Sunday, 28 January 2018

ಸ್ವಲ್ಪ ದೊಡ್ಡ ಥ್ಯಾಂಕ್ಯು

ಮನುಷ್ಯನ ಬುದ್ಧಿಯೇ ಹಾಗೆ. ಎಷ್ಟೇ ತಿಳುವಳಿಕೆಯಿದ್ದರೂ, ತೋರಿಕೆಯ, ಹೊಗಳಿಕೆಯ ಗೊಡವೆಯಿಲ್ಲದಿದ್ದರು ಕೆಲವೊಮ್ಮೆ ಒಂದು ಸಣ್ಣ ಆಸೆ. (ನೋಟ್: ಇಲ್ಲಿ "ಎಷ್ಟೇ" ಎಂಬ ಪದವು ವೇರಿಯೇಬಲ್, ಹಾಗಾಗಿ ನಾನಿಲ್ಲಿ ನನ್ನ ತಿಳುವಳಿಕೆಯ ಬಗ್ಗೆ ಮಾತನಾಡುತ್ತಿಲ್ಲ) ತನ್ನ ಆಲೋಚನೆಯನ್ನು ಇನ್ನೊಬರಿಗೆ ತಿಳಿಸುವುದು, ತಿಳಿಸಿದನಂತರ ಚೆನ್ನಾಗಿದೆಯೆಂದು ಅವರಬಾಯಲ್ಲಿ ಕೇಳುವ ಬಯಕೆ. ಇದು ಕೇವಲ ಆಲೋಚನೆಗಳಿಗೆ ಸೀಮಿತವಲ್ಲ. ಖರೀದಿಸಿದ ಬಟ್ಟೆಯಾಗಲಿ, ಒಡವೆಯಾಗಲಿ, ನೋಡಿದ ಧಾರಾವಾಹಿಯಾಗಲಿ, ಹೀಗೆ ಹತ್ತು ಹಲವು ವಿಷಯಗಳಿಗನ್ವಯವಾಗುತ್ತದೆ.

ಹಾಗೆಯೆ ಮೊನ್ನೆಯೊಂದು ದಿನ ನನ್ನ ಬರವಣಿಗೆಯ ಬಗ್ಗೆ ವಯಸ್ಸಿನಲ್ಲಿ ಸ್ವಲ್ಪ ಹಿರಿಯರಾದ ನನ್ನ ಸ್ನೇಹಿತೆಯ ಬಳಿ ಮಾತನಾಡಿದ್ದೆ. ಅದನ್ನು ಮೆಚ್ಚಿ, ಚೆನ್ನಾಗಿದೆಯೆಂದು ಹೇಳಿ, ಸ್ವಲ್ಪ ದೊಡ್ಡ ಥ್ಯಾಂಕ್ಯೂ ಯೆಂದು ಹೇಳಿದರು. ಈ ಹೊಗಳಿಕೆಗೆ ನಾನು ಅರ್ಹಳೆ ಅಲ್ಲವೇ ಎಂದೆಲ್ಲಾ ಓವರ್ ಡವ್ ಮಾಡುವ ಮನಸಿಲ್ಲನನಗೆ, ಅವರ ಪ್ರತಿಕ್ರಿಯೆಯಿಂದ  ನನಗೆ ಸ್ವಲ್ಪ ಹೆಚ್ಚೇ ಖುಷಿಯಾಯ್ತು. ಹಾಗಾಗಿ ನನ್ನ ಕಡೆಯಿಂದಲೂ ಅವರಿಗೆ ಸ್ವಲ್ಪ ಹೆಚ್ಚೇ ದೊಡ್ಡ ಥ್ಯಾಂಕ್ಯು.

ನೀವು ನೀಡಿದ ಖುಷಿಗಾಗಿ. ಈ ಲೇಖನ ನಿಮಗಾಗಿ.

ಮಧು'ವ್ಯಾ'

ಮನೆಕಟ್ಟಿ ನೋಡು, ಒಂದು ಮದುವೆ ಮಾಡಿ ನೋಡು.
ಈ ಗಾಧೆಯ ಅರ್ಥ ಇತ್ತೀಚೆ ಅರ್ಥವಾಗಲು ಶುರುವಾಗಿದೆ. 
ನನಗೆ ಕನ್ವೆಂಷನಲಿ/ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗಬೇಕೇ ಎಂಬ ಪ್ರಶ್ನೆ? 

