ ಏಕೆ ಕೇಳಿದೆ ಅನ್ನುವದ್ದಕ್ಕೆ ಉತ್ತರವಿಲ್ಲ.

👉ನಮ್ಮಪ್ಪ ಅವಾಗವಾಗ ನನಗೆ ಹೇಳುವುದುಂಟು,
'ತಾಯಿಯ ಕಂಡರೆ ತಲೆ ನೋವು.'
ಇದಕ್ಕೆ ಬೇಕಾದಷ್ಟು ಅರ್ಥಕಲ್ಪಿಸಬಹುದು. ಅವರವರ ಭಾವಕ್ಕೆ ತಕ್ಕಂತೆ, ಸಂದರ್ಭಕ್ಕೆ ತಕ್ಕಂತೆ.
ನನ್ನ ಮತ್ತು ಅಪ್ಪನ ಭಾವಕ್ಕೆ ತಕ್ಕಂತೆ ಹೇಳುವುದಾದರೆ, ಈ ಗಾದೆಗೆ ಎರೆಡು ಅರ್ಥ,
ಮೊದಲನೆಯದು,
ಅಮ್ಮನ ಕಂಡ ಕೂಡಲೇ ಇಡೀ ದಿನದ ಕಥೆ ಉರುಗುತ್ತೇನೆ, ಜೊತೆಯಲ್ಲಿ ಅಮ್ಮ ಅಲ್ಲಿ ನೋವು ಇಲ್ಲಿ ನೋವ, ಸುಸ್ತಾಯ್ತು ಅಂತ ಬೇರೆ ಒಂದಷ್ಟು ವದರುತ್ತೇನೆ. ಆಗ ಅಪ್ಪ 'ತಾಯಿಯ ಕಂಡರೆ ತಲೆ ನೋವು' ನನ್ನ ಮಗಳಿಗೆ ಅಂತಾರೆ. 😅😆... ನಮ್ಮಪ್ಪನ ಸಾರ್ಕ್ಯಾಸ್ಮ್ ಸಹಿಸುವುದು ಅಷ್ಟು ಸುಲಭದ ಮಾತಲ್ಲ.
ಮತ್ತೊಂದೂ..... ಬಿಡಿ ಬೇಡ. ಹೇಳೊದುಕ್ಕು ಕೇಳೊದುಕ್ಕು ಇದೊಂದು ವಿಷಯವೇ ಅಲ್ಲ.

👉 'ಬಾಯಿಗಡ್ಡ ಬಾಲೆಲು', ಮತ್ತೊಂದು ಡೈಲಾಗ್, ಅಯ್ಯೋ ಬಿಡಿ ನಮ್ಮಪ್ಪನ ಬಿಟ್ಟು ಬೇರೆ ಯಾರ್ತನೆ ಗಾದೆಗಳಲ್ಲಿ ನನ್ನಜೊತೆ ಮಾತಾಡ್ತಾರೆ?
ಇದು ತುಳು ಭಾಷೆಯಲ್ಲಿದೆ.  ನಮ್ಮಪ್ಪ ಈ ನುಡಿಮುತ್ತುನ್ನ ಉದುರಿಸುವುದು ಯಾವಾಗ? , ಕೇಳ್ರಿ ಹೇಳ್ತೀನಿ.
ಬ್ರಾಹ್ಮಣ ಕುಟಂಬಕ್ಕೆ ಸೇರಿದ ನಮ್ಮಮ್ಮ , ಶ್ರದ್ಧೆ, ಭಕ್ತಿಗೆ ನಮ್ಮ ಮನೆಯಲ್ಲೇ ವರ್ಲ್ಡ್ ಫೇಮಸ್. ಆಚಾರವಂತರು, ವಿಚಾರವಂತರು. ಕೊಳೆ, ಮೈಲಿಗೆ, ಶುದ್ಧ ಈ ಪದಗಳಿಗೆ ನಮ್ಮ ಎಡಬಿಡಂಗಿತನದ (so called my rationalism) ಧೂಳುತಾಕಿ ದಮ್ಮುಕಟ್ಟುವಾಗ ನಮ್ಮಮ್ಮ ಉಸಿರು ದಾನ ಮಾಡಿ ಅವುಗಳನ್ನು ಜೀವಂತವಾಗಿರಿಸಿಕ್ಕೊಳ್ಳುತ್ತಾರೆ.
ಅದೇನೋ ಗೊತ್ತಿಲ್ಲ, ನಮ್ಮಮ್ಮನ ಊಟದ ತಟ್ಟೆಯಲ್ಲಿ ಇರುವ ಕುಸುಗಲಿಕ್ಕಿಯ ಪದಾರ್ಥವಾಗಲಿ (ಹವ್ಯಕ ಭಾಷೆಯಲ್ಲಿ ಪದಾರ್ಥವೆಂದರೆ ಸಾಂಬಾರ್, ಪಲ್ಯ ಹೀಗೆ... ) ಅಥವಾ ಬೇರೆ ಯಾವುದೇ ತಿಂಡಿ ತಿನಿಸಾಗಲಿ ಒಂದು ನಮೂನೆ ಯಮ್ಮಿಯಾಗಿ ಕಾಣಿಸುತ್ತದೆ. ಟ್ರಸ್ಟ್ ಮೀ, ಇದು  ಸತ್ಯ. ನಾನಾಗಿಯೇ ಮಿಶ್ರಮಾಡಿದ ಅಶನ ಪದಾರ್ಥಗಳ ಪಾಕ ಅಷ್ಟು ಚೆಂದ ಹಾಗು ರುಚಿಕರವಾಗಿ ಕಾಣುವುದಿಲ್ಲ. ಹಾಗಾಗಿ ಯಾವಾಗಲು ಅಮ್ಮನ ತಟ್ಟೆಯಿಂದ ನನಗೆ ಊಟ ಬೇಕು, ಕೇಳುತ್ತೇನೆ. ಆಗಲೇ ನಮ್ಮಪ್ಪನ ಡೈಲಾಗ್ ಬರೋದು. ಬಾಯಿಗಡ್ಡ ಬಾಲೆಲು, ಅಂದ್ರೆ ತಿನ್ನುವ ತುತ್ತಿಗೆ ಮಕ್ಕಳು ಅಡ್ಡ ಬರ್ತಾರೆ ಅಂತ. ನೀವೇ ಹೇಳಿ ಇದ್ರಲ್ಲಿ ನನ್ನ ತಪ್ಪೇನಾದ್ರು ಇದಿಯಾ? ನಾನು ಎಷ್ಟು ಮುಗ್ದೆ. ಹಾಹಾ :)

ಮುಂದುವರಿಯಲಿದೆ..... 








Wednesday 13 September 2017

ಅಚ್ಚಾ!

ಅಚ್ಚಾ! - ದೀಪಕ್ ಪ್ರತಿಕ್ರಿಯಿಸಿದ.

(ಕೆಲವು ಕ್ಷಣಗಳ ನಿಶಬ್ಧ, ಯಾವುದೋ ಯೋಚನಾಲಹರಿಯಲ್ಲಿ ತೇಲಿಹೋದಂತೆ.. ಕಳೆದ ಎರೆಡು ತಿಂಗಳುಗಳಲ್ಲಿ ನಡೆದ ಎಲ್ಲಾ ನೆನಪುಗಳು ಕಣ್ಣಮುಂದೆ ಹಾಗೆ ಸುಳಿದು ಹೋದವು. ನೆನಪುಗಳೇ ಹಾಗೆ ನೆನಪಾಗುತ್ತಲೇ ಇರುತ್ತದೆ. ಮತ್ತೊಮ್ಮೆ ಕಳೆದು ಹೋದ ಸಮಯವನ್ನು ಹುಡಿಕಿ ಚೀಲ್ಲಕ್ಕೆ ತುಂಬಿಸಿ ಹೊತ್ತು ತರುತ್ತದೆ. ಒಂದು ನೆನಪಿನ ಜೊತೆ ಮಿಳಿತಗೊಂಡ ನೂರಾರು ನೆನಪುಗಳು. ಸಾಲು ಸಾಲು ನೆನಪುಗಳು. ಸುಂದರ ನೆನಪುಗಳು. ದುಃಖವೆಂದರೆ ಈ ರೀತಿಯ ಇನ್ನೊಂದಷ್ಟು ನೆನಪುಗಳ ಬುತ್ತಿ ಕಟ್ಟಲು ನಮ್ಮಿಬ್ಬರ ನಡುವೆ ಮೊದಲಿನಂತ ಸ್ನೇಹ ಉಳಿದಿಲ್ಲ.)

Wakad Pune,
೦೯/೦೯/೨೦೧೭.

ಕೆಲವು ಗಂಟೆಗಳ ಹಿಂದೆಯಷ್ಟೇ ನನ್ನ ಸಂಚಾರಿ ದೂರವಾಣಿಯನ್ನು ಕಳೆದುಕೊಂಡಿದ್ದೆ.
IISER ಅಲ್ಲಿ ಯಾವುದೊ ಕೆಲ್ಸದ ಮೇಲೆ ಪೂನೆಗೆ ಬಂದಿದ್ದೆ. ಮಹಾರಾಷ್ಟ್ರಕ್ಕೆ ಹೊರಡಬೇಕೆಂದಕೂಡಲೇ ನೆನಪಾದದ್ದು ಅಭಿ. (ಹೆಸರನ್ನು ಬದಲಾಯಿಸಿದ್ದೇನೆ).
ಮೊದಲೇ ನಿರ್ಧರಿಸಿದಂತೆ ಅರುಣನ ಸ್ನೇಹಿತ ದೀಪಕ್ ನನ್ನನ್ನು ಅವನ ಸಹೋದ್ಯೋಗಿ ರಾಧಾಳ ಮನೆಗೆ ಕರೆದುಕೊಂಡು ಹೋದ. ಅವನು ತನ್ನ suzuki access 125 ತಂದಿದ್ದ. ಅದನ್ನು ನೋಡಿಯೇ ಅಭಿಯ ನೆನಪು ಕಾಡಿತ್ತು. ದೀಪಕ್ನ ಕುಶಲೋಪರಿ ಯನ್ನು ವಿಚಾರಿಸುತ್ತಾ ನಮ್ಮ ಪಯಣ ಸಾಗಿತ್ತು. ನನ್ನ ಯಾವೊದೊ ಉತ್ತರಕ್ಕೆ, ಪ್ರತಿಕ್ರಿಯಿಸುತ್ತಾ 'ಅಚ್ಚಾ' ಎಂದ.

'ಅಚ್ಚಾ', ಕೇವಲ ಒಂದು ಸಾಮಾನ್ಯ ಪದ. ಮಹಾರಾಷ್ಟ್ರದಲ್ಲಿ ಸರ್ವೇಸಾಮಾನ್ಯ...

ಈ ಸಣ್ಣ ವಿಷಯವು ಯಾರದೋ ನೆನಪು ತರಿಸಲು ಸಾಧ್ಯವೇ? ಈಕೆಗೇನು ಹುಚ್ಚೇ ಎನಿಸಬಹುದು.
(It maybe nothing for others, but everything for some.)
ನಮ್ಮವರು ಅನಿಸಿದವರ ಸಣ್ಣ ಸಣ್ಣ ವಿಷಯವು ನಮಗೆ ಹೆಚ್ಚೇ. ಎಲ್ಲಾ ಸಣ್ಣ ವಿಷಯಗಳಲ್ಲೂ ತನ್ನದೆಯಾದ ಸುಖದುಃಖ್ಖ ಒಳಗೊಂಡಿರುತ್ತದೆ. ಎಲ್ಲೆಡೆ ತನ್ನ ಛಾಪ ಮೂಡಿಸುತ್ತದೆ.

ಇದೊಂದು ಕೇವಲ ನಿದರ್ಶನವಷ್ಟೇ. ಇಂತಹ ಎಷ್ಟೋ ವಿಷಯಗಳು ದಿನ ನಿತ್ಯ ಕಾಡುವುದುಂಟು.

ಮೊಗದಲ್ಲೊಂದು ಸಣ್ಣ ನಗು ಮೂಡಿಸುವುದುಂಟು. ಮನದಲ್ಲಿ ಸಾವಿರ ನೆನಪುಗಳು ಸುಳಿದು ಹೋಗುವುದುಂಟು.











Thursday 31 August 2017

A tale of two best friends. (Chap. 2)

ಮಚ್ಚಾ, ಮಚಿ.

ಯೋ ಯೋ ಸಪ್ ?- ಮಚಿ
(whatsapp msg sent. double tic, blue tic.)
ನಥಿಂಗ್ ಲೇ. ಮನೆ ಇಂದ ಹೊರಗೆ ಬಾ.- ಮಚ್ಚ
(whatsapp msg sent. double tic, blue tic.)

[a cup of tea, and a puffs (forgetting all stuffs). a small walk and lots of talk.]

ಮಚಿ ನೆನ್ನೆ ನೀನು ಕಿರ್ಚಾಡ್ತಿದ್ದೆ ಅಲ್ವ.  -ಅವನು
ಒಹ್ ಕರೆಕ್ಟ್ ಅಲ್ವ. -ಅವಳು
ಹೇಯ್ ಈ ಪಿಕ್ ಹೇಗಿದೆ? - ಅವನು
ಲೋ ಸಕ್ಕತು. ಆದ್ರೆ ಸ್ವಲ್ಪ ರೈಟ್ ಇಂದ ಕ್ಲಿಕ್ ಮಾಡ್ಬೇಕಿತ್ತು. -ಅವಳು
ಗೇಮ್ ಆಪ್ ತೋರ್ನ್ಸ್ ಮುಗೀತೇ. - ಅವನು
ಶೇ ಪಾಪಾ. - ಅವಳು.
ಹೇಯ್ ಇದುನ್ನ ನೋಡು. (ಯೌಟ್ಯೂಬ್ ಅಲ್ಲಿ ವಿಡಿಯೋ ಪ್ಲೇ)- ಅವನು
ಸೂಪರ್ ಕಣೋ. ನಾನು ಮಾಡನ. -ಅವಳು.
......
......
...............
........
..
..................................
....
..... ಅವನು.
...... ಅವಳು.

ಅದ್ಸರಿ ನೆನ್ನೆ ಜಗಳ ಅಡಿದ್ದೋ ಅಲ್ವ. - ಅವಳು.
ಹೌದ ಮಚಿ , ನೆನಪಾಗ್ತಾ ಇಲ್ಲ. - ಅವನು.
ನೀನು ಕಿರ್ಚಾಡ್ಡಿದು ಮಾತ್ರ ನೆನ್ಪಾಗ್ತಿದೆ. ಆ ಕರ್ಕಶ ಧ್ವನಿ ಹೇಗೆ ಮರಿಯದು ಅಲ್ವ. - ಅವನು.

ಛಟೀರ್ (ಬೆನ್ನ ಮೇಲೆ ಜೋರಾದ ಪೆಟ್ಟು.)

ನಿನ್ನ ಕಯ್ಯೇ ನೋವಾಗೋದು- ಅವನು.

ಒಂದಷ್ಟು ನಗು, ರಾಶಿ ಖುಷಿ.






Wednesday 30 August 2017

A tale of two best friends. (Chap 1)

ಅವನು, ಅವಳು.

ಪಲ್ಲವಿ:

ಅವಳು: ತುಂಬಾ ಮೂಡಿ,ನಕ್ಚಡಿ, ಕುಪೋಷ್ಠಿತ ಮಗುವಂತೆ ಆಡುತ್ತಲೇ. ಎಮೋಷನಲ್, ಸ್ವಲ್ಪ ಹೆಚ್ಚೇ ಸೆನ್ಸಿಟಿವ್ & ಸ್ನೇಹಿತರ ವಿಷಯದಲ್ಲಿ ಸಂಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪ ಇರ್ರೆಸ್ಪೋನ್ಸಿಬಲ್.  ಅವಳು ಸ್ನೇಹಿತರನ್ನು ಮಾಡಿಕೊಳ್ಳುವುದೇ ಕಡಿಮೆ. ಹೀಗಾಗಿ ಆಕೆಗೆ ಕೇವಲ ಬೆರಳೆಣಿಕೆಯಷ್ಟು ಸ್ನೇಹಿತರು. ಹೈಲಿ ಪೊಸೆಸಿವೆ ಅಬೌಟ್ ಹರ್ ಫ್ರೆಂಡ್ಸ್. ಇವಳ ಕೆಟ್ಟ ಹವ್ಯಾಸವೆಂದರೆ, ತಾನು ಹೇಳದೆಯೇ ತನ್ನ ಸ್ನೇಹಿತರು ಅವಳ ಮನದಾಸೆಯನ್ನು ಅರಿಯಬೇಕೆಂದು!! ಹೀಗಾಗಿ ಶಿ ಈಸ್ ವೆರಿ ಬ್ಯಾಡ ಇನ್ ಹಂಡೆಲ್ಲಿಂಗ್ ರಿಲೇಷನ್ಶಿಪ್ಸ್.

ಅವನು: ಬಹಳ ತುಂಟ. ಸಂಘ ಜೀವಿ. ಎಮೋಷನಲಿ ತುಂಭ ಸ್ಟ್ರಾಂಗ್. ತನಗೆ ತಾನು ನೋವಾಗಲು ಬಿಡುವುದಿಲ್ಲ, ಅಕಸ್ಮಾತ್ ನೋವಾದರೆ ಅದರಿಂದ ಬೇಗ ಹೊರ ಬರುವ. ಹಾಗೆ ಸ್ನೇಹಿತರ ವಿಷಯ ಬಂದರೆ ಹೈಲಿ ರೆಸ್ಪೋನ್ಸಿಬಲ್. ಲಿಟಲ್ ಪೊಸೆಸಿವೆ ಕೂಡ ಹೌದು. ಇಷ್ಟಪಟ್ಟ ವ್ಯಕ್ತಿ ಸರಿಯಾಗಿ ಉತ್ತರಿಸದಿದ್ದರೆ ಕೋಪಿಷ್ಠನಾಗಿ ಬಿಡುವ. ಕೋಪಕ್ಕೆ ಕಾರಣ ಪ್ರೀತಿ, ವಿಶ್ವಾಸ. ಸ್ವಲ್ಪ ಹೊಟ್ಟೆ ಉರಿ ಆದ್ರೂ, ಅವನು ತನ್ನ ಸ್ನೇಹಿತರ ಒಳ್ಳೆಯ ಬೆಳವಣಿಗೆ (ಅಭಿವೃದ್ಧಿ )ಯನ್ನು ಯಾವಾಗಲು ಬಯಸುತ್ತಾನೆ. ಖುಷಿ ಪಡುತ್ತಾನೆ. ಧಟ್ಸ್ ದಿ ಬೆಸ್ಟ್ ಪಾರ್ಟ್ ಆಪ್ ಹಿಮ್.

ಹೇಳುತ್ತಾ ಹೋದರೆ ಬಹಳಷ್ಟಿವೆ. ಆದರೆ ಇವರಿಬ್ಬರ ಬಗ್ಗೆ ಈ ಸಣ್ಣದೊಂದು ಪರಿಚಯ ಸಾಕು.

