Tuesday 15 December 2020

ನಾಲ್ಕು ದಿನದ ಬದುಕು

ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲಿ ಎಂದು ಜಿ. ಎಸ್. ಶಿವರುದ್ರಪ್ಪ ಹೇಳಿದ ಪದಗಳು ಎಷ್ಟು ಸತ್ಯ, ಅಲ್ಲವೇ!? ಇಂದು ಹುಟ್ಟಿದೆ, ನಾಳೆ ಬೆಳೆದು ದೊಡ್ಡವಳಾದೆ, ನಾಡಿದ್ದು ದುಡಿದೆ ಜೀವನ ಜೀವಿಸಿದೆ, ಮುನ್ನಾಡಿದ್ದು ಸತ್ತೆ! ಅಷ್ಟೇ  ಬದುಕು. ಅದೇನೋ ನನಗಂತೂ ಅರ್ಥವಾಗದು ಯಾಕೀಜನರು ತಮ್ಮ ಪಾಡಿಗೆ ತಾವೀರರು/ ಇರಲು ಬಿಡರು. ನಿಸ್ವಾರ್ಥ ಎಂದರೇನು ಅಂತ ನಾನಂತ್ತು ಕಂಡೂಇಲ್ಲಾ ಅನುಭವಿಸಲೂ ಇಲ್ಲಾ!! ಕರೋನ ಎಲ್ಲಾರ ಮುಖವಾಡ ಕಳಚುವಲ್ಲಿ ಕೊಂಚಮಟ್ಟಿಗೆ ಯಶಸ್ವಿಯಾಗಿದೆ ! ಎಷ್ಟರಮಟ್ಟಿಗೆ ಜಿಗುಪ್ಸೆಯೆಂದರೆ ಏನು ಬರೆಯಲು ಮನಸಿಲ್ಲ! ಹಾಗಂತ ಬರೆಯದೆ ಇರಲು ಸಾಧ್ಯವೇ ಇಲ್ಲ. ಒಂತರಾ ಹೆಸರಿಲ್ಲದಿರೋ ವಿಚಿತ್ರ ಭಾವನೆ. ಮನುಷ್ಯನ ಹುಟ್ಟೇ ಅಷ್ಟು. ಅಷ್ಪಷ್ಟ. ಎಲ್ಲವೂ. ಎಲ್ಲಾರು. ಜೀವನದಲ್ಲಿ ಎಷ್ಟರಮಟ್ಟಿಗೆ ಪ್ರೆಶ್ನೆಗಳ ಅಲೆಗಳೆದ್ದಿದವೆಂದರೆ ಒಂದರಹಿಂದೊಂದು ಸಾಲುಸಾಲಾಗಿ, ಕೆಲವೊಮ್ಮೆ ಜೊತೆ ಜೊತೆಯಲಿ ಬಂದವು. ಭಯಂಕರದ ಏರಿಳಿತಗಳು! ಹೇಳಿದಷ್ಟು ಸುಲಭವಲ್ಲ ಜೀವನ! ಸಹವಾಸವಲ್ಲ ಜನರದ್ದು!! ಪ್ರೀತಿ ನೀಡಿದರು ಸ್ವೀಕರಿಸಲು ತಯಾರಿಲ್ಲ. ಪಾಠ ಹೇಳಿಕೊಟ್ಟರು ಕೇಳುವ ವ್ಯವಧಾನವಿಲ್ಲ. ಸರಿ ಏನು ಬೇಡ ಜೊತೆಯಲ್ಲಿ ಕೂತು ಮಾತನಾಡುವ ಯೆಂದರೆ ಯಾರಿಗೂ ಸಮಯವಿಲ್ಲ!! ಮೊಬೈಲ್ ಫೋನ್ ಒಂದು ಕೈಯಲ್ಲಿ ಇದ್ದಾರೆ ಸಾಕು. ಏನೋ!! ಯಾವುದು ಪ್ರಯೋಜನವಿಲ್ಲ. ಎಲ್ಲಾ ವ್ಯರ್ಥಪ್ರಯತ್ನ! ನಾನೇ ಸಿಟ್ಟಿನ ಮೂರ್ತಿಯಾಗಿಬಿಟ್ಟಿರುವೆ! I'm becoming someone whom I hate! I'm ashamed of myself now and I want to be a old version of myself! 

No comments:

Post a Comment