ದಿನ ಬೆಳೆಗಾದರೆ ಒಂದೇ ಮಾತು, ಹುಡುಗರ ಫೋಟೋ ತೋರಿಸುವ ಅಣ್ಣ ಅತ್ತಿಗೆ, ಮಗಳೇ ಇವನು ಇಷ್ಟ ಅದನೆ ಎಂದು ಕೇಳುವ ಅಪ್ಪ ಅಮ್ಮ. ಹೂ ಅಪ್ಪ ಇಷ್ಟ ಅಂತ ಅಥವಾ ಇಲ್ಲ ಅಪ್ಪ ಇಷ್ಟವಾಗಲಿಲ್ಲ ಎಂದು ಹೇಳುವುದಾದರೂ ಹೇಗೆ. ನೋಡದೆ ಮಾತಾಡದೆ, ತಿಳಿಯದೆ ಕೇವಲ ರೂಪ, ಕೆಲಸ ಹಾಗು ಮನೆತನ ನೋಡಿ ಏನಾದರು ಹೇಳಲು ಸಾಧ್ಯವೇ? ಎಂದು ನಾನು ಕೇಳಿದಾಗಲೆಲ್ಲ, ಅವರದ್ದು ಒಂದೇ ಪ್ರಶ್ನೆ, ಫೋಟೋ ನೋಡಿ ಮುಂದುವರಿಸಬಹುದೇ ಇಲ್ಲವೇ ಎಂದು ನೀನು ಹೇಳಿದರೆ ಸಾಕು ಅಂತ. ಅವರು ಸಾಮಾನ್ಯವಾಗಿ ತೋರಿಸುವ ಯಾರನ್ನು ಬೇಡ ಅನ್ನುವ ಹಾಗಂತೂ ಇರುವುದಿಲ್ಲ, ಆದರೂ ನನಗೆ ಉತ್ತರಿಸಲು ಹಿಂಸೆಯಾಗುವಂತಹ ಪ್ರಶ್ನೆಗಲ್ಲನು ಏಕೆ ಕೇಳುತ್ತಾರೆಂದು ಅರ್ಥವಾಗುವುದಿಲ್ಲ. ಅವರು ಮಾಡುತ್ತಿರುವುದು ತಪ್ಪೆಂದಲ್ಲ, ಆದರೆ ಅದು ನನಗೆ ಸರಿಬರುತ್ತಿಲ್ಲ.
ಹೂ ಸರಿ ಚೆನ್ನಾಗಿರುವ. ಮಾತು ಮುಂದುವರಿಸಬಹುದು ಎಂದು ಹೇಳಲು ಬಹಳ ಹಿಂಸೆ. ಅಳುವೇ ಬರುತ್ತದೆ. ಇಷ್ಟು ಸರಳ ವಾಕ್ಯವೇಳಲು ಯಾಕಿಷ್ಟು ಕಷ್ಟವೆಂದು ನನಗರಿಯದು. ನನ್ನಿಂದ ಮನೆಯವರಿಗೆಲ್ಲ ಕಷ್ಟವೆಂಬ ಅಪರಾಧಿ ಭಾವ ಬೇರೆ. ಇದೆಲ್ಲ ಒಂದು ಕಡೆಯಾದರೆ, ಮತ್ತೊಂದೆಡೆ ಯಾರನ್ನು ಭೇಟಿ ಮಾಡಿದರು, ಸೇಮ್ ರೊಟೀನ್ ಪ್ರಶ್ನೆಗಳು. ನಿಮಗೆ ಏನು ಇಷ್ಟ, ಯಾವ ಬಣ್ಣವಿಷ್ಟ, ನಿಮ್ಮ ಹುಡುಗನಲ್ಲಿ ಏನನ್ನು ಬಯಸುತ್ತೀರಿ, ಮದುವೆಗೆ ಸಿದ್ಧವಿರುವಿರಾ ಅಥವಾ ಮನೆಯವರ ಒತ್ತಡವೇ? ಪಿಹೆಚ್ಡಿ ಯಾವಾಗ ಮುಗಿಯುವುದು? ಮುಂದಿನ ಪ್ಲಾನ್ಸ್ ಏನು? ಅದೇ ರಾಗ, ಅದೇ ತಾಳ.