ಅನುಪಲ್ಲವಿ:

ಅವಳು: ಜೀವನದ ಅತ್ಯಂತ ಸೂಕ್ಷ್ಮ ಹಾಗು ನಿರ್ಣಾಯಕ ಹಂತದಲ್ಲಿದ್ದಾಳೆ. ಮನೆಯಲ್ಲಿ ತಂದೆ ತಾಯಿಗೆ ಆರೋಗ್ಯ ಸರಿಯಿಲ್ಲ. ಅವಳ ತಾಯಿಗೆ ಒಂದೇ ಚಿಂತೆ. ಮಗಳನ್ನು ದಡ ತಲುಪಿಸಬೇಕೆಂದು. ಹೇಗೋ ಒಂದಷ್ಟು ದಿನ ನಾನು ನೀನು ಕಷ್ಟಪ್ಪಟ್ಟ ಪರಿಣಾಮವಾಗಿ ಅಣ್ಣನಿಗೆ ಮದುವೆ ಆಯ್ತು. ನೀನು ಬೇಗ ಮದುವೆ ಮಾಡಿಕೊ ಮಗಳೇ ಅಂತ ದಿನನಕ್ಕೆ ೨ ಬಾರಿ ಯಾದರು ಹೇಳುತ್ತಲೇ ಇರುತ್ತಾರೆ. ಇನ್ನು ಅವಳ ತಂದೆ! ಅವರು ಬೈರಾಗಿ. ಅವರು ಅವಳಿಗೆ ತಮ್ಮ ಜೀವನದಲ್ಲಿ ಕಂಡು ಅನುಭವಿಸಿದ, ಓದಿ ತಿಳುದುಕೊಂಡ ಅನುಭವಗಳ್ಳನು ಅವಳಿಗೆ ಹೇಳುತ್ತಾ ಬೆಳಿಸಿದ್ದಾರೆ. ತಂದೆ ತಾಯಿ ಇಬ್ಬರದ್ದು ಬೇರೆ ಬೇರೆ ಯೋಚನೆಗಳು. ಒಬ್ಬರು ಆಧ್ಯಾತ್ಮ ಯೆಂದರೆ, ಮತ್ತೊಬ್ಬರು ಜೀವಾತ್ಮ ಎನ್ನುತ್ತಾರೆ. ಒಬ್ಬರು ಬಂಧು ಬಾಂಧವರು ಅಂದರೆ ಮತ್ತೊಬ್ಬರು ಬಂಧ ಮುಕ್ತಳಾಗು ಅಂತಾರೆ. ಇವರಿಬ್ಬರ ಯೋಚನೆಗಳು ಮಿಳಿತಗೊಂಡು, ಅವಳ ಎಡಬಿಡಂಗಿ ತನಕ್ಕೆ ಕಾರಣವಾಗಿದೆ . ಈಗಷ್ಟೇ ಇದರಿಂದ ಚೇತರಿಸಿಕೊಂಡು ಬೆಳಕಿನೆಡೆಗೆ, ತನಗೆ ಸರಿ ಎನಿಸಿದಕಡೆಗೆ ಸಾಗುವ ಪ್ರಯತ್ನದಲ್ಲಿದ್ದಾಳೆ. ಇದರ ಮದ್ಯೆ ಉಗುಳಗದ ತುಪ್ಪವಾಗಿ ಅವಳ ಓದು ನಡೆಯುತ್ತಿದೆ.

ಅವನು: ಅವಳು ಅನುಭವಿಸಿದ ಘಡಿ ಧಾಟಿ, ದಡ ತಲುಪಿಯಾಗಿದೆ. ಜೀವನದಲ್ಲಿ ತುಂಭಾ ಅನುಭವವಿಲ್ಲದಿದ್ದರು, ಅವಳಿಗಿಂತ ವಾಸಿ.

ಇವರಿಬ್ಬರು ಸ್ನೇಹಿತರಾದಾಗ?!!!

ಚರಣ:

ಇಬ್ಬರಿಗೂ ತಾಳ್ಮೆ ಸ್ವಲ್ಪಕಮ್ಮಿ. ಮುಗೀನ ತುದಿಯಲ್ಲಿ ಕೋಪ.
ಒಬ್ಬರಮೇಲೊಬ್ಬರಿಗೆ ಅಭಿಮಾನ, ಪ್ರೀತಿ.
ಇದಕ್ಕೆ ಬುನಾದಿ ನಂಭಿಕೆ ಹಾಗು ವಿಶ್ವಾಸ.
ಇಂದು ಆ ನಂಭಿಕೆಯ ತಳಪಾಯ ಅಲುಗಿದೆ. ಮುರಿದು ಬಿದ್ದಿಲ್ಲ. ಬೀಳುವುದು ಇಲ್ಲ. ಆದರೆ ದೇರ್ ಇಸ್ ಆನ್ ಅಕ್ವಾರ್ಡ್ ಸೈಲೆನ್ಸ್ ಇನ್ ಬಿಟ್ವೀನ್ ದೆಮ್. ಮೊದಲಿನಂತೆಯೇ ಎಲ್ಲಾ ಸರಿ ಹೋಗುವುದೇ?? ನಂಭಿಕೆ ಇನ್ನು ಕುಂದಿಲ್ಲ. ಇಬ್ಬರಿಗೂ ತಿಳುವಳಿಕೆ ಇದೆ. ವಿವೇಕವುಳ್ಳವರು.
ಎಂದಿಗೂ ಮೂಡಬಾರದಿದ್ದ ಅಂತರವೊಂದು ಮೂಡಿದೆ. ತುಂಬವ ಪ್ರಯತ್ನ ಭರದಿಂದ ಸಾಗಿದೆ.
ಕಾಲವೆಂಬಾ ಕಾಲನ ಮುಂದೆ ಎಲ್ಲವೂ ನಶ್ವರ.
ಈ ನಶ್ವರದ ಬಾಳಲ್ಲಿ ಶಾಶ್ವವಾತ ಈ ಸ್ನೇಹ.

ಹಿತೋಕ್ತಿ:
ಜೀವನದಲ್ಲಿ ಯಲ್ಲರಿಗೂ ತಮ್ಮದೇಯಾದ ಮಿತಿಗಳು, ತೊಂದರೆಗಳು ಇದ್ದೆ ಇರುತ್ತದೆ. ಅದನ್ನೆಲ್ಲ ಮೀರಿ ಆದಷ್ಟು ಸರಳವಾಗಿ, ಒಳ್ಳೆಯರೀತಿಯಲ್ಲಿ ಬದುಕಬೇಕು. ಮಾನವೀಯತೆಯೇ ನಮ್ಮನ್ನು ಮಾನವರನ್ನಾಗಿಸುವುದು.
ಸ್ನೇಹ: ಬಂದನವಿಲ್ಲದ ಬಂಧವಿದು. ಉಗುರು ಬೆರಳಿನ ಸಂಭಂದ. ಅತಿಯಾಗಿ ಕತ್ತರಿಸಿದರು ನೋವು. ಅತಿಯಾಗಿ ಉದ್ದ ಬೆಳಸಿದರು ತೊಂದರೆ. Handel with care ಎಂಬ ಟ್ಯಾಗ್ ಲೈನ್ ನೊಂದಿಗೆ ಏಲ್ಲೆಡ್ದೆ ಚಲಿಸುತ್ತದೆ. So handel with it carefully. ಹಾಗಂತ Dont be a Slave of  relationship, be a Saviour, be D King. Cherish the treasure.

Saturday 26 August 2017

೬೦ ಗಂಟೆಗಳು

ಜೀವನದಲ್ಲಿ ದೊಡ್ಡ ದೊಡ್ಡ, ಹಾಗು ಮುಖ್ಯವಾದ ಸಂದರ್ಭಗಳು ಬರುತ್ತದೆ. ಅದರನ್ನು ಎಲ್ಲ ನೆನೆಯುತ್ತಾರೆ.
ಯಾರು ಅಷ್ಟಾಗಿ ಜೀವನದ ಸಣ್ಣ ಸಣ್ಣ ತುಣುಕನ್ನು ಮೆಲುಕುಹಾಕುವವರಿಲ್ಲ.
ಥ್ಯಾಂಕ್ಸ್ ಟು ಡೈಸ್ ಪ್ರೋಡ್ಯೂಕ್ಷನ್ಸ್. ನನ್ನ ಹಾಗೆ ಯೋಚಿಸುವವರು ಯಾರೋ ಇದ್ದಾರೆಂಭ ಖುಷಿಕೊಟ್ಟಿದ್ದಕ್ಕಾಗಿ.

ಕೆಲವೊಮ್ಮೆ ನಮ್ಮ ಮಹತ್ವದ ಅರಿವು ಯಾರಿಗೂ ಇರುವುದಿಲ್ಲ. ನಮಗೂ ಕೂಡ.
ಕೆಲವೊಮ್ಮೆ ಸ್ವಾಸ್ತ್ಯ ಜೀವನಕ್ಕೆ ಅಪ್ಪ್ರಿಶಿಯೇಷನ್ ಮುಖ್ಯವಾಗುತ್ತದ್ದೆ. ಅಪ್ಪ್ರಿಶಿಯೇಟ್ ಮಾಡುವವರಿಲ್ಲದಿರುವಾಗ ಸೆಲ್ಫ್ ಅಪ್ಪ್ರಿಶಿಯೇಷನ್ ಮಾಡ್ಕೊಳಿ, ಮಜಾ ಮಾಡಿ, ಆರೋಗ್ಯವಾಗಿರಿ. ಲವ್ ಯುವರ್ಸೆಲ್ಫ್.

ನನ್ನ ಕಳೆದ ೬೦ ಗಂಟೆಗಳ ಜೀವನ ಚಿತ್ರವನ್ನು ಇಲ್ಲಿ ಚಿತ್ರಿಸುವ ಸಣ್ಣ ಪ್ರಯತ್ನದಲ್ಲಿ...
ಯಾವುದೊ ಅಡ್ವೆಂಚರ್ ಸ್ಟೋರಿ ಅಲ್ಲ. ಆದರೆ ತುಂಬಾ ಬಣ್ಣಗಳ್ಳನು ಒಳಗೊಂಡ ನನ್ನ ದಿನನಿತ್ಯ ಜೀವನದ ತುಣುಕು.
 

೨೩-೮-೧೭ (ರಾತ್ರಿ)
ಸ್ವಲ್ಪ ಜ್ವರ. ಸ್ವಲ್ಪ ಅಲ್ವ ಯಾರಿಗು ಹೇಳ್ಲಿಲ್ಲ.
ಅಮ್ಮಂಗೆ ಹುಷಾರಿಲ್ಲ ಅಂತ ಬೇರೆ ತಲೆಬಿಸಿ. ನಿದ್ದೆನು ಸರಿಯಾಗಿ ಬರ್ಲಿಲ್ಲ.

೨೪-೮-೧೭ (ಗೌರಿ ಹಬ್ಬ)
ಅಮ್ಮನಿಲ್ಲದೆ ಮನೆ ಬಿಕೋ ಅಂತಿತ್ತು. ಎಲ್ಲರೂ ಇದ್ರು ಕಾಲಿ ಕಾಲಿ ಅನ್ಸೋ ಮನೆ ಮನ. ಮನೆಯವರನ್ನೆಲ್ಲ ಒಂದಾಗಿಸಿ ಇಡುವ ಕೊಂಡಿ ಅಂದ್ರೆ ಅಮ್ಮ.
ಅಮ್ಮ ಬೆಳಗ್ಗಿನ ೯.೦೦ ರ ಬಸ್ಸಿಗೆ ಪುತ್ತೂರು ಬಿಟ್ಟು ಸಂಜೆ ೫.೩೦ ತಕ್ಕೆ ಬೆಂಗಳೂರು ತಲುಪೂವರಿದ್ದರು.
ಅಮ್ಮನ ಕರೆತರಲು ನಾನು ಮೆಜೆಸ್ಟಿಕ್ ಬಸ್ಸು ನಿಲ್ದಾಣಕ್ಕೆ ಹೋಗಬೇಕಿತ್ತು.

ಸಂಜೆ ೪.೩೦
ನಿದ್ದೆಯಿಂದಯೆದ್ದು ಅಮ್ಮನ ಕರೆತರಲು ಹೊರಟೆ. ಜ್ವರದ ಅಮಲು, ನಿದ್ದೆ ಬೇರೆ ಸರಿಯಾಗಿರಲ್ಲಿಲ್ಲ. ಜೊತೆಯಲ್ಲಿ ಇಡೀ ದಿನ ಮೊಬೈಲ್ ಗುರುಟ್ಟಿದ್ದೆ. ಕಣ್ಣುಗಳು ಸುಸ್ತಾಗಿದ್ದವು. (ಕಳೆದ ೨ ವಾರಗಳಿಂದ ಮೊಬೈಲ್ ಸಹವಾಸ ಹೆಚ್ಚಾಗಿದೆ)
ಓಲಾ, ಊಬರ್ ಯಾವ್ದ್ರಲ್ಲೂ ಕ್ಯಾಬ್ಸ್ ಇಲ್ಲ.
(ಅಯ್ಯೋ ದೇವ್ರೇ!!! ಲೇಟ್ ಆಯ್ತು).
ಫೈನ್ನ್ಲಲಿ ಕ್ಯಾಬ್ ಸಿಕ್ತು.
೫.೧೫ ದಕ್ಕೆ ಮನೆ ಬಿಟ್ಟೆ. ೬.೩೫ ಕ್ಕೆ ಇಂದಿರಾನಗರ ಮೆಟ್ರೋ ಸ್ಟೇಷನ್ ತಲುಪಿದೆ!!!! ೧.೩೦ ಘಂಟೆ !!
(ದೇವ್ರೇ. ನಮ್ಮ ಬೆಂಗಳೂರ ಕಥೆ ಯಾರಿಗೆ ಅಂತ ಹೇಳೋದು. ಅಮ್ಮ ಮೆಜೆಸ್ಟಿಕ್ ತಲುಪಿದ್ದಾರೆ ಸುಮ್ನೆ ಪ್ಯಾನಿಕ್ ಆಗ್ತಾರಲ್ಲ. )
ಅಮ್ಮನಿಗೆ ಕರೆ ಮಾಡಿದೆ. ಅವರ ಬಸ್ಸು ಸಹ ಲೇಟ್. ಖುಷಿ ಆಯ್ತು.
ಮೆಟ್ರೋ ಸ್ಟೇಷನ್ ಒಳ ಬಂದರೆ ಮತ್ತೊಂದು ನರಕ ಪ್ರದರ್ಶನ ನನಗಾಗಿ ಕಾದಿತ್ತು. ನಮ್ಮ ಪುತ್ತೂರು ಜಾತ್ರೆಯಲ್ಲೂ ಇಷ್ಟು ಜನ ಸೇರಲ್ವೇನೋ.. ಅಷ್ಟೊಂದು ಜನಸಾಗರ. ಚೆಕ್ ಇನ್ ಆಗುವಷ್ಟರಲ್ಲಿ ಸಾಕು ಸಾಕಾಗಿತ್ತು. ರೈಲು ಫುಲ್ಲಿ ಪ್ಯಾಕ್ಡ್. ಉಸಿರಾಡಲು ಜಾಗವಿರಲಿಲ್ಲ. ಪಕ್ಕದಲ್ಲೇ ಅಂಟಿ ನಿಂತಿದ್ದ ಅಜ್ಜನೊಬ್ಬ ನಾನೊಂದಿ ಕಥೆ ಬೇರೆ ಕುಯ್ಯುತಿದ್ದರು. ಆದರೆ ನನ್ನ ತಲೆ ಪೂರಾ ಅಮ್ಮನ ಕಡೆಯೇ ಇದ್ದಕಾರಣ ಹೂ ಹಾನ್ ಬಿಟ್ಟು ಬೇರೇನೂ ಮಾತನಾಡಲಿಲ್ಲ.
ಅಂತೂ ಇಂತೂ ಮೆಜೆಸ್ಟಿಕ್ ಬಂತು. ಅಮ್ಮ ಕೂಡ ಮೆಟ್ರೋ ಸ್ಟೇಷನ್ ಬಳಿಯೇ ನಿಂತಿದ್ದರು.
ಬಹಳ ಹಸಿವಾಗಿದೆ ಅಂದ್ರು. ಹೊಟೇಲ್ ಹೋದ್ರೆ ಪಕ್ಕ ಲೇಟ್ ಆಗುತ್ತೆ ಅಮ್ಮಾ. ಮನೆ ತಲುಪಲು ಕಷ್ಟ ಇದೆ ಇಂದು ಅಂದೇ. ಪಕ್ಕದಲ್ಲೇ ಇದ್ದ ಫ್ರೂಟ್ ಬೌಲ್ ಖರೀದಿಸಿ ಕೊಟ್ಟು ಕ್ಯಾಬ್ ಬುಕ್ ಮಾಡಿದೆ. ಮಧ್ಯಾಹ್ನ ಊಟ ಸರಿ ಸೇರದ ಕಾರಣ ನನಗು ಹಸಿವಾಗಿತ್ತು. ಆದರೆ ಹಣ್ಣುತಿನ್ನುವ ಮನಸಿರಲಿಲ್ಲ. ಕ್ಯಾಬ್ ಬರಲು ಹೇಗೂ ೧೦ನಿಮಿಷ ಸಮಯವಿದ್ದ ಕಾರಣ, ಅಮ್ಮನನ್ನು ಅಲ್ಲಿಯೇ ನಿಲ್ಲಿಸಿ, ಅಲ್ಲೇ ಸ್ವಲ್ಪ ದೂರದಲ್ಲಿದೆ ಮಾರುತ್ತಿದ್ದ ಕಡ್ಲೆ ಕಾಯಿಯನ್ನು ತಂದೆ.

ಕ್ಯಾಬ್ ಹತ್ತಲ್ಲೂ ಮತ್ತೊಂದು ಸಾಹಸ. ಟ್ರಾಫಿಕ್ ಹೆಚ್ಚಿದ್ದ ಕಾರಣ, ಕ್ಯಾಬ್ ಡ್ರೈವರ್ ನಮ್ಮನ್ನೇ ರಸ್ತೆ ಧಾಟಿ ಬರುವಂತೆ ಸೂಚಿಸಿದರು. ರಾತ್ರಿಯ ಕತ್ತಲ್ಲನ್ನು ಓಡಿಸುವ ವಾಹನಗಳ ಬೆಳಕು. ದೊಡ್ಡದ ರಸ್ತೆ. ಹುಷಾರಿಲ್ಲದ ಅಮ್ಮ. ಎರೆಡು ಬ್ಯಾಗ್ಸ್. ಹೆವಿ ಟ್ರಾಫಿಕ್, ಜೊತೆಯಲ್ಲಿ ಪಿರಿ ಪಿರಿ ಮಳೆ. ರಸ್ತೆ ದಾಟುವುದು ಒಂದು ಸಹವೇ ಸರಿ. ಕ್ಯಾಬ್ ಹತ್ತುವವರೆಗೂ ಅಮ್ಮನಿಗೆ ತಳಮಳ. ಇನ್ನು ಯಾಕೆ ಕರೆ ಮಾಡಿಲ್ಲವೆಂಭ ಚಿಂತೆ ಮನೆಯಲ್ಲಿದ್ದ ಅಪ್ಪನಿಗೆ. ಕರೆಯ ಮೇಲೆ ಕರೆ ಬರುತ್ತಲ್ಲೇ ಇತ್ತು. ಕರೆ ಸ್ವೀಕರಿಸುವ ಸ್ಥಿತಿಯಲ್ಲಿ ನಾವಿಲ್ಲ. ಇಷ್ಟೆಲ್ಲಾ ತೊಂದರೆಗಳನ್ನು ಧಾಟಿ ಕಾರ್ ಹತ್ತಿ ಕುಳಿತೆವು. ಅಮ್ಮನೊಂದಿಗೆ ನಿಲ್ಲದ ಮಾತುಕಥೆ ಶುರುವಾಯ್ತು. ಇಟ್ಸ್ ಮಮ್ಮಿ ಡಾಟರ್ ಟೈಮ್. ಜೊತೆಯಲ್ಲಿ ಅಪ್ಪನಿಗೊಂದು ಕರೆ. ಗೆಳಯನಿಗೊಂದು ಸಂದೇಶ. ಸಮಯ ಹೋದದ್ದೇ ತಿಳಿಯಲ್ಲಿಲ. ದಿನದ ಬಚ್ಚಲ್ಲೆಲ್ಲ ಕಳೆದು ಹೋಗಿ ನೆಮ್ಮದಿ ಅನಿಸಿತ್ತು. ಅಂತೂ ಇಂತೂ ಮನೆ ತಲುಪಿದೆವು.
ಮತ್ತೊಂದಷ್ಟು ಮನೆ ಮಂದಿಯೊಂದಿಗೆ ಹರಟೆ. ಊಟ, ಮನೆಕೆಲಸ, ನಿದ್ದೆ.
(ಇಂದು ಮತ್ತೆ ತಡವಾಗಿ ಮಲಗಿದೆ).