ದೇವರೇ, ಸಾಕಾಗಿದೆ ಬಹಳ ಸಾಕಾಗಿದೆ, ಈ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಕೊಟ್ಟು, ಆ ಉತ್ತರದ ಮೇಲೆ ನನಗೆ ಸಂಶಯ ಶುರುವಾಗಿದೆ. ಹೌದೇ? ನನಗೆ ಹಸಿರು ಬಣ್ಣವಿಷ್ಟವೇ? ಹೌದ ನನಗದು ಬೇಕಾ, ಇದು ಬಯಸಿರುವೆನೇ? ಹೌದ ಅದು ಸರಿಯೇ, ಇದು ತಪ್ಪೇ? ಒಂದು ಅರಿವಿಗೆ ಸಿಗುತ್ತಿಲ್ಲ. ಈ ಪ್ರಶ್ನೆಗಲ್ಲನೆಲ್ಲ ಕೇಳದೆಯೇ, ಹಾಗೆಯೇ ನನ್ನನು ಅರ್ಥ ಮಾಡಿಕೊಳ್ಳುವವರು ಯಾರು ಇಲ್ಲವೇ? ಅಥವಾ ಅದು ಸಾಧ್ಯವೇ? ನನಗರಿಯದು. ಒಬ್ಬ ವ್ಯಕ್ತಿ ಏನೆಂದು ಸಂಪೂರ್ಣವಾಗಿ ಯಾರಿಗೂ ಅರಿಯಲು ಸಾಧ್ಯವಿಲ್ಲ. ನಾನೇನೆಂಬ ಸಂಪೂರ್ಣ ಅರಿವು ನನಗಿಲ್ಲದೆಯೆ, ಬೇರೆಯವರಿಗದು ಹೇಗೆತಾನೆ ಅರಿವಿಗೆ ಬರಲು ಸಾಧ್ಯ? ಹೀಗಿರುವಾಗ ಒಮ್ಮೆ ಭೇಟಿಯಾದ ವ್ಯಕ್ತಿಯನ್ನು ಮದುವೆಯಾಗಲು ಓಕೆ ಮಾಡುವುದಾದರೂ ಹೇಗೆ? ಹಾಗಂತ ಪದೇ ಪದೇ ಅವರನ್ನು ಭೇಟಿಯಾದರು ಅದರ ಔಟ್ಪುಟ್ ಏನು ಬದಲಾಗದು ಎಂಬುವುದು ಒಂದು ವಾದ. ಆದರೆ, ಪದೇ ಪದೇ ಭೇಟಿಯಾದರೆ, ಅವರ ಮೇಲೆ ಭಾವನೆಗಳು ಮೂಡಭಹುದಲ್ಲವೇ? ಅವರ ಯಾವುದೊ ಸಣ್ಣ ಸಣ್ಣ ವಿಷಯದ ಮೇಲೆ ನಮಗೆ ಪ್ರೀತಿ ಮೂಡಭಹುದಲ್ಲವೇ? ಅಥವಾ ಅಸಮಾಧಾನ, ಕೋಪ? ಆದರೆ ಇದ್ಯಾವುದಕ್ಕ್ಕೂ ನಮ್ಮ ಸಮಾಜ ಅವಕಾಶ ಮಾಡಿಕೊಡುವುದಿಲ್ಲ.
೨೦೦ ರೂಪಾಯಿ ಬೆಲೆ ಬಾಳುವ ಹರಿದು ಹೋಗುವ ಅಂಗಿಯನ್ನು ಖರೀದಿಸುವಾಗ ೨ ಬಾರಿ ಯೋಚಿಸುವ ಜನಗಳು, ಜೀವನ ಪೂರ್ತಿ ಜೊತೆಗಿರಬೇಕಾದ ವ್ಯಕ್ತಿಯ ಆಯ್ಕೆ ಅಷ್ಟು ಕಮ್ಮಿ ಸಮಯದಲ್ಲಿ ಹೇಗೆ ತಾನೇ ಮಾಡಿಯಾರು? ಗಟ್ಸ್ ಫೆಲ್ಲಿಂಗ್ಸ್ ಮುಖಾಂತರ ಹೋಗುವಂತಹ ವಿಷಯವೇ ಇದು? ಲಾಜಿಕಲ್ ರಷನಲೆ ಎಂಬುದು ಸ್ವಲ್ಪವಾದರೂ ಇರಬೇಕಲ್ಲವೇ?