೨೫-೮-೧೭
ನಿನ್ನೆ ಮದ್ಯಾಹ್ನ (೨೪-೮-೧೭, ಸರಿ ಸುಮಾರು ೧೨.೦೦ ಗಂಟೆ) ಮುರಳಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ (IISc) ಬಯೋಲಾಜಿಕಲ್ಲ್ಲಿ ಸೈನ್ಸ್ ಡಿಪಾರ್ಟ್ಮೆಂಟ್ ನಲ್ಲಿ ಲ್ಯಾಬ್ ಟೆಕ್ನಿಶಾನ್ ಆಗಿ ಕಾರ್ಯ ನಿರ್ವಹಿಸುವವರು, ಹಾಗು ನನ್ನ ಸ್ನೇಹತ.) ಕರೆ ಮಾಡಿ ಲ್ಯಾಬ್ ಗೆ ಬರುವಂತೆ ಸೂಚಿಸಿದರು. ಆದರೆ ನಾನು ಮನೇಲಿದ್ದ ಕಾರಣ, ಅಮ್ಮನನ್ನು ಪಿಕ್ ಮಾಡಬೇಕಿದ್ದ ಕಾರಣ, ಇಂದು ಸಾಧ್ಯವಿಲ್ಲ, ನಾಳೆ ಬರುವೆ ಅಂದಿದ್ದೆ. ನನಗಾಗಿ ಅವರು ಗಣೇಶಾ ಚತುರ್ಥಿ ಇದ್ದರು ಕೆಲಸ ಮಾಡಲು ಒಪ್ಪಿದ್ದರು.

ಬೆಳ್ಳಿಗೆ ೬ ಗಂಟೆ ಯೆದ್ದು ಮನೆಯಿಂದ ಹೊರಟೆ. ಬೆಂಗಳೂರು ವಿಶ್ವವಿದ್ಯಾನಿಲಯ ತಲುಪಲು ಮೂರರಿಂದ ಐದು ಬಸ್ಸು ಬದಲಾಯಿಸ ಬೇಕು. ೮.೩೦ ಕ್ಕೆ ಡೆಪಾರ್ಮೆಂಟ್ತಲುಪಿದೆ. ಯಾರು ಇಲ್ಲದ ಕಾರಣ ಗೇಟ್ಅನ್ನು ನಾನೇ ತೆರೆಯಬೇಕಾಯ್ತು. ನನ್ನ ಲ್ಯಾಬ್ ನಿಂದ ಸ್ಯಾಂಪಲ್ ಸಂಗ್ರಹಿಸಿ, ಹೊರಡುವಷ್ಟರಲ್ಲಿ, ಡಿಪಾರ್ಟ್ಮೆಂಟ್ ಗೇಟ್ ತೆರದಿದ್ದ ಕಾರಣದಿಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಒಳ ಬಂದುಬಿಟ್ಟಿದ್ದರು.
ಜನ ಮರುಳೋ ಜಾತ್ರೆ ಮರುಳೋ ಅಂತ ನಮ್ಮಪ್ಪ ಯಾವಾಗ್ಲೂ ಹೇಳ್ತಾರೆ. ನಮ್ಮ ಯೂನಿವರ್ಸಿಟಿ ಒಳಗೆ ಬಹಳ ಹಾವಿನ ಹುತ್ತಗಳಿದ್ದು, ಯಾವುದೇ ಹಬ್ಬಗಳು ಬರಲಿ, ದೂರ ದೂರದಿಂದ ಜನರು ಬಂದು ಹುತ್ತಕ್ಕೆ ಪೂಜೆ ಮಾಡುತ್ತಾರೆ. ಇಂದು ಸಹ ಅದರಿಂದ ಹೊರತೇನಲ್ಲ. ಆದರೆ ಇಂದು ಸ್ವಲ್ಪ ಹೆಚ್ಚೇ ಡಿಮಾಂಡ್ಸ್ ಹುತ್ತಗಳಿಗೆ. ಕ್ಯೂ ಸಿಸ್ಟಮ್ ಅಲ್ಲಿ ಜನರ ಪೂಜೆ ಸಾಗಿತ್ತು.  ಈ ಇಬ್ಬರು ಅಪರಿಚಿತ ವ್ಯಕ್ತಿಗಳು ಪೂಜೆಗಾಗಿಯೇ ಬಂದವರು. ಅವರಲ್ಲಿ ಒಬ್ಬರು ಕುಡಿಯುವ ನೀರಿಗಾಗಿ ಬಂದಿದಾರರು. ಮತ್ತೊಬ್ಬರು ಹೇಳದೆ ಕೇಳದೆ ಮಹಡಿಯನ್ನು ಹತ್ತಿ ಹೋಗಿದ್ದರು. ನೀರು ಕೇಳಿದವರಿಗೆ ನೀರು ಕೊಟ್ಟು ಕಳಿಸುವಷ್ಟರಲ್ಲಿ ಮತ್ತೊಬ್ಬ ವ್ಯಕ್ತಿ ಎಲ್ಲು ಕಾಣಿಸಲಿಲ್ಲ. ಜೋರು ಜೋರು ಏರಿದ ಧ್ವನಿಯಲ್ಲಿ ಅವರನ್ನು ಕರೆಯುತ್ತ ಅಲೆದು. ಯಾವ ಪ್ರತಿಕ್ರಿಯೆ ಬರಲಿಲ್ಲ. ದೂರದಿಂದಲೇ ಮಹಡಿಯನ್ನು ಹುಡುಕಿದ್ದೆ. ಎಲ್ಲೂ ಕಾಣಿಸಲಿಲ್ಲ. ಡಿಪಾರ್ಟ್ಮೆಂಟ್ ಅಲ್ಲಿ ನನ್ನ ಬಿಟ್ಟು ಬೇರೆ ಯಾರಿಲ್ಲ. ಒಬ್ಬಳೇ ಮಹಡಿ ಹತ್ತುವುದು ಬೇಡವೆಂದು, ಕಾರ್ತಿಕ್ ಗೆ ಕರೆಮಾಡುವ ಅಂದುಕೊಂಡೆ. ಆದರೆ ಅವನು ಯಾವಕೆಲಸದಲ್ಲಿ ಬ್ಯುಸಿ ಇರುವನೋ ಅಂತ ಸುಮ್ಮನಾದೆ. ಎಲ್ಲಿಲ್ಲದ ಪಿತ್ತ ಕೆದರಿತ್ತು. ಗೇಟಿಗೆ ಬೀಗ ಜಡಿದು ಅಲ್ಲಿಂದ ಹೊರಟೆ. ಆದರೆ ಮನಸು ತಡೆಯದೆ ಮತ್ತೆ ಗೇಟ್ ತೆಗೆದು ಒಳ ಬಂದು ಮಹಡಿ ಹತ್ತಿ ಅವರನ್ನು ಹುಡುಕಲಾರಂಭಿಸಿದೆ. ಎಲ್ಲಿಯೂ ಕಾಣಲಿಲ್ಲ. ಹಿಂತಿರುಗಿ ಬರುವಷ್ಟರಲ್ಲಿ ಅವರು ಕಂಡರೂ. ಅವರನ್ನು ಪ್ರಶ್ನಿಸಿದ ಬಳಿಕ ತಿಳಿಯಿತು, ಗಣಪತಿ ಪೂಜೆಗಾಗಿ ಮಾವಿನ ಸೊಪ್ಪು ಹುಡುಕಿ ಬಂದಿದ್ದರೆಂದು. ಹೀಗೆಲ್ಲ ಬರುವ ಹಾಗಿಲ್ಲ ಅಂತ ಹೇಳಿ ಕಳುಹಿಸಿದೆ. (ಏನಕ್ಕೂ ಇರಲಿ ಎಂದು ನನ್ನ ಮತ್ತೊಬ್ಬ ಸ್ನೇಹಿತನಿಗೆ ಕರೆ ಮಾಡಿ ಕೈಯ್ಯಲ್ಲಿ ಮೊಬೈಲ್ ಹಿಡಿದು ಕೊಂಡಿದ್ದೆ.)

ಇಷ್ಟಕ್ಕೆ ಮುಗಿಯಲಿಲ್ಲ. ಡೆಪಾರ್ಮೆಂಟ್ ಗೇಟ್ ಜಾಮ್ ಆಗಿ, ಎಷ್ಟೇ ಎಳೆಯಲು ಪ್ರಯತ್ನಿಸಿದರು ಆಗುತ್ತಿರಲಿಲ್ಲ. ಒಂದಷ್ಟು ಹೊತ್ತುಗಳ ಸಾಹಸದ ನಂತರ ಹೇಗೋ ಗೇಟ್ ಲಾಕ್ ಮಾಡಿದೆ.

ಇಂದು ಹಬ್ಬವಿದ್ದ ಕಾರಣ ನಿಯಮಿತ ಬಸ್ಸುಗಳು. ಬಹಳ ಹೊತ್ತು ಕಾದ ನಂತರ ಕೆ.ರ್.ಮಾರ್ಕೆಟ್ ಬಸ್ಸು ಬಂತು. ಹತ್ತಿದೆ. ಹೆಂಗಸರು ಕೂರುವ ಸ್ಥಳದಲ್ಲೇಲ ಗಂಡಸರು ಕುಳಿತಿದ್ದರು. ಹೀಗಾಗಿ ಕೆಲವು ಹೆಂಗಸರು ನಿಂತಿದ್ದರು. ನಾನು ಒಬ್ಬ ಹುಡುಗನನ್ನ ಸೀಟ್ನಿಂದ ಏಳಿಸಿ ಅಲ್ಲಿ ಕುಳಿತೆ. ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ಒಂದು ಮಗುವನ್ನು ಸೊಂಟದಲ್ಲಿ, ಮತ್ತೊಂದ್ದು ಮಗುವನ್ನು ಕೈಯ್ಯಲ್ಲಿ ಹಿಡಿದು ಒಬ್ಬ ಮಹಿಳೆ ಬಸ್ಸು ಹತ್ತಿದರು. ಯಾರು ಯೆದ್ದು ಸ್ಥಳ ಬಿಟ್ಟು ಕೊಡಲಿಲ್ಲ. ಮತ್ತೊಬ್ಬರನ್ನು (ಮಹಿಳೆಯರಿಗೆಂದು ಮೀಸಲಿದ್ದ ಸ್ಥಳದಲ್ಲಿ ಕುಳಿತಿದ್ದ ಗಂಡಸನ್ನು) ಎಬ್ಬಿಸಲು ಮನಸಾಗದೆ ನಾನೇ ಯೆದ್ದು ಆಕೆಗೆ ಕೂರಲು ಸ್ಥಳ ಕೊಟ್ಟೆ. ಅದನ್ನು ಕಂಡ ಬಸ್ ಕಂಡಕ್ಟರ್ ತಮ್ಮ ಸ್ಥಳದಲ್ಲಿ ಕೂರುವಂತೆ ನನಗೆ ಸೂಚಿಸಿದರು. (ಪುಣ್ಯ ಡ್ರೈವರ್ ತಮ್ಮ ಸ್ಥಳಬಿಟ್ಟುಕೊಡಲ್ಲಿಲ).

ಕಥೆ ಇನ್ನು ಇದೆ ಕಣ್ರೀ. ಮುಗಿಲಿಲ್ಲ.

ಮೈಸೂರ್ ಸರ್ಕಲ್ ಅಲ್ಲಿ ಬಸ್ ಇಳಿದೆ. ಸಮಯ ಸುಮಾರು ೯.೩೦. ಮೆಜೆಸ್ಟಿಕ್ ಬಸ್ಸಿಗಾಗಿ ಕಾಯ್ಯುತ್ತಿದೆ. ವಯಸ್ಸಾದ ಮಹಿಳೆಯೊಬ್ಬರು ಬಂದ ಬಸ್ಸುಗಳ ಎಲ್ಲಾ ಕಂಡಕ್ಟರ್ಸ್ ಬಳಿ ಹೋಗಿ ಮೆಜೆಸ್ಟಿಕ್ ಹೋಗುತ್ತಾ ಯೆಂದು ಕೇಳುತ್ತಿದ್ದರು. ಅವರನ್ನು ನೋಡಲಾಗಲಿಲ್ಲ. ಹಾಗಂತೂ ಅವರನ್ನು ಹೆಚ್ಚು ಮಾತನಾಡಿಸುವ ಮನಸಂತೂ ನಂಗಿರ್ಲಿಲ್ಲ. ನಾನು ಮೆಜೆಸ್ಟಿಕ್ ಹೋಗ್ತಿರದು, ನಾನು ಹತ್ತುವ ಬಸ್ಸು ಹತ್ತಿ ಅಂದು ಸುಮ್ಮನಾದೆ. ಹೂ ಅಂದರು. ಬಸ್ಸು ಬಂತು. ಹತ್ತಿದೆ. ಆದರೆ ಆಕೆ ಬಸ್ಸು ಹತ್ತಲು ಕಷ್ಟ ಪಡುತ್ತಿದ್ದರು. ಸರಿ ಇನ್ನೇನು ಮಾಡದು ಅಂತ ಕೈಯ್ಯಿ  ಹಿಡಿದು ಹತ್ತಿಸಿದಯ್ತು.

ಮೆಜೆಸ್ಟಿಕ್ ತಲುಪಿದೆ. ಅಲ್ಲಿಂದ IISc. ಮುರಳಿಗೆ ಕರೆ ಸಿಗಲಿಲ್ಲ. ಅವರನ್ನು ಕಾಯುತ್ತ ನಿಂತಿರುವಾಗ, ಕಣ್ಣಿಗೆ ಬಣ್ಣ ಬಣ್ಣದ ಚಿಟ್ಟೆಗಳು ಕಂಡವು. ಅವುಗಳ್ಳನು ನೋಡುತ್ತಾ ಇದ್ದಾಗ ಇವನಿಗೆ ತೋರಿಸಬೇಕೆನಿಸಿ ವಿಡಿಯೋ ಮಾಡಿದೆ. ಕಳುಹಿಸಿದೆ.
ಅಷ್ಟರಲ್ಲಿ ಮುರಳಿ ಬಂದರು. ಕೆಲಸ ಮುಗಿಸಿ ಮದ್ಯಾಹ್ನ ಮನೆಗೆ ಹೊರಟೆ.  ಜೋರು ಹಸಿವಾಗಿತ್ತು. ಹಬ್ಬದ ದಿನ ಮನೆಯವರೊಂದಿಗೆ ಊಟ ಮಾಡವು ಎಂದು ಗ್ರೇಶಿದ್ದೆ. ಆದರೆ ಮನೆ ತಲುಪುವಷ್ಟರಲ್ಲಿ ಎಲ್ಲರೂ ಊಟ ಮಾಡಿ ಮಲಗಿದ್ದರು.
ಇವನಿಗೆ ಮೆಸೇಜ್ ಮಾಡಿದೆ, ಇವನು ಬ್ಯುಸಿ ಇದ್ದ . ಸುಸ್ತಾಗಿತ್ತು, ಹಶುವಾಗಿತ್ತು, ಸ್ವಲ್ಪ ಜ್ವರ ಬೇರೆ, ಇದರ ಮಧ್ಯ ಒಬ್ಬಳೆ ಊಟ ಮಾಡಿ ಬಂದು ನಾನು ಮಲಗಿದೆ.

Tuesday 22 August 2017

& I'm done

I have no clue... what I'm talking abt, & what I'm doing here, in this early morning. n why? .......
have you ever felt the same, like d way I'm feeling right now!!! I wonder.
I wonder what I'm wondering abt and is it necessarily be like this. I wonder.
I tried to figure it out. went for a long walk. (5.40am-7.15am)
a long walk to search something. what I was searching for? I wonder.
tried talking to myself but what shall I talk. I wonder. I'm blank.
blank, blank like I never before.
totally lost it...

I just wanna know am I done, done with myself.??!!!!!
s. & I'm done. 

Sunday 20 August 2017

ಕೆಂಪು ಮುದ್ದಣ

Mirror, mirror, on the wall who is the prettiest of them all? ಎಂದು ಆಕೆ ಕೇಳಿದಳು.
ಕನ್ನಡಿಗೆ ಇಂದೇಕೊ ಗರ್ವ ಆಕೆಯನ್ನು ಪ್ರತಿಬಿಂಭಿಸಲು. ಆಕೆಯ ಸೌಂದರ್ಯಕಿಂದದೇನೋ ಗರಿಮೂಡಿದೆ. ಸುಂದರ ಮೊಗದಲ್ಲೆರೆಡು ಕೆಂಪು ಮುದ್ದಣ (ಮೊಡವೆ) ನಿಲುಕಿ ನೋಡಿವೆ.

ಎಂದಿನಂತೆ ಇಂದುಸಹ  ಆಕೆಯ ಪಯಣ ತನ್ನ ಗೆಳೆಯನ ನೋಡಿ, ಮಾತನಾಡಿಸಿ ದಿನದ ಶುಭಾರಂಭದೆಡೆಗೆ ಸಾಗಿದೆ.
ನಿರ್ಧರಿಸಿದ ಸ್ಥಳದಲ್ಲಿ ಅವರಿಬ್ಬರ ಭೇಟಿ. ಎಂದಿನಂತೆ ಅವಳ ಕಂಗಳು ಹೊಳೆದಿವೆ, ತುಟಿಗಳು ಅರಳಿವೆ,ಕೆನ್ನೆಯಲ್ಲಿ ಗುಳಿಬೇರೆ.

ಗೆಳೆಯನ ತುಂಟತನದ ಪೆಟ್ಟೊಂದು ತಿಳಿಯದೆ ಮುದ್ದಣ್ಣಿಗೆ ತಾಕಿರಲು, ಅವಳಿಗೆ ಬಲು ಬೇನೆ. ಹುಸಿಕೋಪದಿಂದ ಅವನನ್ನು ಆಕೆ ದಿಟ್ಟಿಸಿರಲು, ನಸುನಕ್ಕನವನು. ಎಂದಿನಂತೆ ಅವನ ಕೈ ಅವಳ ಕೆನ್ನೆ ಸೋಕಿರಲು, ಮುದ್ದಣ ನಾಚಿ ಅವನ ಕೈಗೆ ಚುಂಬಿಸಿತು. ಗೆಳೆಯನ ಬೆಚ್ಚಗಿನ ಕೈಶಾಖದಿಂದ ಮುದ್ದಣ ಕೆಂಪಾಯಿತು. ಹಿತವಾದ ನೋವೆಂದರೆ ಇದುವೆಯಾ? ಗ್ರೇಶಿ ನಕ್ಕಾಳು ಅವಳು.