 ಜೀವನದ ಎಲ್ಲವಿಷಯವನ್ನು ವಿಜ್ಞಾನದ/ ತರ್ಕಬದ್ಧವಾಗಿ ಮಾಡುವೆ ಎಂಬುದು ಸುಳ್ಳು. ನಮ್ಮಿಂದ ವಿಜ್ಞಾನವೇ ಹೊರತು ವಿಜ್ಞಾನದಿಂದ ನಾವಲ್ಲ.  ಫಾರ್ ದಿ ಮೊಮೆಂಟ್ ಲೆಟ್ಸ್ ಫರ್ಗೆಟ್ ಅಬೌಟ್ ಸೈನ್ಸ್ ಆಫ್ ಲವ್, ಲಸ್ಟ್, ಸೈಕಾಲಜಿ ಆಪ್ ಲವ್ ಅಂಡ್ ಅಟ್ರಾಕ್ಶ್ನ್ / ಸಧ್ಯದ ಮಟ್ಟಿಗೆ ಪ್ರೀತಿ, ಪ್ರೇಮ, ಮೋಹ, ಆಕರ್ಷಣೆ, ಕಾಮಗಳ ಹಿಂದಿರುವ ವಿಜ್ಞಾನವನ್ನು ಮರೆಯೋಣ/ಪರಿಗಣಿಸುವುದು ಬೇಡ. ನಮ್ಮ ಕವಿಮಹಾಶಯರ ಪ್ರಕಾರವೇ ಹೋಗೋಣ. ಪ್ರೀತಿ ಮೂಡಲು ಕೆಲವೇ ಕ್ಷಣ ಸಾಕು, ನಿನ್ನ ಕಣ್ನೋಟವೆ ಸಾಕು, ಮುದ್ದಾದ ಆ ನಗುವು ನನಗೆ ಬೇಕು ಎನ್ನುವುದು ನಿಜವೇ ಇರಬಹುದು, ಆದರೆ ಈ ಪ್ರೀತಿಯನ್ನು ಉಳಿಸಿ, ಬೆಳೆಸಿ, ನಿಭಾಯಿಸುವ ಬಗ್ಗೆ ಕ್ಷಣಾದ್ರದಲ್ಲಿ ನಿರ್ಧರಿಸುವುದಾದರೂ ಹೇಗೆ? ನಾನೇನೋ ಎಲ್ಲದಕ್ಕೂ ಹೊಂದಿಕೊಂಡು ಹೋಗುವೆ ಎಂಬ ಭರವಸೆ ನಿಮಗೆ ನಿಮ್ಮಮೇಲೆ ಇರಬಹುದು. ಆದರೆ ಅವರು ಹಾಗೆಯೆ ಇರಬೇಕಿಂದಲ್ಲ. ಅದು ಅವರವರಿಷ್ಟ. ಬೆಳೆದುಬಂದ ರೀತಿ ನೀತಿ.
ಮದುವೆ ಎಂಬ ಮೂರಕ್ಷರದ ಪದ ಅಷ್ಟು ಸುಲಭವಲ್ಲ. ಇಬ್ಬರು ಒಬ್ಬರಾಗಿರಬೇಕು. ಎತ್ತು ಏರಿಗೆಳಿಯಿತು, ಕೋಣ ನೀರಿಗೆಳೆಯಿತು ಯೆಂದಾಗಬಾರದಲ್ಲವೇ. ನಿನ್ನ ನಿರ್ಧಾರಗಳು ಕೇವಲ ನಿನ್ನದಾಗಿರದು, ಅದು ನಿಮ್ಮದಾಗಿರಬೇಕು. ಕೆಲಸದಿಂದ ದಣಿದು ಮನೆಗೆ ಬಂದಾಗ ಅವರ ಮುದ್ದಾದ ಮೊಗದಲೊಂದು ದಣಿವಾರಿಸುವ ನಗೆಯೊಂದು ಇರಬೇಕು. ಅದು ಬಿಟ್ಟು ಅವನ ಮುಖ ಒಂದು ಕಡೆ, ಇವಳ ಮುಖ ಇನ್ನೊಂದು ಕಡೆ ಎಂಬಂತಿದ್ದರೆ ದಣಿವು ಕೋಪವಾಗಿ ಬದಲಲು ಹೆಚ್ಚು ಸಮಯ ಬೇಡ. ಕೋಪ ನೋವಾಗಲು. ನೋವು ದ್ವೇಷವಾಗಲು. ಜೀವನದಮೇಲೆ ಜಿಗುಪ್ಸೆ ಮೂಡಲು.
ಜೀವನದ ಕಟ್ಟಕಡೆಯ ಉದ್ದೇಶ ನೆಮ್ಮದಿ, ಪ್ರೀತಿ. ಕೋಟಿ ಸಂಪಾದಿಸಿದರೇನು ನೆಮ್ಮದಿಯಿಲ್ಲದ ಜೀವನ, ಜೀವನವೇಯಲ್ಲ. (ನೆಮ್ಮದಿಯ ಜೊತೆ ಕೋಟಿಯಿದ್ದರೆ "ಸೋನೇ ಫೆ ಸುಹಾಗ" ಅದು ಬೇರೆಯ ವಿಷಯ. ಸದ್ಯಕ್ಕೆ ಬೇಡ.) ಹಾಗಾಗಿ ಕೇವಲ ಮುಖ ನೋಡಿ, ಹಣ ನೋಡಿ, ಗುಣವ ಅರಿಯುವುದು ಸ್ವಲ್ಪ ಹೆಚ್ಚೇ ಕಷ್ಟ.