ಅವಳು ಕೆಲಸಕ್ಕೆ ಹೊರಡುವ ಸಮಯ. ಜೀವನದ ಅತ್ಯಂತ ಕ್ರೂರ ಕ್ಷಣಗಳು. ವಿಧಾಯದ ಸಿಹಿಯೊಂದ ಕೆನ್ನೆಗಿತ್ತ. ಅವನ ಬಿಸಿ ಉಸಿರಿಗೆ ಮುದ್ದಣ ಹಣ್ಣಾಯಿತು. ಅವಳು ಹೊರಟಳು.

ದೂರವಿದ್ದಷ್ಟೂ ಹತ್ತಿರಕ್ಕೆ ಹೋಗಲು ಮನ ಚಡಪಡಿಸುತ್ತದೆ. ಹತ್ತಿರವಾದಾಗ ಸಮಯ ಬೇಗ ಸಾಗುತ್ತದೆ. ಮತ್ತೆ ದೂರಹೋಗುವ ಸಮಯ. ದೂರಹೋಗುವ ಸಮಯ ಎಷ್ಟೇ ಬೇನೆ ನೀಡಿದರು ಮತ್ತೆ ಸಿಗುವೆವೆಂಬ ಖುಷಿ ನೀಡುತ್ತದೆ. 

Thursday 10 August 2017

💗 A chat over coffee 💗

ಕೆಲವೊಮ್ಮೆ ಪೂರ್ತಿ ಕಥೆಯ, ಚಿತ್ರವೇ ಹೇಳಿಬಿಡುತ್ತದೆ.
ಪಕ್ಕದಮನೆಯ ಮಹಡಿಮೇಲಿನ ಚಿತ್ರಣ. 
ನನ್ನನ್ ಬಿಡಿ ಸೂರ್ಯನೇ ನಿಕ್ಲಿ ನೋಡ್ತಿದ್ದ. 

Tuesday 8 August 2017

ಒಂದು ಕಥೆಯ ಕಥೆ

ನನಗೆ ಕಥೆ ಕೇಳೋದು ಅಂದ್ರೆ ತುಂಬಾ ಇಷ್ಟ!!
ಕಥೆ ಅಂದ್ರೆ ನೆನಪಾಗೋದೆ ಅಜ್ಜ, ಅಜ್ಜನ ಕಾಲದ ಅದೇ ಹಳೆಯ ಸಾಲುಗಳು, 'ಒಂದೂರಲ್ಲಿ ಒಬ್ಬ ರಾಜ ಇದ್ದ .......'
ಆದ್ರೆ ನನಗೆ ಕಥೆ ಹೇಳ್ಬೇಕಾದ ನನ್ನಜ್ಜ ನನ್ನನ್ನು ಬೇಗ ಅಗಲಿದರು.

ಹೀಗಿರುವಾಗ ನನಿಗೊಬ್ಬ ಅಜ್ಜ ಸಿಕ್ಕಿದ್ದ, ವಯಸ್ಸು ೨೮. ಅಜ್ಜನಿಲ್ಲದ ನನಗೆ ಅವನೇ ಏಂಜಲ್ ಅಜ್ಜ....
ಅಯ್ಯೋ ನಿಮ್ಗು ನನ್ನ ತರಾನೇ ಗೊಂದ್ಲಾನಾ ? ಗೊಂದಲಕೊಳಗಾಗಬೇಡಿ, ನಾನು ಅಜ್ಜ ಅಂದಿದ್ದು ನನ್ನ ಒಬ್ಬ ಗೆಳೆಯನನ್ನ.

ಅವ್ನು ಅಷ್ಟೇ, ಕಥೆ ಹೇಳೋ ಅಂತ ನಾನು ಕೇಳಿದಾಗಲೆಲ್ಲ, ಒಂದೂರಲ್ಲಿ ಒಬ್ಬ ರಾಜ ಇದ್ದ, ಅವನಿಗೆ ಹೆಂಡ್ತಿ ಇದ್ಲು, ಅವಳೇ ರಾಣಿ ಗೊತ್ತಾ!! ಅವ್ರ್ಗೆ ಇಬ್ರು ಮಕ್ಳು....... ಹೀಗೆ ಅದು ಇದು ಅಂತ ಅವನೇ ಕಥೆ ಕಟ್ಟಿ ಕಥೆ ಹೇಳ್ತಿದ್ದ.

ಅಯ್ಯೋ ಸಾಕಾಯ್ತು, ನಿಲ್ಲಿಸೋ. ಈ ಕಥೆ ಸಾಕು, ಯಾವದಾದ್ರು ಜೋಕ್ ಹೇಳು ಅಂದ್ರೆ,
'ಒಂದೂರಲ್ಲಿ ಒಬ್ಬಳು ಅಜ್ಜಿ ಇದ್ದಳಂತೆ, ಅವಳು ಚಿಕ್ಕ ವಯಸ್ಸಿನಲ್ಲೇ ಸತ್ತು ಹೋದಳಂತೆ. ಹಹಹ ...  ' ಎಂದು ನಕ್ಕುಬಿಡ್ತಿದ್ದ.
ಆಗ ನಾನು ಲೋ, ಜೋಕ್ ಹೇಳು ಅಂತ ಹೇಳಿದ್ದು ಅಂದ್ರೆ, ತಗೋಳಪ್ಪಾ, ಅವಗಲು ಮತ್ತೆ ಅದೇ ರಾಗ ಅದೇ ತಾಳ . 'ಒಂದೂರಲ್ಲಿ ಒಬ್ಬಳು ಅಜ್ಜಿ ಇದ್ದಳಂತೆ, ಅವಳು ಚಿಕ್ಕ ವಯಸ್ಸಿನಲ್ಲೇ ಸತ್ತು ಹೋದಳಂತೆ'.

ಅವನು ಹೇಳಿದ್ದನ್ನೇ ಹೇಳ್ತಿದ್ದ. ಆದ್ರೂ ನಾನು ಕೇಳದು ನಿಲ್ಲಿಸಿರಲಿಲ್ಲ. ಅವನು ಹೇಳೋದು ನಿಲ್ಲಿಸಿರಲಿಲ್ಲ.
ನಿಜ ಏನು ಗೊತ್ತ? ನನಗೆ ಆ ಕಥೆ ಮತ್ತು ಆ ಜೋಕ್ ತುಂಬಾನೆ ಇಷ್ಟ. ಅದನ್ನು ಕೇಳಿದಾಗಲೆಲ್ಲ ಖುಷಿಯಿಂದ ನಗುತ್ತಿದ್ದೆ. ದಿನದ ಬೇಸರ, ಸುಸ್ತೆಲ್ಲ ಒಂದೇ ಘಳಿಗೆಯಲ್ಲಿ ಮಾಯಾ ಆಗ್ತಿತ್ತು. ಹೇಳ್ಬೇಕು ಅಂದ್ರೆ ಈಗ್ಲೂ ನಗು ಬರ್ತಿದೆ. ಆದ್ರೆ ಖುಷಿ ಇಲ್ಲಾ. ಈಗ್ಲೂ ಕಥೆ ಹೇಳುತಿದ್ದ ಅಜ್ಜನ ಧ್ವನಿ ಕಿವಿಯಲ್ಲಿ ಪಿಸುಗುಟ್ಟಿದಂತಾಗುತ್ತದೆ, ಆದರೆ ಕಚಗುಳಿಯಿಲ್ಲ.

ಬೇಡದ ಜೀವನದ ಜಂಜಾಟಕ್ಕೆ ಸಿಲುಕಿ ಕಾಣೆಯಾದ ಮುಗ್ದ ಮನುಸುಗಳೆಷ್ಟೋ? ನಾನು ಅವರಲ್ಲಿ ಒಬ್ಬಳೇ?
ಇಲ್ಲಾ, ನಾನವಳಲ್ಲ. ನಾನವರಲ್ಲಿ ಒಬ್ಬಳಲ್ಲ.

ಇನ್ನೆಷ್ಟು ಕಾಲ ಅಜ್ಜನಿಗೆ ತೊಂದರೆ ಕೊಡೋದು, ಅಲ್ವಾ? ಹಾಗಾಗಿ ಸುಮ್ಮನಾಗಿರುವೆ ಅಷ್ಟೇ.

ಕೇಳುವ ಕಿವಿಗಳ್ಳಿದ್ದರೆ ಸಾಕೆ? ಹಾಡುವ ಧ್ವನಿಯು ಬೇಕಲ್ಲವೇ?



Monday 7 August 2017

Huge respect.

೧೩-೦೨-೨೦೧೭:
ಯಪ್ಪಾ ಮಧು, ಬೇಗ ಛತ್ರಿ ತಗಿಯೇ ಅಂದ್ಲು ಹರ್ಷಾ. ಹೌದು ನಂಗು ಹಾಗೆ ಅನ್ನಿಸ್ತಿತ್ತು. ಸಿಕ್ಕಪ್ಪಟ್ಟೆ ಬಿಸಿಲು. ಒಂದೇ ನಿಮಿಷದಲ್ಲಿ ಬೆಂದೋಗುವಸ್ಟು ಶಾಖ, ಸೆಖೆ. ಜೊತೆಯಲ್ಲಿ ಧಟ್ಟ ಹೋಗೆ ಬಿಡುತ್ತ ಪೀ ಪೀ ಯೆಂದು ಹಾರ್ನ್ ಹಾಕುತ್ತ ಶಬ್ದ ಮಾಡುತ್ತಿರುವ ವಾಹನಗಳು. ಮತ್ತೊಂದು  ಕಡೆ ಮೆಟ್ರೋ ಕಾಮಗಾರಿ.
ಇದು ಮಧ್ಯಾಹ್ನ ಸರಿ ಸುಮಾರು ೨ ಘಂಟೇ , ಬೆಂಗಳೂರಿನ ರಾಜರಾಜೇಶ್ವರಿ ವೃತ್ತದ  ಬಳಿಯ ಚಿತ್ರಣ. ನಾನು ಹರ್ಷಾ ನಾಯಂಡನಹಳ್ಳಿ ಮೆಟ್ರೋ ಸ್ಟೇಷನ್ ಹೋಗುವ ಸಲುವಾಗಿ ಬಸ್ಗಾಗಿ ಕಾಯುತ್ತ ನಿಂತಿದ್ದೆವು. ನಮ್ಮ ಮೆಟ್ರೋ ಪರ್ಪಲ್ ಲೈನ್ ಸದ್ಯಕ್ಕೆ ನಾಯಂಡನಹಳ್ಳಿಯಿಂದ ಬೈಯ್ಯಪ್ಪನಹಳ್ಳಿವರೆಗೂ ಸಾರ್ವಜನಿಕರ ಪ್ರಯಾಣಕ್ಕೆ ತೆರೆದಿದೆ. ಇದರ ಎಕ್ಸಟೆನ್ಶನ್ ವರ್ಕ್ ಭರದಿಂದ ಸಾಗಿದೆ.

{ ಅಕಸ್ಮಾತಾಗಿ  ಇಂದು (೧೩-೦೨-೨೦೧೭) ಹರ್ಷಾ, ಅವಳ ಯಾವುದೊ ಕೆಲಸದ ಸಲುವಾಗಿ ಯೂನಿವರ್ಸಿಟಿ ಕಡೆ ಬಂದಿದ್ದಳು , ಒಂದು ವಾರದ ಹಿಂದೆ ಅಂದರೆ ೦೭-೦೨-೨೦೧೭ ರಂದು ಕೆಲವು ವಯಕ್ತಿಕ ವಿಷಯಗಲ್ಲಿಂದ ಬಹಳವಾಗಿ ನೊಂದಿದ್ದೆ. ಈ ಕಾರಣ, ಡೆಪಾರ್ಮೆಂಟ್ಗೆ ಒಂದೆರೆಡು ದಿನ ರಜೆ ಹಾಕಿ ಹರ್ಷಾಳೊಂದಿಗೆ ನಮ್ಮ ಮನೆಯಲ್ಲಿ ಕಾಲ ಕಳೆಯಲು ನಿಶ್ಚಯಿಸಿ ಅವಳೊಂದಿಗೆ ಮಾರತಹಳ್ಳಿ ಬಳಿ ಇರುವ ನಮ್ಮ ಮನೆಗೆ ಹೊರಟ್ಟಿದೆವು.  }

ಪಾಪ ಕಣ್ರೀ ಸಿವಿಲ್ ಇಂಜಿನಿಯರ್ಸ್ ಮತ್ತು ಈ ಗಾರೆ ಕೆಲ್ಸದವರು. ಎಷ್ಟು ಕಷ್ಟದ ಕೆಲಸ ಅವರ್ದು.
ಈ ಉರಿ ಬಿಸಿಲಲ್ಲಿ ಲಕ್ಷ ಸಂಬಳ ಕೊಡ್ತಿನಿ ಅಂದ್ರು ನಾನಂತು ಕೆಲಸ ಮಾಡಲ್ಲ. ಒಂದು ವೇಳೆ ಮಾಡ್ತಿನಿ ಅಂದ್ರು ನಮ್ಮಪ್ಪ ಬಿಡಲ್ಲ.

ಲೇ, ಮಧು, ಇನ್ನ ಎಸ್ಟೋತ್ತೆ ಬಸ್ ಬರಕ್ಕೆ? ಹರ್ಷಾ ಕೇಳಿದಳು. ಯಾವುದೊ ಯೋಚನಾಲಹರಿಯಲ್ಲಿ ಮುಳುಗಿದ್ದ ನಾನು, ಅವಳ ಮಾತು ಕೇಳಿ ಅದರಿಂದ ಹೊರಬಂದೆ.  ಬೇಕಾದಷ್ಟು ಬಸ್ ಇದೆ, ಬೇಗ ಬರುತ್ತೆ ಇರೆ ಅಂದೇ.
ಕೆಲವೇ ನಿಮಿಷಗಳಲ್ಲಿ ಕೆ.ಆರ್.ಮಾರ್ಕೆಟ್ ಬಸ್ ಬಂತು. ಬಸ್ ಹತ್ತಿದ್ವಿ, ನಾಯಂಡನಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಇಳಿದು, ಸ್ಟೇಷನ್ ಒಳಬಂದು, ಹರ್ಷಾಳಿಗೆ ಮೆಟ್ರೋ ಸ್ಮಾರ್ಟ್ ಕಾರ್ಡ್ ಕೊಂಡೆವು. ನಂತರ ಮೆಟ್ರೋ ಟ್ರೈನ್ ಹತ್ತಿ ಕುಳಿತೆವು. ಹಾಯ್ ಅನಿಸಿತು. ಧೂಳು, ವಾಹನ ದಟ್ಟಣೆ, ಶಬ್ಧ ಮಾಲಿನ್ಯದಿಂದ ದೂರ ಇದ್ಯಾವುದೋ ಬೇರೆ ಲೋಕವೆ ಕಣ್ಣಮುಂದೆ ತೆರೆದಿಟ್ಟಂತೆ ಭಾಸವಾಯಿತು.  ಆಗ ಮನದಲ್ಲಿ ಮೂಡಿದ ಭಾವವೇ, ಮೆಟ್ರೋ ಕಾರ್ಮಿಕರ, ಹಾಗು ಮೆಟ್ರೋವನ್ನು ಅನುಷ್ಠಾನಕ್ಕೆ ತಂದ ವ್ಯಕ್ತಿಗಳ ಮೇಲೆ ಅತೀವವಾದ ಗೌರವ!! ಮೆಟ್ರೋ  ಇಂದಿರಾನಗರ ತಲುಪಿತು. ಅಲ್ಲಿಂದ ಮನೆಗೆ ಉಬರ್ ಬುಕ್ ಮಾಡಿಕೊಂಡು ಮನೆಗೆ ಹೊರೆಟೆವು.

ನಾನಿಷ್ಟು ಆರಾಮವಾಗಿ ನೆಮ್ಮದಿಯ ಜೀವನ ನಡೆಸಲು ಕಾರಣ ನಮ್ಮಪ್ಪ. ಅವರಂದ್ರೆ ನನ್ನ ಧ್ಯರ್ಯ. ನನ್ನ ಹೆಮ್ಮೆ. ನನ್ನ ಗೌರವ.  ಅವರಿಲ್ಲ ಅಂದ್ರೆ ನಾನು ಹೇಗಿರ್ತಿದ್ದೆ??




Wednesday 26 July 2017

ಮಮತೆ

ಇದು ೧೪-ಜುಲೈ-೨೦೧೭ರ ಮಾತು.
ಭಾಗ ೧,
ಉದಿಯಪ್ಪಗ ೭ಕ್ಕೆ ಧಡಭಡ ಹೆರಟು ಹೊರಟೆ. ಇಂದು ನನ್ನ ಪಯಣ CENSE ಗೆ, ೩೩೩ಸಿ ಬಸವನಗರದಿಂದ ಹೊರಟು ಮೆಜೆಸ್ಟಿಕ್ ಗೆ ಹೋಗುವ ಬಸ್ ಇತ್ತಿಲ್ಲೆ. ಹಾಂಗಾಗಿ ವಿಜ್ಞಾನನಾಗರಂದ ಮೆಜೆಸ್ಟಿಕ್ ಹೋಗುವ ಬಸ್ ಹತ್ತಕಾಗಿ ಬಂತು. ಹೋಪ ದಾರಿಲಿ ಲಿಡೋ ಥಿಯೇಟರ್ ಬಳಿ "ಜಗ್ಗ ಜಾಸೂಸ್" ಸಿನೆಮಾದ ಪೋಸ್ಟರ್ ಹಾಕಿತ್ತಿದವು. ಕಳೆದ ವಾರವಷ್ಟೇ ಆ  ಸಿನೆಮಾದ ಟ್ರೈಲರ್ ನೋಡಿತ್ತಿದ್ದೆ. ನೋಡಿಕ್ಕಿ ಫ್ರೆಂಡ್ಸ್ ಹತ್ತರೆ ಹೋಪ ಈ ಸಿನೆಮಾಕ್ಕೆ ಹೇಳಿ ಹೇಳಿತ್ತಿದ್ದೆ. ಫ್ರೆಂಡ್ಸ್ ಗೆ ಹೇಳಿ ಲಿಡೋಲಿಯೆ ನೋಡುವ ಅಂಬಗ ಹೇಳಿ ಗ್ರೇಶಿಗೊಂಡೆ.

ಭಾಗ ೨,
ನೆನ್ನೆ, ಹೇಳಿದರೆ ೧೩-ಜೂಲೈ-೨೦೧೭ ರಂದು, LBB ಯವರ ಆರ್ಟಿಕಲ್ ಫೇಸ್ಬುಕ್ಕಿನಲ್ಲಿ ಓದಿತ್ತಿದೆ, ತಿಪ್ಪಸಂದ್ರ ಬಳಿ "ಬ್ರಾಂಡೆಡ್ ಶೂಸ್ ಶೋರೂಮ್" ಎಂಬ ಹೆಸರಿನ ಅಂಗಡಿ ಇದ್ದು  ಅಲ್ಲಿ ಡಿಸ್ಕೌಂಟ್ನಲ್ಲಿ ಒಳ್ಳೆ ಸ್ನೀಕರ್ಸ್ ಸಿಕ್ಕುತ್ತು ಹೇಳಿ. ಆದಿ ಇಂಡಿಯಾಗೆ ಬಂದ ಮತ್ತೆ ಅವನೊಂದಿಗೆ ಹೋಪ ಹೇಳಿ ಗ್ರೇಶಿಗೊಂಡೆ.