ದಿಕ್ಕೇ ತೋಚದಿರುವಾಗ ಅಪ್ಪನ ಮಾತುಗಳ ಆಶ್ರಯಬೇಕು ನನಗೆ. ಆದರೆ ಇದರಬಗ್ಗೆಯೆಲ್ಲ ಚರ್ಚಿಸಲು ಮನೆಯೇ ವಾತಾವರಣ ಸರಿ ಮೂಡದು. ಒಬ್ಬರು ಕೋಪ ಮಾಡಿಕೊಂಡರೆ, ಮತ್ತೊಬರು ನೋವು ಮಾಡಿಕೊಂಡು ಮೌನದಿ ಕಣ್ಣೀರು ಸುರಿಸುವರು. ಮನೆಯವರಿಗೆಲ್ಲ ಇದರ ಬಗ್ಗೆ ಕೂತು ಮಾತನಾಡುವ, ಒಂದು ಆರೋಗ್ಯಕರವಾದ ಚರ್ಚೆ ಮಾಡುವ ವ್ಯವಧಾನ, ಸಮಾಧಾನವಾಗಲಿ ಇಲ್ಲಾ. ನನಗೆ ತಿಳಿಯದ ವಿಷಯದಬಗ್ಗೆ ತಿಳಿಹೇಳುವ ಮನಸ್ಸಿಲ್ಲ. ಇದೆಲ್ಲದರ ನಡುವೆ ಸಿಲುಕಿ ತಲೆ ಕೆಡುವ ಮುನ್ನ ನನಗೆ ನಾ ಸಾಂತ್ವನವೇಲಿದೆ. ಎಲ್ಲಾರ ಮನೆ ದೋಸೆ ತೂತು. ನಮ್ಮಮನೆಯ ದೋಸೆ ಇದರಿಂದ ಹೊರತೇನಲ್ಲ. ಎಲ್ಲಾರ ಜೀವನದಲ್ಲೂ ಈ ಸಮಯ ಬಂದಿರುತ್ತದೆ. ಎಲ್ಲರಿಗೂ ಒಂದು ಸಣ್ಣ ನಡುಕ ಬಂದಿರುತ್ತದೆಯೆಂದು.

ಅಪ್ಪ ಯಾವಾಗಲು ಹೇಳುತ್ತಾರೆ. ಖುಷಿಯಾಗಿರು. ನಿನ್ನ ಖುಷಿ ನನಗೆ ಬಹಳ ಮುಖ್ಯವೆಂದು.
ಜೀವನದ ಎಲ್ಲಾ ನೋವಿನ ಘಟ್ಟದಲ್ಲೂ, ಹಿಂಸೆಯ ಸಮಯದಲ್ಲೂ, ಉಸಿರುಗಟ್ಟಿಸುವ ವಾತಾವರಣದಲ್ಲೂ ತಮಾಷೆ ಮಾಡಿ ನಗಿಸುವ ನಮ್ಮಪ್ಪ ನನ್ನ ನಿಜ ಸ್ನೇಹಿತ.
ಅವರು ಮದುವೆಯ ಬಗ್ಗೆ ಹೇಳಿದ ಒಂದೇ ಮಾತೆಂದರೆ, "ಮಗಳೇ, ಮದುವೆಯೆಂದರೆ ಮಧು'ವ್ಯ' ". ಮೊದಲಿಗೆ ಮಧು (ಮಧು ಚಂದ್ರಮ). ನಂತರ ವ್ಯಾ(ಉಲ್ಟಿ/ವೊಮಿಟ್/ಕಾರುವುದು). ಎಂದು ಹೇಳಿ ನಕ್ಕಿದ್ದರು. ಇದು ಇಷ್ಟು ಸರಳ ವಾಕ್ಯವಲ್ಲ. ಇದರ ಹಿಂದೆಯೂ ಬಹಳ ಘಡತೆಯಿದೆ ಅವರ ಬೇರೆ ಮಾತುಗಳಂತೆ. ಆದರೆ ಅರ್ಥೈಸಿಕೊಳ್ಳುವಷ್ಟು ದೊಡ್ಡವಳಾಗಿಲ್ಲ ನಾನು.

ಜೀವನ ಚಕ್ರ ಚಲಿಸುತ್ತಲ್ಲೇ ಇರುತ್ತದೆ. ಜೀವನ ಬಂದಂತೆ ಸ್ವೀಕರಿಸಬೇಕು.
ಮುಂದೇನು ಅನ್ನುವುದಕ್ಕಿಂದ, ಇಂದು ಆರಾಮವಾಗಿ ನನಗಿಷ್ಟ ಬಂದಂತೆ ಇರೋಣ. ಬೆಚ್ಚಗೆ ಹೊದೆದು ಮಲಗೋಣ.



Friday, 26 January 2018

ಮಾಧುರಿ ಶಂಕರ್

ನಿನ್ನ ಫೇಸ್ಬುಕ್ ಹೆಸರು ಮಾಧುರಿ ಶಂಕರ್ ಯಾಕೆ? ನೀನು ಮಾಧುರಿ ಭಟ್ ಅಲ್ವ? ಅಂತ ನನ್ನ ಸ್ನೇಹಿತೆ ಕೇಳಿದಳು.
ಮತ್ತೆ ಹಲವು ಹಳೆಯ ಶಾಲಾ ಸ್ನೇಹಿತರು ನನಗೆ ಮದುವೆಯಾಗಿದೆ ಎಂದು ಮೆಸೇಜ್ ಕಳುಹಿಸಿದರು. ಇದು ಕೇವಲ ಇಂದು ನೆನ್ನೆಯ ವಿಷಯವಲ್ಲ, ಅವಾಗವಾಗ ಅವರಿವರು ಕೇಳುವ ಪ್ರಶ್ನೆ, ಹೊಸದಾಗಿ ಪರಿಚಯವಾದವರನ್ನು ಹೊರೆತು ಪಡಿಸಿ.
ಅವರೆಲ್ಲರ ಪ್ರಶ್ನೆಗೆ ಕೇವಲ ನನ್ನ ನಗುವೊಂದೇ ಉತ್ತರವಾಗಿತ್ತು. ಒಂದು ಹುಡುಗಿಯ ಮುಂದಿರುವ ಹುಡುಗನ ಹೆಸರಿಗೆ ಅಷ್ಟು ಮಹತ್ವವಿದೆಯೆ? ನನಗದೆಲ್ಲ ತಿಳಿದಿಲ್ಲ. ನನ್ನ ಫೇಸ್ಬುಕ್ ಹೆಸರಿನ ಹಿಂದುರುವುದು ಒಂದು ಸಿಂಪಲ್ ಲಾಜಿಕ್ ಇಷ್ಟೇ, ಬೇರೇನೂ ಕಥೆಯಿಲ್ಲ. ನನ್ನಪ್ಪನ ಹೆಸರು ಶಂಕರ ನಾರಾಯಣ ಭಟ್. ನನ್ನ ಅಣ್ಣ ನನಗಿಂತ ಮೊದಲೇ ಫೇಸ್ಬುಕ್ ಅಕೌಂಟ್ ತೆರೆದಿದ್ದ. ಫೇಸ್ಬುಕ್ ಹೆಸರು ಮುರಳಿ ನಾರಾಯಣ ಅಂತ ಕೊಟ್ಟಿದ್ದ. ಅದಕ್ಕೂ ಬೇರೇನೂ ಕಾಥೆಯಿಲ್ಲ, ಸುಮ್ಮನೆ ಶೋಕಿಗಷ್ಟೇ. (ಈ ಫೇಸ್ಬುಕ್ನಾವೂರು ಸಹ ಸರಿಯಿಲ್ಲ. ಅಕೌಂಟ್ ಕ್ರಿಯೇಟ್ ಮಾಡ್ಬೇಕಾದ್ರೆ, ಫಸ್ಟ್ ನೇಮ್, ಲಾಸ್ಟ ನೇಮ್, ಸುರನಮ್ ಅಂತ ಎಲ್ಲಾ ತಲೆ ತಿಂದ್ರೆ, ಪಾಪ ನನ್ನಣ್ಣ ಇನ್ನೇನು ಮಾಡ್ತಾನೆ, ಫುಲ್ ಬುದ್ಧಿವಂತಬೇರೆ, ಎಲ್ಲೋ ಲಾಸ್ಟ ನೇಮ್ ಅಂತ ಕೇಳಿರ್ಬೇಕು, ಅವನ ಲಾಸ್ಟ ನೇಮ್ ನಾರಾಯಣ್ ತಾನೆ, ಅದಕ್ಕೆ ಹಾಗೆ ಕೊಟ್ಟಿರ್ತಾನೆ.) ನನ್ನಪ್ಪನ ಅರ್ಧ ಹೆಸರನ್ನು ಮಾತ್ರ ಅವನಲ್ಲಿ ಹಾಕಿಕೊಂಡಿದ್ದ, ಬಾಕಿ ಇರುವ ಇನ್ನರ್ದ ಯಾರದ್ದು? ನನ್ನದೇ ಅಲ್ಲವೇ? ಹಾಗಾಗಿ ನಾನು ಮಾಧುರಿ ಶಂಕರ್ ಅದೇ ಅಷ್ಟೇ. ನನ್ನ ನಿಜ ಹೆಸರು ಮಾಧುರಿ ಶಂಕರ್ ಅಲ್ಲ, ಮಾಧುರಿ ಭಟ್ ಸಹ ಅಲ್ಲ. ನಾನು ಮಾಧುರಿ ಶಂಕರ್ ನಾರಾಯಣ್ (ಮಾಧುರಿ ಎಸ್ ಎನ್). ಇದನ್ನೆಲ್ಲ ಯಾರಿಗೆ ಹೇಳ್ಕೊಂಡು ಕೂರೋದು, ತುಂಬ ಬೋರಿಂಗ್ ಆಗಿದೆ.
ಆದ್ರೆ ಇಷ್ಟೆಲ್ಲದರ ಮದ್ಯೆ, ನನಗೆ ನನ್ನ ಫೇಸ್ಬುಕ್ ನೇಮ್ ಬಹಳಾನೇ ಇಷ್ಟವಾಗೊಕ್ಕೆ ಶುರುವಾಗಿದೆ. ನನ್ನ ಸ್ನೇಹಿತ ನನ್ನನ್ನು ಮಿಸ್ ಶಂಕರ್ ಎಂದು ಕರೆದಾಗಲೆಲ್ಲ ಒಂತರ ಖುಷಿಯಾಗುತ್ತದೆ. ನನ್ನ ಹೆಸರು ಮುದ್ದಾಗಿದೆ ಅನಿಸುತ್ತದೆ, ನನ್ನ ಅಪ್ಪನ ಹಾಗೆ.