ಭಾಗ ೩,
CENSE ನಲ್ಲಿ ಹೋದ ಕೆಲಸ ಆಯ್ದಿಲ್ಲೆ. ಬೇಕಪ್ಪ ಇನ್ಸ್ಟ್ರುಮೆಂಟ್ ಡೌನ್ ಆಗಿತ್ತಿದು.
ಅಣ್ಣ IISc SBI ಲಿ ರಜ ಕೆಲಸ ಹೇಳಿತ್ತಿದ. ಅದರ ಮುಗಿಶಿಕ್ಕಿ, ಅನಿಲ್ನ ಭೇಟಿ ಮಾಡಿಕ್ಕಿ, ಒಂದು ಮೀಟಿಂಗ್ ಇತ್ತಿದು ಅದರ ಮುಗಿಶಿಕ್ಕಿ ಅಲ್ಲಿಂದ ಹೊರಟೆ.

ಭಾಗ ೪,
ಶುಕ್ರವಾರವಾದ ಅಂದು ಡಿಪಾರ್ಟ್ಮೆಂಟ್ ಹೋಪಲೆ ಮನಸ್ಸಿಲ್ಲದೆ ಮನೆಗೆ ಹೋಪ ಹೇಳಿ ಡಿಸೈಡ್ ಮಾಡಿದ್ದಾತು. ಆದರೆ ಸಮಯ ಇನ್ನು ೧. ೩೦ ಮಧ್ಯಾಹ್ನ. ಹೆಂಗೋ ಇರಲಿ , ವರಗಿದರಂತೂ ಮನೇಲಿ.

ಭಾಗ ೫,
ಮೆಜೆಸ್ಟಿಕ್.
ಕಾಡುಗೋಡಿ ಬಸ್? ಮೆಟ್ರೋ? ಅಥವಾ ವಿಜ್ಞಾನನಾಗರದ  ಬಸ್ ? ಹೇಗೆ ಹೋಗಲಿ ಮನೆಗೆ.
ಸರಿ ಅಂಬಗ ವಿಜ್ಞಾನನಾಗರ ಬಸ್ಸಿಲಿ ಹೋಪ. ಆದರೆ ಜಗ್ಗ ಜಾಸೂಸ್, ಇಲ್ಲದ್ದಾರೆ ತಿಪ್ಪಸಂದ್ರಲ್ಲಿ ಒಂದು ಶೂ ತೆಕೊಂಬದು.

ಭಾಗ ೬,
ವಿಜ್ಞಾನನಾಗರದ ಬಸ್.
ಪೆಟಿಎಂ ನಲ್ಲಿ ಸಿನೆಮಾ ಟಿಕೆಟ್ ಬುಕ್ ಮಾಡುವ ಹೇಳಿ ನೋಡಿದೆ. ಪೂರಾ ಥಿಯೇಟರ್ ಕಾಲಿ ಇದ್ದು !! ಫಸ್ಟ್ ಡೇ??
ಅಂಬಗ ಡೈರೆಕ್ಟ್ ಲಿಡೋ ಥಿಯೇಟರ್ ಟಿಕೆಟ್ ತೆಕ್ಕೊoಬಾ! ೩.೩೦ ರ ಶೋ.
ಬಸ್ ರಿಚ್ಮಂಡ್ ನಂತರದ ಯಾವುದೊ ಬಸ್ ಸ್ಟಾಪ್ ಬಳಿ ಬಂದತ್ತು . ಬೆರಣಿಗೆ ಉಪ್ಪಿನಕಾಯಿ ತುಂಬುವಾನ್ಗೆ  ಬಸ್ ಲಿ ಜನ ತುಂಬಿತ್ತು. ಹೆಚ್ಚಿನವು ಸಣ್ಣ ಸಣ್ಣ ಮಕ್ಕ. ಮತ್ತೆ ಅವರ ಅಮ್ಮಂದ್ರು.

ಭಾಗ ೭,
ಒಂದು ಪುಟಾಣಿ ಎನ್ನ ಕಾಲು ಮೆಟ್ಟಿದ . ಅವನ ಸೊಂಟ ಹಿಡುದು ರಾಜ ಮೇಲೆತ್ತಿ ಅವನ ಆಚೊಡೆ ಬಿಡುವ ಹೇಳಿ ಗ್ರೇಶಿ ಯೆತ್ತಿದೆ. ಅವ ನೋಡಿದರೆ ಎನ್ನ ಮೊಟ್ಟೆಮೇಲೆ ಬಂದು ಕುದುಗೊಂಡ. ಅಂಬಗ ಕುರ್ಸಿಗೊಂಡೆ. ಲಿಡೋ ಹತ್ತರತ್ತರೆ ಎತ್ತಿತು, ಆದರೆ ಆ ಮಾಣಿಯ ಬಿಟ್ಟು ಹೋಪಲೆ ಮನಸ್ಸಾಗದೆ ಅವನ ತಲೆ ನೇವರಿಸುತ್ತಾ ಕೂತು ಬಿಟ್ಟೆ. ಸೆನೇಮ ಕ್ಯಾನ್ಸಲ್.
ತಲೆ ನೇವರಿಸುತ್ತಾ ನೇವರಿಸುತ್ತಾ ಇದ್ದಂತೆ ಮಾಣಿ ಮೆಲ್ಲಂಗೆ ಎನ್ನ ಎದೆಗೆ ವರಾಗಿ ಅಲ್ಲಿಯೇ ವರಾಗಿ ಬಿಟ್ಟ.
ಆ ಮಮತೆಯೇ ಭಾವ! ಬೆಚ್ಚನೆಯ ಪ್ರೀತಿ..ಅಬ್ಬಾ !!! ತಲೆ ತಟ್ಟಿ ಇನ್ನು ಲಾಯ್ಕಲ್ಲಿ ವರಾಗಿಸಿದೆ. ಕಡೆಯ ಸ್ಟಾಪ್ ಬರುವ ವರೆಗೂ ಮಾಣಿಯ ಮನೆ ಸಿಗದಿರಲಿ ಎಂಬ ಆಸೆ..

ಭಾಗ ೮,
ಎನಗೊಬ್ಬ ಸ್ನೇಹಿತ. ಅವನಂದ್ರೆ ಪ್ರೀತಿಗಿಂತ ಹೆಚ್ಚು ಮಮತೆ. ಅವನಿಗೆ ಆನ್ನಿಟ್ಟ ಹೆಸರು ಚಿoಪಿ :)
ಪುಟ್ಟ ಮಕ್ಕ ಕಾಂಬಗ ಅವರಲ್ಲಿ ಇವನೇ ಕಾಣ್ತಾ!! ಎಷ್ಟೋ ಬಾರಿ ಅವನಲ್ಲಿ ಹೇಳಿದುಂಟು, ನಿನ್ನಮ್ಮನ ಬಳಿ ಕೇಳಿ, ನಿನ್ನ ದತ್ತು ತೆಕ್ಕೊಳ್ಳೆಕ್ಕಾ ಹೇಳಿ! ಯನ್ನ ಯಾವಮತಿ೦ಗೂ ಬೆಲೆ ಇಲ್ಲೇ ಇಲ್ಲಿ. ಯನ್ನ ಯಾವ ಮಮತೆಗೂ ಸ್ಥಾನವಿಲ್ಲೆಇಲ್ಲಿ. ಯೆನ್ನದೇ ಯಾವುದೊ ಲೋಕವಾದರೆ, ಅವನ್ನದೆ ಯಾವುದೋ ಲೋಕ. ಯನ್ನ ಮಮತೆ ಯನ್ನ ಕಲ್ಪನೆಗೆ ಸೀಮಿತ.

ಭಾಗ ೯,
ನಿನ್ನೆ ಹೇಳಿದರೆ ೨೫-ಜೂಲೈ-೨೦೧೭,
೧೪ನೆ ತಾರೀಕಿನ ಘಟನೆ ಅದೆಂತಗೊ ತಲೆಗೆ ಬಂತು. ಅಂಬಗ ಆನಿದರ ಬರೆದು ಮಾಡುಗೆಕ್ಕು ಹೇಳಿ ಗ್ರೇಶಿಗೊಂಡೆ. ಸಮಯ ಸಿಕ್ಕಿದಿಲ್ಲೆ. ಸುಂಗನ (ಶ್ವೇತಾಳ ಅಡ್ಡ ಹೆಸರು) ಟ್ರೀಟ್ ಇತ್ತಿದು.

ಭಾಗ ೧೦,
ಇಂದು.
ಉದಿ ಉದಿ ಯಪ್ಪಗ ಎದ್ದಿಕ್ಕಿ, ಮೀವಲೆ ನೀರು ಬೆಶಿ ಮಾಡ್ಲೆ ಕಾಯಿಲ್ ಹಾಕಿದೆ. ಹಾಕಿಕ್ಕಿ ಬಂದು ವರಾಗಿದೆ.
ಒಕ್ಕು ಬಂತು.
ಕನಸು.
ಕನಸಿನಲ್ಲಿ ಅಮ್ಮ.
ನಮ್ಮ ಮನೆ. ಮನೆಯ ಪಕ್ಕದಲ್ಲಿ ಮತ್ತೊಂದು ಮನೆ. ಅಲ್ಲಿ ೩೦-೩೫ ದರ ಅಸು ಪಾಸಿನ ಮಹಿಳೆ. ಮನೆಯಲ್ಲಿ ವಯಸದ ಅತ್ತೆ ಮಾವ. ಸಾಫ್ಟ್ವೇರ್ ಯಜಮಾನರು. ಒಂದು ಮುದ್ದಾದ ಮಗು.
ಅದಕ್ಕೆ(ಆ ಹೆಂಗಸಿಗೆ) ತುಂಬಾ ಮನೆ ಕೆಸಲ. ಬಚ್ಚುವಷ್ಟು, ಪುರುಸೊತ್ತು ಸಿಕ್ಕದಷ್ಟು. ಮಗುವಿನ ಸರಿ ನೋಡಿಗೊಂಬಲೂ ಪುರ್ಸೊತ್ತಿಲ್ಲೆ. ಇದರ ಮದ್ಯೆ ಅವಳು ಸಹ "ವರ್ಕಿಂಗ್ ವುಮನ್, ಹೂ ವರ್ಕ್ಸ್ ಫ್ರಮ್ ಹೋಂ".

ಹಿಂಗಿಪ್ಪಗ ಒಂದು ದಿನ ಅವಳ ಮಗುವಿಗೆ ತಲೆಗೆ ಮೀಶಿಕ್ಕಿ ಮುಂಡಾಸು ಸಮೇತ ಅವಳನ್ನು ಶಾಲೆಯ ಬಸ್ ಹತ್ತಿಸಲು ಗೇಟ್ ಬಳಿ ಬಂದತ್ತು. ಅಂಬಗ ಎನ್ನ ತಲೆ ಕೂದಲು ಅಮ್ಮ ವುದ್ದಿಗೊಂಡಿತ್ತು (ಆನುದೇ ಅಂದು ತಲೆಗೆ ಮಿಂದಿತ್ತಿದೆ). ಅಮ್ಮಂಗೆ ತಡವಲಾತಿಲ್ಲೆ. ಹೋಗಿ ಆ ಹೆಂಗಸತ್ತರೆ ಹೇಳಿತ್ತು. ಎಷ್ಟೇ ಕೆಲಸವಿದ್ದರೂ ಮಕ್ಕಳನ್ನು ಚೆಂದಕ್ಕೆ ನೋಡಿಗೊಳ್ಳೆಕ್ಕು. ತಲೆ ಸರಿ ವುದ್ದದರೆ ಶೀತ ಅಕ್ಕು ಅದಕ್ಕೆ, ಹೇಳಿಕ್ಕಿ , ಅಮ್ಮನೇ ಆ ಮಗುವಿನ ತಲೆ ಉದ್ದಿತ್ತು.

ಭಾಗ ೧೧,
ನಿದ್ದೆಯಿಂದ ಎದ್ದು ಮೀವಲೋದೆ,
ತಲೆಗೆ ಮಿಂದೆ.  (ಇದೆ ಕಾರಣಕ್ಕೆ ಕನಸ್ಸಿಲಿ ಹಂಗೆಲ್ಲಾ ಬಂದದು ಹೇಳಿ ಗೊಂತಾತು)
ಅಮ್ಮನ ನೆನಪು ಬಹಳ ಕಾಡಿತು.
(ಎನಗೆ ಆಲ್ಮೋಸ್ಟ್ ೨೦ ವರ್ಷ ಅಪ್ಪಲೊರೆಗುದೆ ಯೆನ್ನ ತಲೆ ಉದ್ದಿದು. ನಂತರದ ದಿನಗಳಲ್ಲಿ ಅವಕ್ಕೆ ಡಯಾಬೆಟಿಸ್ ಕಾರಣದಿಂದ ಫ್ರೋಜನ್ ಶೋಲ್ಡ್ರ್ ಆಗಿ ಕೈ ಮೇಲಂಗೆ ಯೆತ್ತುಲೆ ಆಯ್ಕೊಂಡಿತ್ತಿಲ್ಲೆ. ಹಾಗಾಗಿ ತಲೆ ಉದ್ದುದು ನಿಲ್ಲಿಸಿದವು.)

ಏಕೋ ಇಂದು ಯೆನಗೆ ಬೇಜಾರಾತು,ಬೇಜಾರು ನೊವಿಂಗೆ ಬದಲಿ ತಿಂಡಿತಿಂಬಲಾಯ್ದಿಲ್ಲೆ.
ಮನೆಯಿಂದ ದೂರ ಇಪ್ಪಲೆ ಬೇಜಾರು. ಹಾಂಗೇಳಿ ಕೆಲಸದೆ ಬಿಡ್ಲೇ ಗೊಂತಿಲ್ಲೆ.

ಆತು ರಜ್ಜ ಸಮಯ ಚಿoಪಿಯೊಂದಿಗೆ ಇಪ್ಪ ಹೇಳಿ ಹೋದೆ. ಅವ ಇತ್ತಿದಾಇಲ್ಲೆ . ರಜ್ಜ ಹೊತ್ತು ಕಾದೆ. ಕಾದ ನಂತರ ಬಂದ.
ಕೂಗಿಸಿದ. ಬುದ್ದಿ ಇಲ್ಲದೆ ಆನುದೆ ಕೂಗಿದೆ.
ಯಾವಗದೆ ಇದೆ ಅಪ್ಪದು, ಗೊಂತಿದ್ದರು ಅನುದೆ ಹಂಗೆ ಮಾಡ್ತೆ, ಅವಂದೇ ಹಂಗೆ ಮಾಡ್ತಾ.
ಅಣ್ಣಂದೇ ಹಿಂಗೇ. ಎನ್ನ ಕುಗ್ಸುದ್ರಲ್ಲಿ ಎಕ್ಸ್ಪರ್ಟ್.
ಮಣಿಯಂಗಳೇ ಹಂಗೆ ಕಾಣ್ತು






   

Wednesday 19 July 2017

೨ ಲೋಟ ಹಾಲಿನ ಕಥೆ

ಹಸಿವಾಗಿತ್ತು.
ಬೆಳ್ಳಿಗೆ ೭ ಘಂಟೆಗೆ ಮನೆ ಇಂದ ಹೊರೆಟು ಲ್ಯಾಬ್ ಗೆ ಬಂದಿದ್ದೆ.
ಗೇಟಿನ ಬಳಿ ಕಾರ್ತಿಕನ ಕುದುರೆ (ಅವನ ಬೈಕ್) ಕಂಡು, ಅವುನು ಡಿಪಾರ್ಟ್ಮೆಂಟ್ ಗೆ ಬಂದಿದ್ದನೆಂದು ತಿಳಿಯಿತು.

ಕ್ಯಾಂಟೀನ್ ಮಹೇಶಣ್ಣ  ೨ ಲೋಟ ಶುಗರ್ಲೆಸ್ ಹಾಲು ಕೊಡಿ ಅಂದೇ.
ಕಾರ್ತಿಕ್ ಗೆ ಕರೆ ಮಾಡಿ ಕ್ಯಾಂಟೀನ್ ಬಳಿಬಾ ಅಂದೇ.



ಕಾಯುವಿಕೆಗೂ ಮುಪ್ಪು ಬಂದಿತ್ತು.
ಮನಸಲ್ಲಿ ನೂರಾರು ಭಾವ ಮನೆ ಮಾಡಿತ್ತು.
ಕಣ್ಣಂಚಲಿ ಹನಿಯೊಂದು ಜಿನುಗಿತ್ತು.
ತುಟಿಯಂಚಲಿ ಸಣ್ಣದೊಂದು ನಗೆಯಿತ್ತು.
ಹಾಲು ತಣ್ಣಗಾಗಿ ಕೆನೆಕಟ್ಟಿತು.
ಕಡೆಗೆ ೨ ಲೋಟ ಹಾಲನ್ನು ಒಬ್ಬಳೇ ಕುಡಿದು ಬಂದೆ 😋😉😐

Sunday 16 July 2017

ನನ್ನ ಖುಷಿ

ಫೇಸ್ಬುಕ್ ನಲ್ಲಿ ಹ್ಯಾಪಿನೆಸ್ ಪೇಜ್, ಹ್ಯಾಪಿನೆಸ್ ಇಸ್.. , ದಿ ಹ್ಯಾಪಿ ಪೇಜ್ ಹೀಗೆ ಸುಮಾರು ಪೇಜ್ಸ್ ಇದ್ದು, ಅವುಗಲ್ಲಿ ಖುಷಿ ಎಂದರೇನು ಅಂತ ಸಣ್ಣಸಣ್ಣ ಸರಳ ವಾಕ್ಯಗಳಲ್ಲಿ, ಮುದ್ದು ಮುದ್ದು ಡೂಡಲ್ ಆರ್ಟ್ ನೊಂದಿಗೆ ಪೇಜ್ ಅಡ್ಮಿನ್, ಅವರಿಗೆ ಖುಷಿ ಅಂದರೇನು ಅಂತ ಹೇಳಿಕೆಕೊಳುತ್ತಾರೆ ಈ ಮೂಲಕ ಓದುಗರಿಗೆ ಖುಷಿ ಹಂಚುತ್ತಾರೆ.  ಅವುಗಲ್ಲಿ ಕೆಲವುಗಳು ಸಾಮಾನ್ಯವಾಗಿ ಎಲ್ಲರಿಗೂ ಅನ್ವಯಿಸುತ್ತದೆ. ಹಾಗಾಗಿ ಈ ಪೇಜ್ ಗಳು ಫಾಸಬುಕ್ನಲ್ಲಿ ಫೇಮಸ್.
ಇಂದೇಕೋ ಈ ಪೇಜ್ ಬಗ್ಗೆ ಯೋಚನೆ ಬಂತು, ಈ ಪೇಜ್ ನಲ್ಲಿ ಬರುವ ಪೋಸ್ಟ್ಗಳು ಅಡ್ಮಿನ್ ನ ಖುಷಿಗಳಾದರೆ ನನ್ನ ಖುಷಿಗಳು ಯಾವುವು? ನಾನು ನನ್ನ ಖುಷಿಗಳನ್ನು ಸಣ್ಣ ಸಣ್ಣ ಸರಳ ವಾಕ್ಯಗಳಲ್ಲಿ ಹೇಳುವುದಾದ್ರೆ ಹೇಗೆ ಹೇಳ್ತೀನಿ ?
ತಿಳ್ಕೊ ಬೇಕಾ? ಹಾಗಾದ್ರೆ ಮುಂದೆ ಓದಿ, ಬರಿತಾ ಬರಿತ ನಾನು ತಿಳ್ಕೋತೀನಿ.
ಬೋರಿಂಗ್  ಅನ್ನಿಸ್ತಾ ? ಹಾಗಾದ್ರೆ ಬ್ಲಾಗ್ ಕ್ಲೋಸ್ ಮಾಡಿ. ನಿಮ್ಗೆ  ಇಂಟೆರೆಸ್ಟಿಂಗ್ ಅನ್ಸಿದುನ್ನ ಮಾಡಿ.