ನನಗೆ ಇನ್ನೊಂದು ಡೌಟ್, ನನ್ನ ಬ್ಲಾಗ್ ಅನ್ನು ಯಾರಾದರೂ ಓದಲು ಶುರುಮಾಡಿದರೆ, ಅವರು ನನ್ನ ಬ್ಲಾಗ್ ನೇಮ್ ಮಧುರ ಅಂತ ಯಾಕಿದೆ ಎಂದು ಕೇಳಬಹುದು. ಅಥವಾ ನನ್ನ ಕಾವ್ಯ/ಅಂಕಿತ ನಾಮವೇ ಎಂದು ಕೇಳಬಹುದು. ಆ ಹೆಸರಿಂದಿರು ವಿಷಯವನ್ನು ಮುಂದೊಂದು ದಿನ ಹೇಳುವೆ. 

Just go to hell

26-01-2018

The worst day of the year.
Saying goodbye,
goodbye forever,
to one of the best persons,
I ever meet.

Tomorrow he will be flying back.
Back to his place.

I'm angry,
Very angry!
Though I understand,
I don't want to understand.
I wanna stay angry,
Very angry.

Wednesday, 24 January 2018

ಅಶ್ರಗ

ನನ್ನ ಜೀವನದ ಅಶ್ರಗ ಅವನು.
ಅವನು ಬಳಿಯಿದ್ದರೆ ನನ್ನೊಳಗಿರುವ ಎಲ್ಲಾ ಬಣ್ಣಗಳ ಪರಿಚಯ.
ಅವನೀಡಿವ ಕುಂಚ ನನ್ನ ಬಣ್ಣವ ನಿರ್ಧರಿಸುತ್ತದೆ.
ಹಾಗಾದರೆ ನನ್ನ ಸ್ವಂತತೆ ಏನು?
ಮೈದುಬ್ಬಿಕೊಂಡಿರುವ ಬಣ್ಣವೇ?
ಅಥವಾ ನನ್ನ ಬಣ್ಣವ ನನಗೆ ಪರಿಚಯಿಸಿ, ಅವನಿಗ್ಯಾವುದು ಬೇಕೆಂಬುದರ ನಿರ್ಧರಿಸುವ ಅವನೇ?



(ಅಶ್ರಗ; ಪದದ ಪರಿಚಯ ನನ್ನ ತಮ್ಮ ಕೋತಿ ತಿಮ್ಮನಿಂದ. ಅವನ ಹುಚ್ಚುತನದ ಪರಿಚಯ ಬಯಸಿದಾದಲ್ಲಿ ಈ ಲಿಂಕ್ ಅನ್ನು ಕ್ಲಿಕ್ಕಿಸಿ/ಬಳಸಿ ನೋಡಿ [ http://ashraga.blogspot.in/2017/06/blog-post_23.html ] )  

Waiting

ಯಾಕಿ ಕಾಯುವಿಕೆ?
ಅವನಿಗಾಗಿಯೆ? ಅವನಿಗಿದು ತಿಳಿದಿದೆಯೇ?
ಒಂದು ರೀತಿಯ ತಿಳಿಯದ ನಂಬಿಕೆ, ಗಾಢನಂಭಿಕೆ ಅವನಿಗಾಗಿ ಕಾವುಯುವುದರಲ್ಲಿ.
ಆದರೆ ಕೆಲವೊಮ್ಮೆ ಅಸಾಧ್ಯ ಅಳುಒಂದು ಮೂಡುವುದು, ಬಹಳ ಬೇನೆ ನೀಡಿ.
ಯಾಕೀಗೆ?
ಯಾಕೀಗೆ?
ಮಾನವನ ಸಹಜಗುಣವಿದಿರಬಹುದೇ?

ಕಾಯಿಸಿ ಕಾಡಿದ ಅವನು ಬಂದ ನಂತರ ತಿಳಿಯುವುದು ನನ್ನ ಮೂರ್ಖತನ.
ಏತ್ತಕ್ಕಾಗಿ ಅವನನ್ನು ಕಾದಿದ್ದೆ? ಯಾಕಿಷ್ಟು ಕಡುಬಯಕೆ ಮೂಡಿತ್ತು? ನಾನೆಷ್ಟು ದಡ್ಡಿ ಎಂದೆಲ್ಲ ಅನಿಸಿ ನಗುವುದುಂಟು ಮುಜುಗರದಿಂದ.