ಖುಷಿ ಅಂದಕೂಡ್ಲೇ ನೆನಪಾಗೋದು ಅಮ್ಮ, ನಾನು ಮನೆಗೆ ಬರ್ತೀನಿ ಅಂದಾಗೆಲ್ಲ ನಂಗಿಷ್ಟವಾದ ದೋಸೆ, ಬದ್ನೇಕಾಯಿ ಕೊದಿಲು ಮಾಡಿರ್ತರೆ. ಎಲ್ಲರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿನೇ ಅಲ್ವ? ಒಳ್ಳೆ ರುಚಿಕರ ಆಹಾರ ತಿನ್ನಕ್ಕೆ ಸಿಕ್ರೆ ನಂಗೆ ಖುಷಿ .
ನಮ್ಮಪ್ಪ ನಾನು ಮನೆಗೆ ಬರುವ ದಿನವನ್ನು ಕಾಯುತ್ತಾರಲ್ಲ, ಅದು ನಿಜವಾದ ಖುಷಿ. ಮನೆಯ ಬಾಗಿಲು ತಟ್ಟುವಮುನ್ನ ಮನೆಯ ಬಾಗಿಲು ತೆರೆದು 'ಮಗಳೇ, ಬಂದ್ಯಾ' ಅಂತರಲ್ಲ ಅದು ಸಾರ್ಥಕತೆಯ ಖುಷಿ. (ನಮ್ಮ ಅಪಾರ್ಟ್ಮೆಂಟ್ ಲಿಫ್ಟ್ ಸೌಂಡ್ ಇಂದಲೋ ಅಥವ ಇನ್ನ್ಹೆಗೊ ನಾನು ಬಂದದ್ದು ಬಾಗಿಲು ತಟ್ಟುವ ಮುನ್ನ ನಮ್ಮಪ್ಪನಿಗೆ ತಿಳಿಯುತ್ತದೆ).
ಇವಳು ನನ್ನ ತಂಗಿ ಅಂತ ಅಣ್ಣ ಹೇಳುವುದು ನನಗೆ ಹೆಮ್ಮೆಯ ಖುಷಿ.
ಹೀಗೆ ಹತ್ತು ಹಲವು ಖುಷಿಗಳು. ಜೀವನದ ಸಣ್ಣ ಸಣ್ಣ ಖುಷಿಗಳು.
ಹಳೆಯ ಗೆಳತಿಯಾ ಕರೆ, ಮಳೆಯಲ್ಲಿ ನೆನೆದು ಬಂದಾಗ ಅಮ್ಮನ ಬೈಗುಳ, ಅಪ್ಪನ ಕಿವಿ ಮಾತು, ಸ್ನೇಹಿತರ ಗಿಫ್ಟ್ಸ್, ಅಂದೆಲ್ಲೋ ಕೇಳಿದ ಹಾಡು, ಇಂದೆಲ್ಲೋ ಸುತ್ತಲೂ ಹೋದ ದಾರಿ, ಎಂದೋ ಗೀಚಿದ ಸಾಲುಗಳು ಏನನ್ನೋ ಹುಡುಕುವಾಗ ಸಿಕ್ಕರೆ ಆಗುವ ಖುಷಿಗಳು..
ಕಾರ್ತಿಕನ ನಗು,
ಆದಿಯ ಕವನ,
ಶಾಂಭವಿ ಮಾಡಿದ  ಚಿತ್ರಾನ್ನ,
ಅಪ್ಪನ ಹಾಡುಗಳು,
ಅಣ್ಣ ಮಾಡಿಕೊಟ್ಟ ಟೀ,
ನ್ಯಾನೋ ಪಾರ್ಟಿಕಲ್ಸ ಮೊದಲ ಬರಿ ಮಾಡಿದ್ದೂ,
ಇಂಜಿನಿಯರ್ ಮಕ್ಕಳಿಗೆ ಪಾಠ ಮಾಡಿದ್ದೂ,
ನನ್ನ ಮೊದಲ ಶಿಷ್ಯವರ್ಗ,
ರಂಬೀರ್ನ ಕ್ಯೂಟೆನೆಸ್ಸ್,
ಟಾಮ್ ಕ್ರ್ಸ್ ನ ಹಾಟ್ನೆಸ್,
ಸುದೀಪ್ ನ ವಾಯ್ಸ್,
ಟ್ವಿನ್ಕುವಿನಾ ಸಿಲ್ವಿ(ಬೈಕ್),
ಕವಿಗೋಷ್ಠಿ, ಕಪಿಯೊಂದಿಗೆ (ಚನ್ನ),
ಪೋಲಾರ್ ಬೇರ್ ನ ಡಿಬಿಸಿ,
ಲಾವಣ್ಯನೊಂದಿಗಿನ ಪ್ರತಿ ದಿನ,
ರಘುವಿನ ಮಗಳ ಭೇಟಿ,
ಹೀಗೆ ಹತ್ತು ಅಲವು ...

ವಾ ಇದನ್ನೆಲ್ಲ ನೆನಪಿಸಿಕೊಂಡು, ಅದರ ಬಗ್ಗೆ ಈಗ ಬರೀಬೇಕಾರೆ ಆಗುತ್ತಿರುವ ಸಂತೃಪ್ತಿಯ ಖುಷಿ ..
ನನ್ನ ನಗು, ನನ್ನ ಮುದ್ದು (ಚಿಂಪಿ) ನಾನು ಖುಷಿಯ ಬಗ್ಗೆ ಬರೆಯುತ್ತಿರವಾಗ ಕರೆಮಾಡಿ ಮಾತನಾಡಿದಾಗ ಆಗುವ ನೆಮ್ಮದಿಯ ಖುಷಿ.
   ತಂಪಾದ ಗಾಳಿಗೆ ಮೈಯೊಡ್ಡಿ ನಿಂತಾಗ, ಕಿವಿಯಲ್ಲಿ ಗಾಳಿ ಪಿಸುಗುಟ್ಟಿದಾಗ, ಆದಿ ಬರೆದ ಚಂದ್ರಮನ ಆರ್ಟಿಕಲ್ ಪದೇ ಪದೇ ಓದಿದಗಾ ( http://adarshabs.blogspot.in/2017/02/blog-post.html ) , ಫಣಿಯಾ ಫೋಟೋಗ್ರಫಿಯ ಬಗ್ಗೆ ಆದಿ ನಾನು ಜಗಳವಾಡಿದಾಗ, ಸಣ್ಣ ಸಣ್ಣ ಹುಸಿ ಮುನಿಸುಗಳು, ಮುದ್ದಾದ ಮಗುವೊಂದು ನಕ್ಕಾಗ, ನಾನೆಟ್ಟ ಗಿಡದಲ್ಲಿ ಹೂವೊಂದು ಅರಳಿದಾಗ, ಅತ್ತಿಗೆ ನಾನು ಸೇರಿ ಅಡಿಗೆ ಮಾಡಿದಾಗ, ಮನೆಯವರೆಲ್ಲ ಒಟ್ಟಿಗೆ ಶಾಪಿಂಗ್ ಮಾಡಿದಾಗ, ಅಬ್ಬಾ .... ಹೇಯ್ ನಾನು ತುಂಬಾ ಲಕ್ಕಿ ಅನ್ನಿಸುತ್ತಿದೆ :) ಖುಷಿ ಆಗ್ತಿದೆ, ಇಷ್ಟೆಲ್ಲ ವಿಷಯಗಳಿಗೆ ಖುಷಿ ಪಡುವ ನಾನು ನನ್ನ ಜೀವನದೊಂದಿಗೆ ಕೋಪ ಮಾಡಿಕೊಂಡಿರುವುದಾದರು ಯೇಕೆ? ಅಥವಾ ಇದು ಹುಸಿ ಕೋಪ ವಿರಬಹುದು (ಕೋಪವಲ್ಲದ ಕೋಪಕ್ಕೆ ಕೋಪವೆಂದು ಹೆಸರಿಟ್ಟಿರಬಹುದು) , ಅಥವಾ ಸಾಧನೆಯ ತುಡಿತದ ಕಿಚ್ಚಿರಬಹುದು. ಗೊತ್ತಿಲ್ಲ. ಸದ್ಯಕ್ಕೆ ಖುಷಿಯಾಗಿದ್ದೇನೆ. ನೀವು ಖುಷಿಯಾಗಿರಿ. ನಮ್ಮಲ್ಲೇ ಖುಷಿ ಅಡಗಿದೆ ನಮಗದು ತಿಳಿಯುವುದಿಲ್ಲ. ತಿಳಿದರು ಬೆಲೆ ಕೊಡುವುದಿಲ್ಲ, ತಿಳಿದರು ತಿಳಿಯದಂತೆ ವರ್ತಿಸಿ ಅವಮಾನಿಸುತ್ತೇವೆ. ಕಾಣದ, ಗೊತ್ತಿಲ್ಲ ಖುಷಿಯಲ್ಲದ ಖುಷಿಗೆ ಖುಷಿಯೆಂದು ಹೆಸರಿಟ್ಟು ಅದನ್ನು ಪಡೆವ ಹಂಬಲದಲ್ಲಿ ಶ್ರಮಿಸಿ ಸೋತು ಹತಾಷರಾಗುತ್ತೇವೆ.

Tuesday 11 July 2017

ತೋಚಿದ್ದನ್ನು ಗೀಚು

ಅದೊಂದು ಸುಂದರ ಸಂಜೆ (೨೪-೧-೨೦೧೭). ಎಂದಿನಂತೆ ಚನ್ನ ನನ್ನೊಂದಿಗೆ ಚಹಾ ಕುಡಿಯಲೆಂದು ನಮ್ಮ physics department ಕ್ಯಾಂಟೀನ್ಗೆ  ಬಂದ. ನಮ್ಮ ಕ್ಯಾಂಟೀನ್ ಓನರ್ ಮಹೇಶಣ್ಣನ್ನ ಜೊತೆ ಒಂದ್ದಷ್ಟು ತರಲೆ ಮಾತಾಡಿ ಚಹಾ ಕುಡಿದು ಅಲ್ಲಿಂದ ಹೊರೆಟೆವು.

ನನ್ನದು, ಚನ್ನದು ಒಂದು ಅಭ್ಯಾಸವಿತ್ತು.
ದಿನ ಸಂಜೆ ಜೊತೆಯಲಿ ಚಹಾ ಕುಡಿದು, ಒಂದಷ್ಟು ಸಾಮಾಜಿಕ ಹಾಗು ಕನ್ನಡ ಸಾಹಿತ್ಯದ ಬಗ್ಗೆ ಮಾತನಾಡುತ್ತ, ನಡೆಯುತ್ತಾ ಬಸ್ ಸ್ಟಾಪ್ ವರೆಗೂ ಹೋಗಿ ಚನ್ನನನ್ನು ಬಸ್ ಹತ್ತಿಸಿ ಬರುವುದು.

ಅದರಂತೆ ನಮ್ಮ ಆ ದಿನದ ಚರ್ಚೆ ನೊಬೆಲ್ ಪ್ರಶಸ್ತಿಯಬಗ್ಗೆ.
ಚರ್ಚಿಸುತ್ತ ನಡೆಯುತ್ತಿದ್ದ ನಮಗೆ ದಾರಿ ಕಳೆದ್ದದೆ ತಿಳಿಯಲಿಲ್ಲ. ನಮ್ಮ ಚರ್ಚೆಗೆ ತೆರೆ ಎಳೆಯುವ ಸಮಯ ಬಂದಾಯ್ತು. ಆದರೆ ಅಂದೇಕೋ ಅಷ್ಟು ಬೇಗ ವಿದಾಯ ಹೇಳಲು ಮನಸಾಗದೆ ಅಡ್ಮಿನ್ ಬ್ಲಾಕ್ ಬಳಿ ಕಟ್ಟುತಿದ್ದ ಕಾಂಪೌಂಡ್ ಮೇಲೆ ಕುಳಿತೆವು. ಬಾಯಾಡಿಸಲು ಅಲ್ಲಿಯೇ ಮಾರುತಿದ್ದ ಪಾನಿ ಪುರಿ ಕೊಂಡೆವು.
ತಂಪಾದ ಗಾಳಿ,
ಕಣ್ಣಮುಂದೆ ಸೂರ್ಯಾಸ್ತಮದ ಸುಂದರ ನೋಟ.
ಬಣ್ಣ ಬದಲಾಯಿಸುತ್ತಿದ್ದ ಬಾನು.
ಎಲ್ಲವೂ ಸುಂದರವಾಗಿತ್ತು.
ಮುಖ ಪ್ರೇಕ್ಷರಂತೆ ಸುಮ್ಮನೆ ಕುಳಿತು ಪ್ರಕೃತಿ ಸೌಂದರ್ಯವನ್ನು ಸವಿದೆವು.
ಕೈಯ್ಯಲ್ಲಿದ್ದ ಪಾನಿ ಪೂರಿ ತಣ್ಣಗಾಗಿತ್ತು.
ಕೈ ಘಡಿಯಾರ ಸಮಯ ೬.೧೫ ಪಿಎಂ ಎಂದು ತೋರಿಸುತ್ತಿತ್ತು.
ಸರಿ ಪಾನಿ ಪುರಿ ನೀನೆ ಕಾಲಿಮಾಡು ಬೇಗ, ಹೋಗಣ, ಲೇಟ್ ಅಯ್ತು ಅಂದೇ.
ಅದೇಕೋ ಏನೋ, ಇದ್ದಕಿದಂತೆ ಚನ್ನ ಹೇಳಿದ "ಮಧು, ನಿನಗೆ ತೋಚಿದ್ದನ್ನು ಗೀಚಿಡು"

ಸರಿ ಎನಿಸಿತ್ತು.
ಆದರೆ ವ್ಯಕ್ತ ಪಡಿಸದೆ ನಕ್ಕು ಸುಮ್ಮನಾಗಿದ್ದೆ. 

Monday 10 July 2017

ಟಿಕ್ ಟಿಕ್

ನಾನು ಸುಮ್ನೆ ಟಿವಿ ಮುಂದೆ ಕುಡ್ಕೊಂಡು ಸಮಯ ಹಾಳು ಮಾಡ್ತಿದ್ರೆ ನಮ್ಮಪ್ಪ ಅದುನ್ನ ಗಮನಿಸಿ ಆವಗಾವಾಗ  ಒಂದು ಹಾಡೆಳ್ತಾರೆ "ಜಿಪುಣ ಅಂದ್ರೆ ಜಿಪುಣ ಈ ಕಾಲ".
ಅವತೊಂದು ದಿನ ನ ಕೇಳ್ತಿದ್ದೆ , ಯಾಕಪ್ಪ ನಾನು ಕುಡ್ಕೊಂಡು ಟಿವಿ ನೋಡ್ತಿದ್ರೆ ಹಾಡ್ಹೇಳ್ತೀರಾಆಆ .
ನೋಡ್ಬಾರ್ದ ಟಿವಿನ ಹಾಗದ್ರೆ ನಾನು?
ಟಿವಿ ನೋಡ್ಬಾರ್ದು ಅಂತಲ್ಲ ಮಗಳೇ,
ನಾವು ಏನ್ ಮಾಡ್ತಿದಿವಿ ಯಾಕೆ ಮಾಡ್ತಿದೀವಿ ಅಂತ ಗೊತಿರ್ಬೇಕು ಅಷ್ಟೇ.
ಸಮಯದ ಬೆಲೆ ಅರಿತು ನಡೆದರೆ ಕಾರ್ಯ ಸಿದ್ಧಿಯು ಖಂಡಿತಾ ಅಂತಾರೆ ಅಪ್ಪ.
ಹೋ ಹಾಗಾದ್ರೆ ಟಿವಿ ನೋಡದೆ ನಾನು ಯಾವಾಗ್ಲೂ ಓದ್ಕೊಂಡು ಕುರ್ತಿಬೇಕಾ?
ಅನ್ನೋ ನನ್ನ ವಿತಂಡ ವಾದಕ್ಕೆ ನಮ್ಮಪ್ಪ ಹೀಗೆ ಹೇಳ್ತಾರೆ,
ನಿನ್ನ ಜೀವನದಿಂದ ನಿಂಗೇನು ಬೇಕು ಅಂತ ನೀನೆ ನಿರ್ಧಾರ ಮಾಡಬೇಕು.
ಟಿವಿ ನೋಡ್ಬೇಕು ಅನ್ಸಿದ್ರೆ ನೋಡು.
ನಂಗೇನು ತೊಂದ್ರೆ ಇಲ್ಲ.
ಮಗಳು ಮುಂದೆ ಬಂದ್ರೆ, ಖುಷಿಯಾಗಿದ್ರೆ ನಂಗೆ ಖುಷಿ, ಅಷ್ಟುಬಿಟ್ಟು ನಂಗೆ ಬೇರೆ ಏನು ಲಾಭ ಇಲ್ಲ.
ಲಾಭ ಏನಾದ್ರು ಇದ್ರೆ ಅದು ನಿಂಗೇನೇ ಹೊರೆತು ನಂಗು ಹಾಗು ನಿನ್ನ ಅಮ್ಮಂಗಲ್ಲ.
ಕಳೆದು ಹೋದ ಸಮಯ ಎಷ್ಟೇ ಹುಡ್ಕಿದ್ರು ಸಿಗಲ್ಲ.
ಮತ್ತೆ ವಾಪಾಸ್ ಬರಲ್ಲ.
ಟಿವಿ ನೋಡ್ಬೇಡ, ಕುತ್ಕೊಂಡು ಓದು ಅಂತ ಅಲ್ಲ ನನ್ನ ಮಾತಿನ ಅರ್ಥ,
ಓದೋದುನ್ನು ಬಿಟ್ಟು ಅದರ ಹೊರಗೂ ಸಾವಿರ ಕೆಲಸ ಇದೆ ಕಲಿಯೋಕ್ಕೆ ಹಾಗು ಮಾಡೋಕ್ಕೆ, ಆಸಕ್ತಿ ಇದ್ರೆ.

ಇಲ್ಲಿಗೆ ನಂದು ಅಪ್ಪಂದು ಈ ವಿಷಯದ ಬಗ್ಗೆ ಕಿತ್ತಾಟ ನಿಲಿಲ್ಲ.
ಒಂದಿನ ನಮ್ಮಪ್ಪ ಏನೋ  ಒಂದು ಕೆಲಸ ಮಾಡಕ್ಕೆ ಹೇಳಿದ್ರು ನಂಗೆ.
ಆಗ ನ ಹೇಳ್ದೆ, ಏ ಹೋಗಪ್ಪ ಟೈಮ್ ವೇಸ್ಟ್ , ನಾ ಮಾಡಲ್ಲ ಆ ಕೆಲ್ಸಯೆಲ್ಲ.
ಅವಾಗ ನಮ್ಮಪ್ಪ ನಂಗೆ ಹೇಳಿದ ಮಾತಿಗೆ ಎಷ್ಟು ತುಕವಿತ್ತು ಅಂದ್ರೆ, ಇಡೀ ರಾತ್ರಿ ನಮ್ಮಪ್ಪನ ಮತಿನ  ಬಗ್ಗೆ ಯೋಚನೆ ಮಾಡಿದ್ದೆ.
ಅವರು ಹೇಳಿದ್ದು ಇಷ್ಟೇ , "ಟೈಮ್ ವೇಸ್ಟ್ ಅಂದ್ಯಲ್ಲ, ಹಾಗಾದ್ರೆ  ಫ಼ಾರ್ ವಾಟ್ ಪರ್ಪಸ್ ಯೂ ಆರ್ ಯೂಸಿಂಗ್ ದಿಸ್ ಟೈಮ್ ಫಾರ್ ? ಎನಿ ಪ್ರೊಡೆಕ್ಟಿವ್ ತಿಂಗ್? ಫಸ್ಟ್ ಆಫ್ ಆಲ್ ವಾಟ್ ಡು ಯು ಮೀನ್ ಬೈ ವೇಸ್ಟ್ ಅಪ್ ಟೈಮ್? ಟೈಮ್ ವೇಸ್ಟ್ ಅಂದ್ರೆ ಏನು ಅಂತ ಮೊದ್ಲು ನೀನು ಸರಿಯಾಗಿ ಅರ್ಥ ಮಾಡ್ಕೋಬೇಕು"

ಅವರ ಮಾತು ನಿಜ.
ನಮಗೆ ಇಷ್ಟವಾದದ್ದು ಏನಾದ್ರು ಮಾಡ್ತಾ ಇರ್ಬೇಕು ಸುಮ್ನೆ ಕೂರಬಾರದು ಅನ್ನೋದು ನಮ್ಮಪನ ವದ ಅಂತ ಅರ್ಥ ಆಯಿತು. ಆದ್ರೆ ನಾಯಿ ಬಾಲ ಡೊಂಕೇ. ಐ ಲವ್ ಟು ವೇಸ್ಟ್ ಟೈಮ್. ಸುಮ್ನೆ ಕೂತಿರ್ತಿನಿ ಕೆಲವೊಮ್ಮೆ,  ಯಾವುದೋ ಯೋಚನೆಯಲ್ಲಿ ಮುಳುಗಿ ಹೋಗಿರ್ತಿನಿ .
ಯಾಕೋ ಗೊತ್ತಿಲ್ಲ, ಇದ್ರು ಬಗ್ಗೆ ಅಪ್ಪನ ಹತ್ರ ಮಾತಾಡ್ಬೇಕು ಅನ್ಸಿ ಕೇಳ್ದೆ,
ಏನು ಮಾಡದೇ ಸುಮ್ನೆ  ಕುತ್ಕೊಳದು ಟೈಮ್ ವೇಸ್ಟ್ ಆ ?
ಹಿಸ್ ಆನ್ಸರ್ ವಾಸ್ ಬಿಟ್ ಷಾಕಿಂಗ್, ಹಿ ಟೋಲ್ಡ್,
ಇಲ್ಲ ಮಗಳೇ. ನಮ್ಮೊಂದಿ ನಾವು ಸುಮ್ಮನೆ ಕೂತು ಸ್ವಲ್ಪ ಕಾಲ ಕಳೆಯಬೇಕು. ಅದು ಒಳ್ಳೆಯ ಅಭ್ಯಾಸ.
ಸಮಯದ ಒಳ್ಳೆಯ ಉಪಯೋಗ ಹೀಗೆ ಮಾಡ್ಬೇಕು ಹಾಗೆ ಮಾಡ್ಬೇಕು ಅಂತ ಇರೋದಿಲ್ಲ, ಕಾಲಕ್ಕೆ ತಕ್ಕಂತೆ ಸಮಯದ ಒಳ್ಳೆಯ ರೀತಿಯ ಬಳಕೆಯ ವ್ಯಾಖ್ಯಾನವು ಬದಲಾಗುತ್ತದೆ. ಇಟ್ಸ್ ಆಲ್ ಅಬೌಟ್ ಪ್ರಿಯೋರಿಟಿಸ್ ಅಂಡ್ ಹೌ ಯು ಡೆಫಿನೇ ಇಟ್.

ಇಟ್ ಮೇಕ್ಸ್ ಸೆನ್ಸ್. ಸುಮ್ನಾದೆ.

ಈ ಘಟನೆಗಳೆಲ್ಲ ನಡೆದು ಬಹಳ ವರ್ಷಗಳೇ ಆದವು.

ಯಾಕೋ ಗೊತ್ತಿಲ್ಲ ಈ ಸಂದರ್ಭದಲ್ಲಿ ರಣಬೀರ್ ಕಪೂರ್ "yeh jawaani hai deewani" ಫಿಲ್ಮ್ ಅಲ್ಲಿ ಹೇಳಿದ ಡೈಲಾಗ್ ನೆನಪಾಗತಿದೆ  "ಮೈ ವುಡ್ನ ಚಾಹ್ತಾ ಹ್ಞೂ, ದೌಡ್ನ ಚಾಹ್ತಾ ಹ್ಞೂ, ಗಿರ್ನ ಭೀ ಚಾಹ್ತಾ ಹ್ಞೂ, ಬಸ್ ರುಕ್ನ ನಹಿ ಚಾಹ್ತಾ ಹ್ಞೂ ". ಎಷ್ಟು ಸತ್ಯ ಅಲ್ವ ಇದು ?  ಈ ಡೈಲಾಗ್ ತುಂಬಾನೇ ಇಂಪ್ರೆಸ್ ಮಾಡಿತ್ತು ನನಗೆ. ದಿನ ನಮ್ಮ ಜೀವನದಲ್ಲಿ ಹೊಸತೇನರು ಕಲಿತ ಇರ್ಬೇಕು, ಆವಾಗ್ಲೇ ಮಜಾ. ಅಲ್ವ ?

ಟಿಕ್ ಟಿಕ್ ಅಂತ ಶಬ್ಧ ಮಾಡ್ತಾ ಓಡೋ ಸಮಯದ ಬಗ್ಗೆ ಇಂದು ಇದ್ದಕಿದಂತೆ ನಾನು ಬರಿಯಾಕ್ಕೆ ಕಾರಣವಿದೆ. ಒಂದು ವಾರದಿಂದ ಯೂನಿವರ್ಸಿಟಿ ಕಡೆ ತಲೆ ಹಾಕಿರಲಿಲ್ಲ. IISc ಯಲ್ಲಿ ಯಾವುದೊ ರೆಸೆರ್ಚ್ ವರ್ಕ್ ನಲ್ಲಿ ಬಿಜಿಯಾಗಿದ್ದೆ. ಇಂದು ಯೂನಿವರ್ಸಿಟಿ ಗೆ ಬಂದ ನಾನು ನನ್ನ ಮುದ್ದುವಿನ (ನನ್ನ ಸ್ನೇಹಿತ, ಅವನಂದ್ರೆ ತುಂಬಾ ಪ್ರೀತಿ) ದರ್ಶನ ಮಾಡಲೆಂದು ಅವನ ಲ್ಯಾಬ್ ಗೆ ತೆರಳಿದೆ. ಕೇವಲ ಹಯ್ ಹೇಳಿ, ರಘು (ನನ್ನ ಸ್ನೇಹಿತ) ಹೇಳಿದ ಕೆಲವು ವಿಷಯದ (exam invigilation duty) ಬಗ್ಗೆ ಮಾತಾಡಿ ಐದು ನಿಮಿಷಕ್ಕೆ ವಾಪಸು ಬರಬೇಕೆಂದುಕೊಂಡಿದ್ದೆ. ಆದರೆ ಸುಮಾರು ಎರೆಡು ಘಂಟೆಗಳ ಕಾಲ ಕೂತು ಮಾತಾಡಿ ಬಂದೆ. ರಿಸರ್ಚ್ ವರ್ಕ್ ಬಗ್ಗೆಯಲ್ಲ, ಜೀವನದ ಬಗ್ಗೆಯೂ ಅಲ್ಲ, ಸಮಾಜದ ಆಗು ಹೋಗುಗಳ ಬಗ್ಗೆ. ನಮ್ಮ ಸುತ್ತಮುತ್ತ ನಡೆಯುತ್ತಿರುವ ಘಟನೆಯ ಬಗ್ಗೆ (University administration).
ಮಾತು ಮುಗಿಸುವ ಮುನ್ನ ಕಪೀಶ ಹೇಳಿದ, ನನ್ನ ಸಮಯ ನಿನ್ನ ಸಮಯ ಇಬ್ರುದು ವೇಸ್ಟ್ ಅಯ್ತು, ಹೋಗು ಕೆಲಸ ಮಡ್ಹೋಗು ಅಂದ. ಸರಿ ಎಂದು ನಾನು ಹೊರಟು ಬಂದೆ.

ಅವನೊಂದಿಗೆ ಕಳೆದ ಯಾವ ಸಮಯವೂ ವ್ಯರ್ಥವಲ್ಲ ಅಂತ ಯಾರು ಅವನಿಗೆ ಬಿಡಿಸಿ ಹೇಳ್ತಾರೆ?


Saturday 8 July 2017

ದಿ ಮೊಮೆಂಟ್ ( ಘಳಿಗೆ)

ಲೀವ್ ಲೈಫ್ ಇನ್ ಮೊಮೆಂಟ್ಸ್.
ದಿಸ್ ಇಸ್ ವಾಟ್ ಐ ಲರ್ನಟ್ ಇನ್ ರೀಸೆಂಟ್ ಫ್ಯೂ ಇಯರ್ಸ್.

ನೋವು, ನಲಿವು, ಸುಖ, ದುಃಖ ಅಥವಾ ಮನುಷ್ಯನ ಯಾವುದೇ ಇನ್ನಿತರ ಭಾವನೆಗಳಾಗಲಿ ಆಯಾ ಸಂದರ್ಭಕ್ಕೆ ತಕ್ಕಂತೆ ಬದಲಾಗುತ್ತದೆ. ಇಷ್ಟಲ್ಲದೆ ನಮ್ಮ ಹಿರಿಯರು ಹೇಳ್ತಿದ್ರೆ, ಬದಲಾವಣೆ ಜಗದ ನಿಯಮ ಅಂತ.

ನಮ್ಮಪ್ಪ ಯಾವಾಗ್ಲೂ ಹೇಳ್ತಾರೆ 'ಕಾಲಕ್ಕೆ ತಕ್ಕಂತೆ ಕೋಲಾ' ಅಂತ . ಎಲ್ಲವೂ ಅಷ್ಟೇ, ಎಲ್ಲಾರು ಅಷ್ಟೇ, ಸಮಯಕ್ಕೆ ತಕ್ಕಂತೆ ಬದಲಾಗುತ್ತಾರೇ , ಅದು ತಪ್ಪಲ್ಲ. ಬದಲಾವಣೆ ಅನಿವಾರ್ಯ. ಆದರೆ ನನ್ನ ಆಸೆ ಇಷ್ಟೇ ಯಾವುದೇ ಬದಲಾವಣೆಗಳಾಗಲಿ ಅದು ನಮ್ಮನಮ್ಮ ಇಂಪ್ರೂವ್ಮೆಂಟ್ಗೆ ಮತ್ತು ಜಗದ ಸುಧಾರಣೆಗಾಗಿ ಆಗಿರಬೇಕು.

ಚಿಕ್ಕವಳಿದಾಗ ನಮ್ಮ ಮನೆಯ ಗೋಡೆಯಲ್ಲಿ ತಗುಲು ಹಾಕಿದ್ದ ಕ್ಯಾಲೆಂಡರ್ನಲ್ಲಿ ಒಂದು ಸುಂದರ ಜಲಪಾತದ ಚಿತ್ರವಿತ್ತು. ಅದರ ಕೆಳಗೆ ಒಂದು quote, "nothing is permanent except change, change is a continuous process but not an event" (ಇದರರ್ಥ ಸ್ಪಷ್ಟವಾಗಿ ಅರ್ಥವಾಗಲು ಇನ್ನೊಂದಾಷ್ಟು ವರ್ಷಗಳು ಬೇಕಾಗಬಹುದು). ಆ ಚಿತ್ರವೇನನ್ನು ಬಿಂಬಿಸುತಿತ್ತು? ನಮ್ಮ ಜೀವನವನ್ನೇ? ಮನುಷ್ಯನ ಯೋಚನಾ ಲಹರಿಯನ್ನೇ? ಸೃಷ್ಟಿಯ ನಿಯಮವನ್ನೇ? ಗೊತ್ತಿಲ್ಲ. ಹಾಗಾದರೆ ಯಾವುದು ಶಾಶ್ವತವಲ್ಲದ ಈ ನಶ್ವರದ ಬದುಕ್ಕಲ್ಲಿ ಖುಷಿಯನ್ನ ಹುಡುಕುವುದೆಲ್ಲಿ ? ಅಂಡ್ ಮೋಸ್ಟ ಆಪ್ ಆಲ್, ಜೀವನವೆಂದರೇನು ? ಈ ಪ್ರಶ್ನೆಗಳು ಬಹಳ ವರ್ಷಗಳ ಹಿಂದೆ ನನ್ನನ ಬಹಳವಾಗಿ ಕಾಡಿತ್ತು. ಈಗಳು ಕೆಲವೊಮ್ಮೆ ಕಾಡುತ್ತದೆ.

ನನ್ನ ಸುತ್ತ ಇರುವ ಜನರನ್ನೆಲ್ಲ ನೋಡಿದಾಗ, ಇವರೆಲ್ಲ ಖುಷಿಯಾಗಿದ್ದಾರೆಯೇ? ಖುಷಿಯಾಗಿದ್ದರೆ ಅದಕ್ಕೆ ಕಾರಣ ಏನು? ಖುಷಿಯಾಗಿಲ್ಲದಿದ್ದರೆ ಅದಕ್ಕೆ ಕಾರಣವೇನು ? ಹಾಗಾದರೆ ಖುಷಿಗೆ ಪರ್ಟಿಕ್ಯುಲರ್ ಡೆಫಿನಿಷನ್ ಇದೆಯೇ? ಇಲ್ಲ. ಇಟ್ಸ್ ಆಲ್ ಇನ್ ಅವರ್ ಪೆರ್ಸ್ಪೆಕ್ಟಿವ್. ಖುಷಿ ನಮ್ಮಲಿಯೇ ಅಡಗಿದೆ.  ಹಾಗಾದರೆ ನಮ್ಮ ಯಾವ ಭಾವನೆಗಳಿಗೂ ತನ್ನದೇಯಾದ ನಿರ್ಧಿಷ್ಟ ವ್ಯಾಖ್ಯಾನವಿಲ್ಲವೇ? ಹೀಗಿರುವಾಗ ಯಾವುದೇ ವ್ಯಕ್ತಿಯ ನಡುವಳಿಕೆಯನ್ನು ಜಡ್ಜ್ ಮಾಡುವ ಅಧಿಕಾರ ಯಾರಿಗೂ ಇರುವುದಿಲ್ಲ, ಅಲ್ಲವೇ?

ನಮ್ಮ ಶಂಕರ್ ಭಟ್ರು (ನಮ್ಮಪ್ಪ) ಹೇಳ್ತಾರೆ ಉರೋರಿಗೆ ಒಂದು ದಾರಿ ಆದ್ರೆ ಪೊರರಿಗೊಂದು ದಾರಿ, ನಮ್ಮ ಯೋಚನೆಗಳು ಯೋಜನೆಗಳು ಏನೇ ಇರಬಹುದು, ಒಂದು ಸಮಾಜದಲ್ಲಿ ನಾವು ಜೀವಿಸುವಾಗ ಸಂಪೂರ್ಣವಾಗಿ ಅಲ್ಲದಿದ್ದಾದರೂ, ಆದಷ್ಟು  ಸಮಾಜದೊಂದಿ ಹೊಂದಿಕೊಂಡು ಸಮಾಜದೊಂದಿ ಬದುಕಬೇಕು, ಹಾಗು ಸಮಾಜದೊಂದಿಗೆ ಇದ್ದು ನಮ್ಮ ಯೋಚನೆಗಳು ಯೋಜನೆಗಳು ಜಾಣತನದಿಂದ ಯಾರಿಗೂ ತೊಂದರೆಯಾಗದಂತೆ ಎಕ್ಸಿಕ್ಯೂಟ್ ಮಾಡಬೇಕು. ಎಂದಿಗೂ ಪೋರರ ದಾರಿ ಹಿಡಿಯ ಬಾರದು. ಯಾವ ವಿಷಯಕ್ಕಾಗಲಿ ಯಾರನ್ನು ದ್ವೇಷಿಸಬಾರದು, ತಲೆ ಕೆಡಿಸಿಕೊಂಡು ನೋವನಿಭವಿಸ ಬಾರದ. ಜೆಸ್ಟ್ ಇಗ್ನೋರ್ ವಿಚ್ ಇಸ್ ನಾಟ್ ರಿಲೆತೆಡ್ ಟು ಯು.
ಆದರೆ ಬೇರೆಯವರಿಗೆ ಉಪಕಾರ ಮಾಡು. ಆಗಲ್ವ? ಹಾಗಾದ್ರೆ ಉಪದ್ರ ಅಂತೂ ಮಾಡ್ಬೇಡ ತೆಪ್ಪಗಿರು.
ಪ್ರೀತಿಯೊಂದೇ ಸತ್ಯ. ಮಿಕ್ಕಿದೆಲ್ಲ ಅದರ ಡೇರಿವೆಟಿವ್ಸ್ ಅಷ್ಟೇ .
ಸರಿ ಅನಿಸುತ್ತದೆ.

ತುಂಬ ಭಾವುಕಳಾದ ನಾನು ಸಣ್ಣ ಪುಟ್ಟ ವಿಷಯಗಳನ್ನು ತಲೆಗೆ ತುಂಬಿಕೊಂಡು ನೋವನುಭವಿಸುತ್ತಿದ್ದ ಕಾಲವೊಂದಿತ್ತು. ಸಂಪೂರ್ಣವಾಗಿ ಅದರಿಂದ ಹೊರ ಬರದಿದ್ದರೂ, ಐ ಹ್ಯಾವ್ ಲರ್ನಟ್ ಟು ಲೆಟ್ ಗೋ ದಿ ತಿಂಗ್ಸ್ ವಿಚ್ ಆರ್ ನಾಟ್ ಇನ್ ಮೈ ಹ್ಯಾಂಡ್.  ಐ ಲರ್ನಟ್ ಟು ತಿಂಕ್ ಔಟ್ಸೈಡ್ ದಿ ಬಾಕ್ಸ್. ನನ್ನ ನೋಟವನ್ನು ಬದಲಾಯಿಸಿಕೊಳ್ಳುವ ಪ್ರಯತ್ನದಲ್ಲಿದ್ದೇನೆ.