ಕಲಿತ ಬುದ್ದಿ ಕ್ಷಣಿಕ, ಮರುದಿನ ಮತ್ತದೇ ಕಾಯುವಿಕೆ, ಅವನಿಗಾಗಿ, ಒಮ್ಮೆನೋಡಿ ಮಾತಾಡುವುದ್ದಕ್ಕಾಗಿ.

Tuesday, 23 January 2018

ಪಾಪದ ಮಾಣಿ

೨೩-೦೧-೨೦೧೮

ಸುಂದರವಾದ ಕಪ್ಪು ಬಿಳುಪಿನ ಭಾವಚಿತ್ರವೊಂದು ಇಂದು ಅವನ ಡಿಸ್ಪ್ಲೇ ಪಿಕ್ಚರ್ ಆಗಿತ್ತು, ಜೀವನದ ತನ್ನೆಲ್ಲಾ ಬಣ್ಣಗಳ ಹೊತ್ತು. ಹೆತ್ತಮ್ಮನಿಗೆ ಹೆಗ್ಗಣ್ಣ ಮುದ್ದು ಅನ್ನುವ ಹಾಗೆ, ನಮಗಿಷ್ಟ ಆದವರು ಹೇಗಿದ್ದರೂ ಚೆಂದ. ಆದರೆ ನನಗೆ ಬಲು ನಂಬಿಕೆಯಿದೆ ಇವನು ಹೆಗ್ಗಣ ಅಲ್ಲ, ನಾನಂತು ಹೆತ್ತಮ್ಮನಲ್ಲ, ಇವನೆಂದರೆ ಇಷ್ಟ ಅಷ್ಟೇ. ಹಾಗಾಗಿ ನಿಜವಾಗಿಯೂ ಇವ ಚೆಂದವೇ ಇರುವ. ಸಪೂರವಾಗಿ ಉದ್ದ ಉದ್ದವಿರು ಎರೆಡು ಕೈಯ್ಯ ಬೆರಳುಗಳನ್ನು ಒಟ್ಟಿಗೆ ಸೇರಿಸಿ, ಮಡಚ್ಚಿದ್ದ  ತನ್ನ ಉದ್ದಾನೆಯೇ ಕಾಲುಗಳ ಮಂಡಿಯಮೇಲೆ ಇರಿಸಿದ್ದ. ರಸವೀರಿದ ಕಬ್ಬಿಣ್ಣ ಜಲ್ಲೆಯೇ ಹಾಗೆ ನಡುಬಾಗಿಲಿನ ಮೂಲೆಯಲ್ಲಿ ಕುಳಿತು ಕೊಂಚ ಗಾಂಭೀರ್ಯದಿಂದ ತನ್ನ ದೃಷ್ಟಿಯನ್ನು ಮತ್ತೆಲ್ಲೋ ಹಾಯಿಸಿದ್ದ, ಛೇ ಒಬ್ಬ ಒಳ್ಳೆಯ ಫೋಟೋಗ್ರಾಫರ್ ಅನ್ನು ನೋಡಿ, ಅವನ ಕ್ಯಾಮೆರಾ ಕಣ್ಣುಗಳ್ಳನು ಕಂಡು ನಕ್ಕು ಅಣುಕಿಸಲಾರೆ ಎಂಬಂತೆ. ಆದರೆ ನನ್ನಕಣ್ಣಿಗದು ಬೇರೆಯ ರೀತಿಯಲ್ಲಿ ಕಂಡಿತ್ತು. ಒಬ್ಬ ಪಾಪದ ಮಣಿಯ ಹಾಗೆ, ಭಾವಚಿತ್ರ ನೋಡಿದ ಕೂಡಲೇ ಸ್ವಲ್ಪ ಹೆಚ್ಚೇ ಮುದ್ದು ಮುದ್ದು ಅನಿಸಿದ್ದ.  ಅವನ ಕಣ್ಣಿನಲ್ಲಿ ಏನೋ ಅಸಮಾಧಾನ, ನನ್ನನ್ನು ಬಿಟ್ಟುಬಿಡಿ ದಯವಿಟ್ಟು ಎಂಬ ಸಣ್ಣನೆಯ ಕೋಪ. ಇವಾ ಕೂತ ಶ್ಯಲಿ, ಆ ಜಾಗ, ಆ ನೋಟ, ಏನೋ ನನಗಂತೂ ಏನು ಹೇಳಬೇಕು ತೋಚುತ್ತಿಲ್ಲ. ಮನೆಗಳಲ್ಲಿ ನಡೆವ ವಾದವಿವಾದದ ಚಿತ್ರಒಂದು ಕಣ್ಮುಂದೆ ಬಂದು ಓಡಿ ಹೋಗಿತ್ತು. ತನ್ನವಾದ ಮಂಡಿಸಿಲಾಗದೆ ಪೇಚಾಡುತ್ತಿದ್ದ ಪಾಪದ ಮಾಣಿಯಾಗಿ ಇವಾ ಕಂಡಿದ್ದ.