ಯಾವುದೇ ವಿಷಯಕ್ಕಾಗಲಿ ಘಟನೆಗಳಿಗಾಗಲಿ ಎರೆಡು ಮುಖವಿರುತ್ತದೆ. ಒಂದು ನಾವು ಕಂಡು ಅರ್ಥಯಿಸಿಕೊಂಡ್ಡದು, ಮತ್ತೊಂದು ನಿಜ ಸಂಗತಿ. ನಾವು ಕಂಡು ಅರ್ಥಯಿಸಿಕೊಂಡ್ಡದು ಯಾವಾಗಲು ನಿಜ ಸಂಗತಿಯಾಗಿರುತ್ತದೆ ಅನ್ನುವುದು ನಮ್ಮವಾದವಾಗಿರುತ್ತದೆ, ಹಾಗಾಗಿಯೇ ಈ ಜಗಳಗಳು, ಮನಸ್ತಾಪಗಳು. ದುಡುಕುವಮುನ್ನ ನಿಜ ಸಂಗತಿಯ ಅರ್ಥಯ್ಸಿಕೊಳ್ಳುವ್ವ ವ್ಯವಧಾನ ನಮ್ಮಲ್ಲಿ ಬೆಳೆಯ ಬೇಕು. ಆಗ ಮಾತ್ರ ಮನಸು ನೆಮ್ಮದಿಯಿಂದಿರುತ್ತದೆ. ಖುಷಿಯಾಗಲಿ ದುಃಖ್ಖವಾಗಲಿ ಯೆಲ್ಲವು ಕ್ಷಣಿಕ. ಬಂದದ್ದನ್ನು ಅನುಭವಿಸುವ ಧಿಟ್ಟತನ ನಮ್ಮಲಿರಬೇಕು. ನಥಿಂಗ್ ಲಾಸ್ಟ ಫೋರೆವೆರ್.

ಈಗ ಖುಷಿಯಾಗಿರುವೆ? ಹಾಗಾದರೆ ಎಲ್ಲ ಚಿಂತೆ ಬಿಟ್ಟು ಎಂಜಾಯ್ ದಿ ಮೊಮೆಂಟ್.ಜೀವನ ಪೂರ್ತಿ ಆ ಗಳಿಗೆ ಇರುವುದಿಲ್ಲ, ಕೇವಲ ನೆನಪೊಂದೆ ನಿಜ ಸಂಗಾತಿ. ಹಾಗಾಗಿ ಮೇಕ್ ಎವ್ರಿ ಮೊಮೆಂಟ್ ಮೆಮೊರೇಬಲ್ ಅಂಡ್ ಬ್ಯೂಟಿಫುಲ್.  ಅತಿ ಆಸೆ ಬೇಡ.
ಅಥವಾ ಈಗ ಕಷ್ಟದಲ್ಲಿರುವೆಯ?  ಹಾಗಾದರೆ ಚಿಂತೆಪಡದೆ ಅದಕ್ಕೆ ಸೊಲ್ಯೂಷನ್ ಹುಡುಕು. ಒಟ್ಟಿನಲ್ಲಿ ಜೀವನವನ್ನು ಜೀವಿಸು. ಚಿಂತೆ ಚಿತೆ. ಚಿಂತೆ ನಿಂತ ನೀರು. ಅದರಿಂದ ಕಾಯಿಲೆಗಳೇ ಹೊರತು, ಪ್ರಯೋಜನ ವಿಲ್ಲಾ. ಕಷ್ಟಗಳಿಗೆ ಆದಷ್ಟು ಕಷ್ಟಗಳು ಎಂಬ ಹಣೆಪಟ್ಟಿ ಕೊಡದಿರಲು ಪ್ರಯತ್ನಿಸು. ಆಗ ಪ್ಯಾನಿಕ್ ಅಗದೆಯೇ ಒಳ್ಳೆಯ ಸೊಲ್ಯೂಷನ್ ಹುಡುಕಲು ಸಹಾಯವಾಗುತ್ತದೆ.

ನಮ್ಮ ನಮ್ಮ ಭಾವಕ್ಕೆ ತಕ್ಕಂತೆ ನಮ್ಮ ನಮ್ಮ ಬಾಳು. ಇಟ್ಸ್ ಆಲ್ ಇನ್ ಅವರ್ ಹ್ಯಾಂಡ್.
ಲೈಫ್ ಇಸ್ ಸೋ ಬ್ಯೂಟಿಫುಲ್ ಅಂಡ್ ಮ್ಯೂಸಿಕಲ್. ನಾವು ಕಣ್ತೆರೆದು ನೋಡಬೇಕಾಗಿದೆ ಹಾಗು ಕಿವಿಕೊಟ್ಟು ಕೇಳಬೇಕಾಗಿದ.
ದಿ ಅಲ್ಟಿಮೇಟ್ ಗೋಲ್ ಆಫ್ ಲೈಫ್ ಐಸ್ ಟು ಬಿ ಹ್ಯಾಪಿ ಅಂಡ್ ಇಫ್ ಪಾಸಿಬಲ್ ಮೇಕ್ ಅದರ್ ಪೀಪಲ್ ಹ್ಯಾಪಿ. ದಟ್ಸ್ ವಾಟ್ ಲೈಫ್ ಐಸ್ ಆಲ್ ಅಬೌಟ್. 

Friday 7 July 2017

ದೋಸೆ.

ಮಲೆನಾಡಿನ ಹವ್ಯಕ ಜನಗಳೆ ಹಾಗೇ. ಮೂಲತಹ ಸಸ್ಯಾಹಾರಿಗಳಾದ ಇವರು ವೆರೈಟಿ ವೆರೈಟಿಯಾಗಿ ಅಡಿಗೆ ಮಾಡಿ ತಿಂತಾರೆ. ಯಾವುದೇ ಜನಾಂಗಗಳ ಆಹಾರ ಪದ್ಧತಿಗಳಾಗಲಿ ಅವರವರ ಸಂಪ್ರದಾಯ, ಅವರಿರುವ ಪರಿಸರದ ಅನುಗುಣವಾಗಿ ಬೆಳೆದು ಬಂದಿರುತ್ತದೆ.  ನಮ್ಮ ಮಲೆನಾಡಿಗರ ಆಹಾರ ಪದ್ಧತಿಗಳು ಹಾಗೆಯೇ. ಉಷ್ಣತೆಯನ್ನು ನಿಯಂತ್ರಿಸಲು ಕೂಸುಗಲಕ್ಕಿ ಗಂಜಿಮಾಡಿ ತಿಂತಾರೆ. ಸುತ್ತಮುತ್ತ ಬೆಳೆಯುವ ತರಕಾರಿ, ಹಣ್ಣುಹಂಪಲು, ಸೊಪ್ಪುಸದೆಯನ್ನು ಬಳಸಿ ತಿಂಡಿ ಅಡಿಗೆ ಮಾಡ್ತಾರೆ. ಇವರದ್ದು ಬಹಳ ರುಚಿಕರ ಹಾಗು ಆರೋಗ್ಯಕರ ಆಹಾರ ಪದ್ಧತಿ. ಅಯ್ಯೋ ಯಾಕೆ ಇಷ್ಟೆಲ್ಲಾ ಪೀಟೀಲು ಕುಯ್ತಿದಿನಿ ಅಂತ ಕೇಳ್ತಿದಿರಾ? ಅದಕ್ಕೆ ಕಾರಣ ಇಷ್ಟೇ, ಇವತ್ತು ಬ್ರೇಕ್ಫಾಸ್ಟ್ಗೆನಮ್ಮನೇಲಿ ಹಲಸಿನಕಾಯಿ ದೋಸೆ. ಅಮ್ಮ ಲಾಸ್ಟ ವೀಕ್ ಊರಿಗೆ (ಪುತ್ತೂರು) ಹೋಗಿದ್ರು, ಪಾಪಾ ಬಡಪಾಯಿಗಳಾದ ಅವರ ಮಕ್ಕಳು ಅಂದ್ರೆ ನಾನು,ನಮ್ಮಣ್ಣ, ಹಾಗು ಅತ್ತಿಗೆಗೆ (ಒಹ್ ಈಗ ಲಿಸ್ಟ್ ಸ್ವಲ್ಪ ದೊಡ್ಡ ಆಗಿದೆ) ಹಲಸಿನ ಕಾಯಿ ದೋಸೆ ಇಷ್ಟ. ಬೆಂಗಳೂರಲ್ಲಿ ಇವ್ರಿಗೆ ಇವೆಲ್ಲ ಸಿಗದು ರೇರ್ ಅಂತ ಬರ್ತಾ ಒಂದತ್ತು ಹಲಸಿನಕಾಯಿ ಸೊಳೆ ತಂದಿದ್ರು, ದೋಸೆ ಮಾಡಿಕೋಡ್ಬೋದಲ್ಲ ಅಂತ ಅವರ ಉದ್ದೇಶವಾಗಿತ್ತು. ಅದರೊಂತೆಯೇ ಟುಡೇ ಬ್ರೇಕ್ಫಾಸ್ಟ್ಗೆಹಲಸಿನಕಾಯಿ ದೋಸೆ. ಹಲಸಿನಕಾಯಿ ದೋಸೆಗೆ ತೆಂಗಿನೆಣ್ಣೆ, ಮಾವಿನಕಾಯಿ ಚಟ್ನಿಮತ್ತು ಜೇನು ಹಾಕೊಂಡು ತಿಂದ್ರೆ ವಾಹ್ ಮಜಾನೋ ಮಜಾ ಯಾಮ್. 


ಇಷ್ಟು ಮಾತ್ರ ಅಲ್ಲ ನಮ್ಮೂರಲ್ಲಿ ಸಕ್ಕತು ವೆರೈಟಿ ದೋಸೆಗಳು ಮಾಡ್ತಾರೆ. ಫಾರ್ ಎಕ್ಸಾಮ್ಪ್ಲೆ 
  • ಉದ್ದಿನಬೇಳೆ ದೋಸೆ 
  • ಮೆಂತ್ಯಕಾಳು ದೋಸೆ 
  • ಹಲಸಿನಹಣ್ಣಿನ ದೋಸೆ 
  • ಪಪ್ಪಾಯ ದೋಸೆ 
  • ಮುಳ್ಳು ಸವ್ತೆ ದೋಸೆ 
  • ಮಂಗಳೂರು  ಸವ್ತೆ ದೋಸೆ 
  • ನೀರು ದೋಸೆ 
  • ಈರುಳ್ಳಿ ದೋಸೆ 
  • ಕಾರ ದೋಸೆ 
  • ಗೋದಿ, ರಾಗಿ, ನವಣೆ etc ದೋಸೆ 
  • ಕ್ಯಾರಟ್, ಬೀಟ್ರೂಟ್ ದೋಸೆ 
ಇನ್ನು ಹತ್ತು ಹಲವು. ಇದರಲ್ಲಿ ನಂಗೆ ಹಲಸಿನಕಾಯಿ ದೋಸೆ ಮತ್ತು ನೀರು ದೋಸೆ ಅಂದ್ರೆ ಫುಲ್ ಫವ್ರೆಟ್.
ಮಜಾ ಗೊತ್ತ ? ಮಲೆನಾಡ ಹವ್ಯಕರು ದೋಸೆಯಲ್ಲಿ ಮಾತ್ರ ಇಷ್ಟು ವೆರೈಟಿ ಮಾಡಲ್ಲ, ದೇ ಪ್ರಿಪೇರ್ ಲಾಟ್ ಮೊರೆ. ದೇ ಆರ್ ಎಕ್ಸ್ಪರ್ಟ್ ಇನ್ ಪ್ರೆಪ್ರಿಂಗ್ ವೆರೈಟೀಸ್ ಆಫ್  ಪತ್ರಡೆ, ಕೊಟ್ಟಿಗೆ, ಪಡ್ಡು, ಉಂಡೆ, ತಂಬುಳಿ, ಕೊದಿಲು, ಅವಿಲು, ಕಾಯಿಮೆಣಸು etc.... ಇದು ನಿಲ್ಲದಜ್ಜಿ ಕಥೆ. ಲಿಸ್ಟ್ ತುಂಬಾ ಇದೆ. 

ಹೇಯ್ ಇನ್ನೊಂದು ವಿಷ್ಯ ನಾನು ಹೇಳ್ಳೇಬೇಕು,ನಮ್ಮನೇಲಿ (ಯಾವುದೇ) ದೋಸೆ ಮಾಡಿದಾಗೆಲ್ಲಾ ನಮ್ಮಪ್ಪ ಒಂದು ಹಾಡೇಳ್ತಾರೆ "ನನ್ನ ಆಸೆ ಮಸಾಲಾ ದೋಸೆ" ಅಂತ. ಆಗ ನಮ್ಮಮ ಮುಗಳ್ನಕ್ತರೇ. 💗😄

Thursday 6 July 2017

ಮೊದಲ ದಿನ

ಮೊದಮೊದಲು ಯಾವುದೇ ಕೆಲಸ ಶುರು ಮಾಡಿದ್ರು ಮೊದಲ ಕೆಲವು ದಿನಗಳಲ್ಲಿ  ಇರುವಷ್ಟು ಆಸಕ್ತಿ ಆಗಲಿ ಚೈತನ್ಯ ವಾಗಲಿ ಮತ್ತಿನ ದಿನಗಳಲ್ಲಿ ಉಳಿಯುವುದಿಲ್ಲ. ಇದ್ದಕ್ಕೆ ಕಾರಣ?? ದೇವರಾಣೆ ಗೊತ್ತಿಲ್ಲ. ಹ್ಯೂಮನ್ ಪ್ಸ್ಯಚೋಲೊಜಿಯೇ ಹಾಗೆ. ಇದು ಎಲ್ಲಾ ವಿಷಯಗಳಲ್ಲೂ ವಾಲಿಡಿ. ಫಾರ್ ಎಕ್ಸಾಮ್ಪ್ಲೆ ವಾಟ್ಸಪ್ಪ್ ಅಲ್ಲಿ ಪ್ರೈಮರಿ ಫ್ರೆಂಡ್ಸ್ , ಹೈ ಸ್ಕೂಲ್ಸ್ ಫ್ರೆಂಡ್ಸ್, ಬ್ಲ ಬ್ಲ ಬ್ಲ ಅಂತೆಲ್ಲ  ಗ್ರೂಪ್ಸ್ ಮಾಡತಾರೆ ಆದ್ರೆ ಅದರಲ್ಲಿ ಮಾತಾಡುವವರು ಯಾರು ಇಲ್ಲ. ಅದರಲ್ಲಿ ತಪ್ಪು ಇಲ್ಲ ಬಿಡಿ, ಅವರವರ ಕೆಲಸದಲ್ಲಿ ಅವರವರ ಬ್ಯುಸಿ ಇರ್ತರೆ .. ಹಾಗಂತ ಆಸಕ್ತಿನೇ ಕಳ್ಕೊಬಾರ್ದು ಅನ್ನೋದು ನನ್ನ ವಾದ. ಯಾರೋ ಒಬ್ರು ನಮಗೆ ಗೊತ್ತಿರೋರು ಮಾತನಾಡುತಿದ್ದರೆ ಅಂದಾಗ ಸ್ವಲ್ಪ ಆದರೂ ಪ್ರತಿಕ್ರಿಯೆ ಕೊಡಬೇಕು. ಹ್ಮ್ಮ್ ಇರ್ಲಿ ಬಿಡಿ ಇದೆಲ್ಲ ಯಾಕೆ ಈಗ... ನಾನು ಈ ಆರ್ಟಿಕಲ್ ಬರೀತೀರೋ ಉದ್ದೇಶ ಅದಲ್ಲ. ನನ್ನ ಉದ್ದೇಶ ಇಸ್ಟೇ . ಇಂದು ನನ್ನ ಮೊದಲ ದಿನ ಈ ಬ್ಲಾಗ್ನಲ್ಲಿ .. ಯಾವಾಗ ಆಸಕ್ತಿ ಹೋಗೋತ್ತೋ ಗೊತ್ತಿಲ್ಲ. ಸೊ ಏನುಕ್ಕು ಇನ್ನೊಂದಷ್ಟು ಬರಿಯಣಅಂತ ...ಹಾಹಾ

ಕೆಲವರು ಹಾಗೆ, ಕಾರಣವೇ ಇಲ್ದೆ ಇಷ್ಟ ಆಗ್ತಾರೆ, ಅಥವಾ ನಮಿಗೆ ಆ ಕಾರಣಗಳು ಗೊತ್ತಾಗಲ್ಲವೋ ಏನೋ . ನನಗೆ ಫೇಸ್ಬುಕ್ ಅಲ್ಲಿ ಫಣಿ ಆಲೂರು ಅಂತ ಫ್ರೆಂಡ್ ಇದಾರೆ, ಚೆಂದ ಬರೀತಾರೆ. ಯಾಕೋ ಏನೋ ಅವರ ನೆನಪು ಈ ಆರ್ಟಿಕಲ್ ಬರೀತಾ ಇರ್ಬೇಕರೇ ಅಯ್ತು , ಮಧ್ಯಕ್ಕೆ ಬರಿಯದು ನಿಲ್ಸಿ ಫೇಸ್ಬುಕ್ ಓಪನ್ ಮಾಡಿ ಅವರ ಪ್ರೊಫೈಲ್ ನೋಡಿದೆ. ನನ್ನ ಅಂದಾಜು ಸರಿ ಆಯಿತು. ಹೀ ಐಸ್ ಆಲ್ಸೋ ಎ ಬ್ಲಾಗರ್!! ಒನ್ತರ ಖುಷಿ ಆಯಿತು. ಅವರ ಬ್ಲಾಗ್ ಓಪನ್ ಮಾಡಿ ನೋಡಿದೆ.!! ಹೀ ಐಸ್ ಹ್ಯೂಮನ್, ಅಭ್ವಿವ್ ಹೀ ಸ್ಟಾಪ್ಡ್ ಬ್ಲಾಗಿಂಗ್ ಸೊ ಲಾಂಗ್ ಎಗೋ 😞😞 .... ಮೇಬಿ ದಿಸ್ ಐಸ್ ವಾಟ್ ಹೆಪ್ಪೆನ್ಸ್ ವಿತ್ ಮೋಸ್ಟ ಆ ಅಸ್. 


ಹಾಗೆ ಸುಮ್ಮನೆ

ಬರಿಬೇಕಂತ ಆಸೆ ಆದರೆ ಎಲ್ಲರೂ ಓದುವಂತದನ್ನ ಏನು ಬರೆಯದು ಎಂಬ ಪ್ರಾಶ್ನೆ ಯಾವಾಗ್ಲೂ ಕಾಡುತ್ತೆ. ಹಾಗಂತ ಸುಮ್ನೆ ಕುರಕಾಗ್ಲಿಲ್ಲ. ಅದಕ್ಕೆ ಬಸ್ ಯುಂಹಿ ಬ್ಲಾಗ್ ನ ಓಪನ್ ಮಾಡಿದೇ , ೧ ವರ್ಷ ಆಗ್ತಾ ಬಂತು. ಆದ್ರೂ ಏನು ಬರಿಲಿಲ್ಲ. ನನ್ನ ಯೋಚನೆಗಳು ಚಿಂತನೆಗಳು ನನಗೆ ಹಾಗು ನನ್ನ ಪುಸ್ತಕಕ್ಕೆ ಸೀಮಿತವಾಗಿ ಉಳಿದು ಬಿಟ್ಟಿದೆ. ಏನನ್ನೋ ಯೋಚಿಸುತ್ತ ಕುಳಿತಿದ್ದ ಇಂದು ನನಗೆ ನೆನಪಾದದ್ದು ೧ ವರ್ಷಗಳ ಹಿಂದೆ ತೆರೆದ ಈ ಬ್ಲಾಗ್.  ಸೊ ಹಿಯರ್ ಐ ಆಮ್ . ಇಂದಿನಿಂದ ನಿಲ್ಲದೆ ಸಾಗಲಿ ಈ ಪಯಣ ಅಂತ ನನಗೆ ನಾನೇ ಆಶಿಸುತ್ತಾ ನನ್ನ ಈ ಫಸ್ಟ್ ಪೋಸ್ಟ್ನ ಪೋಸ್ಟ್ ಮಾಡ್ತಿದೀನಿ.